ಹೆಗೋಡಿನ ನಿನಾಸಂ ಸಂಸ್ಥೆ ನಾಟಕ ಮತ್ತು ಸಿನಿಮಾ ಜನರಿಗೆ ಹೇಗೆ ಚಿರಪರಿಚಿತ ಹಾಗೆ ಇದರ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ತಮ್ಮ ವಿಚಾರ ಮತ್ತು ಬರವಣಿಗೆಯಿಂದ ವಿಶ್ವವಿಖ್ಯಾತರು, ಅಂತರಾಷ್ಟ್ರೀಯ ಮ್ಯಾಗ್ ಸೆಸೆ ಪ್ರಶಸ್ತಿ ವಿಜೇತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಣ್ಣ ಹಳ್ಳಿ ಹೆಗೋಡುನವರು ನಮ್ಮ ತಾಲ್ಲೂಕಿನವರು ಅಂತ ನಮಗೆಲ್ಲ ಹೆಮ್ಮೆ.
ಒಮ್ಮೆ ನೀನಾಸಂ ಸಭಾ0ಗಣದಲ್ಲಿ ಸುಬ್ಬಣ್ಣನವರ ಜೊತೆ ಸಭೆ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದೆ, ದೇವಾಡಿಗ ಜಾತಿಯ (ವೀರಪ್ಪ ಮೊಯ್ಲ್ ) ಜಾತಿ ಸಮಾವೇಶವದು, ಸಂಘಟಕರು ನನ್ನನ್ನ ಕರೆದಾಗ ನನಗೆ ನಂಬಲಿಕ್ಕೆ ಆಗಲಿಲ್ಲ, ಸಣ್ಣ ಜಾತಿ ಸಮಾವೇಶಕ್ಕೆ ಸುಬ್ಬಣ್ಣ ಬರುವುದು ಅನುಮಾನ ಅಂದೆ. ಇಲ್ಲ ಒಪ್ಪಿದಾರೆ ಸಬಾo ಗಣ ಉಚಿತವಾಗಿ ನೀಡಿದಾರೆ ಅಂದರು.
ಅವತ್ತಿನ ಸಭೆಯಲ್ಲಿ ಸುಬ್ಬಣ್ಣರ ಬಾಷಣ ಸಣ್ಣ ಜಾತಿಯ ಶೂದ್ರರಿಗೆ ಒ೦ದು ಆಶಾದಾಯಕ ನೀತಿ ಪಾಠವಾಗಿತ್ತು, ಸಮಾಜವಾದದ ಅನುಯಾಯಿ ಆಗಿದ್ದ ಸುಬ್ಬಣ್ಣ ಲೋಹಿಯ ವಿಚಾರಧಾರೆ ಹೊಂದಿದವರು ಹಾಗಾಗಿ ಅವರ ಮಾತನ್ನ ಗಮನವಿಟ್ಟು ಆಲೈಸುತ್ತಿದ್ದೆ..........
" ದೇಶದಲ್ಲಿ ಮೇಲ್ಜಾತಿಗಳು ಸಂಘಟನೆಗಳು ಅವಶ್ಯವಿಲ್ಲ ಅದರಿಂದ ಸಮಾಜಕ್ಕೆ ಮಾರಕ ಆದರೆ ಅಸಂಘಟಿತ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕು ಮತ್ತು ಸವಲತ್ತುಗಳಿಗಾಗಿ ಸಂಘಟಿತರಾಗಬೇಕು " ಎಂಬ ಮಾತು ಸ್ವತಃ ಬ್ರಾಹಮಣರಾದ ಹಾಗೂ ವಿಚಾರವಾದಿ ಸುಬ್ಬಣ್ಣರ ಬಾಯಲ್ಲಿ ಬ೦ದಿದ್ದರ ತಾತ್ಪಯ೯ ಅವರಿಂದಲೆ ಕೇಳಬೇಕೆಂದುಕೊಂಡೆ.
ಸಬೆಯ ಮಧ್ಯದಲ್ಲಿ ಅವರು ವಿರಾಮದ ಮೂಡಿನಲ್ಲಿ ಇದ್ದಾಗ ಸುಬ್ಬಣ್ಣ ಮೇಲ್ಜಾತಿಗಳು ಯಾಕೆ ಸಂಘಟಿತರಾಗಬಾರದು, ಸಂಘಟಿತರಾದರೆ ಸಮಾಜಕ್ಕೆ ಯಾವ ರೀತಿ ಮಾರಕ ? ನನಗೆ ಸರಿಯಾಗಿ ಅಥ೯ವಾಗಿಲ್ಲ ಅಂದೆ, ಬ್ರಾಹ್ಮಣರು ಸಾವಿರಾರು ವಷ೯ದಿಂದ ತಮ್ಮ ಆಚರಣೆಗಳಿಂದ ಸಂಘಟಿತರಾಗೇ ಇದ್ದಾರೆ ಅವರಿಗೆ ಸಣ್ಣ ಜಾತಿಗಳ0ತೆ ಅವರ ಹಕ್ಕು, ಸವಲತ್ತುಗಳಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ಇಂತಹ ಉದ್ದೇಶದ ಸಂಘಟನೆ ಪ್ರಾರಂಭಿಸಿದರೆ ದೇಶದ ಇತರ ಜಾತಿಗಳನ್ನ ಅವು ಶೋಶಣೆ ಮಾಡಲು ಕಾರಣವಾಗುತ್ತೆ ಆದ್ದರಿಂದ ಅದರ ಅವಶ್ಯಕತೆ ಇಲ್ಲ ಆದರೆ ಸಣ್ಣ ಸಣ್ಣ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸವಲತ್ತುಗಳಿಗಾಗಿ ಸಂಘಟಿತರಾಗದಿದ್ದರೆ ಸಂಘಟಿತ ದೊಡ್ಡ ಜಾತಿಗಳಿಂದ ಉಳಿಗಾಲ ಇಲ್ಲ ಅಂದರು.
ಅವರ ಮಾತು ಸರಿಯಾಗಿ ಚಿಂತನೆ ಮಾಡಿದರೆ ಎಷ್ಟು ಅಥ೯ಗಬಿ೯ ಅಂತ ಅಥ೯ ಆಗುತ್ತೆ
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment