ಮಿತ್ರರು ಬಂದು ಗಡಿಬಿಡಿಯಲ್ಲಿ ಆಪೀಸಿಂದ ಹೊರಬನ್ನಿ ದೊಡ್ಡವರೊಬ್ಬರನ್ನ ಭೇಟಿ ಮಾಡಿ ಅಂದರು, ನನ್ನ ಅಜಗರ ಪ್ರವೃತ್ತಿ ಗೊತ್ತಿತ್ತವರಿಗೆ. ಅಂತೂ ಅವರ ಬೇಟಿ ಆಯಿತು, ಪರಿಚಯ ಆಯಿತು. ಸೌಜನ್ಯಕ್ಕಾಗಿ ಪುನಃ ಬನ್ನಿ ಅಂದೆ, ಖಂಡಿತಾ ಬರುವುದಾಗಿ ಹೇಳಿ ಹೋದರು ಆದರೆ ಅವರು ಬರುವವರಲ್ಲಾ ಅಂತ ನನಗೆ ಗೊತ್ತಿತ್ತು.
ಅದಾಗಿ ಅನೇಕ ತಿಂಗಳಾಗಿತ್ತು, ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದ ಸಭೆಗಾಗಿ ನನ್ನ ಮನೆ ಎದುರು ವೃತ್ತದಲ್ಲಿ ಬಸ್ಸಿನಲ್ಲಿ ಬಿಜೆಪಿ ಕಾಯ೯ಕತ೯ರು ಹೋಗಲು ತಯಾರಿ ನಡೆಸಿದ್ದರು, ಅಲ್ಲಿದ್ದ ಮುಖ೦ಡರು ಪಕ್ಷದ ಜೋಶ್ನಲ್ಲಿದ್ದರು ಹಾಗಾಗಿ ನಾನು ಅವರಿಗೆ ಕಂಡರು ನನ್ನನ್ನ ಮಾತಾಡಿಸಲು ಅವರಿಗೆ ಅಹಂ ಅಡ್ಡ ಬಂದಿತ್ತು, ರಾಜಕೀಯದಿಂದಲೇ ನಿವೃತ್ತಿ ಆಗಿದ್ದ ನನಗೆ ಇದೇನು ಅನ್ನಿಸಲಿಲ್ಲ.
ಆಗಲೇ ಸಲೂನು ನಡೆಸುವ ಬಾಲು ಬಂದು ಅಣ್ಣಾ ರಾಮುಲು ಬಂದಿದ್ದಾರೆ ಅಂದ, ಬರಲಿ ಬಿಡು ನಮ್ಮ ರೆಸ್ಟೋರೆಂಟ್ಗೆ ಬಂದಿರಬೇಕು ಅಂದೆ ಇಲ್ಲಣ್ಣ ಮಾಲಿಕರಿಗೆ ಕರೀರಿ ಅಂತಾರೆ ಅಂದ. ಸರಿ ಅಂತ ಲಾಡಜ್ ಆಫೀಸಿಗೆ ಹೋದರೆ ಬಳ್ಳಾರಿ ಸಂಸದ, ಮಾಜಿ ಮಂತ್ರಿ ಶ್ರೀರಾಮುಲು !?!
ನಂತರ 4 ಗಂಟಿಗಳನ್ನ ನನ್ನೋಡನೆ ಕಳೆದರು
ಅವತ್ತಿನ ಸಂಭಾಷಣೆ ಸಾರ.......
ಅವರು ಶಿವದೀಕ್ಷೆ ಪಡೆದಿದ್ದಾರೆ, ನೀರುಳ್ಳಿ ಬೆಳ್ಳುಳ್ಳಿ ಸೇವನೆ ಇಲ್ಲ ಅಂದರೆ ಅದೇ ತಿನ್ನೋಲ್ಲ ಅ೦ದರೆ ಮಾಂಸ ಮೀನು ಇಲ್ಲವೆ ಇಲ್ಲ ಅಂದರು ಯಾಕೆ ಅಂದೆ ನಿತ್ಯ ಮದ್ಯಪಾನ ಮಾಂಸಹಾರ ಇಲ್ಲದೆ ನನ್ನ ಊಟ ಇರಲಿಲ್ಲ, ನಿತ್ಯ ಸಾನ ಮಾಡುತ್ತಿರಲಿಲ್ಲ ಅಂದರು ನನ್ನ ಜೀವನ ಹಾಗಿತ್ತು ಅಂದರು, ರವಿ ಬೆಳೆಗೆರೆ ಲೇಖನದಿಂದ ನಿಮ್ಮ ಬಗ್ಗೆ ಹೆಚ್ಚು ತಿಳಿದಿದ್ದೇನೆ ಅಂದೆ, ದೇವರು ನನ್ನನ್ನ ಈ ಸ್ಥಾನಕ್ಕೆ ತರುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ ಅಂದರು ನಂತರದ ಅವಧಿಯಲ್ಲಿ ಅವರ ಅ೦ತಃಕರಣ ಬಿಚ್ಚಿಟ್ಟರು.
ಈಗ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದಾರೆ.
Comments
Post a Comment