1970 ರಲ್ಲಿ ಅವರಿಗೆ 50 ವಷ೯ ಇರಬಹುದು ನಮಗೆಲ್ಲ 5 ವಷ೯ ಅವರ ದಿನಸಿ ಅಂಗಡಿ ಇಡೀ ಊರಿಗೆ ದೊಡ್ಡದು, ಆ ಕಾಲದಲ್ಲಿ ಹುಬ್ಬಳ್ಳಿಯಿಂದ ಲಾರಿಗಳಲ್ಲಿ ದಿನಸಿ ತರಿಸುತ್ತಿದ್ದರು, ಪೊಟ್ಟಣ ಕಟ್ಟಲು ಹತ್ತಾರು ಸಹಾಯಕರು. ದಿನಸಿ ಪಟ್ಟಿ ಬರೆಯಲು ನಾ ಕಾರು ರೈಟರು, ಹಣ ಪಡೆಯಲು ಮತ್ತಿಬ್ಬರು ಹೀಗೆ ದೊಡ್ಡ ಪ್ರಮಾಣದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಮಾಲಿಕರು ಮಿರ, ಮಿರ ಮಿಂಚುವ ಜೀಪಿನಲ್ಲಿ ಬರುತ್ತಿದ್ದರು, ನೈಲಾನ್ ಬಟ್ಟಿಯ ಬಣ್ಣದ ಶಟ್೯ ಆ ಕಾಲದ ರಾಜೇಶ್ ಖನ್ನರ ಸ್ಟೇಲ್ ನ ಟೈಟ್ ಪ್ಯಾಂಟ್, ಚೂಪು ಬೂಟು, ಸೊ೦ಟದಲ್ಲಿ ರಿವಾಲಾವರ್ ಗಮ ಗಮ ಎನ್ನಿಸುವ ಪರಿಮಳ ಸಿಂಪಡಿಸಿಕೊಂಡು ಟಕ್ ಟಕ್ ಎನ್ನುವ ಭೂಟಿನ ಸದ್ದಿನೊಂದಿಗೆ ಬಂದು ತಿರುಗುವ ಕುಚಿ೯ಯಲ್ಲಿ ಕುಳಿತು ಪಕ್ಕದಲ್ಲಿನ ದೊಡ್ಡ ಟ್ರಿಜರಿಯ ಬಾಗಿಲು ತೆಗೆದರೆ ಅದರಲ್ಲಿ ಕಂತೆ ಕಂತೆ ನೋಟು.
ಅವರಿಗೆ ಉದನೂರು ಎಂಬಲ್ಲಿ 100 ಎಕರೆ ಜಮೀನು, ಅಲ್ಲಿ ಕಾಡು ಪ್ರಾಣಿ ಶಿಕಾರಿ ಮಾಡುತ್ತಾರೆ ಅದಕ್ಕೆ ಡಬಲ್ ಬ್ಯಾರೆಲ್ ತೋಟ ಬಂದೂಕು, ತಿರುಗಾಡಲು ಜಾತಿಯ ಕುದುರೆ ಹೀಗೆ ಯಾಹ್ಯಾ ಸಾಹೇಬರದ್ದು ರಾಜಾ ಠೀವಿ.
ಇವತ್ತು 95ನೆ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು, ಯಾರಿಗೂ ತೊಂದರೆ ಕೊಡದ ಊರ ಉಪಕಾರಿ ಸಾಹುಕಾರರಿವರು, ಇವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಹಾರೈಸುತ್ತೇನೆ.
ಇವರ ಅಂಗಡಿಯಲ್ಲಿ ನೀಲಿ ಬಣ್ಣದ ಸಾಲದ ಪುಸ್ತಕ ಸಿಕ್ಕಿದವರ ಮನೆಯಲ್ಲಿ ಆ ಕಾಲದಲ್ಲಿ ಹಸಿವು ಇರುತ್ತಿರಲಿಲ್ಲ, ಆದರೆ ಅದು ಸುಲಭವಾಗಿ ಸಿಗುವುದಲ್ಲ ಈಗೆಲ್ಲ ಬ್ಯಾಂಕಿನಲ್ಲಿ OD ಸಿಕ್ಕ೦ತೆ, ಆಗ ಬಡತನ ಹೆಚ್ಚು ಒಂದು ಹೊತ್ತು ಇದ್ದರೆ ಇನ್ನೊಂದು ಹೊತ್ತು ಇಲ್ಲ. ನಮ್ಮ ತಂದೆ ಇವರ ಅಂಗಡೀಯಲ್ಲಿ ಸಾಲದ ಖಾತೆ ಹೊಂದಿದ್ದರು ಹಾಗಾಗಿ ನಮ್ಮ ಮನೇಲೂ ಒಂದು ನೀಲಿ ಬಣ್ಣದ ಸಾಲದ ಪುಸ್ತಕ ಇತ್ತು ಅದನ್ನ ತೆಗೆದುಕೊಂಡು ದಿನಸಿ ತರಲು ನಮ್ಮ ಅಣ್ಣನೊಂದಿಗೆ ಇವರ ಅಂಗಡಿಗೆ ಹೋಗುತ್ತಿದ್ದೆ ಆಗೆಲ್ಲ ಯಹಾಯ ಸಾಹೇಬರನ್ನೆ ಅಚ್ಚರಿಯಿ೦ದ ನೋಡುವುದೆ ನಮಗೆಲ್ಲ ಸಂಭ್ರಮ ಆಗಿತ್ತು.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
May almighty give best place in heaven....
ReplyDeleteMay almighty give best place in heaven....
ReplyDelete