ಕೊಡಚಾದ್ರಿ ಅಂದರೆ ದಕ್ಷಿಣ ಭಾರತದ ಎವರೆಸ್ಟ್ ಅಂತೆಲ್ಲ ಹೊಗಳುತ್ತಾರೆ. ಇಲ್ಲಿನ ಚಿತ್ರ ಮೂಲದ ಗವಿಯಲ್ಲಿ ಶಂಕರಾಚಾಯ೯ರು ತಪಸ್ಸು ಮಾಡಿದರೆಂಬ ನಂಬಿಕೆ, ಮೂಕಾಸುರ ಎಂಬ ರಕ್ಕಸ ನನ್ನ ಈ ಬೆಟ್ಟದಲ್ಲಿ ದೇವಿ ಹತ್ಯೆ ಮಾಡಿ ಮೂಕಾಂಬಿಕೆ ಆದಳೆಂಬ ಪ್ರತೀತಿಗಳ ನಡುವೆ ಇಲ್ಲಿನ ಮೂಲ ಮೂಕಾಂಬಿಕ ದೇವಸ್ಥಾನದಲ್ಲಿ ಗುಪ್ತವಾಗಿ ನಡೆಯುವ ಶಕ್ತಿ ಪೂಜೆ, ಲೋಹದ ಎತ್ತರದ ಕಂಬದ ರಹಸ್ಯ, ಸೂಯೋ೯ದಯ, ಸೂಯಾ೯ಸ್ತ. ಬೇಸಿಗೆಯಲ್ಲಿನ ತಂಪು ವಾತಾವರಣ, ಚಾರಣಿಗರಿಗೆ ಪ್ರಶಸ್ತವಾದ ಸ್ಥಳ ನಮ್ಮ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿದೆ.
ನನಗೆ ಏಕಾ೦ತ ವಾಸ ಬೇಕಾದಾಗ ಜೋಗ ಜಲಪಾತ, ಮುಡೇ೯ಶ್ವರ ಮತ್ತು ಕೊಡಚಾದ್ರಿಯಲ್ಲಿ ಹೆಚ್ಚು ದಿನ ಕಳೆಯುತ್ತೇನೆ.
2006ರಲ್ಲಿ ಅಂಬಾಸಡರ್ ಕಾರಲ್ಲಿ ಹಿರಿಯರಾದ ಗನ್ನಿಸಾಬರನ್ನ ಕರೆದುಕೊಂಡು ಹೊರಟಿದ್ದೆ, ರಾಮು ಎಂಬ ಕುಣುಬಿ ಗುಡ್ಡಗಾಡು ಸಮುದಾಯದ ಡೈವರ್ ಗೆ ಈವರೆಗೆ ಅಂಬಾಸಡರ ಕಾರು ಕೊಡಚಾದ್ರಿ ತುದಿಗೆ ಹೋಗಿಲ್ಲ,4 ವೀಲ್ ಡೈವ್ ನ ಜೀಪ್ ಬಿಟ್ಟರೆ ಮೂಲ ಮೂಕಾ೦ಬಿಕ ದೇವಾಲಯದ ಅಚ೯ಕರು ಸ್ಥಳಿಯ ಪಂಚಾಯಿತಿ ಸದಸ್ಯ ನಾಗೇಂದ್ರ ಜೋಗಿಯ ಮಾರುತಿ ಮಾತ್ರ ಹೋಗಿದೆ ನೀನು ಪ್ರಯತ್ನ ಮಾಡು ಅಂದೆ. ಅಂಬಾಸಡರ್ ಕ್ರಾ೦ಕಿಸ್ ತುಂಬಾ ಕೆಳಗೆ ಇರುತ್ತೆ, ಇಲ್ಲಿ ರಸ್ತೆ ಸರಿ ಇಲ್ಲ ಕಲ್ಲು ತಾಗಿದರೆ ಇಂಜಿನ್ ಆಯಿಲ್ ಸೋರಿ ಕಾರು ಇಲ್ಲಿ ನಿಲ್ಲಿಸ ಬೇಕಾಗುತ್ತೆ ಅಂತ ಆತನ ಆತಂಕ ವ್ಯಕ್ತಪಡಿಸಿದ.
ಆಗಷ್ಟ ಮೆಕ್ಕಾ ಯಾತ್ರೆ ನನ್ನ ಸೇವೆಯಲ್ಲಿ ಮುಗಿಸಿ ಬಂದಿದ್ದ ವಯೋವೃದ್ದರಾದ ಗನೀಸಾಹೇಬರು ತಮ್ಮ ಪ್ರಾಯದಲ್ಲಿ ಅಂದರೆ 1950ರಲ್ಲಿ ವೈದ್ಯಕೀಯ ಇಲಾಖೆಯಲ್ಲಿದ್ದಾಗ DDT ಸಿಂಪಡಿಸಲು ಕೊಡಚಾದ್ರಿ ಬೆಟ್ಟಕ್ಕೆ ನಡೆದು ಹೋಗಿದ್ದು ನೆನಪು ಮಾಡಿದರು. ಏನೇ ತೊಂದರೆ ಆದರೂ ನನ್ನ ಜವಾಬ್ದಾರಿ ನಡೀ ಅಂತ ಚಾಲಕ ರಾಮು ಗೆ ದೈಯ೯ ನೀಡಿ ಪ್ರಯಾಣ ಪ್ರಾರಂಬಿಸಿದವು.
ಪ್ರಾರಂಭದ ದಾರಿ ಮಳೆ ಬಂದು ಕೆಸರಾಗಿತ್ತು ಕಾರಿಳಿದು ದೂಡುತ್ತಾ ಜಾರುತ್ತಾ ಅಂತೂ ಒಂದು ಹಂತ ಮುಟ್ಟಿ ವಿರಾಮ ತೆಗೆದುಕೊಂಡು ಮೊಸರನ್ನ ಖಾಲಿ ಮಾಡಿದೆವು, ನಂತರ ರಸ್ತೆ ಕಲ್ಲಿನ ಗಣಿ ಇದ್ದ೦ತೆ ಕಾರಿನ ಕ್ರಾಂಕಿಸಗೆ ತಾಗದ೦ತೆ ಒಯ್ಯ ವ ಕಷ್ಟದ ಪ್ರಯಾಣ ರಾಮು ಸ್ಟೇರಿಂಗ್ ಹಿಡಿದು ಕಾರಲ್ಲಿ ಕುಳಿತಿದ್ದರೆ ನಾನು ಗನ್ನಿಸಾಹೇಬರು ರಸ್ತೆ ಸರಿ ಮಾಡಿಕೊಡುತ್ತಾ, ಎಲ್ಲೆಲ್ಲಿ ಕಲ್ಲು ತಾಗದಂತೆ ಮಾಹಿತಿ ನೀಡುತ್ತಾ ಅಂತಿಮವಾಗಿ ಕೊಡಚಾದ್ರಿಯ ಪ್ರವಾಸಿ ಮಂದಿರ ತಲುಪಿ ತಣ್ಣನೆ ನೀರಲ್ಲಿ ಸ್ನನಾ ಮಾಡಿ ಮೇಟಿ ರಾಜೇಂದ್ರ ಶೆಟ್ಟಿ ನೀಡಿದ ಚಹ ಕುಡಿಯುವಾಗ ಅವರು ನಿಮ್ಮದೆ ಮೊದಲ ಅಂಬಾಸಡರ ಕಾರು ಬೆಟ್ಟಕ್ಕೆ ಮೊದಲು ಬಂದಿದ್ದು ಅಂದರು.
ಮರುದಿನ ಮುಂಗಾರು ಮಳೆ ಯೋಗರಾಜ ಭಟ್ಟರು ತಮ್ಮ ಕಾರು ಕೊಡಚಾದ್ರಿ ಬುಡದಲ್ಲಿ ಬಿಟ್ಟು ಬಾಡಿಗೆ ಜೀಪಿನಲ್ಲಿ ತಮ್ಮ ಎರಡನೆ ಸಿನಿಮಾ ತಯಾರಿ ಲೋಕೆಷನ್ಗೆ ಬಂದವರು ನಮ್ಮ ಕಾರು ನೋಡಿ ಆಶ್ಚಿಯ೯ ಪಟ್ಟಿದ್ದರು.
ಒಂದಾರು ತಿಂಗಳ ಹಿಂದೆ ಗೆಳೆಯರೊಂದಿಗೆ ಕೊಡಚಾದ್ರಿಗೆ ಹೋದಾಗ ನಮ್ಮ ಗೆಳೆಯರು ತಂದಿದ್ದ ದುಬಾರಿ ಕಾರು ಬುಡದಲ್ಲಿ ಬಿಟ್ಟು ಜೀಪ್ ಬಾಡಿಗೆ ಗೆ ತೆಗೆದುಕೊಂಡು ಮೇಲೆ ಹೋಗುವಾಗ ಡೈವರ್ ಗೆ ಕೇಳಿದೆ ಈ ರಸ್ತೆಯಲ್ಲಿ ಕಾರು ಹೋಗುವುದಿಲ್ಲವಾ? ಅಂತ, ನೋಡಿದರಲ್ಲ ರಸ್ತೆ ಜೀಪ್ ಹೋಗೋದೆ ಕಷ್ಟ ಅಂದ ಅವರು ಐದಾರು ವಷ೯ದ ಹಿಂದೆ ಒಂದು ಅಂಬಾಸಡರ್ ಗುಡ್ಡ ಹತ್ತಿದ್ದು ದಾಖಲೆ ಬಿಟ್ಟರೆ ಯಾವ ಕಾರು ಹತ್ತಿಲ್ಲ ಅಂದರು.
ಅದು ನಮ್ಮದೆ ಅಂಬಾಸಡರ್ ಕಾರು, ನಮ್ಮದೆ ದಾಖಲೆ ಎನ್ನೋದು ನನಗೆ ಹೆಮ್ಮೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment