Skip to main content

ಆನಂದಪುರಂ ಇತಿಹಾಸ - 67, ಆನಂದಪುರಂ ಗೆ ಸ್ವತಃ ಬೇಟಿ ನೀಡಿ 36 ಶಿಲಾಶಾಸನ ಮತ್ತು 2 ತಾಮ್ರ ಶಾಸನ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಇಂಗ್ಲೀಷ್ ಗೆ ಅನುವಾದಿಸಿ ಪ್ರಕಟಿಸಿದ ಮೈಸೂರು ಆರ್ಕಾಲಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಬೆಂಜಮಿನ್ ಲೆವಿಸ್ ರೈಸ್.

#ಆನಂದಪುರಂ_ಇತಿಹಾಸ_67.

#ಬೆಂಜಮಿನ್_ಲೆವಿಸ್_ರೈಸ್_ಎಪಿಗ್ರಾಫಿ_ಕನಾ೯ಟಕ_1902_ರಲ್ಲಿ_ಪ್ರಕಟ.

#ಇದರಲ್ಲಿ_ಆನಂದಪುರಂ_ಸುತ್ತಲಿನ_36_ಶಿಲಾಶಾಸನ_2_ತಾಮ್ರ_ಶಾಸನ_ದಾಖಲಾಗಿದೆ.

#ಬೆಂಜಮಿನ್_ಲೆವಿಸ್‌_ರೈಸ್_ಶಾಸನ_ಅಧ್ಯಯನದ_ಅಶ್ವಿನಿದೇವತೆಗಳು_ಎಂಬ_ಬಿರುದಿದೆ.

#ರೈಸ್_20_ಡಿಸೆಂಬರ್_1868ರಲ್ಲಿ_ಆನಂದಪುರಂಗೆ_ಬಂದಿದ್ದರು.

#ಆಗಿನ_ಆನಂದಪುರಂ_ರಸ್ತೆ_ಕೋಟೆಯ_ಬಗ್ಗೆ_ತಮ್ಮ_ಈಸ್ಟರ್ನ್_ಎಕ್ಸ್ಪೆರಿಯನ್ಸ್_ಪುಸ್ತಕದಲ್ಲಿ_ಬರೆದಿದ್ದಾರೆ.

  12 ಸಂಪುಟಗಳ ಎಪಿಗ್ರಾಫಿ ಕರ್ನಾಟಕ (Epigraphia Carnatica) 1894-1905 ರವರೆಗೆ ಮೈಸೂರು ಅರ್ಕಾಲಾ ಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಆಗಿದ್ದ ಬೆಂಜಮಿನ್ ಲೆವಿಸ್ ರೈಸ್ ಪ್ರಕಟಿಸಿದ್ದರು, ಇದರಲ್ಲಿ 8869 ಶಾಸನಗಳನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. 
  ದೇಶದಲ್ಲಿ ತಮಿಳುನಾಡು ಬಿಟ್ಟರೆ ಅತಿ ಹೆಚ್ಚು ಶಾಸನಗಳಿರುವುದು ಕರ್ನಾಟಕದಲ್ಲಿ ಮಾತ್ರ.
  ಸುಮಾರು ಇಪ್ಪತ್ತು ಸಾವಿರ ಶಾಸನದಲ್ಲಿ ಅರ್ಧದಷ್ಟು ಪ್ರಕಟವಾಗಿದೆ.
   ಬೆಂಜಮಿನ್ ಲೇವಿಸ್ ರೈಸ್ ಹುಟ್ಟಿದ್ದು ಬೆಂಗಳೂರಿನಲ್ಲಿ 17- ಜುಲೈ - 1837 ಇವರ ತಂದೆ ಚರ್ಚ್ ನ ಮುಖ್ಯಸ್ಥರಾಗಿದ್ದರು, ವಿವರ ವಿದ್ಯಾಬ್ಯಾಸ ಲಂಡನ್ ನಲ್ಲಿ ಆಯಿತು, ಸೇನೆಯ ಮೇಜರ್ ಒಬ್ಬರು ಶಿಲಾ ಶಾಸನಗಳ ಚಿತ್ರ ನೀಡಿ ವಿವರಿಸಲು ಕೋರಿದ್ದೇ ಅವರಿಗೆ ರಾಜ್ಯದಾದ್ಯಂತ 3 ನೇ ಶತಮಾನದಿಂದ 19 ನೇ ಶತಮಾನದವರೆಗಿನ ಎಲ್ಲೇಲ್ಲೋ ಅವಸಾನದ ಅಂಚಿನಲ್ಲಿದ್ದ ಶಿಲಾ ಶಾಸನ ಸಂಶೋದನೆಗೆ ಕಾರಣ ಆಯಿತು.
  ಇವರ ಈ ಆಸಕ್ತಿಗೆ ಮೈಸೂರು ಅರ್ಕಾಲಾಜಿಕಲ್ ಡಿಪಾಟ್೯ ಮೆಂಟ್ ನಿರ್ದೇಶಕ ಸ್ಥಾನ ಲಭಿಸಿತು.
  1894 ರಿಂದ 1905 ರ ಅವಧಿಯಲ್ಲಿ ಇಡೀ ರಾಜ್ಯ ಸುತ್ತಿ ಈ ದಾಖಲೆ ನಮೂದಿಸಿದ ಇವರ 12 ಸಂಪುಟಗಳು ಇತಿಹಾಸದ ಮಾಹಿತಿಯ ಕಣಜವಾಗಿದೆ ಇದಕ್ಕೆ ಇವರ ಶ್ರಮ ದೊಡ್ಡದು ಆದ್ದರಿಂದ ಇವರನ್ನು ಶಾಸನ ಅಧ್ಯಯನದ ಅಶ್ವಿನಿ ದೇವತೆಗಳು ಎಂಬ ಬಿರುದು ಇವರಿಗಿತ್ತು.
  ಇವರು ಆನಂದಪುರಂ ಸುತ್ತಲಿನ ಶಾಸನ ಅಧ್ಯಯನಕ್ಕೆ ಸ್ವತಃ ಬಂದಿದ್ದರೆಂಬುದು ಒಂದು ದಾಖಲೆ ಆಗಿದೆ.
  ಇವರು 1902 ರಲ್ಲಿ ಪ್ರಕಟಿಸಿದ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಆನಂದಪುರಂ ಸುತ್ತ ಮುತ್ತಲಿನ 36 ಶಿಲಾ ಶಾಸನ ಮತ್ತು 2 ತಾಮ್ರ ಶಾಸನದಲ್ಲಿ ಬರೆದದದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. 10 ಜುಲೈ 1927 ರಲ್ಲಿ ಮರಣಿಸಿದ ಇವರು ತಮ್ಮ ಈಸ್ಟರ್ನ್ ಎಕ್ಸ್ ಪಿರಿಯನ್ಸ್ ಪುಸ್ತಕದಲ್ಲಿ ಪತ್ರ ಮುಖೇನ ದಿನಾಂಕ 20- ಡಿಸೆಂಬರ್- 1868ರಲ್ಲಿ ಆನಂದಪುರಂ ನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಬಗ್ಗೆ ಸಂಜೆ ಹೊತ್ತಿನಲ್ಲಿ ಆನಂದಪುರಂ ಕೋಟೆಯಲ್ಲಿನ ಪಿರಂಗಿ ವೀಕ್ಷಿಸಲು ಹೋದಾಗ ಆಸ್ಪಾದಿಸಿದ ಪ್ರಕೃತಿ ಸೌಂದರ್ಯ ಮತ್ತು ಆನಂದಪುರಂಗೆ ಸಂಪರ್ಕಿಸುವ ರಸ್ತೆಯ ಇಕ್ಕೆಲದಲ್ಲಿ ದೂಪದ ಸಾಲು ಮರದ ಸುಂದರ ದೃಶ್ಯದ ಬಗ್ಗೆ ಬರೆದಿದ್ದಾರೆ.

(ಆನಂದಪುರಂ ಶಿಲಾ ಶಾಸನಗಳ ಮಾಹಿತಿ ಮುಂದಿನ ಭಾಗ 68ರಲ್ಲಿ )

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ