ಹೊನ್ನೆ ಮರಡು ಸಾಗರ ತಾಲ್ಲಕಿನ ಶರಾವತಿ ನದಿಯ ಹಿನೀರಿನ ಸಣ್ಣ ಪ್ರದೇಶ ಆದರೆ ಅದೀಗ ವಿಶ್ವಮಾನ್ಯ ಪಡೆದಿದೆ, ಅಲ್ಲಿ ನೀರಿನ ಸಾಹಸ ಕ್ರೀಡೆಯ ತರಬೇತಿ, ಚಾರಣ, ಪರಿಸರ ಸಂರಕ್ಷಣೆಯ ನಿರಂತರ ಕಾಯ೯ಕ್ರಮ 25 ವಷ೯ದಿಂದ ನಿರಂತರ ನಡೆಯುತ್ತಿದೆ.
ಸ್ವಾಮಿ ಮತ್ತು ನಿಮಿಟೋ ದ೦ಪತಿಗಳು ವಿಶ್ವಮಟ್ಟದಲ್ಲಿ ವಿದೇಶಗಳಲ್ಲಿ ಇಂತಹ ಸಾಹಸ ಕಾಯ೯ಕ್ರಮದಲ್ಲಿ ಭಾಗವಹಿಸಿದ ಅನುಭವ ವಿಧ್ಯ ಪಡೆದವರು ಸನ್ಮಾನ್ಯ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಕಾ೯ರದ Explore India ಕಾಯ೯ಕ್ರಮದ ಉತ್ತೇಜನ ದಲ್ಲಿ ಹೊನ್ನೆ ಮರಡುವಿಗೆ ಬಂದವರು.
25 ವಷ೯ದಲ್ಲಿ ಇಲ್ಲಿನ ಪರಿಸರ ಕೊಂಚವು ಹಾಳಾಗದ೦ತೆ ಕಾಪಾಡಿದ್ದಾರೆ, ಶರಾವತಿ ನದಿಯ ಲಿಂಗನಮಕ್ಕಿಯಿಂದ ಶರಾವತಿ ನದಿ ಮೂಲದವರೆಗೆ ಸಣ್ಣ ದೋಣಿಗಳಲ್ಲಿ ನಡೆಸಿದ ಅಭಿಯಾನ, ಮಲೆನಾಡಿನ ದಟ್ಟ ಅರಣ್ಯದಲ್ಲಿ ನಡೆಸುವ ಚಾರಣಗಳು ಸಾವಿರಾರು ಯುವ ಉತ್ಸಾಹಿಗಳಿಗೆ ಪ್ರೇರಣೆಯಾಗಿದೆ.
ಇವರು ಈಗ ವಿಶ್ವಮಟ್ಟದ ಒಂದು ಕಾಯ೯ಕ್ರಮ ಹಮ್ಮಿಕೊಂಡಿದಾರೆ ಅದೇನೆಂದರೆ ಒಂದು ಸಾವಿರ ಜನ ಸೈಕಲ್ ನಲ್ಲಿ ಬೆಳಗಾಂನಿಂದ ಬೆಂಗಳೂರುವರೆಗೆ 22 ದಿನ ಪಶ್ಚಿಮ ಘಟ್ಟದಲ್ಲಿ ಯಾರೂ ನೋಡದ ಪ್ರದೇಶಗಳ ಸಂದಶಿ೯ಸುವ ದೊಡ್ಡ ಕಾಯ೯ಕ್ರಮ ಹಮ್ಮಿ ಕೊಂಡಿದ್ದಾರೆ ಕನಾ೯ಟಕ ರಾಜ್ಯದ ಅನೇಕ ಇಲಾಖೆಗಳು ಸಹಕಾರ ನೀಡಿದೆ.
ಮುಂದಿನ ವಷ೯ಗಳಲ್ಲಿ ಇದು ಅಂತರಾಷ್ಟ್ರ ಮಟ್ಟದ ದೊಡ್ಡ ಸಾಹಸ ಕಾಯ೯ಕ್ರಮ ಆಗಲಿದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment