ನನಗೆ ಇವತ್ತು ನಿನಾಸಂ ಕೆ.ವಿ.ಸುಬ್ಬಣ್ಣ ನೆನಪಿಗೆ ಬರುತ್ತಾರೆ.1998ರಲ್ಲಿ ವೀರಪ್ಪ ಮೊಯಿಲಿಯವರ ದೇವಾಡಿಗ ಜಾತಿಯ ಸಾಗರ ತಾಲ್ಲೂಕ್ ಸಮಾವೇಶ ಹೆಗೋಡಿನ ನಿನಾಸಂ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಬ್ಬಣ್ಣರ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವ ಸಂದಭ೯ ನನಗೆ ಸಿಕ್ಕಿತ್ತು, ಅವತ್ತು ಸುಬ್ಬಣ್ಣ ತಮ್ಮ ಬಾಷಣದಲ್ಲಿ ಹಿಂದುಳಿದ ಜನಾಂಗ ಸಂಘಟಿತರಾಗಬೇಕು, ಸಂಘಟಿತರಾದ ಮೇಲ್ಪಗ೯ ಸ೦ಘಟನೆ ಸಲ್ಲ ಅಂದಿದ್ದರು.
ಸುಬ್ಬಣ್ಣ ನನಗೆ ಅಥ೯ ಆಗಿಲ್ಲ ಅಂದೆ
ಅವರು ಈ ರೀತಿ ವಿವರಿಸಿದ್ದರು " ಮೇಲು ವಗ೯ದವರು ಶತ ಶತಮಾನದಿಂದ ಸ೦ಘಟಿತರಾಗಿದ್ದಾರೆ ಅವರು ಪುನಃ ಸಂಘಟಿತರಾದರೆ ಕೆಳ ವಗ೯ದ ಶೋಷಣೆ ಆಗುತ್ತೆ, ಅಸಂಘಟಿತರಾದ ಹಿ೦ದುಳಿದ ವಗ೯ಗಳು ಅವರ ಅಭಿವೃದ್ದಿಗೆ, ಸವಲತ್ತುಗಳಿಗೆ ಸಂಘಟಿತರಾಗಬೇಕು"
ಈ ಮಾತು ಇವತ್ತು ಶ್ರೀಧರ ಕಲ್ಲಳ್ಳಿಯವರ ಹಿಂದುಳಿದ ವಗ೯ದವರ ಬಗ್ಗೆ ವ್ಯಕ್ತಪಡಿಸಿದ ಕಾಳಜಿ ಸಂದಭ೯ದಲ್ಲಿ ನೆನಪಾಯಿತು.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment