Skip to main content

Blog number 1584. ರುದ್ರಾಕ್ಷಿ ಹಲಸಿನ ಹಣ್ಣು 50 ವಷ೯ದ ನಂತರ ತಿಂದ ಅನುಭವ ಮತ್ತು ಆ ದಿನದ ನೆನಪುಗಳ ಸರಣಿಯ ಪುನರ್ ಸ್ಮರಣೆ

https://youtu.be/5dKMcBzRLP8

#ರುದ್ರಾಕ್ಷಿ_ಹಲಸಿನ_ಹಣ್ಣು

#ಐವತ್ತು_ವರ್ಷದ_ನಂತರ_ಸವಿದ_ಈ_ತಳಿ.

#ಬಾಲ್ಯದಲ್ಲಿ_ಬಿದನೂರು_ನಗರದಲ್ಲಿನ

#ದೇವಗಂಗೆ_ಮನೆಯಲ್ಲಿ_ದೊಡ್ದಮ್ಮ_ತಿನ್ನಿಸಿದ_ನೆನಪು

#ಗೆಳೆಯರಾದ_ಶೃಂಗೇಶರ_ಉಡುಗೊರೆ.

  ಪ್ರತಿ ವರ್ಷ ತೀರ್ಮಾನ ಮಾಡುವುದು ಈ ವರ್ಷ ಹಲಸಿನ ಹಣ್ಣಿನ ಸೀಸನ್ ನಲ್ಲಿ ರುದ್ರಾಕ್ಷಿ ಹಲಸು ಹುಡುಕಿ ತರಬೇಕು ಅಂತ ಅದಕ್ಕ ಕಾರಣ ನನ್ನ ತಾಯಿಯ ಅಕ್ಕನ ಅಂದರೆ ನನ್ನ ದೊಡ್ಡಮ್ಮ ಮತ್ತು ದೊಡ್ಡಪ್ಪರ ಮನೆ ಕೃಷಿ ಭೂಮಿ ಬಿದನೂರು ನಗರದ ಐತಿಹಾಸಿಕ ಕೆಳದಿ ರಾಜವಂಶಸ್ಥರ ನೈಸರ್ಗಿಕ ಈಜು ಕೊಳದ ಪಕ್ಕದಲ್ಲಿಯೆ ಇದೆ.
  ಅಲ್ಲಿ ನನ್ನ ಬಾಲ್ಯದ ಸಿಹಿಯಾದ ಸವಿಯಾದ ನೆನಪುಗಳಿದೆ ಅದರಲ್ಲಿ ನೂರಾರು ರುಚಿ ಸ್ವಾದದ ಮಾವಿನ ಹಣ್ಣು, ಹಲಸಿನ ಹಣ್ಣುಗಳ ತಿಂದ ನೆನಪುಗಳು ಆದರೆ ಮುಂಗಾರು ಪೂರ್ವದ ಮತ್ತು ನಂತರದ ದಿನಗಳಲ್ಲಿ ಅದೆಂತಹದ್ದೋ ಆದ ಗಡಿಬಿಡಿಯ ಬೇರೆ ಕೆಲಸಗಳ ತಯಾರಿ ಮತ್ತು ಅದನ್ನು ಮುಗಿಸುವಲ್ಲಿ ಹಲಸಿನ ಸೀಸನ್ ಮುಕ್ತಾಯವಾಗಿರುತ್ತದೆ ಮತ್ತೆ ಹೊಸ ಪ್ಲಾನ್ ಮುಂದಿನ ವರ್ಷಕ್ಕೆ ಅಂತ ಮಾಡುವುದು ಈ ರೀತಿ 50 ವರ್ಷದಿಂದ ರುದ್ರಾಕ್ಷಿ ಹಲಸು ತಿಂದೇ ಇರಲಿಲ್ಲ.
  ರುದ್ರಾಕ್ಷಿ ಹಲಸಿನಲ್ಲೂ ಹಲವು ಬಗೆಯಿದೆ, ಇದು ಸಣ್ಣ ಪುಟ್ ಬಾಲ್ ಗಾತ್ರಕ್ಕಿಂತ ಕೊಂಚ ಸಣ್ಣದೆ, ಮುಳ್ಳುಗಳು ಅತಿ ಕಡಿಮೆಯ ನುಣ್ಣನೆ ಕವಚ ಮತ್ತು ದಾಕ್ಷಿ ಗೊಂಚಲು ನೆನಪಿಸುವಂತೆ ಹಲಸಿನ ಮರದ ಬುಡದಿಂದ ತಲೆ ತನಕ ಹಲಸಿನ ಹಣ್ಣುಗಳು, ದ್ರಾಕ್ಷಿಗಿಂತ ದೊಡ್ಡದಿರುವುದರಿಂದ ರುದ್ರಾಕ್ಷಿ ಆ೦ತ ಕರೆಯುತ್ತಾರೇನೋ ಗೊತ್ತಿಲ್ಲ.
  ಪತ್ರಕರ್ತ ಗೆಳೆಯರು, ನವೀನ ರೀತಿಯ ಕೃಷಿಕರು ಮತ್ತು ಕೃಷಿಯ ಆಸಕ್ತಿಯಿಂದ ತಿರುಗಾಟ ಮಾಡುವ ಶೃಂಗೇಶ್ ಈ ಒಂದು ರುದ್ರಾಕ್ಷಿ ಹಲಸಿನ ಹಣ್ಣು ಕಳಿಸಿದ್ದರು ಇದು ಪುಟ್ ಬಾಲ್ ನ ಅರ್ದ ಗಾತ್ರದ್ದು ಇವತ್ತು ತುಂಬಾ ಆಸಕ್ತಿ ಮತ್ತು ಆಶೆಯಿಂದ 50 ವರ್ಷದ ಹಿಂದಿನ ದೊಡ್ಡಮ್ಮನ ಮನೆ ಪರಿಸರಗಳ ನೆನಪು ಮಾಡುತ್ತಾ ನಾನೇ ಕತ್ತರಿಸಿದೆ.
  ಸಣ್ಣ 20 ಹಲಸಿನ ತೊಳೆಗಳು ಮತ್ತು 20 ಹಲಸಿನ ಬೀಜ ನಮಗೆ ಮತ್ತು ಹಲಸಿನ ಸಿಪ್ಪೆ ಇತ್ಯಾದಿ ದನಗಳಿಗೆ ಆಯಿತು. 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...