Skip to main content

Blog number 1635. ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರು .

ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರಿಗೆ 38 ನೇ ವಿವಾಹ ವಾಷಿ೯ಕೋತ್ಸವದ ಶುಭಹಾರೈಕೆ ಕಳೆದ ವರ್ಷದ ಈ ಪೋಸ್ಟಿನೊಂದಿಗೆ.

#ಶಿವಮೊಗ್ಗದ_ಕಾಂಗ್ರೇಸ್_ಮುಖಂಡ_ಇಸ್ಮಾಯಿಲ್_ಖಾನ್_ಸಾಹೇಬರ_ನಾನು_ಮರೆಯುವಂತಿಲ್ಲ.

#ಭ್ರಷ್ಟಾಚಾರ_ವಿರೋದಿ_ಹೋರಾಟದಲ್ಲಿ_ಜೈಲು_ಸೇರಿದ್ದ_ನನ್ನ_ಪರವಾಗಿ_ಹೋರಾಟ_ರೂಪಿಸಿದವರು

#ಇವತ್ತು_ಇವರ_37ನೇ_ವಿವಾಹ_ವಾರ್ಷಿಕೋತ್ಸವ.

#ಕಾನೂನು_ಬಿಬಿಎಂ_ಪದವೀರರು

#ರಾಜ್ಯ_ಅರಣ್ಯಾಭಿವೃದ್ಧಿ_ಕಾಪೋ೯ರೇಷನ್
#ಶಿವಮೊಗ್ಗ_ಭದ್ರಾವತಿ_ನಗರಾಭಿವೃದ್ಧಿ_ಪ್ರಾಧಿಕಾರದ_ಅದ್ಯಕ್ಷರಾಗಿದ್ದರು.

https://arunprasadhombuja.blogspot.com/2022/07/blog-number-903-37.html


  ಶಿವಮೊಗ್ಗ ಜಿಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಖರೀದಿಸಿದ ಔಷದಿ ಕಳಪೆ ಅಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಡಿಸ್ಟ್ರಿಕ್ಟ್ ಸರ್ಜನ್ ನೀಡಿದ ಸಣ್ಣ ಸುಳಿವು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ್ದೆ ಆ ಸಭೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹೊಸನಗರ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರೂ ಇದ್ದರು.
  ಅದೇ ದಿನ ರಾತ್ರಿ ಔಷದಿ ಗೋದಾಮು ವಿದ್ಯುತ್ ಅವಘಡದಿಂದ ಭಸ್ಮ ಆಯಿತು (ಅಧಿಕಾರಿಗಳೆ ಸುಟ್ಟು ಹಾಕಿದ್ದು) ಅಂತ ಅದರ ಮರುದಿನ ಪತ್ರಿಕೆಯಲ್ಲಿ ಬಂತು ನಾನು ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಟಿ ಕರೆದು ಇದು ಕಳಪೆ ಔಷದಿ ಖರೀದಿ ಮಾಡಿದ ಅಧಿಕಾರಿಗಳು ತನಿಖೆ ಆದರೆ ಸಿಕ್ಕಿಬೀಳುವ ಭಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮುಚ್ಚಲು ಮಾಡಿದ ನಾಟಕ ಇದು ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದೆ.
  ಮುಂದಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿ ಸಭೆ ಸರಿಯಾಗಿ ನಡೆಸಲಾಗದೇ ಮುಂದೂಡಲಾಯಿತು ಆದರೆ ನನ್ನ ಮೇಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಅವ್ಯಾಚ ನಿಂದನೆ, ಹಲ್ಲೆಯತ್ನ ಎಂಬ ದೂರು ನೀಡಿದರು ಅವರಿಗೆ ಇಡೀ ಜಿಲ್ಲೆಯ ಸಕಾ೯ರಿ ನೌಕರರ ಸಂಘ ಬೆಂಬಲಿಸಿತು, ಜಿಲ್ಲಾ ರಕ್ಷಣಾಧಿಕಾರಿಗಳು ಅಧಿಕಾರಿಗಳ ಪರವಾಗಿದ್ದರು, ಕಾಗೋಡು ತಿಮ್ಮಪ್ಪನವರೂ ಆಗ ರಾಜಕೀಯವಾಗಿ ನನಗೆ ವಿರುದ್ದ,ಆಗಿನ ಸಂಸದ ಡಿ.ಬಿ.ಚಂದ್ರೇಗೌಡರೂ ವಿರುದ್ಧವಾಗಿದ್ದರಿಂದ ನನಗೆ ಜೈಲಿಗೆ ಕಳಿಸಿದರು.
 ಮೊದಲ ಬಾರಿಗೆ ಒಬ್ಬಂಟಿ ಆಗಿ ಜೈಲಿಗೆ ಹೋದಾಗ ಆಗುವ ಎಲ್ಲಾ ಆಸಹಾಯಕತೆ, ನ್ಯಾಯ ಕೇಳಿದ್ದು ತಪ್ಪಾ ಎಂಬ ನನ್ನಲ್ಲೇ ಪದೇ ಪದೇ ಪ್ರಶ್ನಿಸುವ ನನ್ನ ಮನಸ್ಸು, ಕೈಗೆ ಬೇಡಿ ತೊಡಿಸಿದ ಪೋಲಿಸರು ಇವೆಲ್ಲ ಸಹಜವಾಗಿ ನನಗೆ ಒ0ದು ರೀತಿ ಶಾಕ್ ಆಗಿತ್ತು (ನಂತರ ಈ ರೀತಿ ಅನೇಕ ಹೋರಾಟದಲ್ಲಿ ಜೈಲು ಸೇರಿದಾಗ ಹೀಗೆ ಅನ್ನಿಸುತ್ತಿರಲಿಲ್ಲ) ರಾತ್ರಿ ನಿದ್ದೆ ಇಲ್ಲ, ಹೊಸ ಪರಿಸರ ಸುತ್ತಲೂ ಅಪರಿಚಿತರು, ಬೆಳಿಗ್ಗೆ ಹೊರಬಿಟ್ಟಾಗ ತಣ್ಣೀರಲ್ಲಿ ಸ್ನಾನ ಮಾಡಿ ಸೆಲ್ ಒಳಗೆ ಬಂದಾಗ ಅಲ್ಲಿನ ಒಬ್ಬ ಖೈದಿ ನನಗೆ ಗುಡಿಸುವ ಕೆಲಸ ಹೇಳಿದ (ಒಂದು ತರ ರಾಗಿಂಗ್) ಸರಿ ಅಂತ ಗುಡಿಸಲು ಹೋದಾಗ ಅಲ್ಲಿ ಕೊಲೆ ಪ್ರಯತ್ನದ ಗ್ಯಾಂಗ್ ವಾರ್ ನಲ್ಲಿ ಜೈಲು ಸೇರಿದವರು ಅವನಿಗೆ ಜೋರು ಮಾಡಿ ನಾನ್ಯಾರೆಂದು ತಿಳಿಸಿದರು (ಮುಂದೆ ಇಂತಹದೇ ಗ್ಯಾಂಗ್ ವಾರ್ ನಲ್ಲಿ ಅವರು ಕೊಲೆ ಆದರು) "ನಿಮಗೆ ನನ್ನ ಪರಿಚಯ ಹೇಗೆ?" ಅಂದಾಗ ಅವರು ನನ್ನ ಹೋರಾಟಗಳನ್ನು ಪತ್ರಿಕೆಯಲ್ಲಿ ಓದುತ್ತಿದ್ದರಂತೆ ಮತ್ತು ಜೈಲರ್ ನಾನು ಜೈಲಿಗೆ ಬರುವ ಸುದ್ದಿ ಹಿಂದಿನ ದಿನ ಸಂಜೆ ಮೊದಲೇ ತಿಳಿಸಿದ್ದರೆಂದರು.
  ಅಷ್ಟರಲ್ಲಿ ಜೈಲರ್ ರಿಂದ ಕರೆ ಬಂತು ಅಲ್ಲಿ ಹೋದರೆ ಅವತ್ತಿನ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ಖಾನ್ ಸಾಹೇಬರು, ಹಿರಿಯ ಕಾಂಗ್ರೇಸ್ ಮುಖಂಡರಾದ ರಾಮೇಗೌಡರು ಮತ್ತು ಜಿಲ್ಲೆಯ ಪ್ರಸಿದ್ಧ ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್ ಮಾಲಿಕರಾದ ವೈ.ಹೆಚ್.ನಾಗರಾಜ್ ನನಗಾಗಿ ಅವರ ಮನೆಯಿಂದ ಉಪಹಾರದ ಟಿಪನ್ ಕ್ಯಾರಿಯರ್ ಜೊತೆಗೆ ಬಂದಿದ್ದರು.
   ಜಿಲ್ಲೆಯ ಕಾಂಗ್ರೇಸ್ ಅತಿರಥ ಮಹಾರಥರಾದ ಕಾಗೋಡು, ಡಿ.ಬಿ.ಚಂದ್ರೇಗೌಡರ ವಿರೋದವಿದ್ದರೂ ಇಡೀ ಜಿಲ್ಲಾ ಕಾಂಗ್ರೇಸ್ ಪಕ್ಷ ನನ್ನ ಪರವಾಗಿ ಬ್ರಷ್ಟಾಚಾರದ ವಿರೋದದ ನನ್ನ ಹೋರಾಟದ ಪರವಾಗಿ ದೊಡ್ಡ ಆಂದೋಲನವೇ ರೂಪಿಸಲು ಇವರುಗಳು ಕಾರಣರಾದರು. ಈ ನನ್ನ ಹೋರಾಟಕ್ಕೆ ನೆಹರೂ ರಸ್ತೆಯ ವಸತಿ ಗೃಹದ ಮಾಲಿಕರಾದ ನರೇಂದ್ರ ಕುಮಾರ್  ಆಗಿನ ಯುವ ಹೋರಾಟಗಾರರಾಗಿದ್ದ ರವಿಕುಮಾರ್, ಎಸ್.ಪಿ ದಿನೇಶ್, ವೆಂಕಟೇಶ್ ಗೌಡ, ದೇವೇಂದ್ರಪ್ಪ,ರಂಗನಾಥ್ ಸೇರಿ (ಎಲ್ಲರ ಹೆಸರೂ ಬರೆಯಲಾಗುತ್ತಿಲ್ಲ) ಜಿಲ್ಲೆಯ ಪತ್ರಕರ್ತರೂ, ಜನಪರ ಸಂಘಟನೆಗಳೂ ಸೇರಿ ದೊಡ್ಡ ಹೋರಾಟವೇ ಆಯಿತು.
  ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ಅವರ ಗೃಹ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಅಂತೆ, ತಕ್ಷಣ ಅವರನ್ನು, ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿವಾ೯ಹಣಾಧಿಕಾರಿಗಳನ್ನು ವರ್ಗಾಯಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಅಮಾನತ್ತು ಮಾಡಿದ್ದರು.
  ನನ್ನನ್ನು ಬಂದಿಸಿ ಟಾರ್ಚರ್ ಮಾಡಿಸಲು ಅಧಿಕಾರಿಗಳಿಗೆ ನನ್ನ ವಿರುದ್ದವಿದ್ದ ರಾಜಕಾರಣಿಗಳ ಬೆಂಬಲವೂ ಇತ್ತು ಆದರೆ ನಾನು ಅವರ ಕೈಗೆ ಸಿಗಲಿಲ್ಲ, ನನ್ನ ಮನೆ ಎದರು ರಿಸರ್ವ್ ವ್ಯಾನ್ ನಾಕಾರು ಪೋಲಿಸ್ ಜೀಪ್ ಗಳು ಮತ್ತು ನಾನು ಬಂದನಕ್ಕೆ ಸಿಗದೆ ತಪ್ಪಿಸಿಕೊಳ್ಳಲು ಆನಂದಪುರಂ ASI ಜಯರಾಂ ಮಾಹಿತಿ ನೀಡಿದರೆಂದು ಅನುಮಾನದಿಂದ  ಅಮಾನತ್ತು ಮಾಡಿದ್ದರು.
  ಶಿವಮೊಗ್ಗ ಪೇಟೆಯ ಜಯನಗರ ಠಾಣೆ ಎದರು ಪೋಲಿಸರ ದೌರ್ಜನ್ಯ ವಿರೋದಿಸಿ ರಾತ್ರೋ ರಾತ್ರಿ ಶಿವಮೊಗ್ಗದ ಯುವ ಮುಖಂಡರು ಕೋಟ್ಯಾಂತರ ಮೌಲ್ಯದ ಬಡವರ ಔಷದಿ ಸುಟ್ಟರುವ ಭ್ರಷ್ಟಾಚಾರಿಗಳ ಪರವಾಗಿ ಇದನ್ನು ವಿರೋದಿಸಿದ ಜನಪ್ರತಿಯನ್ನು ಪೋಲಿಸ್ ಬಲ ಬಳಸಿ ಹತ್ತಿಕ್ಕುವುದನ್ನು ವಿರೋದಿಸಿ ಧರಣಿ ನಡೆಸಿದಾಗ ಅನಿವಾಯ೯ವಾಗಿ ನನ್ನ ಮನೆ ಎದರು ಜಮಾಯಿಸಿದ ಪೋಲಿಸ್ ಪಡೆ ವಾಪಾಸಾಯಿತು ಮತ್ತು ASI ಜಯರಾಂ ಅಮಾನತ್ತು ವಾಪಾಸು ಪಡೆದರು ಆಗೆಲ್ಲ ಈಗಿನ ರೀತಿ TV ಮಾಧ್ಯಮ, ಸೋಷಿಯಲ್ ಮೀಡಿಯ ಇಲ್ಲದ ಕಾಲ.
  ಹೀಗೆ ಹತಾಶೆಯಿಂದ ಜೈಲಲ್ಲಿ ಮೊದಲ ದಿನದ ಬೆಳಗು ನೋಡುವಾಗ ಬಂದ ಈ ತ್ರೀಮೂರ್ತಿಗಳಾದ #ಇಸ್ಮಾಯಿಲ್_ಖಾನ್,#ರಾಮೇಗೌಡರು ಮತ್ತು #ವೈಹೆಚ್_ನಾಗರಾಜ್ ನಾನು ಜೀವಮಾನದಲ್ಲಿ ಮರೆಯದಂತ ವ್ಯಕ್ತಿಗಳು ಇವರು ಜಿಲ್ಲಾ ಕಾಂಗ್ರೇಸ್ ಮುಖಂಡರನ್ನೆ ಎದುರು ಹಾಕಿಕೊಂಡೂ ಬ್ರಷ್ಟಾಚಾರದ ವಿರುದ್ದ  ಹೋರಾಟ ಮಾಡಿದ ನನ್ನನ್ನು ಜೈಲಿಗೆ ಹಾಕಿದ ಅವತ್ತಿನ ಅಧಿಕಾರಶಾಹಿಗೆ ಸರಿಯಾದ ತಿರುಗೇಟು ನೀಡಿದ್ದರು.
  ಮುಂದಿನ ದಿನಗಳಲ್ಲಿ ಇಸ್ಮಾಯಿಲ್ ಖಾನ್ ಸಾಹೇಬರು ಕನಾ೯ಟಕ ರಾಜ್ಯ ಅರಣ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ ವಿದಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದರು, ಸ್ವತಃ ಬಿಬಿಎಂ ಮತ್ತು ಕಾನೂನು ಪದವೀದರರಾದ ಇಸ್ಮಾಯಿಲ್ ಖಾನ್ ರವರಿಗೆ ದೆಹಲಿಯ ಕಾಂಗ್ರೇಸ್ ನಾಯಕರ ಸಂಪರ್ಕ ಜಾಸ್ತಿ ಇದೆ.
  ಇವರ ಪುತ್ರಿ ವೈದ್ಯರಾಗಿದ್ದಾರೆ.
  ಇವತ್ತು ಅವರ 37ನೇ ವಿವಾಹ ವಾರ್ಷಿಕೋತ್ಸವ ಈ ಸಂದಭ೯ದಲ್ಲಿ ದೇವರು ದಂಪತಿಗಳಿಗೆ ಆಯುರಾರೋಗ್ಯ, ಆಯುಸ್ಸು ಮತ್ತು ಐಶ್ವಯ೯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...