Skip to main content

Blog number 1624. ರಾಜ್ಯದ ಪ್ರಖ್ಯಾತ ಶೈಲಿ ಹ್ಯಾಂಡ್ ಲೂಂ ರೆಡಿಮೆಡ್ ಕ್ಲಾತ್ ಸಂಸ್ಥೆ ಯಶಸ್ಸಿನ ಸಾದಕರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸುಂದರ್ ಮತ್ತು ವಿಜಯ ಲಕ್ಷ್ಮಿ ದಂಪತಿಗಳು ನನ್ನ ಅತಿಥಿ.

#ಶಿವಮೊಗ್ಗ_ಜಿಲ್ಲೆಯ_ಹೆಗ್ಗೋಡಿನ_ಕೈಮಗ್ಗದ_ಸಿದ್ಧಉಡುಪುಗಳ_ಶೈಲಿ_ಸಂಸ್ಥೆ

#ಈ_ಸಂಸ್ಥೆಯ_ಹಿಂದಿನ_ಶ್ರಮಜೀವಿ_ದಂಪತಿಗಳು

#ಸುಂದರ್_ವಿಜಯಲಕ್ಷ್ಮಿ_ದಂಪತಿಗಳು.

#ರಾಜ್ಯದಾದ್ಯಂತ_ಮಾರಾಟ_ಆಗುತ್ತಿರುವ_ಶೈಲಿ_ಬ್ರಾಂಡ್_ಕೈಮಗ್ಗದ_ಸಿದ್ದಉಡುಪು

#ಯಶಸ್ವಿ_ಉದ್ದಿಮೆಯ_ದಂಪತಿಗಳು_ನನ್ನ_ಅತಿಥಿಗಳು.
   1996ರಲ್ಲಿ ಹೆಗೋಡಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಸನ್ನರು ಪ್ರಾರಂಭ ಮಾಡಿದ ಚರಕ ಸಂಸ್ಥೆಯಲ್ಲಿ ಈ ಸುಂದರ್ ಪ್ರಾರಂಭದಿಂದ ಇದ್ದವರು.
  ಆಗ ನಾನು ಚರಕ ಸಂಸ್ಥೆಯಲ್ಲಿ ನನ್ನ ಅಳತೆಯ ಶರ್ಟ್ ಮತ್ತು ಜುಬ್ಬಾಗಳು ನನಗೆ ಸರಿ ಹೊಂದುವುದಿಲ್ಲ ಎಂದು ಪ್ರಸನ್ನರಲ್ಲಿ ಹೇಳಿದಾಗ ಅವರು ನಮ್ಮಲ್ಲಿರುವ ಸುಂದರ್ ಎ೦ಬ ಯುವಕ ತುಂಬಾ ಪರಿಣಿತರಿದ್ದಾರೆ ಅವರನ್ನು ಪರಿಚಯಿಸುತ್ತೇನೆಂದು ಪರಿಚಯ ಮಾಡಿದ ಸುಂದರ್ ಹೆಸರಿಗೆ ತಕ್ಕ ಸುಂದರಾಂಗನೇ ಆಗಿದ್ದರು.
  ಸದಾ ಹಸನ್ಮುಖಿ, ಮಿತ ಭಾಷಿ ಹಾಗೂ ಶ್ರಮಜೀವಿ ಆದ ಸುಂದರ್ ಪ್ರಸನ್ನ ಒಮ್ಮೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಚೆಕ್ ಕೇಸ್ ದಾಖಲಿಸಿದ್ದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಂದಾನಕ್ಕೆ ಮತ್ತಿಕೊಪ್ಪದ ಹರನಾಥ ರಾಯರ ಜೊತೆ ಹೋದಾಗ ಪ್ರಸನ್ನರ ಜೊತೆ ಈ ಸುಂದರ್ ಇದ್ದರು.
  ನಂತರ ಕೆಲ ವರ್ಷ ನನಗೆ ಬೇಕಾದ ಶರ್ಟ್ ಮತ್ತು ಜುಬ್ಬಾಕ್ಕೆ ನಾನು ಸುಂದರ್ ಅವರನ್ನು ಅವಲಂಬಿಸಿದ್ದೆ ಅದು 2013ರ ವರೆಗೆ ಹೆಗ್ಗೋಡಿನ ಮುಖ್ಯ ರಸ್ತೆಯ ಚರಕ ಮಳಿಗೆಯಲ್ಲೂ ಖರೀದಿಸುತ್ತಿದ್ದೆ.
  2014ರಿಂದ ಚರಕ ಸಂಸ್ಥೆಯಿಂದ ಹೊರಬಂದ ಸುಂದರ್ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಎಂಬ ಸಂಸ್ಥೆ ಪ್ರಾರಂಬಿಸಿ ಹೆಗ್ಗೋಡಿನ ನಾಲ್ಕು ರಸ್ತೆ ವೃತ್ತದ ಅವರ ಸ್ವಂತ ಮನೆಯಲ್ಲಿ ಉಡುಪು ತಯಾರಿ ಮತ್ತು ಮಾರಾಟ ಪ್ರಾರಂಬಿಸಿದರು, ಸುಂದರ್ ಅವರ ಈ ಸಾಹಸಕ್ಕೆ ಬೆಂಗಾವಲಾಗಿ ನಿಂತ ಇವರ ಪತ್ನಿ ವಿಜಯಲಕ್ಷ್ಮಿ ಈ ಉದ್ಯಮದ ಯಶಸ್ವಿನ ವಿಜಯಕ್ಕೆ ಪತಿಯ ಜೊತೆ ಹೆಗಲಿಗೆ ಹೆಗಲು ನೀಡಿದರು.
  ಇವತ್ತು ಶೈಲಿ ಸಂಸ್ಥೆ ರಾಜ್ಯದ ಪ್ರಖ್ಯಾತ ಕೈಮಗ್ಗದ ಸಿದ್ಧ ಉಡುಪು ಬ್ರಾಂಡ್ ಆಗಿದೆ, ಜಿಲ್ಲೆಗೆ ಬರುವ ಪ್ರವಾಸಿಗಳು ಇಲ್ಲಿಗೆ ಹುಡುಕಿ ಕೊಂಡು ಬರುತ್ತಾರೆ ಇವರ ಖಾಯಂ ಆದ ಗ್ರಾಹಕರು ಸಾವಿರಾರು ಜನ ಇದ್ದಾರೆ.
  ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಅನೇಕ ಜಿಲ್ಲಾ ಕೇಂದ್ರದಲ್ಲಿ ಶೈಲಿ ಸಿದ್ದ ಉಡುಪು ಮಾರಾಟದ ಕೇಂದ್ರಗಳಿದೆ.
  ಶಿವಮೊಗ್ಗದಿಂದ ಬರುವಾಗ ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಸೇವಿಸಿ ನಂತರ ನಮ್ಮ ಚಂಪಕಾ ಪ್ಯಾರಾಡೈಸಿನಲ್ಲಿ ಮಡಕಾ ದಮ್ ಬಿರಿಯಾನಿಗೆ ಆರ್ಡರ್ ಮಾಡಿ ನನ್ನ ಆಫೀಸಿಗೆ ಬಂದಿದ್ದರು.
   ನನ್ನ ಸಹೋದರ ಮತ್ತು ನಮ್ಮ ಸಂಸ್ಥೆಯ ವ್ಯವಸ್ಥಾಪಕರು ಹೆಗ್ಗೋಡಿನ ಸುಂದರ್ ದಂಪತಿಗಳ ಶೈಲಿ ಸಂಸ್ಥೆಯ ಖಾಯ೦ ಗ್ರಾಹಕರು, ನಮ್ಮ ಕುಟು೦ಬದ ಅನೇಕರು ಇವರಲ್ಲಿ ಖರೀದಿಗೆ ಹೋಗುತ್ತಾರೆ, ನಮ್ಮ ಲಾಡ್ಜ್ ಗೆ ಬರುವ ಪ್ರವಾಸಿಗಳಿಗೂ ಇವರಲ್ಲಿ ದೊರೆಯುವ ಉಡುಪಿನ ಮಾಹಿತಿ ನೀಡುವುದರಿಂದ ಅವರೂ ಅಲ್ಲಿಗೆ ಹೋಗುತ್ತಾರೆ, ನವ ನವೀನವಾದ ಹೊಸ ಹೊಸ ವಿನ್ಯಾಸದ ಮಹಿಳೆಯರ ಮತ್ತು ಪುರುಷರ ಹಾಗೂ ಮಕ್ಕಳ ಸಿದ್ದ ಉಡುಪು ಗ್ರಾಹಕರನ್ನು ಆಕರ್ಷಿಸುತ್ತದೆ ಇದು ಶೈಲಿ ಸಂಸ್ಥೆಯ ಯಶಸ್ಸಿನ ಗುಟ್ಟು.
 ನನ್ನ ಡೊಳ್ಳು ಹೊಟ್ಟೆಯ ಪಿಟಿಂಗ್ ಸರಿ ಹೊಂದುವ ಶರ್ಟ್ ಸಿಗದ ಬಗ್ಗೆ ಸುಂದರ್ ನನಗಾಗಿ ಅವರ ಸಂಸ್ಥೆಯ ಪರಿಣಿತರಿಂದ ತಯಾರಿಸಿ ಕೊಡುವ ಭರವಸೆ ನೀಡಿದ್ದಾರೆ.
    ಸ್ಥಳಿಯ ನೂರಾರು ಜನರಿಗೆ ಇವರ ಸಂಸ್ಥೆ ಉದ್ಯೋಗ ನೀಡಿದೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಉಡುಪು ತಯಾರಿಕಾ ಘಟಕ ಸ್ಥಾಪನೆಯ ಕನಸು ಈ ದಂಪತಿಗಳದ್ದು ಅವರ ಕನಸು ನನಸಾಗಲಿ ಎಂದು ಹಾರೈಸಿ ನಾನು ಬರೆದ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದೆ.
  ಹೆಗ್ಗೋಡು ಎ೦ಬ ಈ ಸಣ್ಣ ಊರಿನ ಶೈಲಿ ಸಂಸ್ಥೆ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಸ್ವಯಂ ಉದ್ಯೋಗ ಮಾಡುವವರಿಗೆ ಒಂದು ರೋಲ್ ಮಾಡೆಲ್ ಆಗಿದೆ.
  ಹೆಗ್ಗೋಡಿನ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಸಂಸ್ಥೆ ಸಂಪರ್ಕಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ 
https://g.co/kgs/HqqATc.
   ಶೈಲಿ ಸಂಸ್ಥೆ ಮಾಲಿಕರಾದ ಸುಂದರ್ ಸಂಪರ್ಕ ಸಂಖ್ಯೆ +91 99002 57649.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ