Skip to main content

ಗಣಪತಿ ಮಾಸ್ತರ್ ಎಂಬ ಸಜ್ಜನರ ವಿಧಾಯ

#ಪಿತೃ_ವಾಕ್ಯ_ಪಾಲಿಸಿದ_ಪುತ್ರ

#ಮಾತೃ_ದೇವೋಭವ_ಎಂಬಂತೆ_ಜೀವಿಸಿದವರು

#ಶಿಕ್ಷಕ_ವೃತ್ತಿಯ_ಶಿಸ್ತು_ಕೊನೆಯ_ತನಕ_ಪಾಲನೆ 

#ನಮ್ಮ_ಪ್ರೀತಿಯ_ಗಣಪತಿಮಾಸ್ತರಿಗೆ_ಶ್ರದ್ದಾಂಜಲಿ.

  2015ರಲ್ಲಿ ನಮ್ಮ ಊರಿಗೆ ಬಂದು ಮನೆ ಕಟ್ಟಿ ತಮ್ಮ ತಾಯಿಯೊಂದಿಗೆ ತಮ್ಮ ಶಿಕ್ಷಕ ವೃತ್ತಿಯ ನಂತರದ ನಿವೃತ್ತ ಜೀವನ ಪ್ರಾರಂಬಿಸಿದ್ದ ಗಣಪತಿ ಮಾಸ್ತರ್ ನಿನ್ನೆ ತನಕ ಇಡೀ ಊರಿನ ಜನರ ಅತ್ಯಂತ ಆಪ್ತರಾಗಿದ್ದದ್ದು ಇನ್ನು ನೆನಪು ಮಾತ್ರ.
  ಇವರು ನಮ್ಮ ಊರಲ್ಲಿ ನೆಲೆಸಲು ಕಾರಣ ನನ್ನ ಇನ್ನೊಬ್ಬ ಗೆಳೆಯ ಗೇರುಬೀಸಿನ ಕೃಷ್ಣಪ್ಪರ ಒತ್ತಾಯ ಮತ್ತು ಪ್ರೇರಣೆ.
  ನಮ್ಮ ಊರಾದ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ದೇವರ ದೇವಾಲಯದಲ್ಲಿ ವ್ಯವಸ್ಥಾಪಕರಾಗಿ ಇವರ ಕ್ರಿಯಾಶೀಲ ಕೆಲಸ ದೇವರಲ್ಲಿನ ಶ್ರದ್ದೆ ಭಕ್ತಿಗಳನ್ನು ನೋಡಿ ನಮ್ಮ ದೇವಾಲಯದ ಗೌರವಾನ್ವಿತ ಧರ್ಮದರ್ಶಿಗಳು ಮಾರ್ಗದರ್ಶಕರಾದ ಬೆಂಗಳೂರು ವಿಜಯನಗರದ ನಿವಾಸಿ ಪ್ರಖ್ಯಾತ ದೈವಜ್ಞ ಜೋತಿಷಿಗಳಾದ ಡಾ.ಎನ್-ಎಸ್.ವಿಶ್ವಪತಿ ಶಾಸ್ತ್ರೀಗಳು ಇವರನ್ನು ದೇವಾಲಯದ ಟ್ರಸ್ಟಿಯಾಗಿಯೂ ನೇಮಿಸಿದ್ದರು.
 ಗಣಪತಿ ಮಾಸ್ತರ ತಂದೆ ಕಲ್ಲಪ್ಪನವರ ಸಾಗರವಾಸಿಗಳು ಅನೇಕ ಸರ್ಕಾರಿ ಸೇವೆಗೆ ಸೇರಿದರೂ ಅಲ್ಲಿ ಇನ್ನಾರಿಗೋ ಅವಶ್ಯಕತೆ ಇದ್ದವರಿಗೆ ತಮ್ಮ ಉದ್ಯೋಗ ತ್ಯಜಿಸುತ್ತಿದ್ದವರು, ನಂತರ ತ್ಯಾಗರ್ತಿಯ ಇನಾಂದಾರರ ಕುಟುಂಬದ ಗುರುಮೂರ್ತಿ ರಾಯರ ಆಪ್ತರಾಗಿ ತ್ಯಾಗರ್ತಿಯಲ್ಲಿ ಆಭಾಗದ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಪ್ರಾರಂಬಿಸುವ ಪ್ರೌಡ ಶಾಲೆಯ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ, ಪ್ರಾರಂಭದಲ್ಲಿ ತ್ಯಾಗರ್ತಿ ಗುರುಮೂರ್ತಿ ರಾಯರ ಮನೆಯಲ್ಲೇ ಕೆಲ ವರ್ಷ ಪ್ರೌಡಶಾಲೆ ನಡೆಯಿತು ಅಲ್ಲೇ ಗಣಪತಿ ಮಾಸ್ತರ್ ರ ಪ್ರೌಡ ಶಿಕ್ಷಣ ಕೂಡ.
  ಆಗೆಲ್ಲ ಇವರ ತಂದೆ ಕಲ್ಲಪ್ಪನವರಿಗೆ ಬೋದಿಸಿದ್ದು ಸಾರ್ಥಕ ಸಂತೃಪ್ತ ಜೀವನದ ಪಾಠ ಜೊತೆಗೆ "ಗಣಪತಿ ನೀನೊಬ್ಬ ಓದಿ ವಿದ್ಯಾವಂತನಾಗಿ ಸರ್ಕಾರದ ಕೆಲಸಕ್ಕೆ ಸೇರಿ ಇಸ್ತ್ರಿ ಬಟ್ಟೆ ಹಾಕಿ ಓಡಾಡೋದಲ್ಲ ನಿನ್ನ ತಮ್ಮಂದಿರು ಈ ಸ್ಟೇಜಿಗೆ ತರುವ ಜವಾಬ್ದಾರಿ ನಿನ್ನದು" ಅನ್ನುತ್ತಿದ್ದರಂತೆ ಅದರಂತೆ ಗಣಪತಿ ಮಾಸ್ತರ್ ತಮ್ಮ ಇಬ್ಬರು ತಮ್ಮಂದಿರನ್ನು ವಿದ್ಯಾವಂತರಾಗಿಸಿ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ಉದ್ಯೋಗ ಕೊಡಿಸಿದ್ದಾರೆ.
  ತಾಯಿ ಅಂದರೆ ಇವರಿಗೆ ಅತೀವ ಪ್ರೀತಿ 95 ರ ವೃದ್ಧಾಪ್ಯದ ತಾಯಿ ಇವರೊಡನೆ ಇದ್ದಾರೆ ಇವರು ತಾಯಿ ಬಗ್ಗೆ ಹೇಳುತ್ತಿದ್ದ ಅನೇಕ ಪ್ರಸಂಗಗಳಲ್ಲಿ ನನಗೆ ಹೃದಯ ಕಲಕಿದ್ದು ಕೇಳಿ, ಇವರು ಶಿಕ್ಷಕರಾಗಿ ಉದ್ಯೋಗಕ್ಕೆ ಸೇರಿ ಮೊದಲ ಸಂಬಳ ಪಡೆದವರು ಸಾಗರಕ್ಕೆ ಬಂದರೆ ತಾಯಿ ಅಡಿಕೆ ಮಂಡಿಗೆ ಅಡಿಕೆ ಸುಲಿಯುವ ಅವರ ನಿರಂತರ ಕಾಯಕಕ್ಕೆ ಹೋಗಿರುತ್ತಾರೆ.
  ಇವರು ಅಡಿಕೆ ಮಂಡಿಗೆ ಹೋಗಿ ಮಾಲಿಕರಿಗೆ ವಂದಿಸಿ ತಮ್ಮ ಹಾಲಿ ವೃತ್ತಿಯ ಮೊದಲ ವೇತನ ಪಡೆದ ಬಗ್ಗೆ ತಿಳಿಸಿ ಇಲ್ಲಿ ತನಕ ತಮ್ಮ ತಾಯಿ ನಿಮ್ಮ ಮಂಡಿಯಲ್ಲಿ ಅಡಿಕೆ ಸುಲಿದು ನಮ್ಮನ್ನೆಲ್ಲ ಸಲುಹಿದ್ದಾಳೆ ನಾಳೆಯಿಂದ ನಾನು ನನ್ನ ಆದಾಯದಿಂದ ಆಕೆಯನ್ನು ಜೋಪಾನ ಮಾಡುತ್ತೇನೆ ಆದ್ದರಿಂದ ನಾಳೆಯಿಂದ ಅಮ್ಮ ನಿಮ್ಮ ಕೆಲಸಕ್ಕೆ ಬರುವುದಿಲ್ಲ ಅವಳ ಬಾಕಿ ಹಣ ಎಷ್ಟಿದೆ ಇವತ್ತು ನಾನು ಪಾವತಿ ಮಾಡುತ್ತೇನಂದಾಗ ಅಡಿಕೆ ಮಂಡಿ ಮಾಲಿಕರು "ಗಣಪತಿ ನಿನ್ನಂತ ಮಗನ ಪಡೆದ ನಿನ್ನ ತಾಯಿ ಧನ್ಯ" ಅಂದು ಇವರ ತಾಯಿಯನ್ನು ಅಡಿಕೆ ಸುಲಿಯುವ ಕೆಲಸದಿಂದ ಬಿಡುಗಡೆ ಮಾಡುತ್ತಾರೆ.
  ನಂತರ ತಾಯಿಯನ್ನು ಇಡೀ ಭಾರತ ಪರ್ಯಟನೆಗೆ ಕರೆದೊಯ್ದು ಕಾಶಿ - ಕಾಶ್ಮಿರ - ಕನ್ಯಾಕುಮಾರಿವರೆಗಿನ ದಾಮಿ೯ಕ ಸ್ಥಳಗಳ ದರ್ಶನ ಮಾಡಿಸಿದ್ದಾರೆ.
 ಈ ವಯಸ್ಸಿನಲ್ಲಿಯೂ ಏನಾದರು ವಿಶೇಷ ತಿನಿಸು ತಾವು ತಿಂದರೆ ಅದನ್ನು ತಾಯಿಗಾಗಿ ಪೊಟ್ಟಣದಲ್ಲಿ ಕಟ್ಟೋಯ್ಯುವ ಇವರ ತಾಯಿಯ ಮೇಲಿನ ಪ್ರೀತಿ ನಮಗೆಲ್ಲ ವಿಸ್ಮಯ.
  2019ರ ನವೆಂಬರ್ ನಲ್ಲಿ ಶಾಂತೇಶ, ಕಾಂತೇಶ ಮತ್ತು ಬ್ರಾಂತೇಶ ದೇವರ ಯಾತ್ರೆಯಲ್ಲಿ ನಮ್ಮ ಜೊತೆ ಇದ್ದರು ಬರುವ ಮಾರ್ಗದಲ್ಲಿ ಕಾಗಿನೆಲೆಗೂ ಹೋಗಿ ಬಂದಿದ್ದೆವು.
  ಕಳೆದ ವಾರದ ಸೋಮವಾರ ರಾತ್ರಿ ಸುಮಾರು ಮುಕ್ಕಾಲು ಗಂಟೆ ಪೋನಿನಲ್ಲಿ ಫೆಬ್ರವರಿ 4ರ ದೇವಾಲಯದ ಜಾತ್ರಾ ಕಾರ್ಯಕ್ರಮದ ಬಗ್ಗೆ, ತಮ್ಮ ಬಾಲ್ಯದಲ್ಲಿ ಸಾಗರದ ಮಾರಿಕಾಂಬಾ ದೇವಾಲಯದಲ್ಲಿ ಮಾಡುತ್ತಿದ್ದ ಸೇವೆ ಇತ್ಯಾದಿ ಬಗ್ಗೆ ಮಾತಾಡಿದ್ದರು, ಅವರ ಬೆನ್ನು ನೋವು ಬಗ್ಗೆ ಹೇಳಿದಾಗ ನಿಲ೯ಕ್ಷ ಮಾಡಬೇಡಿ ಅಂದಿದ್ದೆ.
  ಬುಧವಾರ ಸಾಗರದಲ್ಲಿ ECG ಮಾಡಿದ ನಂತರ ಗೊತ್ತಾಗಿದ್ದು ಇವರಿಗೆ ಎರೆಡು ಮೂರು ದಿನದ ಹಿಂದೆ ಹೃದಯಾಘಾತವಾಗಿತ್ತು ಅಂತ ಅಫಾತಕಾರಿ ಸುದ್ದಿ ತಕ್ಷಣ ಅಲ್ಲಿಂದಲೇ ಅವರ ಪತ್ನಿ ಅಂಬ್ಯೂಲೆನ್ಸ್ ನಲ್ಲಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ಕರೆದೊಯ್ದಿದ್ದಾರೆ ಅಲ್ಲಿಂದ ಮಗಳೂ ಅಳಿಯ ಸೇರಿ ಮಣಿಪಾಲಿಗೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ, ಹೃದಯ ನಾಳಕ್ಕೆ 2 ಸ್ಟಂಟ್ ಅಳವಡಿಸಿದ್ದಾರೆ.
  ಇನ್ನೇನು ಎಲ್ಲಾ ಸರಿ ಆಯಿತು ಅಂತ ಭಾವಿಸಿದ ಒ0ದೆರೆಡು ದಿನದ ನಂತರ ಶ್ವಾಸಕೋಶದ ಸಮಸ್ಯೆ ನಂತರ ಕಿಡ್ನಿ ಸಮಸ್ಯೆ ಪ್ರಾರಂಭ ಆಯಿತು ನಿನ್ನೆ ಬೆಳಿಗ್ಗೆ ಇನ್ನೊಮ್ಮೆ ಹೃದಯಾಘಾತವಾಗಿ ಮೆದಳು ನಿಷ್ಕ್ರಿಯವಾಗಿ ಗಣಪತಿ ಮಾಸ್ತರು ಇಹಲೋಕ ತ್ಯಜಿಸಿದರು.
  ನಿನ್ನೆ ರಾತ್ರಿ ಅವರ ಪಾರ್ಥಿವ ದೇಹ ನಮ್ಮ ಊರಲ್ಲಿನ ಅವರ ಮನೆಗೆ ತಂದಾಗ ಇದೆಲ್ಲ ನೆನಪಾಯಿತು, ಬೆಳಿಗ್ಗೆ ಸಾಗರದ ಮೂಲ ಮನೆಗೆ ಒಯ್ದು ಸಾಗರದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ತೀರ್ಮಾನಿಸಿರುವುದಾಗಿ ಅವರ ಸಹೋದರರಾದ ದೈಹಿಕ ಶಿಕ್ಷಕರಾದ ಪುರುಶೋತ್ತಮ್ ತಿಳಿಸಿದರು.
  ಎಲ್ಲೊ ಹುಟ್ಟಿ ಎಲ್ಲೋ ಬೆಳೆದು ನಮ್ಮ ಊರಲ್ಲಿ ನಿವೃತ್ತ ಜೀವನ ಮಾಡಲು ಬಂದು ನಮ್ಮ ಊರಿನವರೇ ಆಗಿದ್ದ ಗಣಪತಿ ಮಾಸ್ತರ್ ಎಂಬ ಸಜ್ಜನ ಹಿರಿಯ ಮಿತ್ರರಿಗೆ ಅಕ್ಷರದ ಮೂಲಕ ದುಃಖದಿಂದ ಶ್ರದ್ದಾಂಜಲಿ ಹೇಳುವಂತಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ