ಒಬ್ಬOಟಿಯಾಗಿ ಆ.ನ.ವಿಜೇ೦ದ್ರರಿಂದ ಪ್ರಾರಂಭವಾದ ತು೦ಬಿದ ತು೦ಗೆಯಲ್ಲಿನ ದೊಣಿ ವಿಹಾರ ಈಗ ಅಪಾರ ಯುವ ದಂಡಿನೊಂದಿಗೆ ತು೦ಬಿ ತುಳುಕಿದೆ, ಸಕಾ೯ರ ಮತ್ತು ಸಾವ್೯ ಜನಿಕರ ಗಮನ ಸೆಳೆದಿದೆ, ತು೦ಗಾ ನದಿ ದಂಡೆ ಕಾಮಗಾರಿ ಮತ್ತು ಸ್ವಚ್ಚ ತುಂಗಾ ಅಭಿಯಾನಕ್ಕೆ ಬಲಬoದಿದೆ.
ಭಾಗವಹಿಸಿರುವ ಎಲ್ಲರಿಗೂ ಜಿಲ್ಲೆಯ ಜನರ ಪರವಾಗಿ ಅಭಿನಂದನೆ.
2000 ನೆ ಇಸವಿಯಲ್ಲಿ ಒಂದು ದಿನ ವಿಜೇ೦ದ್ರರಿಂದ ದೂರವಾಣಿ ಕರೆ ಬ೦ದಿತ್ತು ಏನೆಂದರೆ ಅವರು ಮೊದಲ ಬಾರಿಗೆ ಏಕಾ೦ಗಿಯಾಗಿ ತುಂಗೆ ದಾಟಿದ್ದಕ್ಕಾಗಿ ಅಭಿನoದಿಸಿದವರ ಪತ್ರಗಳ ಪೈಲುಗಳನ್ನ ನೋಡುತ್ತಿರುವಾಗ ನಾನು ಬರೆದ ಅಬಿನಂದನೆಯ ಪೋಸ್ಟ್ ಕಾಡ್೯ ಸಿಕ್ಕಿತ್ತು ಅದಕ್ಕೆ ನೆನಪಾದಿರಿ ಅಂದರು, ವಿಶೇಷವಾದ ಕೆಲಸ ಮಾಡಿದವರನ್ನ ಅಭಿನಂದಿಸೊದು ನನ್ನ ಹವ್ಯಾಸ ಅದರಲ್ಲೇನು ಅಂತ ವಿಶೇಷ ಇಲ್ಲ ಅಂದೆ ಅದಕ್ಕೆ ಅವರೆoದರು ಖಂಡಿತಾ ವಿಶೇಷ ಇದೆ ಅಂದರು.
ಅ೦ತಹ ದೇನು ವಿಜೇಂದ್ರರೆ ಅಂದೆ ಅದಕ್ಕೆ ಅವರು ಹೇಳಿದ್ದು "ನೀವೇ ಒಬ್ಬರೇ ನನಗೆ ಈ ರೀತಿ ಪತ್ರ ಬರೆದು ಅಭಿನಂದಿಸಿದ್ದು ಹಾಗಾಗಿ ನಿಮ್ಮ ಏಕೈಕ ಅಭಿನಂದನೆಯ ಪತ್ರ ಜೋಪಾನವಾಗಿ ಇಟ್ಟುಕೊಂಡಿದ್ದೇನೆ",,,,? !
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment