Skip to main content

BHARAPANTH,JUNDI YATRA OF NATHA PANTH.ಬಾರಾ ಪಂಥ್, ಜೋOಡಿ ಹೀಗೆ ಕರೆಯುವ 12 ವಷ೯ಕೊಮ್ಮೆ ನಾಸಿಕ್ ನಿಂದ ಮಂಗಳೂರಿಗೆ ಬರುವ ನಾಥಪಂಥದ ಪಾದಯಾತ್ರೆ.

ನಾವೆಲ್ಲ ಆನಂದಪುರಂನಿಂದ ಪ್ರತಿದಿನ ರೈಲಿನಲ್ಲಿ ಪ್ರೌಡ ಶಿಕ್ಷಣಕ್ಕೆ ಸಾಗರಕ್ಕೆ ಹೋಗುತ್ತಿದ್ದೆವು, 1980ನೇ ಇಸವಿ ಇರಬೇಕು ಆ ದಿನ ಸಾಗರಕ್ಕೆ ಬೃಹತ್ ಖಾವಿದಾರಿಗಳ ಮೆರವಣಿಗೆ ಬಂತು, ಅದರಲ್ಲಿ ಗಡ್ಡದಾರಿಗಳು, ಬೆತ್ತಲೆ, ಅರೆಬೆತ್ತಲೆಯವರು ಇದ್ದರು.
     ಅವರಾರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಂದ ಬಂದರು ಅಂತ ಯಾರಿಗೆ ಕೇಳಿದರೂ ಉತ್ತರ ಸಿಗಲಿಲ್ಲ, ವಿದ್ಯಾಥಿ೯ಗಳಾದ ನಮಗೆ ಕುತೂಹಲ ಮತ್ತು ನಾವು ಊರಿಗೆ ಹಿಂದಿರಿಗಿ ಹೋಗುವ ರೈಲು ಬರಲು ಸಾಕಷ್ಟು ವೇಳೆ ಇದ್ದಿದ್ದರಿಂದ ಆ ಮೆರವಣಿಗೆ ಹಿಂದೆಯೇ ನಾವೆಲ್ಲ ಹೋದವು, ಕೆಲವರು "ಓಹೋ ಇವೆರೆಲ್ಲ ಅಗೋರಿಗಳು, ನರಮಾಂಸ ಭಕ್ಷಕರು "ಅಂದಾಗ ಭಯಪಟ್ಟೆವಾದರೂ ನೋಡೇ ಬಿಡೋಣ ಎಲ್ಲಿ ತನಕ ಹೋಗುತ್ತಾರೆ ಅಂತ ನಮ್ಮ ನಡಿಗೆ ಮುಂದುವರಿಸಿದೆವು, ಅಂತಿಮವಾಗಿ ಸಾಗರದ ಗಣಪತಿ ದೇವಸ್ಥಾನ ತಲುಪಿತು.
    ದೇವಸ್ಥಾನದ ಹೊರಭಾಗದ ದೊಡ್ಡ ಪೀಠದಲ್ಲಿ ಈ ಯಾತ್ರೆಯ ಮುಖ್ಯಸ್ಥರು ಕುಳಿತರು ಅಷ್ಟರಲ್ಲಿ ಅಲ್ಲಲ್ಲಿ ವಿಶ್ರಮಿಸಿದ ಅವರ ಸಂಗಾತಿಗಳೆಲ್ಲ ಗಾಂಜಾ ಸೇವನೆಯಲ್ಲಿ ತೊಡಗಿದಾಗ ಅಲ್ಲಿನ ವಾತಾವರಣ ಭಯದ ಆಲಯವಾಯಿತು, ಇವರನ್ನ ನೋಡಲು ಸೇರಿದ ಜನಸ೦ದಣಿ ಅವರವರ ಮಕ್ಕಳನ್ನ "ಸಾಕು ಮನೆಗೆ ಹೊರಡಿ ಅವರೆಲ್ಲ ಮೋಡಿ ಮಾಡಿ ಮಕ್ಕಳನ್ನ ಒಯತಾರೆ " ಅಂತ ಹೆದರಿಸಿ ಕರೆದೊಯ್ಯಲು ಶುರು ಮಾಡಿದಾಗ ನಾವು ಹೆದರಿಕೆ ಮತ್ತು ನಮ್ಮ ರೈಲಿನ ಸಮಯ ಆಗಿದ್ದರಿಂದ ಅಲ್ಲಿಂದ ಕಾಲು ಕಿತ್ತೆವು.
       ಮರುದಿನ ಮತ್ತೆ ಅಲ್ಲಿಗೆ ಹೋದೆವು, ಶಾಲೆಗೆ ಚಕ್ಕರ್ ಹೊಡೆದು ಅವರನ್ನ ಸಂಜೆ ತನಕ ನೋಡುತ್ತಾ ಕಾಲ ಕಳೆದವು.
       ಕುಣುಬಿ ಎಂಬ ಅರಣ್ಯವಾಸಿಗಳ ಸಂಘಟನೆ ಸಂದಭ೯ದಲ್ಲಿ ಕುಂದಾಪುರ ಸಮೀಪದ ಕಮಲಶಿಲೆ ಹತ್ತಿರದ ಹಲವಾರಿ ಎಂಬ ಮಠ ಈ ಕುಣುಬಿ, ಜೋಗಿ, ಬಳೆಗಾರ ಮತ್ತು ಇತರ ಸಮಾನ ಪಶ್ಚಿಮ ಘಟ್ಟದ ಸಣ್ಣ ಸಣ್ಣ ಗುಡ್ಡಗಾಡು ಪಂಗಡಗಳ ಆರಾಧ್ಯ ಸ್ಥಳ ಆಂತ ಗೊತ್ತಾಯಿತು, ಅಲ್ಲಿನ ಸ್ವಾಮಿಗಳಾದ ಪೀರ್ ಸೋಮನಾಥಜೀ ಪರಿಚಯ, ಒಡನಾಟ ಗಾಡವಾಗಿ ಆಯಿತು.
      ನಮ್ಮಲ್ಲಿ ಅವರು ಎರಡು ಬಾರಿ ಬಂದರು, ಒಮ್ಮೆ ಉಳಿದರು. ನಾನು ಅನೇಕ ಬಾರಿ ಅವರನ್ನ ಬೇಟಿ ಮಾಡಿದೆ, ಒಮ್ಮೆ ಈ ಬಾಗಕ್ಕೆ ಬಂದ ಅವರನ್ನ ಅವರ ಮಠಕ್ಕೆ ಬಿಟ್ಟು ಬರುವ ಅವಕಾಶ ನನ್ನ ದಾಯಿತು ಹಾಗಾಗಿಯೆ ಗೊತ್ತಾಗಿದ್ದು ನಾಥಪಂಥದ ವಿವರ.
      ನಾನು ಬಾಲ್ಯದಲ್ಲಿ ನೋಡಿದ ಸಾಗರದಲ್ಲಿ ನ ಯಾತ್ರೆಯಲ್ಲಿಯೇ ಬಾಬಾ ಸೋಮನಾಥ ಜಿ ಬಂದದ್ದು, ಅವರ ಊರು ಗವಾಲಿಯರ್.ಸನ್ಯಾಸಿ ಆಗಿ 83 ಜನುಮ ಪಡೆದವರಿಗೆ ಮಾತ್ರ ಈ ಜೋOಡಿ ಯಾತ್ರೆ ಅವಕಾಶ ಸಿಗುತ್ತದೆ ಎಂಬ ನಂಬಿಕೆ, 12 ವಷ೯ ಕ್ಕೆ ಒಮ್ಮೆ ನಾಸಿಕದಲ್ಲಿ ನಡೆಯುವ ಕುಂಬಮೇಳದ ನಂತರ ಈ ಯಾತ್ರೆ ಪ್ರಾರಂಭವಾಗಿ ಪಶ್ಚಿಮ ಘಟ್ಟದ ದುಗ೯ಮ ಮಾಗ೯ದಲ್ಲಿ ನೂರಾರು ನಾಥಪಂತದ ಸನ್ಯಾಸಿಗಳು ಪಾದಯಾತ್ರೆಯಲ್ಲಿ ಸಾಗಿ ಅಂತಿಮವಾಗಿ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಗುತ್ತೆ.
    ಮಾಗ೯ ಮಧ್ಯೆದಲ್ಲಿ ಅವರಿಗೆ ಸಂಬಂದಪಟ್ಟ ಮಠಗಳ ಸ್ವಾಮಿಗಳನ್ನ ನೇಮಿಸುವ ಅಥವ ಹಳಬರನ್ನೇ ಮುಂದುವರಿಸುವ ತೀಮಾ೯ನ ಮಾಡುತ್ತಾ ಸಾಗುತ್ತಾರೆ ಅಂತಹ ಸಂದಭ೯ದಲ್ಲೇ ಹಲವಾರಿ ಮಠಕ್ಕೆ ಸೋಮನಾಥಜೀ ಆಯ್ಕೆ ಆಗುತ್ತಾರೆ ಮುಂದಿನ ಎರಡು ಬಾರಾ ಪ೦ಥ ಯಾತ್ರೆ ಬಂದಾಗಲು ಅವರನ್ನೆ ಮುಂದುವರಿಸುತ್ತಾರೆ.
      ಈ ಬಾರಿಯ ಬಾರಾ ಪಂಥ 2015 ರಲ್ಲಿ ನಾಸಿಕ ನಿಂದ ಹೊರಡುತ್ತೆ, 2016ರಲ್ಲಿ ಬರುತ್ತೆ ಅಂತ ಸೋಮನಾಥಜಿ ಹೇಳಿದ್ದರು, ಆಗ ನಾನು 1980ರ ಯಾತ್ರೆ ನೋಡಿದ್ದಾಗಿ ಹೇಳಿದಾಗ ಅವರು ಸಂತೋಷ ಪಟ್ಟಿದ್ದರು, ಜನರಿಗೆ ಈ ಬಗ್ಗೆ ಸರಿಯಾದ ಅರಿವಿಲ್ಲ, ಈ ಸಾರಿ ನೀವು ಒಳ್ಳೆಯ ತಿಳುವಳಿಕೆ ಬರುವಂತ ಪತ್ರಿಕಾ ಪ್ರಚಾರ ಮಾಡಿ ಅಂದಿದ್ದರು, ಖಂಡಿತಾ ಮಾಡುವುದಾಗಿ ಅಶ್ವಾಸನೆ ನೀಡಿದ್ದೆ.
    ಬಾರಾ ಪ೦ಥ ಯಾತ್ರೆ ನಾಸಿಕ ನಿಂದ ಪ್ರಾರಂಭವಾಗುವ ಮೊದಲೆ ಸೋಮನಾಥಜಿ ಇಹ ಲೋಕ ತ್ಯಜಿಸಿದರು ಆದರೆ ಈ ಬಾರಿಯ ಬಾರಾ ಪಂಥ ಯಾತ್ರೆಯಲ್ಲಿ ಪಾಲುಗೋಳ್ಳುವ ಅವಕಾಶವಾಯಿತು ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿಸುವ ನನ್ನ ಮಾತು ಈಡೇರಿತು.

     ಗೋರಕ್ನಾಥರ ನಾಥಪಂತದ ಗೋರಕ್ಪುರದ ಸಂತ ಯೋಗಿ ಆದಿತ್ಯನಾಥರ ಸ್ಥಾನ ದೊಡ್ಡದು ಜಾತ್ಯತೀತ ಪರಂಪರೆಯ ಈ ಪಂಥ 5000 ವಷ೯ಕ್ಕೂ ಹಿಂದಿನ ಪರಂಪರೆ ಎಂಬ ನಂಬುಗೆ ಇದೆ, ಮನುವಾದ ಇಲ್ಲಿ ಆಚರಣೆ ಇಲ್ಲ, ಮಾಂಸಹಾರ, ಮಧ್ಯಪಾನ ಮತ್ತು ದೂಮಪಾನ ಇವರಿಗೆ ವಜ೯ ಇಲ್ಲ.

   ಕನಾ೯ಟಕದಲ್ಲಿನ ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ಕುಂದಾಪುರ ಸಮೀಪದ ಹಲವಾರಿ ಮಠ ಮತ್ತು ಮಂಗಳೂರಿನ ಕದ್ರಿ ಮಠಗಳು ಇವರ ಅಧೀನವಾದದ್ದು.

  ಪ್ರತಿ 12 ವಷ೯ಕೊಮ್ಮೆ ನಾಸಿಕ ಕುಂಭಮೇಳದಿಂದ ಪ್ರಾರ೦ಭವಾಗಿ ಮಂಗಳೂರಿನ ಕದ್ರಿವರೆಗೆ ಪಶ್ಚಿಮ ಘಟ್ಟದ ಅರಣ್ಯದಲ್ಲಿ 6 ತಿಂಗಳು ಪಾದಯಾತ್ರೆಯಲ್ಲಿ ಬರುವ ಬಾರಾ ಪಂಥ ಜೋಂಡಿ ಯಾತ್ರೆಗೆ ಈ ಸಂತರೇ ಅಧಿಪತಿಗಳು.

   ನಾಥಪಂಥದಲ್ಲಿ ಯೋಗಿ ಆಗಿ 86 ಜನ್ಮ ಎತ್ತಿದರೆ ಮಾತ್ರ ಒಂದು ಸಾರಿ ಈ ಬಾರ ಪಂಥ ಜೋOಡಿಯಲ್ಲಿ ಅವಕಾಶ ಸಿಗುತ್ತೆ ಎನ್ನುವ ನಂಬಿಕೆ ಇವರಲ್ಲಿದೆ.

  ಯೋಗಿ ಆದಿತ್ಯ ನಾಥರು ಸಂತರಾಗುವ ಮೊದಲು ಈ ಯಾತ್ರೆಯಲ್ಲಿ ಭಾಗವಹಿಸಿದ್ದರೆಂದು ಹೇಳುತ್ತಾರೆ ಅದನ್ನ ಅವರೇ ದೃಡ ಪಡಿಸಬೇಕಷ್ಟೆ.

    ಇವರ ಹಿನ್ನೆಲೆ ನೋಡದೆ ವಿರೋದಿಸುವುದು ಸರಿಯಲ್ಲ.


NATHA PANTH BELONG TO GORAKHNATH GORAKPUR SECT,NONVEG, LIQUOR AND SMOKIN IS NO BAR TO THIS SECT.

YOGI ADITY NATH IS HEAD OF THIS SECT, EVERY 12YEAR ONCE GROUP OF YOGIS STARTING YATRA FROM NASIK.

    LAST DAY OF KUMBA MELA THIS BARAPANTH JUNDI STARTS TO KADRI OF MANGALORE ( KARNATAKA )BY WALKING.

    LAST YEAR 2016 MORE THAN 550 YOGIS IN THIS BARAPANTH JONDI YATRA, THIS YATRA SUPERVISION BELONG TO GORAKPUR MAHANTHA YOGI ADITYANATH.

  ONE MYTH IS WHO COMPLETED 86 LIFE OF YOGI ONLY GET APPORTUNITY OF ONE BARAPANTH JONDI YATRA.

  ONE RUMOUR IS YOGI ADITYANATH COMPLETED THIS YATRA.

   THIS SECT RESPECT ALL RELIGIONS, MADYAPRADES THIS SECT TEMPLE AND MASQUE IN SAME PLACE.

    NOW HE BECAME CHIEF MINISTER OF UP BUT HIS POSITION AS MAHANTHA TO GORAKPUR IS NOT SMALL AND NEGLECTABLE.

     

UP’s new Chief Minister’s connection with Mangalore’s Kadri Math..

The media is rife with discussion on the new UP CM. It is just too early and we need to wait to see what happens there.

Keeping politics aside, one came across this article in today’s ToI which is really interesting. It says how the new CM is a key player in appointing head of Kadri Math in Mangalore

I was once told how Pashupathinath temple in Nepal is managed by Brahmins from South India. I checked and was amazed. It is really fascinating how temples are governed not just in India but outside too.


Back to Mangalore:

Yogi Adityanath’s appointment as chief minister of Uttar Pradesh has put the Kadali Sri Yogeshwar (Jogi) Math here in a celebratory mood. For, he’s central to the affairs of this math which is about 2,000km from Gorakhpur, Uttar Pradesh.

Yogi Adityanath is the Mahant of the Akhil Bharath Varshiya Awaduth Yogi Maha Sabha Bhek Bharaha Panth, which elects the head of the Mangaluru Jogi Math once in 12 years. The seers of 12 sects elect the Mangaluru Math ‘Raja’ in Triambakeshwar (near Nashik) during the kumbh mela in the presence of Bharaha Panth’s office-bearers.

Last year, the Panth elected Sri Yogi Nirmalnath, of the Bairag sect, as the new ‘raja’ or matadhipati, to succeed Sri Sandhyanathji. The Kadali Math has a history spanning over 1,000 years. Only seers from the Bairag, Kaplani, Nateshwari and Ganganath sects are eligible to become the matadhipati. Each sect gets its turn after 48 years.

Natha Pantha Karnataka secretary P Keshavanath said: “It’s a matter of pride and joy that a person from the Natha Pantha is heading the largest state of the country. We’ll draw up plans to celebrate his elevation as CM when the Pantha committee members meet on March 26.”

Keshavanath said: “He is central to this math’s affairs since the panth headed by him elects the next Raja of the Kadali Math here. He has a say in the running of all the Maths. Whoever gets the maximum number of approvals is chosen to head a particular math.”

There is more here.

There is mo much similarity when we think about representing regional affairs in regulation and governance (like Federal Eeserve). We appoint members based on rotation just like it has been happening in religious bodies for so many years.

We are just so clueless about all such temple matters.  How are India’s many temples run? What are the migration linkages as seen in Pashupatinath temple?

Temples have been central to economics historically. They were the first such economic (and political) institutions if one may call them. Their governance matters will be really interesting to figure..

 https://youtu.be/E5ZsB66V2os




Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ