Skip to main content

ಆನಂದಪುರಂ ಇತಿಹಾಸ - 67, ಆನಂದಪುರಂ ಗೆ ಸ್ವತಃ ಬೇಟಿ ನೀಡಿ 36 ಶಿಲಾಶಾಸನ ಮತ್ತು 2 ತಾಮ್ರ ಶಾಸನ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಇಂಗ್ಲೀಷ್ ಗೆ ಅನುವಾದಿಸಿ ಪ್ರಕಟಿಸಿದ ಮೈಸೂರು ಆರ್ಕಾಲಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಬೆಂಜಮಿನ್ ಲೆವಿಸ್ ರೈಸ್.

#ಆನಂದಪುರಂ_ಇತಿಹಾಸ_67.

#ಬೆಂಜಮಿನ್_ಲೆವಿಸ್_ರೈಸ್_ಎಪಿಗ್ರಾಫಿ_ಕನಾ೯ಟಕ_1902_ರಲ್ಲಿ_ಪ್ರಕಟ.

#ಇದರಲ್ಲಿ_ಆನಂದಪುರಂ_ಸುತ್ತಲಿನ_36_ಶಿಲಾಶಾಸನ_2_ತಾಮ್ರ_ಶಾಸನ_ದಾಖಲಾಗಿದೆ.

#ಬೆಂಜಮಿನ್_ಲೆವಿಸ್‌_ರೈಸ್_ಶಾಸನ_ಅಧ್ಯಯನದ_ಅಶ್ವಿನಿದೇವತೆಗಳು_ಎಂಬ_ಬಿರುದಿದೆ.

#ರೈಸ್_20_ಡಿಸೆಂಬರ್_1868ರಲ್ಲಿ_ಆನಂದಪುರಂಗೆ_ಬಂದಿದ್ದರು.

#ಆಗಿನ_ಆನಂದಪುರಂ_ರಸ್ತೆ_ಕೋಟೆಯ_ಬಗ್ಗೆ_ತಮ್ಮ_ಈಸ್ಟರ್ನ್_ಎಕ್ಸ್ಪೆರಿಯನ್ಸ್_ಪುಸ್ತಕದಲ್ಲಿ_ಬರೆದಿದ್ದಾರೆ.

  12 ಸಂಪುಟಗಳ ಎಪಿಗ್ರಾಫಿ ಕರ್ನಾಟಕ (Epigraphia Carnatica) 1894-1905 ರವರೆಗೆ ಮೈಸೂರು ಅರ್ಕಾಲಾ ಜಿಕಲ್ ಡಿಪಾರ್ಟ್ಮೆಂಟ್ ಡೈರೆಕ್ಟರ್ ಆಗಿದ್ದ ಬೆಂಜಮಿನ್ ಲೆವಿಸ್ ರೈಸ್ ಪ್ರಕಟಿಸಿದ್ದರು, ಇದರಲ್ಲಿ 8869 ಶಾಸನಗಳನ್ನು ಸಂಶೋಧಿಸಿ ಪ್ರಕಟಿಸಿದ್ದಾರೆ. 
  ದೇಶದಲ್ಲಿ ತಮಿಳುನಾಡು ಬಿಟ್ಟರೆ ಅತಿ ಹೆಚ್ಚು ಶಾಸನಗಳಿರುವುದು ಕರ್ನಾಟಕದಲ್ಲಿ ಮಾತ್ರ.
  ಸುಮಾರು ಇಪ್ಪತ್ತು ಸಾವಿರ ಶಾಸನದಲ್ಲಿ ಅರ್ಧದಷ್ಟು ಪ್ರಕಟವಾಗಿದೆ.
   ಬೆಂಜಮಿನ್ ಲೇವಿಸ್ ರೈಸ್ ಹುಟ್ಟಿದ್ದು ಬೆಂಗಳೂರಿನಲ್ಲಿ 17- ಜುಲೈ - 1837 ಇವರ ತಂದೆ ಚರ್ಚ್ ನ ಮುಖ್ಯಸ್ಥರಾಗಿದ್ದರು, ವಿವರ ವಿದ್ಯಾಬ್ಯಾಸ ಲಂಡನ್ ನಲ್ಲಿ ಆಯಿತು, ಸೇನೆಯ ಮೇಜರ್ ಒಬ್ಬರು ಶಿಲಾ ಶಾಸನಗಳ ಚಿತ್ರ ನೀಡಿ ವಿವರಿಸಲು ಕೋರಿದ್ದೇ ಅವರಿಗೆ ರಾಜ್ಯದಾದ್ಯಂತ 3 ನೇ ಶತಮಾನದಿಂದ 19 ನೇ ಶತಮಾನದವರೆಗಿನ ಎಲ್ಲೇಲ್ಲೋ ಅವಸಾನದ ಅಂಚಿನಲ್ಲಿದ್ದ ಶಿಲಾ ಶಾಸನ ಸಂಶೋದನೆಗೆ ಕಾರಣ ಆಯಿತು.
  ಇವರ ಈ ಆಸಕ್ತಿಗೆ ಮೈಸೂರು ಅರ್ಕಾಲಾಜಿಕಲ್ ಡಿಪಾಟ್೯ ಮೆಂಟ್ ನಿರ್ದೇಶಕ ಸ್ಥಾನ ಲಭಿಸಿತು.
  1894 ರಿಂದ 1905 ರ ಅವಧಿಯಲ್ಲಿ ಇಡೀ ರಾಜ್ಯ ಸುತ್ತಿ ಈ ದಾಖಲೆ ನಮೂದಿಸಿದ ಇವರ 12 ಸಂಪುಟಗಳು ಇತಿಹಾಸದ ಮಾಹಿತಿಯ ಕಣಜವಾಗಿದೆ ಇದಕ್ಕೆ ಇವರ ಶ್ರಮ ದೊಡ್ಡದು ಆದ್ದರಿಂದ ಇವರನ್ನು ಶಾಸನ ಅಧ್ಯಯನದ ಅಶ್ವಿನಿ ದೇವತೆಗಳು ಎಂಬ ಬಿರುದು ಇವರಿಗಿತ್ತು.
  ಇವರು ಆನಂದಪುರಂ ಸುತ್ತಲಿನ ಶಾಸನ ಅಧ್ಯಯನಕ್ಕೆ ಸ್ವತಃ ಬಂದಿದ್ದರೆಂಬುದು ಒಂದು ದಾಖಲೆ ಆಗಿದೆ.
  ಇವರು 1902 ರಲ್ಲಿ ಪ್ರಕಟಿಸಿದ ಎಪಿಗ್ರಾಪಿಯಾ ಕರ್ನಾಟಕದಲ್ಲಿ ಆನಂದಪುರಂ ಸುತ್ತ ಮುತ್ತಲಿನ 36 ಶಿಲಾ ಶಾಸನ ಮತ್ತು 2 ತಾಮ್ರ ಶಾಸನದಲ್ಲಿ ಬರೆದದದ್ದನ್ನು ಇಂಗ್ಲೀಷಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. 10 ಜುಲೈ 1927 ರಲ್ಲಿ ಮರಣಿಸಿದ ಇವರು ತಮ್ಮ ಈಸ್ಟರ್ನ್ ಎಕ್ಸ್ ಪಿರಿಯನ್ಸ್ ಪುಸ್ತಕದಲ್ಲಿ ಪತ್ರ ಮುಖೇನ ದಿನಾಂಕ 20- ಡಿಸೆಂಬರ್- 1868ರಲ್ಲಿ ಆನಂದಪುರಂ ನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಬಗ್ಗೆ ಸಂಜೆ ಹೊತ್ತಿನಲ್ಲಿ ಆನಂದಪುರಂ ಕೋಟೆಯಲ್ಲಿನ ಪಿರಂಗಿ ವೀಕ್ಷಿಸಲು ಹೋದಾಗ ಆಸ್ಪಾದಿಸಿದ ಪ್ರಕೃತಿ ಸೌಂದರ್ಯ ಮತ್ತು ಆನಂದಪುರಂಗೆ ಸಂಪರ್ಕಿಸುವ ರಸ್ತೆಯ ಇಕ್ಕೆಲದಲ್ಲಿ ದೂಪದ ಸಾಲು ಮರದ ಸುಂದರ ದೃಶ್ಯದ ಬಗ್ಗೆ ಬರೆದಿದ್ದಾರೆ.

(ಆನಂದಪುರಂ ಶಿಲಾ ಶಾಸನಗಳ ಮಾಹಿತಿ ಮುಂದಿನ ಭಾಗ 68ರಲ್ಲಿ )

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...