Skip to main content

Blog number 1580. ಜಂಪಿಂಗ್ ಚಿಕನ್ ಹೆಸರಲ್ಲಿ ಸ್ಟಾರ್ ಹೋಟೆಲ್ ಗಳಲ್ಲಿ ವಿದೇಶಿ ಪ್ರವಾಸಿಗರಿಗೆ ತಯಾರಾಗುವ ಪಶ್ಚಿಮ ಘಟ್ಟದ ಬುಲ್ ಪ್ರಾಗ್ ತೊಡೆಗಳ ಸೂಪ್ ಮತ್ತು ಪ್ರೈ.

#ಪಶ್ಚಿಮಘಟ್ಟದ_ಕಪ್ಪೆಗಳಿಗೆ_ಭಾರೀ_ಬೇಡಿಕೆ

#ಅರಣ್ಯಇಲಾಖೆ_ಈ_ಕಪ್ಪೆ_ಸಾಗಾಟಕ್ಕೆ_ನಿರ್ಬಂದ_ವಿದಿಸಿದೆ

#ಜಂಪಿಂಗ್_ಚಿಕನ್_ಹೆಸರಲ್ಲಿ_ಸ್ಟಾರ್_ಹೋಟೆಲಗಳಲ್ಲಿ_ಲಭ್ಯವಿದೆ.

#ದೊಡ್ಡ_ಗಾತ್ರದ_ಬುಲ್_ಪ್ರಾಗ್_ಬೆಲೆ_5ರಿಂದ_7ಸಾವಿರ

#ಚೀನಾ_ರಷ್ಯಾ_ಪ್ರವಾಸಿಗಳಿಗೆ_ಇದು_ವಿಶೇಷ_ಖಾದ್ಯ

  ಮುಂಗಾರು ಶುರುವಿನಲ್ಲಿ ಈ ಕಪ್ಪೆಗಳು ಸಂತಾನೋತ್ಪತ್ತಿಗಾಗಿ ಹೊರಬರುತ್ತದೆ.
  ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ವಾರ್ಷಿಕ 5000 ಟನ್ ಕಪ್ಪೆ ಕಾಲು ರಪ್ತು ಮಾಡುವುದು ಇಂಡೋನೇಷಿಯ,
  ಪ್ರೆಂಚ್ ದೇಶದಲ್ಲಿ ಇದು ಸುಪ್ರಸಿದ್ಧ ಖಾದ್ಯವಾಗಿದೆ.
   1970 ರಲ್ಲಿ ತಮಿಳುನಾಡಿನಿಂದ ತಂಡ ತಂಡವಾಗಿ ನಮ್ಮ ಊರಿನ ಮತ್ತು ಸುತ್ತ ಮುತ್ತಲಿನ ಕೆರೆ, ಹೊಳೆ ದಂಡೆಗಳಲ್ಲಿ ಕ್ಯಾಂಪ್ ಹಾಕಿ ರಾತ್ರಿ ಗ್ಯಾಸ್ ಲೈಟ್ ಬೆಳಕಿನಲ್ಲಿ ದೊಡ್ಡ ಗಾತ್ರದ ಬುಲ್ ಪ್ರಾಗ್ ಹಿಡಿದು ಖಾಲಿ ಆದ ಟಾರ್ ಡ್ರಂಗಳಲ್ಲಿ ತುಂಬಿ ಲಾರಿಗಳಲ್ಲಿ ಎಲ್ಲಿಗೋ ಒಯ್ಯುವುದು ನೋಡುತಿದ್ದೆವು.
  ನಂತರ ಸ್ಥಳಿಯರು ಅವರಂತೆ ಈ ಕಪ್ಪೆಗಳನ್ನು ಹಿಡಿದು ತಮಿಳುನಾಡಿನ ಗುತ್ತಿಗೆ ದಾರನಿಗೆ ಮಾರುವ ಮೂಲಕ ಹೊಟ್ಟೆ ಪಾಡು ಕಂಡು ಹಿಡಿದಿದ್ದರು ಆಗೆಲ್ಲ ಅತ್ಯಂತ ಬಡತನದ ಕಷ್ಟದ ದಿನಗಳು ನಮ್ಮ ಊರಿನ ಅನೇಕರಿಗೆ ಈ ಉದ್ಯೋಗ ಖಾತ್ರಿ ನೀಡಿತ್ತು ಆದರೆ ಆ ದಿನಗಳಲ್ಲಿ ಕಪ್ಪೆ ಹಿಡಿಯುವುದು ನಿಕೃಷ್ಟ ಉದ್ಯೋಗ ಎಂಬ ಭಾವನೆ ಇದ್ದಿದ್ದರಿಂದ ಇವರೆಲ್ಲ ರಹಸ್ಯವಾಗಿ ಕಪ್ಪೆ ಶಿಕಾರಿ ಮಾಡುತ್ತಿದ್ದರು.
  ನಂತರ ಅನೇಕ ವರ್ಷ ಈ ಕೆಲಸ ನಡೆಯುತ್ತಿತ್ತು ಆದರೆ ಇವರಾರು ಕಪ್ಪೆ ತಿನ್ನುವುದನ್ನು ಮಾತ್ರ ಕಲಿಯಲಿಲ್ಲ.
   ಆ ಕಾಲದಲ್ಲಿ ರಾತ್ರಿ ಕೊಳ್ಳಿ ದೆವ್ವ ಓಡಾಡುತ್ತದೆ ಎಂದು ಭಯ ಪಡುವ ಜಾಗಗಳೆಲ್ಲ ಈ ಕಪ್ಪೆ ಶಿಕಾರಿಗಾರರ ಗ್ಯಾಸ್ ಲೈಟ್ ನಿಂದ ಕೊಳ್ಳಿ ದೆವ್ವಗಳೇ ನಾಪತ್ತೆ ಆಯಿತು.
  ಈಗಲೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸುತ್ತ ಮುತ್ತ ಮತ್ತು ಕಾರವಾರದ ಪ್ರದೇಶದಲ್ಲಿ ಈ ಕಪ್ಪೆಗಳನ್ನು ಹಿಡಿದು ಗೋವಾದ ಸ್ಟಾರ್ ಹೋಟೆಲ್ ಗಳಿಗೆ ಸರಬರಾಜು ಮಾಡುತ್ತಾರೆ ಆದರೆ ಈ ಕಪ್ಪೆ ವಹಿವಾಟು ಪಶ್ಚಿಮ ಘಟ್ಟದಲ್ಲಿ  ಅರಣ್ಯ ಇಲಾಖೆ ನಿರ್ಬಂದಿಸಿದ್ದರಿಂದ ರಹಸ್ಯವಾಗಿ ನಡೆದಿದೆ.
  ಒಂದು ಕಿಲೋ ಬುಲ್ ಪ್ರಾಗ್ ಗೆ 5 ರಿಂದ 7 ಸಾವಿರ ಬೆಲೆ ಇದೆ, ಇದರ ಹಿಂಬಾಗದ ತೊಡೆಗಳಿಂದ ಮಾಡುವ ಖಾದ್ಯಗಳಿಗೆ ಗೋವಾಕ್ಕೆ ಬರುವ ರಷ್ಯಾ ಮತ್ತು ಚೀನಾದ ಪ್ರವಾಸಿಗಳಿಂದ ಭಾರೀ ಬೇಡಿಕೆ ಇದೆ.
  ಈ ಕಪ್ಪೆ ಖಾದ್ಯಕ್ಕೆ ಜಂಪಿಂಗ್ ಚಿಕನ್ ಎಂಬ ಹೆಸರಿದೆ ಇದರಿಂದ ಸೂಪ್ ಮತ್ತು ಪ್ರೈ ತಯಾರಿಸುತ್ತಾರೆ.
  ಇದೆಲ್ಲ ಈ ವರ್ಷದ ಮುಂಗಾರು ಮಳೆ ನಿರೀಕ್ಷೆಯ ಚರ್ಚೆಯಲ್ಲಿ ನೆನಪಾಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...