ಮೊಟ್ಟ ಮೊದಲ1982 ರಲ್ಲಿ ಶಿಶುನಾಳರ ಹಾಡು ಕೇಳಿ ಪ್ರಬಾವಿತನಾಗಿದ್ದೆ, 2003 ರಲ್ಲಿ ಶ್ರೀ ಹರಿಕೊಡೆಯುವರು ನೀಡಿದ ಶ್ರೀ ಶಿಶುನಾಳ ಷರೀಪ ಸಾಹೇಬರ ಜೀವನ ಲೀಲಾಮೃತ ಎಂಬ ಪುಸ್ತಕ ನೀಡಿದ್ದರು ಅದನ್ನ ಬರೆದವರು ಡಾll ಮಲ್ಲಿಕಾಜು೯ನ ಸಿಂದಗಿ, ಈ ಪುಸ್ತಕದಲ್ಲಿ ಶಿಶುನಾಳ ಷರೀಪರ ಸಂಪೂಣ೯ ಮಾಹಿತಿ ಇದೆ.
ಹರಿ ಕೋಡೆಯವರು ಶಿಶುನಾಳರ ಪ್ರಭಾವಕ್ಕೆ ಒಳಗಾಗಿ ಸಿನಿಮಾ ಕೂಡ ನಿಮಿ೯ಸಿದರು.
2006ರಲ್ಲಿ ಹುಬ್ಬಳ್ಳಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಪೂನಾ ಕಾಮಗಾರಿ ನಡೆಯುತ್ತಿತ್ತು. ನಾವು ದಾರಿ ತಪ್ಪಿ ನೇರವಾಗಿ ಶಿಶುನಾಳ ತಲುಪಿದ್ದೆ ಅವತ್ತೇ ಶಿಶುನಾಳರ ಜನ್ಮದಿನವೂ ಆಗಿತ್ತು, ಅಲ್ಲಿ ಅನೇಕ ಪ್ರಸಿದ್ಧ ಗಾಯಕರು ಶಿಶುನಾಳರ ಗೀತೆ ಹಾಡುತ್ತಿದ್ದರು ಎಂತಹ ಭಾಗ್ಯ ನನ್ನದು.
ಶಿಶುನಾಳಕ್ಕೂ ನನಗೂ ಒಂದು ರೀತಿಯ ಸಂಬ೦ದ ಈ ರೀತಿ ಸತ್ಸ೦ಗ ಬೆಳೆದಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment