Skip to main content

ತಮಿಳು ಖ್ಯಾತ ನಟ ರಾಧಾರವಿಯೊ೦ದಿಗೆ

    ಬೆಳಿಗ್ಗೆ ಬೆಳಿಗ್ಗೆನೆ ಕನ್ನಡದ ಖ್ಯಾತ ಹಾಸ್ಯ ನಟರಾದ ದೊಡ್ಡಣ್ಣನವರ ಕರೆ " ಏನ್ರಿ ನಿನ್ನೆಯಿಂದ ಒಬ್ಬ ದೊಡ್ಡ ಮನುಷ್ಯರಿಗೆ ನಿಮ್ಮ ನಂಬರ್ ಕೊಟ್ಟಿದ್ದೆ ಅವರೆಷ್ಟು ಸಾರಿ ರಿಂಗ್ ಮಾಡಿದರೂ ನೀವು ಪಿಕ್ ಮಾಡಿಲ್ಲ " ಅಂತ, ಯಾರಿಗೆ ನನ್ನ ನಂಬರ್ ಕೊಟ್ಟಿದ್ದಿರಿ? ಅವರು ನನಗೆ ಯಾರು ಅಂತ ಹೇಗೆ ಗೊತ್ತಾಗಬೇಕು? ಅಂದೆ. ಈಗ ನಿಮಗೆ ಪೋನ್ ಮಾಡ್ತಾರೆ ದಯಮಾಡಿ ಪೋನ್ ತಗೋಳಿ, ರಾಕ್ ಲೈನ್ ವೆಂಕಟೇಶ್ ಹೆಸರು ಕೇಳಿದೀರಲ್ಲ ಅವರೆ ಅಜೆ೯೦ಟ್ ಅವರಿಗೆ ನಿಮ್ಮಿO ದ ಉಪಕಾರ ಆಗಬೇಕು, ಅವರು ಇಂತಾ ನಂಬರಿಂದ ಕಾಲ್ ಮಾಡ್ತಾರೆ ಅಂದರು.
      ಸ್ವಲ್ಪ ಹೊತ್ತಲ್ಲೆ ರಾಕ್ ಲೈನ್ ಪೋನ್ ಮಾಡಿದರು "ಬ್ರದರ್ ನಿಮ್ಮಿ೦ದ ಉಪಕಾರ ಆಗಬೇಕು " ಅಂದರು ಅಂತಹ ಕೋಟ್ಯಾದಿಪತಿ ಚಲನಚಿತ್ರ ನಿಮಾ೯ಪಕರು ಕೇಳುವಾಗ ನನಗೆ ಗೊತ್ತಿಲ್ಲದಂತೆ ಹೇಳಿ ಸಾರ್ ಅಂತದ್ದೇನು ಅಂದೆ, ತಮಿಳು ಚಿತ್ರರಂಗದ ಪ್ರಖ್ಯಾತರೊಬ್ಬರು ನಿಮ್ಮ ಅತ್ಯಂತ ಆಪ್ತರಾದ ವೈದ್ಯ ನಾರಾಯಣ ಮೂತಿ೯ಯವರನ್ನ ಬೇಟಿ ಮಾಡಬೇಕಂತೆ ಯಾವತ್ತು ಅವರನ್ನ ನಿಮ್ಮ ಹತ್ತಿರ ಕಳಿಸಲಿ ಅಂದರು.
          ರಾಕ್ ಲೈನ್ ರ ಅಭಿಲಾಷೆಯಂತೆ ತಮಿಳು ಚಿತ್ರರಂಗದ ಹಿರಿಯರು, ಪ್ರಖ್ಯಾತ ವಿಲನ್, ಮಾಜಿ ಶಾಸಕ, ತಮಿಳು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ, ಖ್ಯಾತ ಅಭಿನೇತ್ರಿ ರಾದಿಕಾ ಸಹೋದರ, ಒಂದು ಕಾಲದ ಎಂ.ಜಿ.ಆರ್.ರೊಂದಿಗೆ ನಟಿಸುತ್ತಿದ್ದ ನಂತರ ಎಂ.ಜಿ.ಆರ್ ಕಟ್ಟಾ ವಿರೋದಿ ನಟರಾದ ಎಂ.ಆರ್.ರಾದಾರವರ ಮಗ ರಾಧಾರವಿ ನಮ್ಮಲ್ಲಿಗೆ ಬಂದರು.
            ಅವರು ಒಮ್ಮೆ ಸಿಂಗಾಪುರದಿ೦ದ ವಿಮಾನದಲ್ಲಿ ಚೆನೈಗೆ ಬರುವಾಗ ಇವರ ಪಕ್ಕದಲ್ಲಿನ ಸೀಟಿನಲ್ಲಿ ಸಿಂಗಾಪುರದ ಖ್ಯಾತ ವೈದ್ಯರು ಪ್ರಯಾಣಿಸುತ್ತಿದ್ದರಂತೆ ಲೋಕರಾಮವಾಗಿ ಮಾತಾಡುವಾಗ ಅವರು ತಮ್ಮ ಕಾಯಿಲೆ ಒಂದರ ಚಿಕಿತ್ಸೆಗೆ ನಮ್ಮ ಊರಿನ ಸಮೀಪದ ನರಸೀಪುರಕ್ಕೆ ಬರುತ್ತಿರುವುದಾಗಿ ಈ ಹಿಂದೆ ಅನೇಕ ಬಾರಿ ಬಂದು ಇಲ್ಲಿನ ಆಯುವೆ೯ದ ವೈದ್ಯರಾದ ನಾರಾಯಣ ಮೂತಿ೯ಯವರಿಂದ ಚಿಕಿತ್ಸೆ ಪಡೆದು ಗುಣ ಮುಖರಾಗುತ್ತಿರುವುದಾಗಿ ತಿಳಿಸಿದರಂತೆ, ಆಗ ಇವರು ತಮ್ಮ ಕುತ್ತಿಗೆಯ ಗುಣವಾಗದ ನೋವಿನ ಬಗ್ಗೆ ಹೇಳಿದಾಗ ಆ ಸಿಂಗಾಪುರದ ಖ್ಯಾತ ವೈದ್ಯರು ನರಸಿಪುರದಲ್ಲಿ ಚಿಕಿತ್ಸೆ ಪಡೆಯಲು ತಿಳಿಸಿ ವಿಳಾಸ ನೀಡಿದ್ದರಂತೆ ಹಾಗಾಗಿ ಕನಾ೯ಟಕದಲ್ಲಿ ಇವರಿಗೆ ಆಪ್ತರಾದ ರಾಕ್ ಲೈನ್ ಗೆ ಕೇಳಿದ್ದಾರೆ, ಶಿವಮೊಗ್ಗ ಜಿಲ್ಲೆ ವಿಚಾರ ಆದ್ದರಿಂದ ರಾಕ್ ಲೈನ್ ದೊಡ್ಡಣ್ಣನವರಿಗೆ ಹೇಳಿದ್ದಾರೆ, ಸಾಗರ ತಾಲ್ಲೂಕಿನ ಆನಂದಪುರದ ಸಮೀಪ ನರಸೀಪುರ ಅಂದಿದ್ದಕ್ಕೆ ದೊಡ್ಡಣ್ಣ ನನಗೆ ಸಂಪಕ೯ ಮಾಡಿದರು. ಹೀಗೆ ರಾಕ್ ಲೈನ್ ಮತ್ತು ರಾಧಾರವಿ ನನಗೆ ಗೆಳೆಯರಾದರು.
      ರಾಧಾ ರವಿ ಸರಳ ಅತ್ಯಂತ ಬುದ್ದಿವಂತರು ಅವರ ಕಾಯಿಲೆ ಸಂಪೂಣ೯ವಾಗಿ ವೈದ್ಯ ನಾರಾಯಣ ಮೂತಿ೯ ನರಸೀಪುರ ಗುಣ ಮಾಡಿದರು, ನಮ್ಮ ಹೋಟೆಲ್ ಉದ್ಯಮದ ಬಗ್ಗೆ ಅನೇಕ ಒಳ್ಳೆಯ ಸಲಹೆ ಕೂಡ ಕೊಟ್ಟರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...