Skip to main content

Blog number 1635. ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರು .

ಶಿವಮೊಗ್ಗದ ಡೇರ್ ಡೆವಿಲ್ ಇಸ್ಮಾಯಿಲ್ ಖಾನ್ ಸಾಹೇಬರಿಗೆ 38 ನೇ ವಿವಾಹ ವಾಷಿ೯ಕೋತ್ಸವದ ಶುಭಹಾರೈಕೆ ಕಳೆದ ವರ್ಷದ ಈ ಪೋಸ್ಟಿನೊಂದಿಗೆ.

#ಶಿವಮೊಗ್ಗದ_ಕಾಂಗ್ರೇಸ್_ಮುಖಂಡ_ಇಸ್ಮಾಯಿಲ್_ಖಾನ್_ಸಾಹೇಬರ_ನಾನು_ಮರೆಯುವಂತಿಲ್ಲ.

#ಭ್ರಷ್ಟಾಚಾರ_ವಿರೋದಿ_ಹೋರಾಟದಲ್ಲಿ_ಜೈಲು_ಸೇರಿದ್ದ_ನನ್ನ_ಪರವಾಗಿ_ಹೋರಾಟ_ರೂಪಿಸಿದವರು

#ಇವತ್ತು_ಇವರ_37ನೇ_ವಿವಾಹ_ವಾರ್ಷಿಕೋತ್ಸವ.

#ಕಾನೂನು_ಬಿಬಿಎಂ_ಪದವೀರರು

#ರಾಜ್ಯ_ಅರಣ್ಯಾಭಿವೃದ್ಧಿ_ಕಾಪೋ೯ರೇಷನ್
#ಶಿವಮೊಗ್ಗ_ಭದ್ರಾವತಿ_ನಗರಾಭಿವೃದ್ಧಿ_ಪ್ರಾಧಿಕಾರದ_ಅದ್ಯಕ್ಷರಾಗಿದ್ದರು.

https://arunprasadhombuja.blogspot.com/2022/07/blog-number-903-37.html


  ಶಿವಮೊಗ್ಗ ಜಿಲಾ ಪಂಚಾಯತ್ ಸದಸ್ಯನಾಗಿದ್ದಾಗ ಜಿಲ್ಲಾ ಪಂಚಾಯತ್ ಖರೀದಿಸಿದ ಔಷದಿ ಕಳಪೆ ಅಂತ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಡಿಸ್ಟ್ರಿಕ್ಟ್ ಸರ್ಜನ್ ನೀಡಿದ ಸಣ್ಣ ಸುಳಿವು ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ್ದೆ ಆ ಸಭೆಯಲ್ಲಿ ಈಶ್ವರಪ್ಪ, ಆರಗ ಜ್ಞಾನೇಂದ್ರ, ಹೊಸನಗರ ವಿದಾನ ಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಅಯನೂರು ಮಂಜುನಾಥರೂ ಇದ್ದರು.
  ಅದೇ ದಿನ ರಾತ್ರಿ ಔಷದಿ ಗೋದಾಮು ವಿದ್ಯುತ್ ಅವಘಡದಿಂದ ಭಸ್ಮ ಆಯಿತು (ಅಧಿಕಾರಿಗಳೆ ಸುಟ್ಟು ಹಾಕಿದ್ದು) ಅಂತ ಅದರ ಮರುದಿನ ಪತ್ರಿಕೆಯಲ್ಲಿ ಬಂತು ನಾನು ಜಿಲ್ಲಾ ಪಂಚಾಯತ್ ನಲ್ಲಿ ಪತ್ರಿಕಾಗೋಷ್ಟಿ ಕರೆದು ಇದು ಕಳಪೆ ಔಷದಿ ಖರೀದಿ ಮಾಡಿದ ಅಧಿಕಾರಿಗಳು ತನಿಖೆ ಆದರೆ ಸಿಕ್ಕಿಬೀಳುವ ಭಯದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಮುಚ್ಚಲು ಮಾಡಿದ ನಾಟಕ ಇದು ಸಿಬಿಐ ತನಿಖೆ ಆಗಬೇಕೆಂದು ಒತ್ತಾಯಿಸಿದೆ.
  ಮುಂದಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿ ಸಭೆ ಸರಿಯಾಗಿ ನಡೆಸಲಾಗದೇ ಮುಂದೂಡಲಾಯಿತು ಆದರೆ ನನ್ನ ಮೇಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿರ್ವಾಹಕ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಅವ್ಯಾಚ ನಿಂದನೆ, ಹಲ್ಲೆಯತ್ನ ಎಂಬ ದೂರು ನೀಡಿದರು ಅವರಿಗೆ ಇಡೀ ಜಿಲ್ಲೆಯ ಸಕಾ೯ರಿ ನೌಕರರ ಸಂಘ ಬೆಂಬಲಿಸಿತು, ಜಿಲ್ಲಾ ರಕ್ಷಣಾಧಿಕಾರಿಗಳು ಅಧಿಕಾರಿಗಳ ಪರವಾಗಿದ್ದರು, ಕಾಗೋಡು ತಿಮ್ಮಪ್ಪನವರೂ ಆಗ ರಾಜಕೀಯವಾಗಿ ನನಗೆ ವಿರುದ್ದ,ಆಗಿನ ಸಂಸದ ಡಿ.ಬಿ.ಚಂದ್ರೇಗೌಡರೂ ವಿರುದ್ಧವಾಗಿದ್ದರಿಂದ ನನಗೆ ಜೈಲಿಗೆ ಕಳಿಸಿದರು.
 ಮೊದಲ ಬಾರಿಗೆ ಒಬ್ಬಂಟಿ ಆಗಿ ಜೈಲಿಗೆ ಹೋದಾಗ ಆಗುವ ಎಲ್ಲಾ ಆಸಹಾಯಕತೆ, ನ್ಯಾಯ ಕೇಳಿದ್ದು ತಪ್ಪಾ ಎಂಬ ನನ್ನಲ್ಲೇ ಪದೇ ಪದೇ ಪ್ರಶ್ನಿಸುವ ನನ್ನ ಮನಸ್ಸು, ಕೈಗೆ ಬೇಡಿ ತೊಡಿಸಿದ ಪೋಲಿಸರು ಇವೆಲ್ಲ ಸಹಜವಾಗಿ ನನಗೆ ಒ0ದು ರೀತಿ ಶಾಕ್ ಆಗಿತ್ತು (ನಂತರ ಈ ರೀತಿ ಅನೇಕ ಹೋರಾಟದಲ್ಲಿ ಜೈಲು ಸೇರಿದಾಗ ಹೀಗೆ ಅನ್ನಿಸುತ್ತಿರಲಿಲ್ಲ) ರಾತ್ರಿ ನಿದ್ದೆ ಇಲ್ಲ, ಹೊಸ ಪರಿಸರ ಸುತ್ತಲೂ ಅಪರಿಚಿತರು, ಬೆಳಿಗ್ಗೆ ಹೊರಬಿಟ್ಟಾಗ ತಣ್ಣೀರಲ್ಲಿ ಸ್ನಾನ ಮಾಡಿ ಸೆಲ್ ಒಳಗೆ ಬಂದಾಗ ಅಲ್ಲಿನ ಒಬ್ಬ ಖೈದಿ ನನಗೆ ಗುಡಿಸುವ ಕೆಲಸ ಹೇಳಿದ (ಒಂದು ತರ ರಾಗಿಂಗ್) ಸರಿ ಅಂತ ಗುಡಿಸಲು ಹೋದಾಗ ಅಲ್ಲಿ ಕೊಲೆ ಪ್ರಯತ್ನದ ಗ್ಯಾಂಗ್ ವಾರ್ ನಲ್ಲಿ ಜೈಲು ಸೇರಿದವರು ಅವನಿಗೆ ಜೋರು ಮಾಡಿ ನಾನ್ಯಾರೆಂದು ತಿಳಿಸಿದರು (ಮುಂದೆ ಇಂತಹದೇ ಗ್ಯಾಂಗ್ ವಾರ್ ನಲ್ಲಿ ಅವರು ಕೊಲೆ ಆದರು) "ನಿಮಗೆ ನನ್ನ ಪರಿಚಯ ಹೇಗೆ?" ಅಂದಾಗ ಅವರು ನನ್ನ ಹೋರಾಟಗಳನ್ನು ಪತ್ರಿಕೆಯಲ್ಲಿ ಓದುತ್ತಿದ್ದರಂತೆ ಮತ್ತು ಜೈಲರ್ ನಾನು ಜೈಲಿಗೆ ಬರುವ ಸುದ್ದಿ ಹಿಂದಿನ ದಿನ ಸಂಜೆ ಮೊದಲೇ ತಿಳಿಸಿದ್ದರೆಂದರು.
  ಅಷ್ಟರಲ್ಲಿ ಜೈಲರ್ ರಿಂದ ಕರೆ ಬಂತು ಅಲ್ಲಿ ಹೋದರೆ ಅವತ್ತಿನ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ಖಾನ್ ಸಾಹೇಬರು, ಹಿರಿಯ ಕಾಂಗ್ರೇಸ್ ಮುಖಂಡರಾದ ರಾಮೇಗೌಡರು ಮತ್ತು ಜಿಲ್ಲೆಯ ಪ್ರಸಿದ್ಧ ಮಲ್ಲಿಕಾರ್ಜುನ ಟ್ರಾನ್ಸ್‌ಪೋರ್ಟ್ ಮಾಲಿಕರಾದ ವೈ.ಹೆಚ್.ನಾಗರಾಜ್ ನನಗಾಗಿ ಅವರ ಮನೆಯಿಂದ ಉಪಹಾರದ ಟಿಪನ್ ಕ್ಯಾರಿಯರ್ ಜೊತೆಗೆ ಬಂದಿದ್ದರು.
   ಜಿಲ್ಲೆಯ ಕಾಂಗ್ರೇಸ್ ಅತಿರಥ ಮಹಾರಥರಾದ ಕಾಗೋಡು, ಡಿ.ಬಿ.ಚಂದ್ರೇಗೌಡರ ವಿರೋದವಿದ್ದರೂ ಇಡೀ ಜಿಲ್ಲಾ ಕಾಂಗ್ರೇಸ್ ಪಕ್ಷ ನನ್ನ ಪರವಾಗಿ ಬ್ರಷ್ಟಾಚಾರದ ವಿರೋದದ ನನ್ನ ಹೋರಾಟದ ಪರವಾಗಿ ದೊಡ್ಡ ಆಂದೋಲನವೇ ರೂಪಿಸಲು ಇವರುಗಳು ಕಾರಣರಾದರು. ಈ ನನ್ನ ಹೋರಾಟಕ್ಕೆ ನೆಹರೂ ರಸ್ತೆಯ ವಸತಿ ಗೃಹದ ಮಾಲಿಕರಾದ ನರೇಂದ್ರ ಕುಮಾರ್  ಆಗಿನ ಯುವ ಹೋರಾಟಗಾರರಾಗಿದ್ದ ರವಿಕುಮಾರ್, ಎಸ್.ಪಿ ದಿನೇಶ್, ವೆಂಕಟೇಶ್ ಗೌಡ, ದೇವೇಂದ್ರಪ್ಪ,ರಂಗನಾಥ್ ಸೇರಿ (ಎಲ್ಲರ ಹೆಸರೂ ಬರೆಯಲಾಗುತ್ತಿಲ್ಲ) ಜಿಲ್ಲೆಯ ಪತ್ರಕರ್ತರೂ, ಜನಪರ ಸಂಘಟನೆಗಳೂ ಸೇರಿ ದೊಡ್ಡ ಹೋರಾಟವೇ ಆಯಿತು.
  ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ಅವರ ಗೃಹ ಕಚೇರಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು ಅಂತೆ, ತಕ್ಷಣ ಅವರನ್ನು, ಜಿಲ್ಲಾ ಪಂಚಾಯತ್ ಮುಖ್ಯ ಕಾಯ೯ನಿವಾ೯ಹಣಾಧಿಕಾರಿಗಳನ್ನು ವರ್ಗಾಯಿಸಿ, ಜಿಲ್ಲಾ ಆರೋಗ್ಯಾಧಿಕಾರಿ ಅಮಾನತ್ತು ಮಾಡಿದ್ದರು.
  ನನ್ನನ್ನು ಬಂದಿಸಿ ಟಾರ್ಚರ್ ಮಾಡಿಸಲು ಅಧಿಕಾರಿಗಳಿಗೆ ನನ್ನ ವಿರುದ್ದವಿದ್ದ ರಾಜಕಾರಣಿಗಳ ಬೆಂಬಲವೂ ಇತ್ತು ಆದರೆ ನಾನು ಅವರ ಕೈಗೆ ಸಿಗಲಿಲ್ಲ, ನನ್ನ ಮನೆ ಎದರು ರಿಸರ್ವ್ ವ್ಯಾನ್ ನಾಕಾರು ಪೋಲಿಸ್ ಜೀಪ್ ಗಳು ಮತ್ತು ನಾನು ಬಂದನಕ್ಕೆ ಸಿಗದೆ ತಪ್ಪಿಸಿಕೊಳ್ಳಲು ಆನಂದಪುರಂ ASI ಜಯರಾಂ ಮಾಹಿತಿ ನೀಡಿದರೆಂದು ಅನುಮಾನದಿಂದ  ಅಮಾನತ್ತು ಮಾಡಿದ್ದರು.
  ಶಿವಮೊಗ್ಗ ಪೇಟೆಯ ಜಯನಗರ ಠಾಣೆ ಎದರು ಪೋಲಿಸರ ದೌರ್ಜನ್ಯ ವಿರೋದಿಸಿ ರಾತ್ರೋ ರಾತ್ರಿ ಶಿವಮೊಗ್ಗದ ಯುವ ಮುಖಂಡರು ಕೋಟ್ಯಾಂತರ ಮೌಲ್ಯದ ಬಡವರ ಔಷದಿ ಸುಟ್ಟರುವ ಭ್ರಷ್ಟಾಚಾರಿಗಳ ಪರವಾಗಿ ಇದನ್ನು ವಿರೋದಿಸಿದ ಜನಪ್ರತಿಯನ್ನು ಪೋಲಿಸ್ ಬಲ ಬಳಸಿ ಹತ್ತಿಕ್ಕುವುದನ್ನು ವಿರೋದಿಸಿ ಧರಣಿ ನಡೆಸಿದಾಗ ಅನಿವಾಯ೯ವಾಗಿ ನನ್ನ ಮನೆ ಎದರು ಜಮಾಯಿಸಿದ ಪೋಲಿಸ್ ಪಡೆ ವಾಪಾಸಾಯಿತು ಮತ್ತು ASI ಜಯರಾಂ ಅಮಾನತ್ತು ವಾಪಾಸು ಪಡೆದರು ಆಗೆಲ್ಲ ಈಗಿನ ರೀತಿ TV ಮಾಧ್ಯಮ, ಸೋಷಿಯಲ್ ಮೀಡಿಯ ಇಲ್ಲದ ಕಾಲ.
  ಹೀಗೆ ಹತಾಶೆಯಿಂದ ಜೈಲಲ್ಲಿ ಮೊದಲ ದಿನದ ಬೆಳಗು ನೋಡುವಾಗ ಬಂದ ಈ ತ್ರೀಮೂರ್ತಿಗಳಾದ #ಇಸ್ಮಾಯಿಲ್_ಖಾನ್,#ರಾಮೇಗೌಡರು ಮತ್ತು #ವೈಹೆಚ್_ನಾಗರಾಜ್ ನಾನು ಜೀವಮಾನದಲ್ಲಿ ಮರೆಯದಂತ ವ್ಯಕ್ತಿಗಳು ಇವರು ಜಿಲ್ಲಾ ಕಾಂಗ್ರೇಸ್ ಮುಖಂಡರನ್ನೆ ಎದುರು ಹಾಕಿಕೊಂಡೂ ಬ್ರಷ್ಟಾಚಾರದ ವಿರುದ್ದ  ಹೋರಾಟ ಮಾಡಿದ ನನ್ನನ್ನು ಜೈಲಿಗೆ ಹಾಕಿದ ಅವತ್ತಿನ ಅಧಿಕಾರಶಾಹಿಗೆ ಸರಿಯಾದ ತಿರುಗೇಟು ನೀಡಿದ್ದರು.
  ಮುಂದಿನ ದಿನಗಳಲ್ಲಿ ಇಸ್ಮಾಯಿಲ್ ಖಾನ್ ಸಾಹೇಬರು ಕನಾ೯ಟಕ ರಾಜ್ಯ ಅರಣ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ - ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಶಿವಮೊಗ್ಗ ವಿದಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿದ್ದರು, ಸ್ವತಃ ಬಿಬಿಎಂ ಮತ್ತು ಕಾನೂನು ಪದವೀದರರಾದ ಇಸ್ಮಾಯಿಲ್ ಖಾನ್ ರವರಿಗೆ ದೆಹಲಿಯ ಕಾಂಗ್ರೇಸ್ ನಾಯಕರ ಸಂಪರ್ಕ ಜಾಸ್ತಿ ಇದೆ.
  ಇವರ ಪುತ್ರಿ ವೈದ್ಯರಾಗಿದ್ದಾರೆ.
  ಇವತ್ತು ಅವರ 37ನೇ ವಿವಾಹ ವಾರ್ಷಿಕೋತ್ಸವ ಈ ಸಂದಭ೯ದಲ್ಲಿ ದೇವರು ದಂಪತಿಗಳಿಗೆ ಆಯುರಾರೋಗ್ಯ, ಆಯುಸ್ಸು ಮತ್ತು ಐಶ್ವಯ೯ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ