ಇವರು ವೈದ್ಯನಾರಾಯಣ ಮೂತಿ೯ ನಮ್ಮ ಊರು ಆನಂದಪುರಂನಿಂದ 10 ಕಿ.ಮಿ ದೂರದ ಹಳ್ಳಿ ನರಸೀಪುರದವರು, ಇವರ ಪೂವಿ೯ಕರನ್ನ ತಮಿಳುನಾಡಿನ ಕುಂಭಕೋಣದಿಂದ ಬನವಾಸಿ ಕದಂಬರ ರಾಜಾಶ್ರಯಕ್ಕೆ ವೈದ್ಯ ವೃತ್ತಿಗೆ 800 ವಷ್೯ ದ ಹಿಂದೆ ಕರೆ ತಂದ ದಾಖಲೆ ಇದೆ.
ಇವರು ಚಿಕ್ಕವರಿದ್ದಾಗ ಇವರ ಹಳ್ಳಿ ಸುತ್ತಾ ಮುತ್ತಾ ಮನೆಗಳು ಪ್ರತಿ ವಷ್೯ ಬೆಂಕಿ ಅನಾಹುತ ಆಗುತ್ತಿದ್ದಾಗ ಸಾಗರದ ವರದಳ್ಳಿಯ ಸಂತ ಶ್ರೀಧರ ಸ್ವಾಮಿಗಳನ್ನ ಊರ ಮುಖಂಡರು ಪರಿಹರಿಸಲು ಬೇಡಿಕೊಂಡಾಗ ಶ್ರೀಧರ ಸ್ವಾಮಿಗಳು ಇವರ ಹಳ್ಳಿಗೆ ಬರುತ್ತಾರೆ, ನರಸೀಪುರದ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡಿ ದೇವರ ವಿಗ್ರಹ ಮುಟ್ಟಿ ಇನ್ನು ಸಾಕು ಶಾಂತನಾಗು ಅನ್ನುತ್ತಾರೆ ಅಂದಿನಿಂದ ಬೆಂಕಿ ಅನಾಹುತ ನಿOತಿತು ಅಂತ ಊರಿನ ಹಿರಿಯರು ನೆನಪಿಸುತ್ತಾರೆ, ನರಸಿಂಹಸ್ವಾಮಿ ದೇವಾಲಯವನ್ನ ಇಲ್ಲಿನ ಬಹುಸಂಖ್ಯಾತ ದೀವರು, ಹವ್ಯಕರು ಭಕ್ತಿಯಿ೦ದ ನಡೆದುಕೊಳ್ಳುತ್ತಾರೆ.
ಆ ದಿನ ಮಧ್ಯಾನ ಶ್ರೀಧರ ಸ್ವಾಮಿಗಳ ಬಿಕ್ಷೆ ವೈದ್ಯನಾರಾಯಣ ಮೂತಿ೯ಗಳ ಪೂವಿ೯ಕರ ಮನೆಯಲ್ಲಿ ನಿಗದಿ ಆಗಿತ್ತು ಅಲ್ಲಿಗೆ ಆಗಮಿಸಿದ ಸ್ವಾಮಿಗಳು ಎಲ್ಲರೆದುರೇ ಬಾಲಕ ನಾರಾಯಣ ಮೂತಿ೯ಯವರನ್ನ ಕರೆದು ತಲೆಯ ಮೇಲೆ ತಮ್ಮ ಹಸ್ತವಿಟ್ಟು ಈ ಬಾಲಕ ಜಗದ ಪ್ರಸಿದ್ಧ ವೈದ್ಯನಾಗುತ್ತಾನೆ ಎಂದು ಹರಿಸಿದ್ದರು.
ಇವತ್ತು ಇದು ಸತ್ಯವಾಗಿದೆ, ಪ್ರತಿ ಗುರುವಾರ, ಬಾನುವಾರ 2 ರಿಂದ 3 ಸಾವಿರ ರೋಗಿಗಳಿಗೆ ಎಲ್ಲಾ ಕಾಯಿಲೆಗೆ ಔಷದಿ ನೀಡುತ್ತಾರೆ, ವಿಶೇಷವಾಗಿ ಎಲ್ಲೂ ಗುಣವಾಗದ ಕ್ಯಾನ್ಸರ್ ಮತ್ತು ಕಿಡಿನಿ ರೋಗಿಗಳು ಕೊನೆಯ ಪ್ರಯತ್ನ ಅಂತ ಇವರಲ್ಲಿಗೆ ಬಂದು ಗುಣವಾಗುವುದು ಸೋಜಿಗ.
ಸ್ವತಃ ಸರಳ ವ್ಯಕ್ತಿತ್ವದ ವೈದ್ಯರ ಕೈಗುಣ , ದೈವ ಚಿಕಿತ್ಸೆ ಅಂತೆಲ್ಲ ಬಣ್ಣಿಸುತ್ತಾರೆ; ಈ ಬಗ್ಗೆ ಅವರನ್ನ ಪ್ರಶ್ನೆ ಮಾಡಿದರೆ ಈ ಔಷದಿ ಇಷ್ಟು ಕೆಲಸ ಮಾಡೋದು ನನಗೂ ಆಶ್ಚಯ್೯ ಅಂತ ಮುಗ್ದರಾಗಿ ಉತ್ತರಿಸುತ್ತಾರೆ.
ಇವರ ಚಿಕಿತ್ಸೆಗೆ 300 ರೂಪಾಯಿ ಅವರ ಮುಂದೆ ಇರುವ ಶ್ರೀನಿಧಿ ಎಂಬ ಭಂಡಾರಕ್ಕೆ ಹಾಕಿದರಾಯಿತು ಇವರು ಕೈಯಲ್ಲಿ ಹಣ ಮುಟ್ಟುವುದಿಲ್ಲ, ಈ ಭಂಡಾರವನ್ನ 1993ರಲ್ಲಿ ಇವರ ಆತ್ಮಿಯ ಗೆಳೆಯರಾಗಿದ್ದ ನನ್ನ ತಂದೆ ಕೊಡುಗೆಯಾಗಿ ಅಲ್ಲಿ ಇಟ್ಟಿದ್ದಾರೆ, ಈಗಲೂ ಅದು ಅಲ್ಲಿದೆ.
ಇವರು ನೀಡುವ ಔಷಧಿ 27 ದಿನಕ್ಕೆ ಮಾತ್ರ ನಂತರ ಪುನಃ ಹೋಗಿ ಔಷದಿ ತರಬೇಕು ಯಾಕೆಂದರೆ ನಂತರ ಇದು ಕೆಲಸ ಮಾಡುವುದು ಇಲ್ಲ, ತಾಜಾತನ ಕಳೆದುಕೊಳ್ಳುತ್ತದೆ.
ಇಲ್ಲಿಗೆ ಬರುವವರಿಗೆ ಸರತಿ ಸಾಲಲ್ಲಿ ಮಳೆ, ಬಿಸಿಲು, ಚಳಿಯಲ್ಲಿ ಹೆಚ್ಚು ಸಮಯ ಕಾಯುವ ಅನಿವಾಯ೯ ದಿನೇ ದಿನೇ ಬರುವವರು ಹೆಚ್ಚಾಗುವುದರಿಂದ ಕಷ್ಟ ಆಗುತ್ತಿದೆ ಅದಕ್ಕಾಗಿ ಬಂದವರು ಕುಳಿತು ತಮ್ಮ ಸರದಿಗೆ ಕಾಯುಲು ದೊಡ್ಡ ಸಬಾ0ಗಣ, ಟಾಯಿಲೆಟ್, ಕುಡಿಯುವ ನೀರಿನ ವ್ಯವಸ್ಥೆಯ ನಿಮಾ೯ಣ ಕಾಯ೯ ಪ್ರಗತಿಯಲ್ಲಿದೆ.
ಬರುವ ನೂರಾರು ವಾಹನಗಳಿ೦ದ ಊರವರಿಗೆ ತೊಂದರೆ ಆಗುತ್ತಿದ್ದರಿಂದ ಗ್ರಾಮಸ್ಥರು ಪಾಕಿ೯೦ಗ್ ವ್ಯವಸ್ಥೆ ಮಾಡಿದ್ದಾರೆ.
ಮುಂದಿನ ದಿನದಲ್ಲಿ 2 ಕಿ.ಮಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಕಸ ಮುಕ್ತವಾಗಿಸುವುದು, ರಾತ್ರಿ ವೇಳೆ ಊರೊಳಗೆ ವಾಹನ ಬರದಂತೆ , ರೋಗಿಗಳಿಗೆ ಮೋಸ ಮಾಡಿ ನಕಲಿ ಔಷಧ ನೀಡುವ ಮದ್ಯವತಿ೯ಗಳ ನಿಯ೦ತ್ರಣ, ಆನಂದಪುರಂನ ರೈಲು ನಿಲ್ದಾಣದಿಂದ ಬಡ ರೋಗಿಗಳಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ.
ತಮ್ಮ ಚಿಕಿತ್ಸೆ ಶೇಕಡಾ 90 ಪಲಿತಾಂಶ ನೀಡಿದ ವೈಜ್ಞಾನಿಕ ದಾಖಲೆ ಇದೆ, ಕ್ಯಾನ್ಸರ್ ಗುಣ ಆಗದ ಕಾಯಿಲೆ ಅಲ್ಲ ಆದರೆ ಆಪರೇಷನ್ ಮತ್ತು ಕಿಮೋ ಚಿಕಿತ್ಸೆಯಿ೦ದ ಈ ಕಾಯಿಲೆ ಇನ್ನೂ ಹೆಚ್ಚು ಆಗುತ್ತೆ ಅಂತಾರೆ ವೈದ್ಯನಾರಾಯಣ ಮೂತೀ೯ ನರಸಿಪುರ :
ಬೆಂಗಳೂರಿಂದ ಶಿವಮೊಗ್ಗ ಬಂದು ಅಲ್ಲಿಂದ ವಿಶ್ವ ಪ್ರಸಿದ್ದ ಜೋಗ ಜಲಪಾತ ಮಾಗ೯ದಲ್ಲಿ 50 ಕಿಮೀ ದೂರದ ಆನಂದಪುರಂ ತಲುಪಿ ಅಲ್ಲಿಂದ 10 ಕಿ.ಮೀ ದೂರದಲ್ಲಿನ ನರಸಿಪುರದಲ್ಲಿ ವೈದ್ಯರ ಮನೆ ಇದೆ, ಇವರು ಪೋನ್ ಸಂಪಕ೯ಕ್ಕೆ ಸಿಗುವುದಿಲ್ಲ.
ಇವರ ಯಾವುದೇ ಸಹೋದರ ಇಲ್ಲ; ಇವರ ನಂತರ ಇವರ ಏಕೈಕ ಪುತ್ರ ರಾಘವೇಂದ್ರ ವಂಶಪಾರಂಪರಿಕವಾಗಿ ಈ ಚಿಕಿತ್ಸೆ ಮುಂದುವರಿಸುತ್ತಾರೆ.
ಕೋರಿಯರ್ ಅಥವ ಬೇರೆ ಯಾರಿಂದಲೂ ಈ ಔಷಧಿ ಸಿಗುತ್ತದೆಂದರೆ ಅದು ಹಣದಾಸೆಯ ಮಧ್ಯವತಿ೯ಗಳ ನಕಲಿ ಆಗಿರುತ್ತದೆ.
ಇವರ ಕೈಯಿಂದ ಪಡೆಯುವ ಔಷದಿ ಪರಿಣಾಮಕಾರಿ ಮತ್ತು ಕಾಯಿಲೆ ಗುಣಮಾಡುವುದಾಗಿದೆ.
ಇವರ ಅಣ್ಣ ಶಿಕ್ಷಕರಾಗಿದ್ದರು ಈಗಿಲ್ಲ, 1997ರಲ್ಲಿ ಇವರ ಆಸ್ತಿ ಹಿಸೈ ಪಂಚಾಯಿತಿ ಇದೆ ಬರಬೇಕಂತ ನನ್ನ ಬಂದು ಕರೆದಿದ್ದರು, ಅವತ್ತು 50ಕ್ಕೂ ಹೆಚ್ಚು ಅವರ ಅಣ್ಣನ ಸಂಬಂದಿಗಳು ಬಂದಿದ್ದರು, ಇವರ ಕಡೆ ನನ್ನ ಬಿಟ್ಟು ಯಾರೂ ಇಲ್ಲ, ಇವರ ಮಾವ ಪಂಚಾಯಿತಿ ಶುರು ಮಾಡುವ ಪೀಠಿಕೆಯಲ್ಲಿ "ಸಣ್ಣಯ್ಯ (ಸ್ಥಳೀಯವಾಗಿ ಇವರನ್ನ ಕರೆಯುವ ಹೆಸರು) ನಿನ್ನ ಕಡೆಯಿಂದ ಯಾರು ಬಂದಿದ್ದಾರೆ ಅಂದಾಗ, ಅರುಣ್ ಪ್ರಸಾದ್ ಒಬ್ಬರನ್ನೆ ಕರೆದಿದ್ದೇನೆ ಬಂದಿದ್ದಾರೆ ಅಂದಾಗ ನಾನು "ಭಟ್ಟರೆ ನೀವೆಲ್ಲ ಬ್ರಾಹಮಣರು ಸೇರಿದೀರಿ ನಾನೊಬ್ಬ ಶೂದ್ರ ನಿಮ್ಮ ಕಡೆ ಸರಿನಾ ಅಂದಾಗ "ನೀವೆ ನನ್ನ ಪಂಚಾಯಿತಿದಾರರು ಅಂತ ಅಸಭೆಯಲ್ಲಿ ನನಗೆ ವಿಶೇಷ ಗೌರವ ನೀಡಿದ್ದ ವೈದ್ಯರು ಇವತ್ತು ಎಲ್ಲರನ್ನ ಸಮಾನವಾಗಿ ನೊಡುವ ಗುಣ ಹೊoದಿದ್ದಾರೆ.
ನಮ್ಮ ಕುಟು೦ಬದಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಿದ್ದಾರೆ, ನನ್ನ ಪತ್ನಿಗೆ ವೈದ್ಯರೆಲ್ಲ ಆಪರೇಷನ್ ಮಾಡಲೇ ಬೇಕೆಂದಾಗ ಬೇಡ ಅಂದು ಇವರು ಚಿಕಿತ್ಸೆ ಮಾಡಿದ್ದರು, ಮಣಿಪಾಲ್ ನಲ್ಲಿ ಆರು ತಿಂಗಳ ನಂತರ ಸ್ಕಾನ್ ಮಾಡಿದ ವೈದ್ಯರು ಆರು ತಿಂಗಳ ಹಿಂದೆ ಇದ್ದ ದೊಡ್ಡ ಗೆಡ್ಡ ಕರಗಿ ಹೋಗಿದೆ ಅಂದಾಗಲೇ ನನಗೆ ಸ್ವತಃ ನಾರಾಯಣ ಮೂತಿ೯ಗಳ ಚಿಕಿತ್ಸೆಯ ಪರಿಣಾಮ ಅರಿವಾಯಿತು.
ದೇವರು ಅವರಿಗೆ ಅವರ ಕುಟು೦ಬಕ್ಕೆ ಸದಾ ಒಳಿತು ಮಾಡಲಿ ಎಂದು ಹಾರೈಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Superb sir
ReplyDelete