Skip to main content

Blog number 1624. ರಾಜ್ಯದ ಪ್ರಖ್ಯಾತ ಶೈಲಿ ಹ್ಯಾಂಡ್ ಲೂಂ ರೆಡಿಮೆಡ್ ಕ್ಲಾತ್ ಸಂಸ್ಥೆ ಯಶಸ್ಸಿನ ಸಾದಕರಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸುಂದರ್ ಮತ್ತು ವಿಜಯ ಲಕ್ಷ್ಮಿ ದಂಪತಿಗಳು ನನ್ನ ಅತಿಥಿ.

#ಶಿವಮೊಗ್ಗ_ಜಿಲ್ಲೆಯ_ಹೆಗ್ಗೋಡಿನ_ಕೈಮಗ್ಗದ_ಸಿದ್ಧಉಡುಪುಗಳ_ಶೈಲಿ_ಸಂಸ್ಥೆ

#ಈ_ಸಂಸ್ಥೆಯ_ಹಿಂದಿನ_ಶ್ರಮಜೀವಿ_ದಂಪತಿಗಳು

#ಸುಂದರ್_ವಿಜಯಲಕ್ಷ್ಮಿ_ದಂಪತಿಗಳು.

#ರಾಜ್ಯದಾದ್ಯಂತ_ಮಾರಾಟ_ಆಗುತ್ತಿರುವ_ಶೈಲಿ_ಬ್ರಾಂಡ್_ಕೈಮಗ್ಗದ_ಸಿದ್ದಉಡುಪು

#ಯಶಸ್ವಿ_ಉದ್ದಿಮೆಯ_ದಂಪತಿಗಳು_ನನ್ನ_ಅತಿಥಿಗಳು.
   1996ರಲ್ಲಿ ಹೆಗೋಡಿನಲ್ಲಿ ಖ್ಯಾತ ರಂಗ ನಿರ್ದೇಶಕ ಪ್ರಸನ್ನರು ಪ್ರಾರಂಭ ಮಾಡಿದ ಚರಕ ಸಂಸ್ಥೆಯಲ್ಲಿ ಈ ಸುಂದರ್ ಪ್ರಾರಂಭದಿಂದ ಇದ್ದವರು.
  ಆಗ ನಾನು ಚರಕ ಸಂಸ್ಥೆಯಲ್ಲಿ ನನ್ನ ಅಳತೆಯ ಶರ್ಟ್ ಮತ್ತು ಜುಬ್ಬಾಗಳು ನನಗೆ ಸರಿ ಹೊಂದುವುದಿಲ್ಲ ಎಂದು ಪ್ರಸನ್ನರಲ್ಲಿ ಹೇಳಿದಾಗ ಅವರು ನಮ್ಮಲ್ಲಿರುವ ಸುಂದರ್ ಎ೦ಬ ಯುವಕ ತುಂಬಾ ಪರಿಣಿತರಿದ್ದಾರೆ ಅವರನ್ನು ಪರಿಚಯಿಸುತ್ತೇನೆಂದು ಪರಿಚಯ ಮಾಡಿದ ಸುಂದರ್ ಹೆಸರಿಗೆ ತಕ್ಕ ಸುಂದರಾಂಗನೇ ಆಗಿದ್ದರು.
  ಸದಾ ಹಸನ್ಮುಖಿ, ಮಿತ ಭಾಷಿ ಹಾಗೂ ಶ್ರಮಜೀವಿ ಆದ ಸುಂದರ್ ಪ್ರಸನ್ನ ಒಮ್ಮೆ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣ ಚೆಕ್ ಕೇಸ್ ದಾಖಲಿಸಿದ್ದನ್ನು ವಿರೋದಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಂದಾನಕ್ಕೆ ಮತ್ತಿಕೊಪ್ಪದ ಹರನಾಥ ರಾಯರ ಜೊತೆ ಹೋದಾಗ ಪ್ರಸನ್ನರ ಜೊತೆ ಈ ಸುಂದರ್ ಇದ್ದರು.
  ನಂತರ ಕೆಲ ವರ್ಷ ನನಗೆ ಬೇಕಾದ ಶರ್ಟ್ ಮತ್ತು ಜುಬ್ಬಾಕ್ಕೆ ನಾನು ಸುಂದರ್ ಅವರನ್ನು ಅವಲಂಬಿಸಿದ್ದೆ ಅದು 2013ರ ವರೆಗೆ ಹೆಗ್ಗೋಡಿನ ಮುಖ್ಯ ರಸ್ತೆಯ ಚರಕ ಮಳಿಗೆಯಲ್ಲೂ ಖರೀದಿಸುತ್ತಿದ್ದೆ.
  2014ರಿಂದ ಚರಕ ಸಂಸ್ಥೆಯಿಂದ ಹೊರಬಂದ ಸುಂದರ್ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಎಂಬ ಸಂಸ್ಥೆ ಪ್ರಾರಂಬಿಸಿ ಹೆಗ್ಗೋಡಿನ ನಾಲ್ಕು ರಸ್ತೆ ವೃತ್ತದ ಅವರ ಸ್ವಂತ ಮನೆಯಲ್ಲಿ ಉಡುಪು ತಯಾರಿ ಮತ್ತು ಮಾರಾಟ ಪ್ರಾರಂಬಿಸಿದರು, ಸುಂದರ್ ಅವರ ಈ ಸಾಹಸಕ್ಕೆ ಬೆಂಗಾವಲಾಗಿ ನಿಂತ ಇವರ ಪತ್ನಿ ವಿಜಯಲಕ್ಷ್ಮಿ ಈ ಉದ್ಯಮದ ಯಶಸ್ವಿನ ವಿಜಯಕ್ಕೆ ಪತಿಯ ಜೊತೆ ಹೆಗಲಿಗೆ ಹೆಗಲು ನೀಡಿದರು.
  ಇವತ್ತು ಶೈಲಿ ಸಂಸ್ಥೆ ರಾಜ್ಯದ ಪ್ರಖ್ಯಾತ ಕೈಮಗ್ಗದ ಸಿದ್ಧ ಉಡುಪು ಬ್ರಾಂಡ್ ಆಗಿದೆ, ಜಿಲ್ಲೆಗೆ ಬರುವ ಪ್ರವಾಸಿಗಳು ಇಲ್ಲಿಗೆ ಹುಡುಕಿ ಕೊಂಡು ಬರುತ್ತಾರೆ ಇವರ ಖಾಯಂ ಆದ ಗ್ರಾಹಕರು ಸಾವಿರಾರು ಜನ ಇದ್ದಾರೆ.
  ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ಅನೇಕ ಜಿಲ್ಲಾ ಕೇಂದ್ರದಲ್ಲಿ ಶೈಲಿ ಸಿದ್ದ ಉಡುಪು ಮಾರಾಟದ ಕೇಂದ್ರಗಳಿದೆ.
  ಶಿವಮೊಗ್ಗದಿಂದ ಬರುವಾಗ ನಮ್ಮ ಮಲ್ಲಿಕಾ ವೆಜ್ ನಲ್ಲಿ ಉಪಹಾರ ಸೇವಿಸಿ ನಂತರ ನಮ್ಮ ಚಂಪಕಾ ಪ್ಯಾರಾಡೈಸಿನಲ್ಲಿ ಮಡಕಾ ದಮ್ ಬಿರಿಯಾನಿಗೆ ಆರ್ಡರ್ ಮಾಡಿ ನನ್ನ ಆಫೀಸಿಗೆ ಬಂದಿದ್ದರು.
   ನನ್ನ ಸಹೋದರ ಮತ್ತು ನಮ್ಮ ಸಂಸ್ಥೆಯ ವ್ಯವಸ್ಥಾಪಕರು ಹೆಗ್ಗೋಡಿನ ಸುಂದರ್ ದಂಪತಿಗಳ ಶೈಲಿ ಸಂಸ್ಥೆಯ ಖಾಯ೦ ಗ್ರಾಹಕರು, ನಮ್ಮ ಕುಟು೦ಬದ ಅನೇಕರು ಇವರಲ್ಲಿ ಖರೀದಿಗೆ ಹೋಗುತ್ತಾರೆ, ನಮ್ಮ ಲಾಡ್ಜ್ ಗೆ ಬರುವ ಪ್ರವಾಸಿಗಳಿಗೂ ಇವರಲ್ಲಿ ದೊರೆಯುವ ಉಡುಪಿನ ಮಾಹಿತಿ ನೀಡುವುದರಿಂದ ಅವರೂ ಅಲ್ಲಿಗೆ ಹೋಗುತ್ತಾರೆ, ನವ ನವೀನವಾದ ಹೊಸ ಹೊಸ ವಿನ್ಯಾಸದ ಮಹಿಳೆಯರ ಮತ್ತು ಪುರುಷರ ಹಾಗೂ ಮಕ್ಕಳ ಸಿದ್ದ ಉಡುಪು ಗ್ರಾಹಕರನ್ನು ಆಕರ್ಷಿಸುತ್ತದೆ ಇದು ಶೈಲಿ ಸಂಸ್ಥೆಯ ಯಶಸ್ಸಿನ ಗುಟ್ಟು.
 ನನ್ನ ಡೊಳ್ಳು ಹೊಟ್ಟೆಯ ಪಿಟಿಂಗ್ ಸರಿ ಹೊಂದುವ ಶರ್ಟ್ ಸಿಗದ ಬಗ್ಗೆ ಸುಂದರ್ ನನಗಾಗಿ ಅವರ ಸಂಸ್ಥೆಯ ಪರಿಣಿತರಿಂದ ತಯಾರಿಸಿ ಕೊಡುವ ಭರವಸೆ ನೀಡಿದ್ದಾರೆ.
    ಸ್ಥಳಿಯ ನೂರಾರು ಜನರಿಗೆ ಇವರ ಸಂಸ್ಥೆ ಉದ್ಯೋಗ ನೀಡಿದೆ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಉಡುಪು ತಯಾರಿಕಾ ಘಟಕ ಸ್ಥಾಪನೆಯ ಕನಸು ಈ ದಂಪತಿಗಳದ್ದು ಅವರ ಕನಸು ನನಸಾಗಲಿ ಎಂದು ಹಾರೈಸಿ ನಾನು ಬರೆದ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದೆ.
  ಹೆಗ್ಗೋಡು ಎ೦ಬ ಈ ಸಣ್ಣ ಊರಿನ ಶೈಲಿ ಸಂಸ್ಥೆ ಹತ್ತು ವರ್ಷಗಳಲ್ಲಿ ಮಾಡಿದ ಸಾಧನೆ ಸ್ವಯಂ ಉದ್ಯೋಗ ಮಾಡುವವರಿಗೆ ಒಂದು ರೋಲ್ ಮಾಡೆಲ್ ಆಗಿದೆ.
  ಹೆಗ್ಗೋಡಿನ ಶೈಲಿ ಹ್ಯಾಂಡ್ ಲೂಂ ರೆಡಿಮೇಡ್ ಕ್ಲಾತ್ ಸಂಸ್ಥೆ ಸಂಪರ್ಕಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ 
https://g.co/kgs/HqqATc.
   ಶೈಲಿ ಸಂಸ್ಥೆ ಮಾಲಿಕರಾದ ಸುಂದರ್ ಸಂಪರ್ಕ ಸಂಖ್ಯೆ +91 99002 57649.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...