Skip to main content

ವೈದ್ಯನಾರಾಯಣ ಮೂತಿ೯ನರಸೀಪುರ ಕ್ಯಾನ್ಸರ್ ಕಾಯಿಲೆ ಗುಣಪಡಿಸುತ್ತಾರೆ.

ಇವರು ವೈದ್ಯನಾರಾಯಣ ಮೂತಿ೯ ನಮ್ಮ ಊರು ಆನಂದಪುರಂನಿಂದ 10 ಕಿ.ಮಿ ದೂರದ ಹಳ್ಳಿ ನರಸೀಪುರದವರು, ಇವರ ಪೂವಿ೯ಕರನ್ನ ತಮಿಳುನಾಡಿನ ಕುಂಭಕೋಣದಿಂದ ಬನವಾಸಿ ಕದಂಬರ ರಾಜಾಶ್ರಯಕ್ಕೆ ವೈದ್ಯ ವೃತ್ತಿಗೆ 800 ವಷ್೯ ದ ಹಿಂದೆ ಕರೆ ತಂದ ದಾಖಲೆ ಇದೆ.
ಇವರು ಚಿಕ್ಕವರಿದ್ದಾಗ ಇವರ ಹಳ್ಳಿ ಸುತ್ತಾ ಮುತ್ತಾ ಮನೆಗಳು ಪ್ರತಿ ವಷ್೯ ಬೆಂಕಿ ಅನಾಹುತ ಆಗುತ್ತಿದ್ದಾಗ ಸಾಗರದ ವರದಳ್ಳಿಯ ಸಂತ ಶ್ರೀಧರ ಸ್ವಾಮಿಗಳನ್ನ ಊರ ಮುಖಂಡರು ಪರಿಹರಿಸಲು ಬೇಡಿಕೊಂಡಾಗ ಶ್ರೀಧರ ಸ್ವಾಮಿಗಳು ಇವರ ಹಳ್ಳಿಗೆ ಬರುತ್ತಾರೆ, ನರಸೀಪುರದ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿ ದೇವರ ವಿಗ್ರಹ ಮುಟ್ಟಿ ಇನ್ನು ಸಾಕು ಶಾಂತನಾಗು ಅನ್ನುತ್ತಾರೆ ಅಂದಿನಿಂದ ಬೆಂಕಿ ಅನಾಹುತ ನಿOತಿತು ಅಂತ ಊರಿನ ಹಿರಿಯರು ನೆನಪಿಸುತ್ತಾರೆ, ನರಸಿಂಹಸ್ವಾಮಿ ದೇವಾಲಯವನ್ನ ಇಲ್ಲಿನ ಬಹುಸಂಖ್ಯಾತ ದೀವರು, ಹವ್ಯಕರು ಭಕ್ತಿಯಿ೦ದ ನಡೆದುಕೊಳ್ಳುತ್ತಾರೆ.
ಆ ದಿನ ಮಧ್ಯಾನ ಶ್ರೀಧರ ಸ್ವಾಮಿಗಳ ಬಿಕ್ಷೆ ವೈದ್ಯನಾರಾಯಣ ಮೂತಿ೯ಗಳ ಪೂವಿ೯ಕರ ಮನೆಯಲ್ಲಿ ನಿಗದಿ ಆಗಿತ್ತು ಅಲ್ಲಿಗೆ ಆಗಮಿಸಿದ ಸ್ವಾಮಿಗಳು ಎಲ್ಲರೆದುರೇ ಬಾಲಕ ನಾರಾಯಣ ಮೂತಿ೯ಯವರನ್ನ ಕರೆದು ತಲೆಯ ಮೇಲೆ ತಮ್ಮ ಹಸ್ತವಿಟ್ಟು ಈ ಬಾಲಕ ಜಗದ ಪ್ರಸಿದ್ಧ ವೈದ್ಯನಾಗುತ್ತಾನೆ ಎಂದು ಹರಿಸಿದ್ದರು.
ಇವತ್ತು ಇದು ಸತ್ಯವಾಗಿದೆ, ಪ್ರತಿ ಗುರುವಾರ, ಬಾನುವಾರ 2 ರಿಂದ 3 ಸಾವಿರ ರೋಗಿಗಳಿಗೆ ಎಲ್ಲಾ ಕಾಯಿಲೆಗೆ ಔಷದಿ ನೀಡುತ್ತಾರೆ, ವಿಶೇಷವಾಗಿ ಎಲ್ಲೂ ಗುಣವಾಗದ ಕ್ಯಾನ್ಸರ್ ಮತ್ತು ಕಿಡಿನಿ ರೋಗಿಗಳು ಕೊನೆಯ ಪ್ರಯತ್ನ ಅಂತ ಇವರಲ್ಲಿಗೆ ಬಂದು ಗುಣವಾಗುವುದು ಸೋಜಿಗ.
ಸ್ವತಃ ಸರಳ ವ್ಯಕ್ತಿತ್ವದ ವೈದ್ಯರ ಕೈಗುಣ , ದೈವ ಚಿಕಿತ್ಸೆ ಅಂತೆಲ್ಲ ಬಣ್ಣಿಸುತ್ತಾರೆ; ಈ ಬಗ್ಗೆ ಅವರನ್ನ ಪ್ರಶ್ನೆ ಮಾಡಿದರೆ ಈ ಔಷದಿ ಇಷ್ಟು ಕೆಲಸ ಮಾಡೋದು ನನಗೂ ಆಶ್ಚಯ್೯ ಅಂತ ಮುಗ್ದರಾಗಿ ಉತ್ತರಿಸುತ್ತಾರೆ.
ಇವರ ಚಿಕಿತ್ಸೆಗೆ 300 ರೂಪಾಯಿ ಅವರ ಮುಂದೆ ಇರುವ ಶ್ರೀನಿಧಿ ಎಂಬ ಭಂಡಾರಕ್ಕೆ ಹಾಕಿದರಾಯಿತು ಇವರು ಕೈಯಲ್ಲಿ ಹಣ ಮುಟ್ಟುವುದಿಲ್ಲ, ಈ ಭಂಡಾರವನ್ನ 1993ರಲ್ಲಿ ಇವರ ಆತ್ಮಿಯ ಗೆಳೆಯರಾಗಿದ್ದ ನನ್ನ ತಂದೆ ಕೊಡುಗೆಯಾಗಿ ಅಲ್ಲಿ ಇಟ್ಟಿದ್ದಾರೆ, ಈಗಲೂ ಅದು ಅಲ್ಲಿದೆ.
ಇವರು ನೀಡುವ ಔಷಧಿ 27 ದಿನಕ್ಕೆ ಮಾತ್ರ ನಂತರ ಪುನಃ ಹೋಗಿ ಔಷದಿ ತರಬೇಕು ಯಾಕೆಂದರೆ ನಂತರ ಇದು ಕೆಲಸ ಮಾಡುವುದು ಇಲ್ಲ, ತಾಜಾತನ ಕಳೆದುಕೊಳ್ಳುತ್ತದೆ.
ಇಲ್ಲಿಗೆ ಬರುವವರಿಗೆ ಸರತಿ ಸಾಲಲ್ಲಿ ಮಳೆ, ಬಿಸಿಲು, ಚಳಿಯಲ್ಲಿ ಹೆಚ್ಚು ಸಮಯ ಕಾಯುವ ಅನಿವಾಯ೯ ದಿನೇ ದಿನೇ ಬರುವವರು ಹೆಚ್ಚಾಗುವುದರಿಂದ ಕಷ್ಟ ಆಗುತ್ತಿದೆ ಅದಕ್ಕಾಗಿ ಬಂದವರು ಕುಳಿತು ತಮ್ಮ ಸರದಿಗೆ ಕಾಯುಲು ದೊಡ್ಡ ಸಬಾ0ಗಣ, ಟಾಯಿಲೆಟ್, ಕುಡಿಯುವ ನೀರಿನ ವ್ಯವಸ್ಥೆಯ ನಿಮಾ೯ಣ ಕಾಯ೯ ಪ್ರಗತಿಯಲ್ಲಿದೆ.
ಬರುವ ನೂರಾರು ವಾಹನಗಳಿ೦ದ ಊರವರಿಗೆ ತೊಂದರೆ ಆಗುತ್ತಿದ್ದರಿಂದ ಗ್ರಾಮಸ್ಥರು ಪಾಕಿ೯೦ಗ್ ವ್ಯವಸ್ಥೆ ಮಾಡಿದ್ದಾರೆ.
ಮುಂದಿನ ದಿನದಲ್ಲಿ 2 ಕಿ.ಮಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಕಸ ಮುಕ್ತವಾಗಿಸುವುದು, ರಾತ್ರಿ ವೇಳೆ ಊರೊಳಗೆ ವಾಹನ ಬರದಂತೆ , ರೋಗಿಗಳಿಗೆ ಮೋಸ ಮಾಡಿ ನಕಲಿ ಔಷಧ ನೀಡುವ ಮದ್ಯವತಿ೯ಗಳ ನಿಯ೦ತ್ರಣ, ಆನಂದಪುರಂನ ರೈಲು ನಿಲ್ದಾಣದಿಂದ ಬಡ ರೋಗಿಗಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.
ತಮ್ಮ ಚಿಕಿತ್ಸೆ ಶೇಕಡಾ 90 ಪಲಿತಾಂಶ ನೀಡಿದ ವೈಜ್ಞಾನಿಕ ದಾಖಲೆ ಇದೆ, ಕ್ಯಾನ್ಸರ್ ಗುಣ ಆಗದ ಕಾಯಿಲೆ ಅಲ್ಲ ಆದರೆ ಆಪರೇಷನ್ ಮತ್ತು ಕಿಮೋ ಚಿಕಿತ್ಸೆಯಿ೦ದ ಈ ಕಾಯಿಲೆ ಇನ್ನೂ ಹೆಚ್ಚು ಆಗುತ್ತೆ ಅಂತಾರೆ ವೈದ್ಯನಾರಾಯಣ ಮೂತೀ೯ ನರಸಿಪುರ :
ಬೆಂಗಳೂರಿಂದ ಶಿವಮೊಗ್ಗ ಬಂದು ಅಲ್ಲಿಂದ ವಿಶ್ವ ಪ್ರಸಿದ್ದ ಜೋಗ ಜಲಪಾತ ಮಾಗ೯ದಲ್ಲಿ 50 ಕಿಮೀ ದೂರದ ಆನಂದಪುರಂ ತಲುಪಿ ಅಲ್ಲಿಂದ 10 ಕಿ.ಮೀ ದೂರದಲ್ಲಿನ ನರಸಿಪುರದಲ್ಲಿ ವೈದ್ಯರ ಮನೆ ಇದೆ, ಇವರು ಪೋನ್ ಸಂಪಕ೯ಕ್ಕೆ ಸಿಗುವುದಿಲ್ಲ.
ಇವರ ಯಾವುದೇ ಸಹೋದರ ಇಲ್ಲ; ಇವರ ನಂತರ ಇವರ ಏಕೈಕ ಪುತ್ರ ರಾಘವೇಂದ್ರ ವಂಶಪಾರಂಪರಿಕವಾಗಿ ಈ ಚಿಕಿತ್ಸೆ ಮುಂದುವರಿಸುತ್ತಾರೆ.
ಕೋರಿಯರ್ ಅಥವ ಬೇರೆ ಯಾರಿಂದಲೂ ಈ ಔಷಧಿ ಸಿಗುತ್ತದೆಂದರೆ ಅದು ಹಣದಾಸೆಯ ಮಧ್ಯವತಿ೯ಗಳ ನಕಲಿ ಆಗಿರುತ್ತದೆ.
ಇವರ ಕೈಯಿಂದ ಪಡೆಯುವ ಔಷದಿ ಪರಿಣಾಮಕಾರಿ ಮತ್ತು ಕಾಯಿಲೆ ಗುಣಮಾಡುವುದಾಗಿದೆ.
ಇವರ ಅಣ್ಣ ಶಿಕ್ಷಕರಾಗಿದ್ದರು ಈಗಿಲ್ಲ, 1997ರಲ್ಲಿ ಇವರ ಆಸ್ತಿ ಹಿಸೈ ಪಂಚಾಯಿತಿ ಇದೆ ಬರಬೇಕಂತ ನನ್ನ ಬಂದು ಕರೆದಿದ್ದರು, ಅವತ್ತು 50ಕ್ಕೂ ಹೆಚ್ಚು ಅವರ ಅಣ್ಣನ ಸಂಬಂದಿಗಳು ಬಂದಿದ್ದರು, ಇವರ ಕಡೆ ನನ್ನ ಬಿಟ್ಟು ಯಾರೂ ಇಲ್ಲ, ಇವರ ಮಾವ ಪಂಚಾಯಿತಿ ಶುರು ಮಾಡುವ ಪೀಠಿಕೆಯಲ್ಲಿ "ಸಣ್ಣಯ್ಯ (ಸ್ಥಳೀಯವಾಗಿ ಇವರನ್ನ ಕರೆಯುವ ಹೆಸರು) ನಿನ್ನ ಕಡೆಯಿಂದ ಯಾರು ಬಂದಿದ್ದಾರೆ ಅಂದಾಗ, ಅರುಣ್ ಪ್ರಸಾದ್ ಒಬ್ಬರನ್ನೆ ಕರೆದಿದ್ದೇನೆ ಬಂದಿದ್ದಾರೆ ಅಂದಾಗ ನಾನು "ಭಟ್ಟರೆ ನೀವೆಲ್ಲ ಬ್ರಾಹಮಣರು ಸೇರಿದೀರಿ ನಾನೊಬ್ಬ ಶೂದ್ರ ನಿಮ್ಮ ಕಡೆ ಸರಿನಾ ಅಂದಾಗ "ನೀವೆ ನನ್ನ ಪಂಚಾಯಿತಿದಾರರು ಅಂತ ಅಸಭೆಯಲ್ಲಿ ನನಗೆ ವಿಶೇಷ ಗೌರವ ನೀಡಿದ್ದ ವೈದ್ಯರು ಇವತ್ತು ಎಲ್ಲರನ್ನ ಸಮಾನವಾಗಿ ನೊಡುವ ಗುಣ ಹೊoದಿದ್ದಾರೆ.
ನಮ್ಮ ಕುಟು೦ಬದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಿದ್ದಾರೆ, ನನ್ನ ಪತ್ನಿಗೆ ವೈದ್ಯರೆಲ್ಲ ಆಪರೇಷನ್ ಮಾಡಲೇ ಬೇಕೆಂದಾಗ ಬೇಡ ಅಂದು ಇವರು ಚಿಕಿತ್ಸೆ ಮಾಡಿದ್ದರು, ಮಣಿಪಾಲ್ ನಲ್ಲಿ ಆರು ತಿಂಗಳ ನಂತರ ಸ್ಕಾನ್ ಮಾಡಿದ ವೈದ್ಯರು ಆರು ತಿಂಗಳ ಹಿಂದೆ ಇದ್ದ ದೊಡ್ಡ ಗೆಡ್ಡ ಕರಗಿ ಹೋಗಿದೆ ಅಂದಾಗಲೇ ನನಗೆ ಸ್ವತಃ ನಾರಾಯಣ ಮೂತಿ೯ಗಳ ಚಿಕಿತ್ಸೆಯ ಪರಿಣಾಮ ಅರಿವಾಯಿತು.
ದೇವರು ಅವರಿಗೆ ಅವರ ಕುಟು೦ಬಕ್ಕೆ ಸದಾ ಒಳಿತು ಮಾಡಲಿ ಎಂದು ಹಾರೈಸುತ್ತೇನೆ.

Comments

Post a Comment

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ