ಇವರು ಯೋಮಕೇಶ್ವರಪ್ಪ ಗೌಡರು ಹಾಲಿ ವಾಸ ಹಿರೆಯರಕ ಎಂಬ ಗೌತಮಪುರ ಗ್ರಾಮ ಪಂಚಾಯತ ಗೆ ಸೇರಿದ ಹಳ್ಳಿಯಲ್ಲಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರO ಹೋಬಳಿ.
ಇವರನ್ನ ಯಾಕೆ ಸ್ಮರಿಸುತ್ತೇನೆಂದರೆ ನನ್ನ ಬಾಲ್ಯದ ಅನೇಕ ನೆನಪು, ನನ್ನ ತಂದೆಯ ಆತ್ಮೀಯ ಗೆಳೆಯರು ಹಾಗೂ ನಮ್ಮ ಮನೆತನಕ್ಕೆ ಕೃಷಿ ಜಮೀನು ನೀಡಿದ ದಾನಿಗಳು.
ನಮ್ಮ ತಂದೆ ಎಸ್.ಕೃಷ್ಣಪ್ಪ ಮತ್ತು ನನ್ನ ತಾಯಿ ಶ್ರೀಮತಿ ಸರಸಮ್ಮ ಸ್ಮರಣಾಥ೯ ಆನಂದಪುರಂನಲ್ಲಿ ನಾನು ಮತ್ತು ನನ್ನ ಸಹೋದರ ಕೆ.ನಾಗರಾಜ್ ನಿಮಿ೯ಸಿರುವ "ಕೃಷ್ಣ ಸರಸ" ಕನ್ವೆನ್ಷನ್ ಹಾಲ್ ಉದ್ಘಾಟನೆ ಸಂದಭ೯ದಲ್ಲಿ ನಮ್ಮ ತಂದೆಯ ಗೆಳೆಯರಿಗೆಲ್ಲ ಮುರುಘಾಮಠದ ಶ್ರೀ ನಿರಂಜನ ಜಗದ್ಗುರು ಮಲ್ಲಿಕಾಜು೯ನ ಮಹಾಸ್ವಾಮಿಯಿ೦ದ ಸನ್ಮಾನ ಮಾಡಿಸಿದ್ದೆ, ಅವತ್ತು ಶ್ರೀಯೋಮ ಕೇಶಗೌಡರಿಗೂ ಸನ್ಮಾನ ವಿತ್ತು.
ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಗೌಡರನ್ನ ದಾನ ಕೊಡ ಬೇಕಾದ ಅನಿವಾಯ೯ತೆಗೆ ರಿಪ್ಪನ್ಪೇಟೆ ಸಮೀಪದ ದೊಡ್ಡ ಶ್ರೀಮಂತ ಮನೆತನ ತಯಾರಾಗುತ್ತೆ (ಈಗೆಲ್ಲ ಇದು ಮೌಡ್ಯ, ನಮ್ಮ ವಿದ್ಯಾದೇವತೆಯೆ ಮೂಲ ನಕ್ಷತ್ರದಲ್ಲಿ ಹುಟ್ಟಿದ್ದು ಅಂತಾರೆ ) ಆಗ ಅವರಿಗೆ ಸರಿಸಮಾನ ಎನ್ನಿಸಿದ ಆನಂದಪುರ ಸಮೀಪದ ಬಸವನಕೊಪ್ಪದ ಶ್ರೀ ಚನ್ನವೀರಪಗೌಡರಿಗೆ ದಾನ ಕೊಡುತ್ತಾರೆ, ಅವರು ಇವರನ್ನ ಸಾಕಿ ಮಗಳನ್ನ ಕೊಟ್ಟು ಮದುವೆ ಮಾಡಿ ಹಿರಿಯರಕದ ಅವರ ಜಮೀನು ಕೊಡುತ್ತಾರೆ.
ಆ ಕಾಲದಲ್ಲಿ ಲಾರಿ ಖರೀದಿಸುವುದು ಸಣ್ಣ ವಿಷಯವಲ್ಲ ಗೌಡರು ಲಾರಿ ಇಡುತ್ತಾರೆ, ಓಡಾಡಲು ರಾಜ್ ದೂತ್ ಬೈಕ್, ಆತ್ಮರಕ್ಷಣೆಗೆ ಡಬಲ್ ಬ್ಯಾರೇಲ್ ತೋಟಾ ಬಂದೂಕ್, ರಿವಾಲಾವರ್, ಸದಾ ಸೇಯಲು ಗೋಲ್ಡ ಪ್ಲೇಕ್ ಸಿಗರೇಟು ಅಪರೂಪಕ್ಕೆ ಬಿಯರ್ ಕುಡಿಯುತ್ತಿದ್ದರು, ಇದೆಲ್ಲ ಇಲ್ಲಿ ಸಿಗುತ್ತಿರಲಿಲ್ಲ ಶಿವಮೊಗ್ಗದಿಂದ ತರಿಸಿಕೊಳ್ಳುತ್ತಿದ್ದರು.
ಅವರ ಸ್ವಂತ ದುಡಿಮೆಯಲ್ಲಿ ಆಸ್ತಿ ಮಾಡಿದರು. ಏನೇ ಆದರೂ ಅವರಲ್ಲಿ ಮಾನವಿಯತೆ ಸದಾ ಇತ್ತು.ಈಗಲೂ ಅವರು ಬಡವ ಬಲ್ಲಿದ ಎಂಬ ಭೇದವಿಲ್ಲದೆ ಸಹಾಯ ಮಾಡುತ್ತಾರೆ ಎಲ್ಲರಿಗೂ.
ನಮ್ಮ ತಂದೆ ವೈದ್ಯರಾಗಿ ಅವರಿಗೂ ಚಿಕಿತ್ಸೆ ನೀಡುತ್ತಿದ್ದರು ಆಗೆಲ್ಲ ಹತ್ತಾರು ಕಿಲೋಮೀಟರ್ ಸೈಕಲ್ಲಿನಲ್ಲೇ ಹೋಗಬೇಕಾಗಿತ್ತು; ಗೌಡರು ನಮ್ಮ ತಂದೆಗೆ ಆ ಕಾಲದಲ್ಲಿ ಹೊಸದಾಗಿ ಬಂದ ಸುವೇಗ ಮೊಪೆಡ್ ಖರೀದಿಸಲು ಸಹಾಯ ಮಾಡುತ್ತಾರೆ ಆಗ ಅದನ್ನ ಅವರು,ನಮ್ಮ ತಂದೆ ಮತ್ತು ನಾಯಕ್ ಎಂಬ ಬತ್ತದ ವ್ಯಾಪಾರಿಗಳು ಗೋವಾಕ್ಕೆ ಹೋಗಿ ತಂದಿದ್ದು ನಮ್ಮ ಊರಲ್ಲಿ ಹತ್ತಾರು ವರುಷ ದೊಡ್ಡ ಸುದ್ದಿ.
ನಮ್ಮ ಮನೆತನಕ್ಕೆ ಕೃಷಿ ಭೂಮಿ ಇರಲಿಲ್ಲ ನಮ್ಮ ಊರ ಸಮೀಪದಲ್ಲಿ ಗೌಡರ 3 ಎಕರೆ ಜಮೀನು ಇತ್ತು ಅದನ್ನ ನಮ್ಮ ತಂದೆಗೆ ಕಡಿಮೆ ದರದಲ್ಲಿ ಅಂದರೆ ಹೆಚ್ಚು ಕಡಿಮೆ ಉಚಿತವಾಗಿಯೇ ನೀಡಿದಂತೆ ನೀಡಿ ನಮಗೆ ಕೃಷಿ ಭೂಮಿ ಮಾಲಿಕತ್ವ ನೀಡಿದರು.
ನಂತರ ಆ ಜಮೀನು ನಮ್ಮ ಅಕ್ಕ ಅಂತರ್ ಜಾತಿ ವಿವಾಹವಾದಾಗ ಅವಳ ಜೀವನ ಭದ್ರತೆಗೆ ಇರಲಿ ಎಂದು ಅವಳಿಗೆ ನಮ್ಮ ತಂದೆ ನೀಡಿದರು.
ಈಗಲೂ ಸಂತೃಪ್ತ ಜೀವನ ಮಾಡುತ್ತಿರುವ ಗೌಡರು ಆಸ್ತಿಯ ನಿವ೯ಹಣೆ ಮಕ್ಕಳಿಗೆ ಸಮಾನವಾಗಿ ನೀಡಿ ನಿವೃತ್ತ ಜೀವನ ಮಾಡುತ್ತಿದ್ದಾರೆ.ಮಕ್ಕಳು ತಂದೆಯ ಗೌರಕ್ಕೆ ಚುತಿ ಬಾರದಂತೆ ಯೋಗ್ಯ ರೀತಿಯಲ್ಲಿ ಜೀವನ ನಡೆಸಿದ್ದಾರೆ.
ಆ ಕಾಲದಲ್ಲಿ ಅತ್ಯಂತ ದೈಯ೯ವಂತರೆಂಬ ಹೆಸರಿತ್ತು ಗೌಡರಿಗೆ, ಕಾನೂನು ಹೋರಾಟದಲ್ಲೂ ಅವರದ್ದು ಎತ್ತಿದ ಕೈ ಹಾಗೆ ದಾನ ದಮ೯ದಲ್ಲೂ.
ಇವರು ಇವರ ಕುಟುಂಬಕ್ಕೆ ದೇವರು ಸದಾ ನೆಮ್ಮದಿ ಮತ್ತು ಸಕಲ ಐಶ್ವಯ೯ ನೀಡಲಿ ಎಂದು ನಾವೆಲ್ಲ ಸದಾ ಹಾರೈಸುತ್ತೇವೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment