Skip to main content

Blog number 1623. ಪುಸ್ತಕ ಮುದ್ರಣ ಮಾರಾಟ ಈಗ ಸುಲಭ ಮತ್ತು ಲಾಭದಾಯಕವಾಗಲಿದೆ ಹೊಸ ಮುದ್ರಣ ತಂತ್ರಜ್ಞಾನದಲ್ಲಿ ಅಂತರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳಿಂದ.

#ನಿಮ್ಮ_ಪುಸ್ತಕ_ಮುದ್ರಣ_ಈಗ_ಸುಲಭ_ಮತ್ತು_ಲಾಭದಾಯಿಕ

#ಬರಹಗಾರರಿಗೆ_ದೊಡ್ಡ_ಸವಾಲು

#ಬರೆದ_ಪುಸ್ತಕ_ಪ್ರಕಟ_ಮಾಡುವುದು.

#ಇದಕ್ಕೆ_ಪರಿಹಾರವಿದೆ_ನವೀನ_ಮುದ್ರಣ_ತಂತ್ರಜ್ಞಾನ

#ಅಂತರಾಷ್ಟ್ರೀಯ_ಪಬ್ಲಿಷರಗಳಿಂದ 

#ಇಂಗ್ಲೀಷ್_ಸೇರಿ_ಎಲ್ಲಾ_ಭಾರತೀಯ_ಭಾಷೆಗಳಲ್ಲಿ_ಸಾಧ್ಯವಿದೆ.

    ಪ್ರಖ್ಯಾತ ಲೇಖಕರ ಪುಸ್ತಕಗಳನ್ನು ಪ್ರತಿಷ್ಟಿತ ಪ್ರಕಾಶನಗಳು ಮುದ್ರಿಸಿ ಮಾರಾಟ ಮಾಡಲು ಮುಂದೆ ಬರುತ್ತದೆ ಮತ್ತು ಲಾಭಾಂಶವನ್ನು ಬರಹಗಾರರ ಖಾತೆಗೆ ಜಮಾ ಮಾಡುತ್ತದೆ.
  ಆದರೆ ಹೊಸ ಬರಹಗಾರರಿಗೆ ಪ್ರಾರಂಭದಲ್ಲೇ ಈ ಅವಕಾಶ ಸಿಗಲು ಸಾಧ್ಯವಿಲ್ಲ ಆದ್ದರಿಂದ ಅನೇಕ ಬರಹಗಾರರ ಪುಸ್ತಕ ಮುದ್ರಿಸಲು ಸಾಧ್ಯವಾಗುವುದಿಲ್ಲ.
   ಆದ್ದರಿಂದ ಬರಹಗಾರರೇ ಪುಸ್ತಕ ಮುದ್ರಿಸಿ ಮಾರಿಕೊಳ್ಳಬೇಕು ಅಥವ ಸರಕಾರದ ಗ್ರಂಥಾಲಯಗಳಿಗೆ ಪುಸ್ತಕ ಸರಬರಾಜುದಾರರ ಮೊರೆ ಹೋಗಬೇಕು.
  200 ರಿಂದ 250 ಪುಟಗಳ ಪುಸ್ತಕ ಬರಹಗಾರರೇ ಪ್ರಕಟಿಸಲು 70 ರಿಂದ  80 ಸಾವಿರ ಹಣ ವಿನಿಯೋಗಿಸ ಬೇಕು ಮತ್ತು ಕನಿಷ್ಟ 1000 ಪ್ರತಿ ಮುದ್ರಿಸ ಬೇಕು.
   ನಂತರ ಮುದ್ರಿತ ಈ ಪುಸ್ತಕ ಮಾರಾಟದ ಜವಾಬ್ದಾರಿ ಬರಹಗಾರರದ್ದೆ.
   ಅಥವ ಸರಕಾರಿ ಗ್ರಂಥಾಲಯಗಳಿಗೆ ಪ್ರತಿ ವರ್ಷ ಪುಸ್ತಕ ಮಾರಾಟ ಮಾಡುವ ಪ್ರಕಾಶಕರನ್ನ ಹಿಡಿಯಬೇಕು ಇವರು ಒಂದು ಸಾವಿರ ಪ್ರತಿ ಮುದ್ರಿಸಿ ಅದರಲ್ಲಿ 100 ಪ್ರತಿ ಬರಹಗಾರರಿಗೆ ಸಂಭಾವನೆ ಅಥವ ಗೌರವ ಪ್ರತಿ ಆಗಿ ನೀಡಿ ಉಳಿದ 900 ಪ್ರತಿ ಅವರು ರಾಜ್ಯ ಗ್ರಂಥಾಲಯಗಳಿಗೆ ಮಾರಿಕೊಳ್ಳುತ್ತಾರೆ ಇದರಲ್ಲಿ ಬೇರಾವುದೇ ಲಾಭಾಂಶ ದೊರೆಯುವುದಿಲ್ಲ.
  ಬರಹಗಾರರಿಗೆ ಅಥವ ಯಾವುದೇ ಓದುಗರಿಗೆ ನಂತರ ಒಂದು ಪ್ರತಿ ಬೇಕೆಂದರೂ ಸಿಗುವುದಿಲ್ಲ ಮತ್ತು ಪುನರ್ ಮುದ್ರಣ ಕೂಡ ಅಸಾಧ್ಯ.
 
   ಈಗಿನ ಹೊಸ ತಂತ್ರಜ್ಞಾನದಲ್ಲಿ ಆದುನಿಕ ಮುದ್ರಣ ಯಂತ್ರದಲ್ಲಿ ಕೇವಲ ಹತ್ತು ಪುಸ್ತಕ ಮಾತ್ರ ಮುದ್ರಣ ಮಾಡಿ ಬೈಂಡಿಂಗ್ ಎಲ್ಲಾ ಮಾಡುವ ಯಂತ್ರಗಳು ಬಂದಿದೆ ಆದರೆ ಈ ದುಭಾರಿ ಈ ಮುದ್ರಣ ಯಂತ್ರ ಭಾರತದಲ್ಲಿ ಮೊದಲಿಗೆ ಇರಲಿಲ್ಲ ಈಗ ಆಮದಾಗಿ ಅಲ್ಲಲ್ಲಿ ಸ್ಥಾಪನೆ ಆಗುತ್ತಿದೆ ಇದರಿಂದ ಅನೇಕ ವಿದೇಶಿ ಅಂತಾರಾಷ್ಟ್ರೀಯ ಪ್ರಕಾಶನ ಸಂಸ್ಥೆಗಳು ಭಾರತದಲ್ಲಿ ತಮ್ಮ ವ್ಯವಹಾರಗಳನ್ನು ಪ್ರಾರಂಬಿಸಿದೆ.
  ಇದರಿಂದ ಹೊಸ ಬರಹಗಾರರಿಗೆ ಅವರು ಬರೆದ ಪುಸ್ತಕಗಳು ಸುಲಭವಾಗಿ ಪ್ರಕಟವಾಗಿ ಆ ಸಂಸ್ಥೆಗಳು ನೇರವಾಗಿ ಮಾರಾಟದ ಜೊತೆಗೆ ಅಮೇಜಾನ್ / ಪ್ಲಿಪ್ ಕಾರ್ಟ್ ಎಂಬ ಆನ್‌ ಲೈನ್ ಪ್ಲಾಟ್ ಪಾರಂಗಳಲ್ಲೂ ಮಾರಾಟ ಮಾಡುತ್ತದೆ  ಮತ್ತು ಕಿಂಡಲ್ ಗಳಲ್ಲಿ ಇ- ಪುಸ್ತಕವೂ ವಾಚಕರಿಗೆ ಸಿಗುತ್ತದೆ.   
   ಇದಕ್ಕಾಗಿ ಶೇಕಡಾ 30% ಲಾಭಾಂಶ ಬರಹಗಾರರಿಗೆ ನೀಡುವ 10 ವರ್ಷದ ಕರಾರು ಬರಹಗಾರ ಮತ್ತು ಪ್ರಕಾಶರ ನಡುವೆ ಮಾಡಿಕೊಳ್ಳುತ್ತದೆ.
  ಪುಸ್ತಕ ನಿರಂತರ ಮಾರುಕಟ್ಟೆಯಲ್ಲಿ  ಲಭ್ಯವಿರುತ್ತದೆ.
  ಬರಹಗಾರರಿಗೆ 10 ಪುಸ್ತಕಗಳನ್ನು ಗೌರವ ಪ್ರತಿ ನೀಡುತ್ತಾರೆ, ಹೆಚ್ಚು ಪುಸ್ತಕ ಬೇಕಾದರೆ ಕಡಿಮೆ ದರದಲ್ಲಿ ಕೊಡುತ್ತಾರೆ.
   ಪುಸ್ತಕದ ಮುಖ ಪುಟ ವಿನ್ಯಾಸ,ISBN ನಂಬರ್ ನೊಂದಾವಣೆ, ಮುದ್ರಣ - ಮಾರಾಟ ಎಲ್ಲಾ ಪ್ರಕಾಶರೇ ಮಾಡುತ್ತಾರೆ.
  ಬರಹಗಾರ ತನ್ನ ಕೃತಿಯನ್ನು ಸಂಸ್ಥೆಗೆ e-mail ಮಾಡಬೇಕು ಅವರು ಪೇಜ್ ವಿನ್ಯಾಸ ಮಾಡಿ ಕಳಿಸುತ್ತಾರೆ ಅದರ ಕರೆಕ್ಷನ್ ಬರಹಗಾರರೇ ಮನೆಯಲ್ಲೇ ಕುಳಿತು ಕರೆಕ್ಷನ್ ಮಾಡಿ ಮೈಲ್ ನಲ್ಲಿ ಕಳಿಸಬಹುದು, ಅಂತಿಮವಾಗಿ ಬರಹಗಾರರ ಒಪ್ಪಿಗೆ ಪಡೆದು ಪ್ರಕಾಶಕರು ಪುಸ್ತಕ ಮುದ್ರಣ ಮಾಡುತ್ತಾರೆ.
  ನನ್ನ ಕನ್ನಡದ ಕಾದಂಬರಿ ಬೆಸ್ತರ ರಾಣಿ ಚಂಪಕಾದ ಇಂಗ್ಲೀಷ್ ಅನುವಾದ Champak forgotten queen of Keladi Kingdom ಪುಸ್ತಕ ಪ್ರಕಾಶಕರು IIP (ITERATIVE INTERNATIONAL PUBLISHER) ಇದರ ಕೇಂದ್ರ ಕಚೇರಿ ಅಮೇರಿಕಾದ ಮಿಚಿಗನ್ ರಾಜ್ಯದಲ್ಲಿದೆ.
  ಈ ಸಂಸ್ಥೆಯ ಅಂಗ ಸಂಸ್ಥೆ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಈಗಾಗಲೇ ನೂರಾರು ಪುಸ್ತಕ ಪ್ರಕಾಶನ ಮಾಡಿದೆ ನನ್ನ ಮುಂದಿನ #ಆನಂದಪುರಂ_ಇತಿಹಾಸ ಪುಸ್ತಕ ಎರೆಡು ಭಾಗವಾಗಿ ಈ ಸಂಸ್ಥೆ ಪ್ರಕಾಶನ ಮಾಡಲಿದೆ.
  #ಆಸಕ್ತ_ಲೇಖಕರು_ತಮ್ಮ_ಪುಸ್ತಕ_ಮುದ್ರಣಕ್ಕಾಗಿ
ಹೆಚ್ಚಿನ ಮಾಹಿತಿಗೆ ಸಂಪರ್ಕ ಈ ಕೆಳ ಕಂಡ ಸಂಖ್ಯೆ
+91 88679 14971 ಸಂಪರ್ಕಿಸ ಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ