ನನಗೆ ಇವತ್ತು ನಿನಾಸಂ ಕೆ.ವಿ.ಸುಬ್ಬಣ್ಣ ನೆನಪಿಗೆ ಬರುತ್ತಾರೆ.1998ರಲ್ಲಿ ವೀರಪ್ಪ ಮೊಯಿಲಿಯವರ ದೇವಾಡಿಗ ಜಾತಿಯ ಸಾಗರ ತಾಲ್ಲೂಕ್ ಸಮಾವೇಶ ಹೆಗೋಡಿನ ನಿನಾಸಂ ಸಭಾ೦ಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಬ್ಬಣ್ಣರ ಪಕ್ಕದಲ್ಲಿ ವೇದಿಕೆ ಹಂಚಿಕೊಳ್ಳುವ ಸಂದಭ೯ ನನಗೆ ಸಿಕ್ಕಿತ್ತು, ಅವತ್ತು ಸುಬ್ಬಣ್ಣ ತಮ್ಮ ಬಾಷಣದಲ್ಲಿ ಹಿಂದುಳಿದ ಜನಾಂಗ ಸಂಘಟಿತರಾಗಬೇಕು, ಸಂಘಟಿತರಾದ ಮೇಲ್ಪಗ೯ ಸ೦ಘಟನೆ ಸಲ್ಲ ಅಂದಿದ್ದರು.
ಸುಬ್ಬಣ್ಣ ನನಗೆ ಅಥ೯ ಆಗಿಲ್ಲ ಅಂದೆ
ಅವರು ಈ ರೀತಿ ವಿವರಿಸಿದ್ದರು " ಮೇಲು ವಗ೯ದವರು ಶತ ಶತಮಾನದಿಂದ ಸ೦ಘಟಿತರಾಗಿದ್ದಾರೆ ಅವರು ಪುನಃ ಸಂಘಟಿತರಾದರೆ ಕೆಳ ವಗ೯ದ ಶೋಷಣೆ ಆಗುತ್ತೆ, ಅಸಂಘಟಿತರಾದ ಹಿ೦ದುಳಿದ ವಗ೯ಗಳು ಅವರ ಅಭಿವೃದ್ದಿಗೆ, ಸವಲತ್ತುಗಳಿಗೆ ಸಂಘಟಿತರಾಗಬೇಕು"
ಈ ಮಾತು ಇವತ್ತು ಶ್ರೀಧರ ಕಲ್ಲಳ್ಳಿಯವರ ಹಿಂದುಳಿದ ವಗ೯ದವರ ಬಗ್ಗೆ ವ್ಯಕ್ತಪಡಿಸಿದ ಕಾಳಜಿ ಸಂದಭ೯ದಲ್ಲಿ ನೆನಪಾಯಿತು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment