Skip to main content

ಚಂಪಕ ಸರಸು (ಕೆಳದಿ ರಾಣಿ ಚಂಪಕಳ ಸ್ಮರಣಿಯ ಸ್ಥಳ)

  ಚಂಪಕ ರಾಣಿ ಕೆಳದಿ ರಾಜ ವೆಂಕಟಪ್ಪ ನಾಯಕರ ರಾಣಿ, ಅವಳು ಬಿಡಿಸುತ್ತಿದ್ದ ರಂಗೋಲಿ ನೋಡಿ ಅದರಿಂದ ಆಕಷಿ೯ತರಾಗಿ ಅವಳನ್ನ ಮೋಹಿಸಿ ಮದುವೆ ಆಗುತ್ತಾರೆ, ಆದರೆ ಸುಂದರಿ ಚಂಪಕ ಬೇರೆ ಜಾತಿಯವಳೆಂಬ ಕಾರಣದಿಂದ ಅವಳನ್ನ ಪಟ್ಟದ ರಾಣಿ ಪರಿವಾರ ವಿರೋದಿಸುತ್ತಾರೆ, ಮುಂದೆ ಇದೇ ಪಟ್ಟದ ರಾಣಿ ಭದ್ರಮಾಜಿ ಅನಾರೋಗ್ಯಕ್ಕೆ ಕಾರಣ ವಾಯಿತು ಮು೦ದೆ ಅವರ ಮರಣಕ್ಕೂ ಕಾರಣವಾಯಿತು.


   ಇದರಿಂದ ಇಡೀ ರಾಜ್ಯದ ಪ್ರಜೆಗಳು ಚಂಪಕಳನ್ನ ನಿಂದಿಸುತ್ತಾರೆ, ಚೆ೦ಪಕ ಮಾಯಾವಿ ಅವಳು ಅನ್ಯ ಆಹಾರ ಸೇವಿಸುತ್ತಾಳೆ, ರಾಜಾ ವೆಂಕಟಪ್ಪ ನಾಯಕರನ್ನ ತಲೆ ಕೆಡಿಸಿದ್ದಾಳೆ ಅಂತೆಲ್ಲ ಆರೋಪ ಮಾಡುತ್ತಾರೆ ಇದರಿOದ ನೊಂದ ಚಂಪಕ ರಾಣಿ ಆನಂದಪುರದ ಕೋಟೆಯಲ್ಲಿ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
    ಸುಂದರವಾಗಿ ಚಿತ್ರಿಸುತ್ತಿದ್ದ ರಂಗೋಲಿಯಿಂದ ಆಕಷಿ೯ತರಾಗಿ ಅವಳಾರು ಅಂತ ತಿಳಿದಾಗ ಚಂಪಕಾ ಎಂಬ ಸುಂದರ ತರುಣಿ ಅಂತ ಗೊತ್ತಾದ ನಂತರ ಅವಳಲ್ಲಿ ಅನುರಕ್ತನಾದ ರಾಜ ವೆಂಕಟಪ್ಪ ನಾಯಕ ಚOಪಕಳನ್ನ ಶಾಸ್ತ್ರ ಬದ್ದವಾಗಿಯೆ ಮದುವೆ ಆಗಿ ಆನಂದಪುರದ ಕೋಟೆಯಲ್ಲಿನ ಅರಮನೆಯಲ್ಲಿ ಇಡುತ್ತಾರೆ, ಆದರೆ ಕೆಳದಿ ಇತಿಹಾಸದಲ್ಲಿ ಕೆಳ ಜಾತಿ ಎಂಬ ಕಾರಣದಿಂದ ಚಂಪಕಾಳ ಇತಿಹಾಸ ತಿರುಚಲಾಗಿದೆ.
     ಚಂಪಕ ಪ್ರಜೆಗಳು ತಪ್ಪು ಬಾವಿಸಿ ಆರೋಪ ಮಾಡಿದ್ದರಿಂದ ಜೀವ ತ್ಯಾಗ ಮಾಡಿದ್ದು ರಾಜ ವೆಂಕಟಪ್ಪ ನಾಯಕರಿಗೆ ಅಸಾಧ್ಯ ವೇದನೆ ಆಗುತ್ತೆ ಚಂಪಕಾಳ ನೆನಪು ಶಾಶ್ವತವಾಗಿ ಉಳಿಯಬೇಕೆ೦ದು ಸ್ಮರಣೆಗಾಗಿ ಸುಂದರವಾದ ಕೊಳ ಕಲ್ಲಿನಲ್ಲಿ ಕಟ್ಟಿಸುತ್ತಾರೆ, ಕೊಳದ ಮದ್ಯದಲ್ಲಿ ಈಶ್ವರ ದೇವಸ್ಥಾನ, ಅಲ್ಲಿಗೆ ಹೋಗಲು ಕಲ್ಲಿನ ಸಣ್ಣ ಸೇತುವೆ, ಕೊಳದ ಸುತ್ತು ಕಲ್ಲಿನ ಸೋಪಾನ, ಚಂಪಕಾಳ ಸಮಾದಿ ಎದುರು ಶಿಲೆ ಕಲ್ಲಿನ ಸುಂದರವಾದ ಆನೆಯ ಶಿಲ್ಪಗಳು ಇದೆ.
      1972ರಲ್ಲಿ ಇಲ್ಲಿ ದೇವರ ಕಣ್ಣು ಸಿನಿಮಾದ ಪ್ರಸಿದ್ಧವಾದ ಹಾಡಾದ " ಓ ಇನಿಯಾ ನೀ ಎಲ್ಲಿರುವೆ ನಿನಗಾಗಿ ನಾ ಕಾದಿರುವೆ" ಎಂಬ ಹಾಡಿನ ಚಿತ್ರಿಕರಣವನ್ನ ಖ್ಯಾತ ನಿದೇ೯ಶಕ ವೈ.ಆರ್.ಸ್ವಾಮಿ ಮಾಡಿದ್ದಾರೆ.
      ಪ್ರಾಚ್ಯ ವಸ್ತು ಸಂಶೋದನ ಇಲಾಖೆಯ ನಿಲ೯ಕ್ಷದಿಂದ ,ಸ್ಥಳೀಯರ ಅನಾದರದಿಂದ ಮತ್ತು ಪ್ರಕೃತಿ ವಿಕೋಪಗಳಿಂದ ಈ ಸು೦ದರ ಪ್ರವಾಸಿ ತಾಣ ದಿನೇ ದಿನೇ ಶಿಥಿಲವಾಗುತ್ತಿದೆ, ಮಾಹಿತಿ ಕೊರತೆ ಮತ್ತು ಸರಿಯಾದ ಪ್ರಚಾರವಿಲ್ಲದೆ ಈ ಸ್ಥಳ ಒಂದು ರೀತಿ ಅಪರಿಚಿತ ಮತ್ತು ನಿಗೂಡವಾಗಿದೆ.
     ಚಂಪಕಳ ಬಗ್ಗೆ ಆ ಸಂದಭ೯ದಲ್ಲಿ ಕೆಳದಿ ಅರಸರ ರಾಜಧಾನಿ ಇಕ್ಕೆರಿಗೆ ಬೇಟಿ ನೀಡುವ ಇಟಲಿಯ ಇತಿಹಾಸಕಾರ ಡಲ್ಲಾ ವಲ್ಲೆ ತಮ್ಮ ದಾಖಲೆಯಲ್ಲಿ ದಾಖಲಿಸಿದ್ದಾರೆ. ಆನಂದಪುರದ ಸುತ್ತಮುತ್ತಾ 50 ವಷ೯ದ ಹಿಂದಿನ ತನಕ ಲಾವಣಿಗಳಲ್ಲಿ ಚಂಪಕಾಳ ಸೌಂದಯ೯, ಆಕಷ೯ಕ ರಂಗೋಲಿ ಮತ್ತು ರಾಜ ವೆಂಕಟಪ ನಾಯಕರ ವಿವಾಹ, ಪ್ರೇಮ ದುರಂತದ ಬಗ್ಗೆ ವಿವರಗಳ ರಾಗವಾದ ಧ್ವನಿ ಇತ್ತು.
       ಈ ಬಗ್ಗೆ ನಾನು ಒಂದು ಕಾದಂಬರಿ ಬರೆದಿದ್ದೇನೆ ಸದ್ಯದಲ್ಲೆ ಬಿಡುಗಡೆ ಇದೆ ಅದರಲ್ಲಿ ಕೆಳದಿ ರಾಣಿ ಚಂಪಕಾಳ ಬಗ್ಗೆ ಹೆಚ್ಚಿನ ವಿವರ ಇದೆ, ರಾಜವೆಂಕಟಪ್ಪ ನಾಯಕರು ಮತ್ತು ರಾಣಿ ಚೆಂಪಕಾಳ ಈ ಪ್ರೇಮ ಕಥೆ ಕೆಳದಿ ಅರಸರ ಬಗ್ಗೆ ಬೆಳಕು ಚೆಲ್ಲುವ ಒಂದು ಕಾದಂಬರಿ ಆಗಲಿದೆ ಅಂತ ಹಸ್ತಪ್ರತಿ ಓದಿದ ಅನುಭವಿಗಳು ಹೇಳಿದ್ದಾರೆ, ಕಥೆ ಓದೋರಿಗೆ ಆಸಕ್ತಿ ಬರಲಿ ಅಂತ ಅನೇಕ ಇತರ ಅವಶ್ಯ ಐತಿಹಾಸಿಕ ವಿಷಯ ಸೇರಿಸಿ ಪಿಕ್ಷನ್ ಬರೆದಿದ್ದೇನೆ.
       ಆನಂದಪುರದ ಚಂಪಕಸರಸು ಜನ ಮನದಲ್ಲಿ ಉಳಿಯಲಿ ಅನ್ನೋದು ನನ್ನ ಆಸೆ ಹಾಗಾಗಿ ನಮ್ಮ ರೆಸ್ಟೋರೆಂಟ್ಗೆ "ಚಂಪಕಾ ಪ್ಯಾರಾ ಡೈಸ್ " ಅಂತ ಹೆಸರು ಇಟ್ಟಿದ್ದೇನೆ.

  ಇವತ್ತು ರಾಜ್ಯದ ಜಲ ವಿಜ್ಞಾನಿ ಸಿರಸಿಯ ಶಿವಾನಂದ ಕಳವೆಯವರು ಪತ್ರಕತ೯ರಾದ ನೀಚಡಿ ವಸಂತ್ ಚಂಪಕ ಸರಸುಗೆ ಬೇಟಿ ನೀಡಿದ್ದು ಸಂತೋಷದ ಸುದ್ದಿ (17- ಆಗಸ್ಟ- 20l 8)

Comments

  1. Thank you for naming a Champaka Paradise and this was the important information regarding this place. When i was in High school life, we visiting to that Place on holiday. We were swimming in that pool and riding the elephants statue in front of that. The temple is so beautiful and even to swim.
    I request the government to renew that temple and Kalyani for visiting more and more people. And i finally very thankful to Arun prasad to collect so many information on this particular place.

    ReplyDelete

Post a Comment

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ