ಮಿತ್ರರು ಬಂದು ಗಡಿಬಿಡಿಯಲ್ಲಿ ಆಪೀಸಿಂದ ಹೊರಬನ್ನಿ ದೊಡ್ಡವರೊಬ್ಬರನ್ನ ಭೇಟಿ ಮಾಡಿ ಅಂದರು, ನನ್ನ ಅಜಗರ ಪ್ರವೃತ್ತಿ ಗೊತ್ತಿತ್ತವರಿಗೆ. ಅಂತೂ ಅವರ ಬೇಟಿ ಆಯಿತು, ಪರಿಚಯ ಆಯಿತು. ಸೌಜನ್ಯಕ್ಕಾಗಿ ಪುನಃ ಬನ್ನಿ ಅಂದೆ, ಖಂಡಿತಾ ಬರುವುದಾಗಿ ಹೇಳಿ ಹೋದರು ಆದರೆ ಅವರು ಬರುವವರಲ್ಲಾ ಅಂತ ನನಗೆ ಗೊತ್ತಿತ್ತು.
ಅದಾಗಿ ಅನೇಕ ತಿಂಗಳಾಗಿತ್ತು, ಶಿವಮೊಗ್ಗದಲ್ಲಿ ಬಿಜೆಪಿ ಪಕ್ಷದ ಸಭೆಗಾಗಿ ನನ್ನ ಮನೆ ಎದುರು ವೃತ್ತದಲ್ಲಿ ಬಸ್ಸಿನಲ್ಲಿ ಬಿಜೆಪಿ ಕಾಯ೯ಕತ೯ರು ಹೋಗಲು ತಯಾರಿ ನಡೆಸಿದ್ದರು, ಅಲ್ಲಿದ್ದ ಮುಖ೦ಡರು ಪಕ್ಷದ ಜೋಶ್ನಲ್ಲಿದ್ದರು ಹಾಗಾಗಿ ನಾನು ಅವರಿಗೆ ಕಂಡರು ನನ್ನನ್ನ ಮಾತಾಡಿಸಲು ಅವರಿಗೆ ಅಹಂ ಅಡ್ಡ ಬಂದಿತ್ತು, ರಾಜಕೀಯದಿಂದಲೇ ನಿವೃತ್ತಿ ಆಗಿದ್ದ ನನಗೆ ಇದೇನು ಅನ್ನಿಸಲಿಲ್ಲ.
ಆಗಲೇ ಸಲೂನು ನಡೆಸುವ ಬಾಲು ಬಂದು ಅಣ್ಣಾ ರಾಮುಲು ಬಂದಿದ್ದಾರೆ ಅಂದ, ಬರಲಿ ಬಿಡು ನಮ್ಮ ರೆಸ್ಟೋರೆಂಟ್ಗೆ ಬಂದಿರಬೇಕು ಅಂದೆ ಇಲ್ಲಣ್ಣ ಮಾಲಿಕರಿಗೆ ಕರೀರಿ ಅಂತಾರೆ ಅಂದ. ಸರಿ ಅಂತ ಲಾಡಜ್ ಆಫೀಸಿಗೆ ಹೋದರೆ ಬಳ್ಳಾರಿ ಸಂಸದ, ಮಾಜಿ ಮಂತ್ರಿ ಶ್ರೀರಾಮುಲು !?!
ನಂತರ 4 ಗಂಟಿಗಳನ್ನ ನನ್ನೋಡನೆ ಕಳೆದರು
ಅವತ್ತಿನ ಸಂಭಾಷಣೆ ಸಾರ.......
ಅವರು ಶಿವದೀಕ್ಷೆ ಪಡೆದಿದ್ದಾರೆ, ನೀರುಳ್ಳಿ ಬೆಳ್ಳುಳ್ಳಿ ಸೇವನೆ ಇಲ್ಲ ಅಂದರೆ ಅದೇ ತಿನ್ನೋಲ್ಲ ಅ೦ದರೆ ಮಾಂಸ ಮೀನು ಇಲ್ಲವೆ ಇಲ್ಲ ಅಂದರು ಯಾಕೆ ಅಂದೆ ನಿತ್ಯ ಮದ್ಯಪಾನ ಮಾಂಸಹಾರ ಇಲ್ಲದೆ ನನ್ನ ಊಟ ಇರಲಿಲ್ಲ, ನಿತ್ಯ ಸಾನ ಮಾಡುತ್ತಿರಲಿಲ್ಲ ಅಂದರು ನನ್ನ ಜೀವನ ಹಾಗಿತ್ತು ಅಂದರು, ರವಿ ಬೆಳೆಗೆರೆ ಲೇಖನದಿಂದ ನಿಮ್ಮ ಬಗ್ಗೆ ಹೆಚ್ಚು ತಿಳಿದಿದ್ದೇನೆ ಅಂದೆ, ದೇವರು ನನ್ನನ್ನ ಈ ಸ್ಥಾನಕ್ಕೆ ತರುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ ಅಂದರು ನಂತರದ ಅವಧಿಯಲ್ಲಿ ಅವರ ಅ೦ತಃಕರಣ ಬಿಚ್ಚಿಟ್ಟರು.
ಈಗ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದಾರೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment