ಇವರು ಯಾರು ಗೊತ್ತಾ?
ಜಾಜ್೯ ಪನಾ೯೦ಡಿಸ್ರ ನಿಕಟವತಿ೯, ಹಾಲಿ ಬಿಹಾರದ ನಿತೀಶರ ಜೊತೆಗಾರ.
10 ವಷ೯ ನಿರ೦ತರವಾಗಿ ಒಂದು ದಿನವೂ ತಪ್ಪದೆ ಕೋಕೊಕೋಲಾ, ಪೆಪ್ಸಿ ವಿರುದ್ಧ ಪ್ರತಿ ದಿನ ಸಂಸದ ಭವನದ ಎದರು ದರಣಿ ಮಾಡಿ ಪ್ರತಿದಿನ ಸಂಸದ ಮಾಗ್೯ದ ಪೋಲಿಸ್ ಠಾಣೆಯಲ್ಲಿ ಬಂದನ ಬಿಡುಗಡೆ ಆಗುತ್ತಿದ್ದರು.
ಶ್ರೀ ಅನಿಲ್ ಪ್ರಸಾದ್ ಹೆಗ್ಡೆ ನಮ್ಮ ಕು೦ದಾಪುರದವರು, ಕನ್ನಡಿಗರು.
ಇವರು ನನ್ನ ಗೆಳೆಯರು ದೆಹಲಿಯಲ್ಲಿ ಎರಡು ಬಾರಿ ನಾನು ಇವರ ಚಳವಳಿಯಲ್ಲಿ ಭಾಗವಹಿಸಿ ಸಂಸದ ಭವನ ಮಾಗ್೯ದ ಫೋಲಿಸ್ ಠಾಾಣೆಯಲ್ಲಿ ಬಂದನಕ್ಕೆ ಒಳಗಾಗಿದ್ದು ಒಂದು ಸವಿ ನೆನಪು.
ಇವರ ಪೇ ಸ್ ಬುಕ್ https://m.facebook.com›Aneel Hegde
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment