ಶಿವಮೊಗ್ಗ ಭದ್ರಾವತಿ ಜಂಟಿ ನಗರ ಕಾಪೊ೯ರೇಶನ್ ನ ಮೊದಲ ಮೇಯರ್ ಮಲ್ಲಿಕಾಜು೯ನರಾವರನ್ನ ಜನ ಮರೆತಿದ್ದಾರೆ.ಬಂಗಾರಪ್ಪರ ನೀಲಿ ಕಣ್ಣಿನ ಹುಡುಗ, ಕರಾಟೆ ಬ್ಲಾಕ್ ಬೆಲ್ಟ ಪ್ರವೀಣ, ವಿದ್ಯಾಥಿ೯ ಮುಖಂಡ, ಶಿವಮೊಗ್ಗ ಯುವ ಕಾ೦ಗ್ರೇಸ್ ಅಧ್ಯಕ್ಷರಾಗಿದ್ದ ಇವರನ್ನ ಶಿವಮೊಗ್ಗ ಲೋಕಸಭೆಗೆ ಬಂಗಾರಪ್ಪನವರು ಟಿಕೇಟ್ ಕೊಟ್ಟಿದ್ದರೆ ಇವತ್ತು ಮಲ್ಲಿಕಾಜು೯ನರ ಭವಿಷ್ಯವೇ ಬೇರೆ ಇತ್ತು, ಕೊನೆ ಕ್ಷಣದಲ್ಲಿ ಆಗ ಮುಖ್ಯ ಮಂತ್ರಿ ಆಗಿದ್ದ ಬಂಗಾರಪ್ಪ ತಮ್ಮ ಷಡಕ್ಕ ಕೆ.ಜಿ.ಶಿವಪ್ಪನವರಿಗೆ ಅವಕಾಶ ಕೊಟ್ಟರು ಆಗ ಬಿಜೆಪಿಯಿಂದ ಯಡೂರಪ್ಪ ಸೋತರು.
ಮಲ್ಲಿಕಾಜು೯ನರಾವ್ ತಂದೆ ಶಿವಮೊಗ್ಗದ ಮುನಸಿಪಾಲಿಟಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿದ್ದರು, ಶಿವಮೊಗ್ಗದ ಹೊಸ ಮನೆ ಬಡಾವಣೆಯಲ್ಲಿ ಸಣ್ಣ ಮನೆ ಇತ್ತು.
ಅತ್ಯುತ್ತಮ ವಾಗ್ಮಿ ಸಂಘಟಕರಾಗಿದ್ದ ಮಲ್ಲಿಕಾಜು೯ನರಾವ್ ಅಕಾಲಿಕವಾಗಿ ಆಗಲಿದರು, ಅವರ ಸಹೋದರ ಆತ್ಮಹತ್ಯಮಾಡಿ ಕೊಂಡರು, ತಾಯಿ ವೃದ್ದಾಪ್ಯದಲ್ಲಿ ಮಕ್ಕಳ ಕಳೆದುಕೊಂಡು ನೊಂದು ಅಗಲಿದರು.
ಒಂದು ರೀತಿಯಲ್ಲಿ ಮಲ್ಲಿಕಾಜು೯ನ ರಾವ್ ಜೀವನ ದುರಂತವಾಯಿತು.
ಇವತ್ತು ಶಿವಮೊಗ್ಗದಲ್ಲಿನ ರಾಜಕಾರಣದಲ್ಲಿರುವ ಅನೇಕ ನಾಯಕರು ಇವರ ಗರಡಿಯಲ್ಲಿಯೇ ಬೆಳೆದವರು.
ಇವತ್ತಿನ ವರಗೆ ಇವರನ್ನ ಎಲ್ಲರೂ ಮರೆತಿದ್ದರೂ ಒಬ್ಬ ರೋಜ ಷಣ್ಣಮುಗಂ ಮಲ್ಲಿಕಾಜು೯ನರಾವ್ ರನ್ನ ನೆನಪಿಸಿದ್ದಾರೆ,
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment