Skip to main content

ಚಂಪಕ ಸರಸು (ಕೆಳದಿ ರಾಣಿ ಚಂಪಕಳ ಸ್ಮರಣಿಯ ಸ್ಥಳ)

  ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.


   ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
    ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.
     ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ ನಾಯಕರಿಗೆ ಅಸಾಧ್ಯ ವೇದನೆ ಆಗುತ್ತೆ ಚಂಪಕಾಳ ನೆನಪು ಶಾಶ್ವತವಾಗಿ ಉಳಿಯಬೇಕೆ೦ದು ಸ್ಮರಣೆಗಾಗಿ ಸುಂದರವಾದ ಕೊಳ ಕಲ್ಲಿನಲ್ಲಿ ಕಟ್ಟಿಸುತ್ತಾರೆ, ಕೊಳದ ಮದ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾದಿ ಎದುರು ಶಿಲೆ ಕಲ್ಲಿನ ಸುಂದರವಾದ ಆನೆಯ ಶಿಲ್ಪಗಳು ಇದೆ.
      1972ರಲ್ಲಿ ಇಲ್ಲಿ ದೇವರ ಕಣ್ಣು ಸಿನಿಮಾದ ಪ್ರಸಿದ್ಧವಾದ ಹಾಡಾದ " ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ" ಎಂಬ ಹಾಡಿನ ಚಿತ್ರಿಕರಣವನ್ನ ಖ್ಯಾತ ನಿದೇ೯ಶಕ ವೈ.ಆರ್.ಸ್ವಾಮಿ ಮಾಡಿದ್ದಾರೆ.
      ಪ್ರಾಚ್ಯ ವಸ್ತು ಸಂಶೋದನ ಇಲಾಖೆಯ ನಿಲ೯ಕ್ಷದಿಂದ ,ಸ್ಥಳೀಯರ ಅನಾದರದಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಈ ಸು೦ದರ ಪ್ರವಾಸಿ ತಾಣ ದಿನೇ ದಿನೇ ಶಿಥಿಲವಾಗುತ್ತಿದೆ, ಮಾಹಿತಿ ಕೊರತೆ ಮತ್ತು ಸರಿಯಾದ ಪ್ರಚಾರವಿಲ್ಲದೆ ಈ ಸ್ಥಳ ಒಂದು ರೀತಿ ಅಪರಿಚಿತ ಮತ್ತು ನಿಗೂಡವಾಗಿದೆ.
     ಚಂಪಕಳ ಬಗ್ಗೆ ಆ ಸಂದಭ೯ದಲ್ಲಿ ಕೆಳದಿ ಅರಸರ ರಾಜಧಾನಿ ಇಕ್ಕೆರಿಗೆ ಬೇಟಿ ನೀಡುವ ಇಟಲಿಯ ಇತಿಹಾಸಕಾರ ಡಲ್ಲಾ ವಲ್ಲೆ ತಮ್ಮ ದಾಖಲೆಯಲ್ಲಿ ದಾಖಲಿಸಿದ್ದಾರೆ. ಆನಂದಪುರದ ಸುತ್ತಮುತ್ತಾ 50 ವಷ೯ದ ಹಿಂದಿನ ತನಕ ಲಾವಣಿಗಳಲ್ಲಿ ಚಂಪಕಾಳ ಸೌಂದಯ೯, ಆಕಷ೯ಕ ರಂಗೋಲಿ ಮತ್ತು ರಾಜ ವೆಂಕಟಪ ನಾಯಕರ ವಿವಾಹ, ಪ್ರೇಮ ದುರಂತದ ಬಗ್ಗೆ ವಿವರಗಳ ರಾಗವಾದ ಧ್ವನಿ ಇತ್ತು.
       ಈ ಬಗ್ಗೆ ನಾನು ಒಂದು ಕಾದಂಬರಿ ಬರೆದಿದ್ದೇನೆ ಸದ್ಯದಲ್ಲೆ ಬಿಡುಗಡೆ ಇದೆ ಅದರಲ್ಲಿ ಕೆಳದಿ ರಾಣಿ ಚಂಪಕಾಳ ಬಗ್ಗೆ ಹೆಚ್ಚಿನ ವಿವರ ಇದೆ, ರಾಜವೆಂಕಟಪ್ಪ ನಾಯಕರು ಮತ್ತು ರಾಣಿ ಚೆಂಪಕಾಳ ಈ ಪ್ರೇಮ ಕಥೆ ಕೆಳದಿ ಅರಸರ ಬಗ್ಗೆ ಬೆಳಕು ಚೆಲ್ಲುವ ಒಂದು ಕಾದಂಬರಿ ಆಗಲಿದೆ ಅಂತ ಹಸ್ತಪ್ರತಿ ಓದಿದ ಅನುಭವಿಗಳು ಹೇಳಿದ್ದಾರೆ, ಕಥೆ ಓದೋರಿಗೆ ಆಸಕ್ತಿ ಬರಲಿ ಅಂತ ಅನೇಕ ಇತರ ಅವಶ್ಯ ಐತಿಹಾಸಿಕ ವಿಷಯ ಸೇರಿಸಿ ಪಿಕ್ಷನ್ ಬರೆದಿದ್ದೇನೆ.
       ಆನಂದಪುರದ ಚಂಪಕಸರಸು ಜನ ಮನದಲ್ಲಿ ಉಳಿಯಲಿ ಅನ್ನೋದು ನನ್ನ ಆಸೆ ಹಾಗಾಗಿ ನಮ್ಮ ರೆಸ್ಟೋರೆಂಟ್ಗೆ "ಚಂಪಕಾ ಪ್ಯಾರಾ ಡೈಸ್ " ಅಂತ ಹೆಸರು ಇಟ್ಟಿದ್ದೇನೆ.

  ಇವತ್ತು ರಾಜ್ಯದ ಜಲ ವಿಜ್ಞಾನಿ ಸಿರಸಿಯ ಶಿವಾನಂದ ಕಳವೆಯವರು ಪತ್ರಕತ೯ರಾದ ನೀಚಡಿ ವಸಂತ್ ಚಂಪಕ ಸರಸುಗೆ ಬೇಟಿ ನೀಡಿದ್ದು ಸಂತೋಷದ ಸುದ್ದಿ (17- ಆಗಸ್ಟ- 20l 8)

Comments

  1. Thank you for naming a Champaka Paradise and this was the important information regarding this place. When i was in High school life, we visiting to that Place on holiday. We were swimming in that pool and riding the elephants statue in front of that. The temple is so beautiful and even to swim.
    I request the government to renew that temple and Kalyani for visiting more and more people. And i finally very thankful to Arun prasad to collect so many information on this particular place.

    ReplyDelete
  2. Very Nice content sharing publicly!
    Looking for a mini spy camera in Vardhman Plaza, New Delhi? Visit Spy World for the best surveillance solutions! Find top-quality spy cameras for your security needs. For any query: Call us at 8800809593 | 8585977908.

    ReplyDelete

Post a Comment

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...