ಹೊನ್ನೆ ಮರಡು ಸಾಗರ ತಾಲ್ಲಕಿನ ಶರಾವತಿ ನದಿಯ ಹಿನೀರಿನ ಸಣ್ಣ ಪ್ರದೇಶ ಆದರೆ ಅದೀಗ ವಿಶ್ವಮಾನ್ಯ ಪಡೆದಿದೆ, ಅಲ್ಲಿ ನೀರಿನ ಸಾಹಸ ಕ್ರೀಡೆಯ ತರಬೇತಿ, ಚಾರಣ, ಪರಿಸರ ಸಂರಕ್ಷಣೆಯ ನಿರಂತರ ಕಾಯ೯ಕ್ರಮ 25 ವಷ೯ದಿಂದ ನಿರಂತರ ನಡೆಯುತ್ತಿದೆ.
ಸ್ವಾಮಿ ಮತ್ತು ನಿಮಿಟೋ ದ೦ಪತಿಗಳು ವಿಶ್ವಮಟ್ಟದಲ್ಲಿ ವಿದೇಶಗಳಲ್ಲಿ ಇಂತಹ ಸಾಹಸ ಕಾಯ೯ಕ್ರಮದಲ್ಲಿ ಭಾಗವಹಿಸಿದ ಅನುಭವ ವಿಧ್ಯ ಪಡೆದವರು ಸನ್ಮಾನ್ಯ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಕಾ೯ರದ Explore India ಕಾಯ೯ಕ್ರಮದ ಉತ್ತೇಜನ ದಲ್ಲಿ ಹೊನ್ನೆ ಮರಡುವಿಗೆ ಬಂದವರು.
25 ವಷ೯ದಲ್ಲಿ ಇಲ್ಲಿನ ಪರಿಸರ ಕೊಂಚವು ಹಾಳಾಗದ೦ತೆ ಕಾಪಾಡಿದ್ದಾರೆ, ಶರಾವತಿ ನದಿಯ ಲಿಂಗನಮಕ್ಕಿಯಿಂದ ಶರಾವತಿ ನದಿ ಮೂಲದವರೆಗೆ ಸಣ್ಣ ದೋಣಿಗಳಲ್ಲಿ ನಡೆಸಿದ ಅಭಿಯಾನ, ಮಲೆನಾಡಿನ ದಟ್ಟ ಅರಣ್ಯದಲ್ಲಿ ನಡೆಸುವ ಚಾರಣಗಳು ಸಾವಿರಾರು ಯುವ ಉತ್ಸಾಹಿಗಳಿಗೆ ಪ್ರೇರಣೆಯಾಗಿದೆ.
ಇವರು ಈಗ ವಿಶ್ವಮಟ್ಟದ ಒಂದು ಕಾಯ೯ಕ್ರಮ ಹಮ್ಮಿಕೊಂಡಿದಾರೆ ಅದೇನೆಂದರೆ ಒಂದು ಸಾವಿರ ಜನ ಸೈಕಲ್ ನಲ್ಲಿ ಬೆಳಗಾಂನಿಂದ ಬೆಂಗಳೂರುವರೆಗೆ 22 ದಿನ ಪಶ್ಚಿಮ ಘಟ್ಟದಲ್ಲಿ ಯಾರೂ ನೋಡದ ಪ್ರದೇಶಗಳ ಸಂದಶಿ೯ಸುವ ದೊಡ್ಡ ಕಾಯ೯ಕ್ರಮ ಹಮ್ಮಿ ಕೊಂಡಿದ್ದಾರೆ ಕನಾ೯ಟಕ ರಾಜ್ಯದ ಅನೇಕ ಇಲಾಖೆಗಳು ಸಹಕಾರ ನೀಡಿದೆ.
ಮುಂದಿನ ವಷ೯ಗಳಲ್ಲಿ ಇದು ಅಂತರಾಷ್ಟ್ರ ಮಟ್ಟದ ದೊಡ್ಡ ಸಾಹಸ ಕಾಯ೯ಕ್ರಮ ಆಗಲಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment