Skip to main content

Blog number 1590. ಕನ್ನಡ ಸಾಹಿತ್ಯ ಲೋಕದ ಹೊಸ ನಕ್ಷತ್ರ ಎ.ವಿ.ಕೃಷ್ಣಮೂರ್ತಿ ಅವರ ಆತ್ಮ ಚರಿತ್ರೆ "ನನ್ನ ಬಾಲ್ಯ" ಎರೆಡು ಭಾಗಗಳಾಗಿ ಓದುಗರಿಗೆ ಶೀಘ್ರವಾಗಿ ಲಭ್ಯವಾಗಲಿದೆ.


#ಶೃಂಗೇರಿಯ_ಕಾಲೇಜಿನ_ಮೊದಲ_ಬ್ಯಾಚಿನ_ರ್ಯಾಂಕ್_ವಿಜೇತರಾದ_AV_ಕೃಷ್ಣಮೂರ್ತಿ.

#ಇವರ_ಆತ್ಮ_ಚರಿತ್ರೆ_ನನ್ನ_ಬಾಲ್ಯ_ಮುದ್ರಣದಲ್ಲಿ.

#ಎರೆಡು_ಭಾಗದಲ್ಲಿ_ಪ್ರಕಟವಾಗಲಿದೆ.

#ಈ_ಪುಸ್ತಕಕ್ಕೆ_ಮುನ್ನುಡಿ_ಬರೆಯುವ_ಅವಕಾಶ_ನನಗೆ.

#ಪುಸ್ತಕ_ಬಿಡುಗಡೆ_ನಿರೀಕ್ಷೆಯಲ್ಲಿ.

  
  ನಾನು A.V. ಕೃಷ್ಣಮೂತಿ೯ ಅವರ ಬರವಣಿಗೆಗೆ ಫಿದಾ ಆದ ಓದುಗ ಅವರ ಸರಣಿ ಲೇಖನಗಳನ್ನು ಬಕ ಪಕ್ಷಿಯಂತೆ ಕಾಯುತ್ತಿದ್ದೆ, ಅವರ ಬರೆದದ್ದೆಲ್ಲ ಪ್ರಕಟ ಮಾಡಿದರೆ ಐದಾರು ಪುಸ್ತಕ ಆಗಲಿದೆ.
    ಅವರ ಪುಸ್ತಕ ಲೋಕಾರ್ಪಣೆ ಆದ ಮೇಲೆ ಅವರೊಬ್ಬ ಹೊಸ ಸಾಹಿತಿ ಕನ್ನಡ ಸಾರಸ್ವತ ಲೋಕದಲ್ಲಿ ಉದಯ ಆಗಲಿದ್ದಾರೆ.
  ಅವರ ಲೇಖನಗಳು ಪುಸ್ತಕವಾಗಲಿ ಎಂದು ಆಶಿಸಿದವರಲ್ಲಿ ನಾನು ಒಬ್ಬ ಅದನ್ನು ಅವರಿಗೆ ಆಗಾಗ ತಿಳಿಸುತ್ತಿದ್ದೆ.
  ಈಗ ಎರೆಡು ಭಾಗದಲ್ಲಿ ಅಚ್ಚಾಗಲಿರುವ ಇವರ ಆತ್ಮಚರಿತ್ರೆ "ನನ್ನ ಬಾಲ್ಯ" ಕ್ಕೆ ಮುನ್ನುಡಿ ಬರೆಯಲು ಪ್ರೀತಿಯಿಂದ ಕೇಳಿದ್ದಾರೆ ಅವರ ಎಲ್ಲಾ ಲೇಖನಗಳನ್ನು ಓದಿರುವ ನಾನು ಬರೆದ ಮುನ್ನುಡಿ ಕೆಳಗಿದೆ.
  A.V.ಕೃಷ್ಣಮೂತಿ೯ ಅವರಿಗೆ ಅವರ ಆತ್ಮಚರಿತ್ರೆ ಪ್ರಕಟವಾಗುವ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ.

#ನಾ_ಬರೆದ_ಮುನ್ನುಡಿ
  ಶಿವಮೊಗ ಜಿಲ್ಲೆಯ ಬಗಲಿನ ಕೊಪ್ಪ ಚಿಕ್ಕಮಗಳೂರು ಜಿಲ್ಲೆಯ ತಾಲ್ಲೂಕು ಕೇಂದ್ರ, 1960 ರ ದಶಕದ ಅಲ್ಲಿನ ಚಿತ್ರಣವನ್ನು A.V. ಕೃಷ್ಣಮೂರ್ತಿ ಎಷ್ಟು ಸುಂದರವಾಗಿ ಸರಳವಾಗಿ ವಿವರಿಸಿದ್ದಾರೆನ್ನುವುದು ಅವರ ಆತ್ಮಚರಿತ್ರೆ ಆದ ಈ ಪುಸ್ತಕದಲ್ಲಿ ನೋಡಬಹುದು.
  ಈ ಲೇಖನ ನನ್ನ ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಗೆಳೆಯರಿಗೆಲ್ಲ ಲಿಂಕ್ ಕಳಿಸಿದ್ದೆ, ಎಲ್ಲರೂ ನಂತರದ ದಿನಗಳಲ್ಲಿ ಇವರ ಲೇಖನಗಳಿಗೆ ಅಭಿಮಾನಿಗಳಾಗಿದ್ದಾರೆ.
  ಇವರ ಆತ್ಮಚರಿತ್ರೆ ಇಂಗ್ಲೀಷ್ ನಲ್ಲಿ ಬರೆದ ನೂರಕ್ಕೂ ಹೆಚ್ಚು ಅಧ್ಯಾಯಗಳನ್ನು ಇವರು ಇವರ ಸಹೋದರಿಗಾಗಿ ಕನ್ನಡದಲ್ಲಿ ಅನುವಾದಿಸಿರುವುದೇ ಈ ಪುಸ್ತಕ.   ಇದರಲ್ಲಿ ಇವರ ಬಾಲ್ಯದ ಕಥೆಗಳು ಮಲೆನಾಡಿನ ಅಂದಿನ ಪರಿಸರ, ಕಾಲಮಾನಗಳ ಜೊತೆ ಪೊಣಿಸಿದ ಸುಂದರವಾದ ಹೂ ಮಾಲೆಯಂತೆ ಇದೆ.
  1954 ರಲ್ಲಿ ತುಂಗಾ ನದಿಯಲ್ಲಿ ದೇಹ ಪರಿತ್ಯಾಗ ಮಾಡಿದ ಶೃಂಗೇರಿ ಜಗದ್ಗುರುಗಳ ಆ ಘಟನೆ, 1965 ರಲ್ಲಿ ಅವರ ಸ್ಮರಣಾರ್ಥ ಶೃಂಗೇರಿಯಲ್ಲಿ ಪ್ರಾರಂಭವಾದ ಕಾಲೇಜು ಉದ್ಘಾಟನೆ ಮಾಡಿದವರು ಮಣಿಪಾಲಿನ ಡಾ.ಟಿ.ಎಂ.ಎ.ಪೈ. ಆ ಕಾರ್ಯಕ್ರಮದ ಅಧ್ಯಕ್ಷತೆ ಅಂದಿನ ಚಿಕ್ಕಮಗಳೂರು ಜಿಲ್ಲಾದಿಕಾರಿ H. L. ನಾಗೇಗೌಡರು (ಜನಪದ ಲೋಕ) ವಹಿಸಿದ್ದರಂತೆ.
  ಆಡಳಿತ ಮಂಡಳಿ ಒತ್ತಾಯದಿಂದ ಶಿವಮೊಗ್ಗದ ಶಾಲೆ ತೊರೆದು ಈ ಕಾಲೇಜಿನ ಮೊದಲ ವಿದ್ಯಾರ್ಥಿ ಆದ  A.V. ಕೃಷ್ಣಮೂರ್ತಿ ಅದೇ ವರ್ಷ ರಾಜ್ಯಕ್ಕೆ 4 ನೇ ರ್ಯಾಂಕ್ ತಂದು ಕಾಲೇಜಿನ ಇತಿಹಾಸದಲ್ಲಿ ದಾಖಲೆ ಮಾಡುತ್ತಾರೆ.
   ಬಿಎಸ್ಸಿಯಲ್ಲಿ ರಾಜ್ಯಕ್ಕೆ 10 ನೇ ರ್ಯಾಂಕ್ ಬರುತ್ತದೆ ಇವರಿಗೆ, ನಂತರ ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಖನಿಜ ಶಾಸ್ತ್ರದಲ್ಲಿ ಇಂಜಿನಿಯರಿಂಗ್ ಕಲಿಯಲು ಸೇರುತ್ತಾರೆ ಆದರೆ ಕೆಲವೇ ದಿನಗಳಲ್ಲಿ ಬೆಂಗಳೂರಿನ ಸುಭಾಷ್ ನಗರ ಬಸ್ ನಿಲ್ದಾಣದಿಂದ ಶೃಂಗೇರಿಗೆ ಇವರಣ್ಣ ಪುಟ್ಟಣ್ಣನ ಜೊತೆ ವಾಪಾಸ್ ಬರುತ್ತಾರೆ೦ದರೆ ಬಡವರಿಗೆ ಅಹ೯ತೆ ಇದ್ದರೂ ಹಣ ಹೊಂದಿಸಲಾಗದೆ ಅನರ್ಹರಾಗುವ ಅವರ ಜೀವನದ ಕಥೆ ಒಂದು ದುರಂತವೇ ಆಗಿದೆ.
  ನಿಜಕ್ಕೂ ನನಗೆ ಇವರ ಲೇಖನಗಳು ರಸವತ್ತಾಗಿ ಮುಂದಿನ ಅಧ್ಯಾಯಕ್ಕಾಗಿ ಕಾಯುತ್ತಿದ್ದೆ, ಕೆಲವು ಅವರ ಜೀವನದ ಕಷ್ಟಗಳು ನನ್ನ ದುಃಖ ಉಮ್ಮಳಿಸಿತ್ತಿತ್ತು.
   ಇಂಜಿನಿಯರ್ ಆಗಿ ದೊಡ್ಡ ವಿಜ್ಞಾನಿಯೇ ಆಗಬಹುದಿದ್ದ ಪ್ರತಿಭಾವಂತ A.V. ಕೃಷ್ಣಮೂರ್ತಿ ಬ್ಯಾಂಕ್ ಆಡಿಟರ್ ಆಗಿ ಸೀನಿಯರ್ ಮ್ಯಾನೇಜರ್ ಆಗಿ ಸ್ವಯಂ ನಿವೃತ್ತರಾಗಿದ್ದಾರೆ.
   ಇವರ ಹುರಳಿ ಹಕ್ಕಲಿನ ಗತ ವೈಭವ, ಬ್ಯಾಂಕಿನ ದಿನಗಳು ಮುಂದಿನ ದಿನಗಳಲ್ಲಿ ಕನ್ನಡ ಓದುಗರಿಗೆ ಪುಸ್ತಕವಾಗಿ ಸಿಗಲಿ ಎಂದು ಹಾರೈಸುತ್ತೇನೆ.
  1960-70 ರ ದಶಕದ ಶಿವಮೊಗ್ಗ ಅವತ್ತಿನ ಶಿವಮೊಗ್ಗದ ಮಿನಾಕ್ಷಿ ಭವನ, ಗಾರ್ಡನ್ ಏರಿಯಾ,ನೆಹರೂ ರಸ್ತೆ, ಬ್ರಾಹ್ಮಣ ವಿದ್ಯಾರ್ಥಿ ನಿಲಯ, ನ್ಯಾಷನಲ್ ವಿದ್ಯಾ ಸಂಸ್ಥೆ, ಸಹ್ಯಾದ್ರಿ ಕಾಲೇಜು, ಅಂದಿನ ಖ್ಯಾತ ಸಾರಿಗೆ ಬಸ್ಸುಗಳಾದ CKMS ಮತ್ತು ಶಂಕರ್ ಕಂಪನಿ, ಅಡಿಕೆ - ಭತ್ತ- ವೀಳ್ಯದೆಲೆ ಕೃಷಿ ಮತ್ತು ಅದರ ಮಾರಾಟ, ಆಗಷ್ಟೇ ಬಳಕೆ ಪ್ರಾರಂಭವಾದ ಗ್ರಾಮಾಫೋನು, ಅಲಾರಂ, ರೆಡಿಯೋ ಇತ್ಯಾದಿಗಳಿಂದ ನಮ್ಮನ್ನೆಲ್ಲಾ ಹಿಂದಿನ ಶತಮಾನಕ್ಕೆ ಕರೆದೊಯ್ಯುವ ಈ ಶಕ್ತಿಶಾಲಿ ಲೇಖಕ A.V. ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸಾಹಿತಿಗಳಾಗಿದ್ದಾರೆ.
  ಅವರ ಜೀವನದ ನೆನಪುಗಳು ಎಲ್ಲವೂ ಪುಸ್ತಕವಾಗಿ ಬರಲಿ ಎ೦ದು ಹಾರೈಸುತ್ತೇನೆ.
ಇತಿ.
ಕೆ.ಅರುಣ್ ಪ್ರಸಾದ್
ಹೊಂಬುಜ ರೆಸಿಡೆನ್ಸಿ
ಆನಂದಪುರಂ
 arunprasadsagar@gmail.com

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ