ಟಿ.ಆರ್.ಕೃಷ್ಣಪ್ಪ ಶಿವಮೊಗ್ಗ ಜಿಲ್ಲೆಯ ರಿಪನ್ ಪೇಟೆ ನಿವಾಸಿ, ಕ್ರೀಡಾಪಟು, ಜನಪರ ಹೊರಾಟಗಾರರು. ಸಾಮಾನ್ಯ ಜನರ ಸಮಸ್ಯೆ ಬಗೆಹರಿಸಲು ಸದಾ ಶ್ರಮಿಸುತ್ತಾರೆ, ಸಂಬಂದ ಪಟ್ಟಅಧಿಕಾರಿಗಳಿಗೆ ಒಳ್ಳೆಯ ರೀತಿಯಲ್ಲಿ ವಿವರಿಸಿ ಮನವಿ ಮಾಡುತ್ತಾರೆ ಆದರೆ ಲಂಚಕೋರ ಅಧಿಕಾರಿಗಳು ಇವರ ಮನವಿ ನಿಲ೯ಕ್ಷಿಸಿದರೆ ಇವರು ಹಮ್ಮಿಕೊಳ್ಳುವ ಹೋರಾಟ ಮಾತ್ರ ವಿಚಿತ್ರ ಮತ್ತು ಪರಿಣಾಮಕಾರಿ. ಏಕೈಕ ವ್ಯಕ್ತಿ ಈ ರೀತಿ ಸಂಬOದ ಪಟ್ಟವರ ಕಣ್ಣು ತೆರೆಸಿ ಪರಿಹಾರ ಕೊಡಿಸಲು ಸದಾ ಮುಂದಿರುತ್ತಾರೆ. ಕೆಲವರಿಗೆ ಇವರ ಹೋರಾಟ ಐಲು ಅನ್ನಿಸಬಹುದು ಆದರೆ ಇವರ ಹೋರಾಟದಲ್ಲಿನ ಹೂರಣ ಸುಲಭವಾಗಿ ಜೀಣಿ೯ಸಿಕೊಳ್ಳಲಾರದ ನೈಜ ಸತ್ಯವಿರುತ್ತೆ. ಒಂದು ರೀತಿ ಇವರೊಬ್ಬ ಜನಸಾಮಾನ್ಯರ ಒಂಬಡ್ಸ್ ಮನ್.we like him and support his struggle.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment