ಇದೊಂದು ಅವಿಸ್ಮರಣಿಯ ಸಮಯ, ಇವರ ಹೆಸರು ನಿಂಗಪ್ಪ ಜೋಗಿ, ಬಾಲ್ಯದಲ್ಲಿ ನಾವು ನೋಡಿದಂತೆ ಮನೆ ಮನೆಗೆ ಹೋಗಿ ಹಾಡು ಹೇಳಿ ಬಿಕ್ಷೆ ಪಡೆಯುತ್ತಿದ್ದರು, 1996-1997 ರಲ್ಲಿ ನಾನು ಇವರ ಬಗ್ಗೆ ಚಿತ್ರಲೇಖನ ತರಂಗ, ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಬರೆದಿದ್ದೆ. ಇದೆಲ್ಲ ನಿಂಗಪ್ಪ ಜೋಗಿಗೆ ಒಟ್ಟು ಮಾಡಿಕೊಟ್ಟಾಗ ನಿಂಗಪ್ಪ ಜೋಗಿ ಮುಖದಲ್ಲಿ ಮಿ೦ಚು ಮೂಡುತ್ತಿತ್ತು.ಆಗೆಲ್ಲ ನಿಂಗಪ್ಪ ಜೋಗಿ ಹೆಚ್ಚು ಹಾಡು ಹಾಡಿ ನಮ್ಮನ್ನ ರಂಜಿಸಬೇಕಿತ್ತು.
ಕಳೆದ ವಷ೯ ಅವರ ಸಂಬಂದಿಯೋಬ್ಬರನ್ನ ನಿಂಗಪ್ಪ ಜೋಗಿ ಬಗ್ಗೆ ಕೇಳಿದಾಗ ವಯಸಾಗಿದೆ ತಿರುಗಾಟ ಕಡಿಮೆ ಅಂದರು.ಹಾಗಾದರೆ ಕಲಾವಿದರ ಮಾಷಾಸನ ಬರುತ್ತಾ ಅ೦ದರೆ "ಎಲ್ಲಿ ಸಾರ್ ಅವರು ಕೇಳಿದಷ್ಟು ಹಣ ಕೊಡೋಕೆ ಆಗಿಲ್ಲ ಅದಕ್ಕೆ ಅವರು ನಮಗೆ ಇಲ್ಲದಿದ್ದೆಲ್ಲ ದಾಖಲೆ ಕೇಳತಾರೆ" ಅಂದಿದ್ದರು.
ಇವತ್ತು ನಿಂಗಪ್ಪ ಜೋಗಿ ಕನಾ೯ಟಕ ಸಕಾ೯ರದ ಜಾನಪದ ಅಕಾಡೆಮಿ ಪ್ರಶಸ್ತಿ ಪತ್ರದೊಂದಿಗೆ ಬಂದು ನನಗೆ ತೋರಿಸಿ "ಸ್ವಾಮಿ ನೀವೇ ನನಗೆ ಮೊದಲಿಗೆ ಪ್ರಚಾರ ನೀಡಿದವರು" ಅ೦ದಾಗ ನನಗೂ ಸಂತೋಷ ಆಯಿತು.
ಮೊದಲೆಲ್ಲ ಈ ಪ್ರಶಸ್ತಿ ನೋಡಿದರೆ ವಾಕರಿಕೆ ಬರುತ್ತಿತ್ತು ಆದರೆ ಇವತ್ತು ನಮ್ಮ ನಿಂಗಪ ಜೋಗಿಯಿ೦ದ ಈ ಪ್ರಶಸ್ತಿಗೆ ಬೆಲೆ ಬಂತು ಅನ್ನಿಸಿತು.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment