ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.
ಇವರನ್ನ ಯಾಕೆ ಸ್ಮರಿಸುತ್ತೇನೆಂದರೆ ನನ್ನ ಬಾಲ್ಯದ ಅನೇಕ ನೆನಪು, ನನ್ನ ತಂದೆಯ ಆತ್ಮೀಯ ಗೆಳೆಯರು ಹಾಗೂ ನಮ್ಮ ಮನೆತನಕ್ಕೆ ಕೃಷಿ ಜಮೀನು ನೀಡಿದ ದಾನಿಗಳು.
ನಮ್ಮ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಶ್ರೀಮತಿ ಸರಸಮ್ಮ ಸ್ಮರಣಾಥ೯ ಆನಂದಪುರಂನಲ್ಲಿ ನಾನು ಮತ್ತು ನನ್ನ ಸಹೋದರ ಕೆ.ನಾಗರಾಜ್ ನಿಮಿ೯ಸಿರುವ "ಕೃಷ್ಣ ಸರಸ" ಕನ್ವೆನ್ಷನ್ ಹಾಲ್ ಉದ್ಘಾಟನೆ ಸಂದಭ೯ದಲ್ಲಿ ನಮ್ಮ ತಂದೆಯ ಗೆಳೆಯರಿಗೆಲ್ಲ ಮುರುಘಾಮಠದ ಶ್ರೀ ನಿರಂಜನ ಜಗದ್ಗುರು ಮಲ್ಲಿಕಾಜು೯ನ ಮಹಾಸ್ವಾಮಿಯಿ೦ದ ಸನ್ಮಾನ ಮಾಡಿಸಿದ್ದೆ, ಅವತ್ತು ಶ್ರೀಯೋಮ ಕೇಶಗೌಡರಿಗೂ ಸನ್ಮಾನ ವಿತ್ತು.
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಗೌಡರನ್ನ ದಾನ ಕೊಡ ಬೇಕಾದ ಅನಿವಾಯ೯ತೆಗೆ ರಿಪ್ಪನ್ಪೇಟೆ ಸಮೀಪದ ದೊಡ್ಡ ಶ್ರೀಮಂತ ಮನೆತನ ತಯಾರಾಗುತ್ತೆ (ಈಗೆಲ್ಲ ಇದು ಮೌಡ್ಯ, ನಮ್ಮ ವಿದ್ಯಾದೇವತೆಯೆ ಮೂಲ ನಕ್ಷತ್ರದಲ್ಲಿ ಹುಟ್ಟಿದ್ದು ಅಂತಾರೆ ) ಆಗ ಅವರಿಗೆ ಸರಿಸಮಾನ ಎನ್ನಿಸಿದ ಆನಂದಪುರ ಸಮೀಪದ ಬಸವನಕೊಪ್ಪದ ಶ್ರೀ ಚನ್ನವೀರಪಗೌಡರಿಗೆ ದಾನ ಕೊಡುತ್ತಾರೆ, ಅವರು ಇವರನ್ನ ಸಾಕಿ ಮಗಳನ್ನ ಕೊಟ್ಟು ಮದುವೆ ಮಾಡಿ ಹಿರಿಯರಕದ ಅವರ ಜಮೀನು ಕೊಡುತ್ತಾರೆ.
ಆ ಕಾಲದಲ್ಲಿ ಲಾರಿ ಖರೀದಿಸುವುದು ಸಣ್ಣ ವಿಷಯವಲ್ಲ ಗೌಡರು ಲಾರಿ ಇಡುತ್ತಾರೆ, ಓಡಾಡಲು ರಾಜ್ ದೂತ್ ಬೈಕ್, ಆತ್ಮರಕ್ಷಣೆಗೆ ಡಬಲ್ ಬ್ಯಾರೇಲ್ ತೋಟಾ ಬಂದೂಕ್, ರಿವಾಲಾವರ್, ಸದಾ ಸೇಯಲು ಗೋಲ್ಡ ಪ್ಲೇಕ್ ಸಿಗರೇಟು ಅಪರೂಪಕ್ಕೆ ಬಿಯರ್ ಕುಡಿಯುತ್ತಿದ್ದರು, ಇದೆಲ್ಲ ಇಲ್ಲಿ ಸಿಗುತ್ತಿರಲಿಲ್ಲ ಶಿವಮೊಗ್ಗದಿಂದ ತರಿಸಿಕೊಳ್ಳುತ್ತಿದ್ದರು.
ಅವರ ಸ್ವಂತ ದುಡಿಮೆಯಲ್ಲಿ ಆಸ್ತಿ ಮಾಡಿದರು. ಏನೇ ಆದರೂ ಅವರಲ್ಲಿ ಮಾನವಿಯತೆ ಸದಾ ಇತ್ತು.ಈಗಲೂ ಅವರು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಹಾಯ ಮಾಡುತ್ತಾರೆ ಎಲ್ಲರಿಗೂ.
ನಮ್ಮ ತಂದೆ ವೈದ್ಯರಾಗಿ ಅವರಿಗೂ ಚಿಕಿತ್ಸೆ ನೀಡುತ್ತಿದ್ದರು ಆಗೆಲ್ಲ ಹತ್ತಾರು ಕಿಲೋಮೀಟರ್ ಸೈಕಲ್ಲಿನಲ್ಲೇ ಹೋಗಬೇಕಾಗಿತ್ತು; ಗೌಡರು ನಮ್ಮ ತಂದೆಗೆ ಆ ಕಾಲದಲ್ಲಿ ಹೊಸದಾಗಿ ಬಂದ ಸುವೇಗ ಮೊಪೆಡ್ ಖರೀದಿಸಲು ಸಹಾಯ ಮಾಡುತ್ತಾರೆ ಆಗ ಅದನ್ನ ಅವರು,ನಮ್ಮ ತಂದೆ ಮತ್ತು ನಾಯಕ್ ಎಂಬ ಬತ್ತದ ವ್ಯಾಪಾರಿಗಳು ಗೋವಾಕ್ಕೆ ಹೋಗಿ ತಂದಿದ್ದು ನಮ್ಮ ಊರಲ್ಲಿ ಹತ್ತಾರು ವರುಷ ದೊಡ್ಡ ಸುದ್ದಿ.
ನಮ್ಮ ಮನೆತನಕ್ಕೆ ಕೃಷಿ ಭೂಮಿ ಇರಲಿಲ್ಲ ನಮ್ಮ ಊರ ಸಮೀಪದಲ್ಲಿ ಗೌಡರ 3 ಎಕರೆ ಜಮೀನು ಇತ್ತು ಅದನ್ನ ನಮ್ಮ ತಂದೆಗೆ ಕಡಿಮೆ ದರದಲ್ಲಿ ಅಂದರೆ ಹೆಚ್ಚು ಕಡಿಮೆ ಉಚಿತವಾಗಿಯೇ ನೀಡಿದಂತೆ ನೀಡಿ ನಮಗೆ ಕೃಷಿ ಭೂಮಿ ಮಾಲಿಕತ್ವ ನೀಡಿದರು.
ನಂತರ ಆ ಜಮೀನು ನಮ್ಮ ಅಕ್ಕ ಅಂತರ್ ಜಾತಿ ವಿವಾಹವಾದಾಗ ಅವಳ ಜೀವನ ಭದ್ರತೆಗೆ ಇರಲಿ ಎಂದು ಅವಳಿಗೆ ನಮ್ಮ ತಂದೆ ನೀಡಿದರು.
ಈಗಲೂ ಸಂತೃಪ್ತ ಜೀವನ ಮಾಡುತ್ತಿರುವ ಗೌಡರು ಆಸ್ತಿಯ ನಿವ೯ಹಣೆ ಮಕ್ಕಳಿಗೆ ಸಮಾನವಾಗಿ ನೀಡಿ ನಿವೃತ್ತ ಜೀವನ ಮಾಡುತ್ತಿದ್ದಾರೆ.ಮಕ್ಕಳು ತಂದೆಯ ಗೌರಕ್ಕೆ ಚುತಿ ಬಾರದಂತೆ ಯೋಗ್ಯ ರೀತಿಯಲ್ಲಿ ಜೀವನ ನಡೆಸಿದ್ದಾರೆ.
ಆ ಕಾಲದಲ್ಲಿ ಅತ್ಯಂತ ದೈಯ೯ವಂತರೆಂಬ ಹೆಸರಿತ್ತು ಗೌಡರಿಗೆ, ಕಾನೂನು ಹೋರಾಟದಲ್ಲೂ ಅವರದ್ದು ಎತ್ತಿದ ಕೈ ಹಾಗೆ ದಾನ ದಮ೯ದಲ್ಲೂ.
ಇವರು ಇವರ ಕುಟುಂಬಕ್ಕೆ ದೇವರು ಸದಾ ನೆಮ್ಮದಿ ಮತ್ತು ಸಕಲ ಐಶ್ವಯ೯ ನೀಡಲಿ ಎಂದು ನಾವೆಲ್ಲ ಸದಾ ಹಾರೈಸುತ್ತೇವೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment