ಇವತ್ತು ದಿಡೀರ್ ಅಂತ ಸೊರಬದ ವಾಮದೇವ ಗೌಡರು ಬಂದರು ಅವರು ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟ ಸಮಿತಿ ಅಧ್ಯಕ್ಷರು ಹಾಲಿ ಹಿರೇಮಠರ ರಾಜ್ಯ ಬ್ರಷ್ಟಾಚಾರಿ ವಿರೋದಿ ಆಂದೋಲನದ ಉಪಾಧ್ಯಕ್ಷರು,
ಚಹಾ ಸ್ವೀಕರಿಸುತ್ತಾ "ದಂಡಾವತಿ ಹೋರಾಟದ ಸಂದಭ೯ದಲ್ಲಿ ಅರುಣ್ ಪ್ರಸಾದ್ ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲಿಸಿ ನಿತ್ಯದ ಊಟದ ವೆಚ್ಚಕ್ಕಾಗಿ ದೇಣಿಗೆ ನೀಡಿದ್ದನ್ನ ಮರೆತಿಲ್ಲ ನಮ್ಮ ಖಚು೯ ವೆಚ್ಚದ ಪಟ್ಟಿ ನೋಡಿದಾಗಲೆಲ್ಲ ಅವರು ನೆನಪಾಗುತ್ತಾರೆ" ಅಂದರು ನಾನು ಮರೆತು ಬಿಟ್ಟಿದ್ದೆ ಆ ದಿನ ಸಾಗರದಿಂದ ನಾನು, ಕಾಗೋಡು ಹೋರಾಟದ ನೇತಾರರಾದ ಗಣಪತಿಯಪ, ತೀ.ನಾ.ಶ್ರೀನಿವಾಸ್, ಮಾಜಿ ಶಾಸಕರಾದ ಸ್ವಾಮಿ ರಾವ್, ಕಲ್ಲೂರು ಮೇಘರಾಜ್, ಪತ್ರಕತ೯ರಾದ ಎಂ.ರಾಘು, ಚಾವಾ೯ಕ ರಾಘು ಮತ್ತು ಗೆಳೆಯರು ದಂಡಾವತಿ ಹೋರಾಟದ ಸ್ಥಳಕ್ಕೆ ಹೋಗಿದ್ದೆವು ಅದರ ಹಿಂದಿನ ದಿನ ಗೌರಿ ಗಣಪತಿ ಹಬ್ಬ ಇತ್ತು, ಹೋರಾಟಗಾರರು ಮಣ್ಣಿನ ಗಣಪತಿ ವಿಗ್ರಹ ಪೂಜೆ ಮಾಡಿ ನಿಯೋಜಿತ ಆಣೆಕಟ್ಟು ಪ್ರದೇಶದ ನೀರಲ್ಲಿ ವಿಸಜ೯ನೆ ಮಾಡಿದ್ದರು.
ಮಳೆಗಾಲದ ಆ ದಿನದಲ್ಲೇ ದಂಡಾವತಿ ನದಿ ಸಣ್ಣ ಹಳ್ಳದಂತೆ ಇತ್ತು, ಹಿಂದಿನ ದಿನ ವಿಸಜ೯ನೆ ಮಾಡಿದ ಗಣಪತಿಯೇ ಮುಳುಗಿರಲಿಲ್ಲ ಆಗ ಗಣಪತಿಯಪನವರು ಕೈ ಮುಗಿದು ಮಹಾಗಣಪತಿ ಇಲ್ಲಿ ದಂಡಾವತಿ ಆಣೆಕಟ್ಟು ಕಟ್ಟದಂತೆ ನೋಡಿಕೊಂಡು ಈ ರೈತರ ಹೋರಾಟಕ್ಕೆ ಜಯ ತಂದು ಕೊಡು ಅಂತ ಬೇಡಿಕೊಂಡರು, ರೈತ ಪರ ಹೋರಾಟಗಾರ ಗಣಪತಿಯಪರ ಪ್ರಾಥ೯ನೆಯಂತೆ ಮತ್ತು ವಾಮದೇವ ಗೌಡರ ಪ್ರಾಮಾಣಿಕ ಹೋರಾಟದಿಂದ ದಂಡಾವತಿ ಆಣೆಕಟ್ಟು ನಿಮಾ೯ಣ ಆಗಿಲ್ಲ ಇದೆಲ್ಲ ಇವತ್ತು ನೆನಪಾಯಿತು.
ವಾಮದೇವ ಗೌಡರು ಆ ಹೋರಾಟದ ದಿನದಲ್ಲಿ ಸಿದ್ದರಾಮಯ್ಯ ನಮ್ಮ ಜೊತೆ ಕುಳಿತು ನಮ್ಮ ಹೋರಾಟ ಬೆಂಬಲಿಸಿದ್ದರು ಈಗ ಮುಖ್ಯಮಂತ್ರಿ ಆಗಿದ್ದಾರೆ ಆದರೆ ಸಂಪುಟ ಸಭೆಯಲ್ಲಿ ಈವರೆಗೆ ಆಣೆಕಟ್ಟು ಕಟ್ಟಬೇಕೆಂಬ ಹಿಂದಿನ ಸಕಾ೯ರದ ನಿಣ೯ಯ ಮಾತ್ರ ಎಷ್ಟು ಸಾರಿ ನೆನಪಿಸಿದರೂ ರದ್ದು ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಇಳಿ ವಯಸ್ಸಲ್ಲೂ ವಾಮದೇವ ಗೌಡರ ಹೋರಾಟದ ಕಿಚ್ಚು ಕೊಂಚವೂ ಕಡಿಮೆ ಆಗಿಲ್ಲ ಅವರಿಗೆ ದೇವರು ಆರೋಗ್ಯ ಆಯಸ್ಸು ಮತ್ತು ಯಶಸ್ಸು ನೀಡಲಿ ಎಂದು ಹಾರೈಸುತ್ತೇನೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment