Skip to main content

Blog number 1629. ಕಪ್ಪೆ ಮಳೆಯ ಕಥೆ

#ಇದು_ಕಾಲ್ಪನಿಕ_ಕಥೆ_ಅಲ್ಲ

#ಸತ್ಯ_ಕಥೆ

#ಕಪ್ಪೆ_ಮಳೆ

#ಎಲ್ಲಾದರೂ_ಕೇಳಿದವರು_ನೋಡಿದವರು_ಇದ್ದಾರ?

#ಮಳೆಯ_ಹನಿಗಳ_ಜೊತೆ_ದರೆಗೆ_ಉರುಳಿದ_ಕಪ್ಪೆಗಳು

https://youtu.be/a1NHfpV1sSA


   ತುಂಬಾ ತಡವಾಗಿ ಮೊನ್ನೆ ಮಧ್ಯಾಹ್ನ ಮುಂಗಾರು ಮಳೆ ಪ್ರಾರಂಭವಾಯಿತು ಅಂತ ಸಂತಸದಲ್ಲಿದ್ದಾಗಲೆ ನಮ್ಮ ಕೆಲಸದ ಹೆಣ್ಣು ಮಗಳು ಜೋರಾಗಿ ಕೂಗುತ್ತಾ ಮಳೆಯ ಜೊತೆ ಕಪ್ಪೆಗಳು ಬೀಳುತ್ತಿದೆ ಅಂತ ಜೋರಾಗಿ ಭಯದಿಂದ ಕೂಗುತ್ತಾ ಓಡಿ ಆಫೀಸಿನ ಒಳ ಬಂದಾಗ ನನಗೂ ಆಶ್ವರ್ಯ.
   ಅವಳು ದೈಯ೯ವಂತೆ ಹೆಣ್ಣು ಮಗಳು ಹಾಗೆಲ್ಲ ಸುಳ್ಳು ಹೇಳುವವಳೂ ಅಲ್ಲ, ಅವಳು ಮರುದಿನ ಭಾನುವಾರ ನಮ್ಮ ಕಲ್ಯಾಣ ಮಂಟಪದಲ್ಲಿ ನಿಗದಿ ಆಗಿದ್ದ ಮದುವೆಗಾಗಿ ಸ್ವಚ್ಚತಾ ಕೆಲಸ ನಿರ್ವಹಣೆ ಮಾಡುತ್ತಿರುವಾಗ ಬೆಳಗಿನಿಂದ ನಿಲ್ಲದ ಮಳೆ ನೋಡಿ ಮಳೆಯಲ್ಲೇ ಕಲ್ಯಾಣ ಮಂಟಪದಿಂದ ಲಾಡ್ಜ್ ಆಫೀಸಿಗೆ ಬರುವಾಗ ಅವಳ ಮೇಲೆ ಮಳೆಯ ಹನಿಯ ಜೊತೆ ಕಪ್ಪೆಗಳು ಬಿಳುವುದು ನೋಡಿ ಭಯ ಪಟ್ಟಿದ್ದಾಳೆ.
   ಇವಳ ಮಾತು ಕೇಳಿದ ಬೇರೆ ಸಿಬ್ಬಂದಿಗಳು ಲಾಡ್ಜ್ ನ ಒಳಗಿನಿಂದಲೇ ಸ್ಲೈಡಿಂಗ್ ಕಿಟಕಿ ಸರಿಸಿ ಹೊರನೋಡಿ ಅವರೂ ಅಲ್ಲಿಂದಲೇ " ಹೌದು ಹೌದು ಮ೦ಜುಳಮ್ಮ ಹೇಳಿದ್ದು ಸತ್ಯ ..... ಮಳೆ ಜೊತೆ ಆಕಾಶದಿಂದ ಕಪ್ಪೆ ಬೀಳುತ್ತಿದೆ.... ನೋಡಿ ಬನ್ನಿ .... ಅಂದಾಗ ಎಲ್ಲಾ ಕೆಲಸದವರು ಪ್ರತ್ಯಕ್ಷ ಸಾಕ್ಷಿಗಳಾಗಿ ಸಾಕ್ಷಿಕರಿಸಿದರು.
   ನನಗೆ ಇದು ಆಶ್ಚಯ೯ ಮತ್ತು ದಿಗಿಲಿಗೆ ಕಾರಣವಾಯಿತು ತಕ್ಷಣ ನನಗೆ ನೆನಪಾಗಿದ್ದು ಆಶ್ಲೇಷ ಮಳೆಯಲ್ಲಿ ಸೊಸಲೆ ಮೀನು ತೆಂಗಿನ ಮರ ಹತ್ತಿತ್ತು ಎನ್ನುವ ಗಾದೆ ಅದಕ್ಕೆ ವೈಜ್ಞಾನಿಕವಾಗಿ ಸಬೂತುಗಳಾದ ಕೆಲ ಘಟನೆಗಳು ಆದರೆ ಈ ವರ್ಷದಲ್ಲಿ ಮಳೆಯೇ ಪ್ರಾರಂಭ ಆಗಿಲ್ಲ ಮುಂಗಾರು ವಿಳಂಭವಾಗಿದೆ ಇವತ್ತು ಬೆಳಗಿನಿಂದ ಶುರುವಾದ ಮಳೆಗೆ ನಮ್ಮ ತೆಂಗಿನ ಮರ ಹತ್ತುವ ಮೀನಾಗಲಿ ಕಪ್ಪೆ ಆಗಲಿ ಅಸ೦ಭವ ಅನ್ನಿಸಿತು.
  ಹಾಗಾದರೆ ನನ್ನ ಎಲ್ಲಾ ಕೆಲಸದವರ ಕಣ್ಣು ಸುಳ್ಳು ಹೇಳುತ್ತಾ?... ಮಳೆ ನೀರ ಜೊತೆ ಮೈ ಮೇಲೆ ಕಪ್ಪೆಯ ಮಳೆ ಬಿತ್ತು ಎನ್ನುವ ಕೆಲಸದವಳು ಎದುರಿಗೇ ಇದ್ದಾಳೆ...
  ತಕ್ಷಣ ಕೇಳಿದೆ ಅದೇ ಗೊಜಮೊಟ್ಟೆಯ ಮಲಬಾರ್ ಕಪ್ಪೆನಾ ? ಎಂದೆ ಎಲ್ಲರೂ ಹೌದೆಂದರು ಆಗಲೇ ನನ್ನ ಯೋಚನೆ ವೇಗದಲ್ಲಿ ಓಡಿತು ಮತ್ತು ಅದೇ ಇಲ್ಲಿ ನಡೆದಿದೆ ಎಂದು ಗ್ಯಾರಂಟಿ ಆಯಿತು.
  ಬುದ್ಧಿವಂತ ಯುವಕನನ್ನ ಫಸ್ಟ್ ಪ್ಲೋರ್ ಗೆ ಹೋಗಿ ವಿಡಿಯೋ ಮಾಡು ಅಲ್ಲಿ ಈ ಮಲಬಾರ್ ಪ್ರಾಗ್ ಕಲ್ಯಾಣ ಮಂಟಪದ ಮುಖ್ಯ ದ್ವಾರದ ಬಾಗಿಲಿಗೆ ಸ್ಲೋಪಾಗಿರುವ ರಾಂಪ್ ನ ಮೇಲಿಂದ ಮೊದಲ ಅಂತಸ್ತು ತಲುಪಿ ಅಲ್ಲಿ ಮುಖ್ಯ ದ್ವಾರ ಮುಚ್ಚಿರುವುದರಿಂದ ಎಡಕ್ಕೆ ತಿರುಗಿ ಅಲ್ಲಿಂದ ಮುಂದೆ ಹೋಗಲು ತಡೆ ಗೋಡೆ ಅಡ್ಡವಾದ್ದರಿಂದ ಅಲ್ಲಿಂದ ನಮ್ಮ ಸಂಸ್ಥೆಯ ಎಲೆಕ್ಟ್ರಿಕ್ ರೂಂನ ಹೆಂಚಿನ ಛಾವಣಿ ಮೇಲೆ ಹಾರಿ ಮಳೆ ನೀರಿನಿಂದ ಜಾರಿ ಅಲ್ಲಿ ಕೆಳಗೆ ಹೋಗುತ್ತಿದ್ದ ಕೆಲಸದವಳ ಮೇಲೆ ಬಿದ್ದಿದೆ ಈಗಲೂ ಅಲ್ಲಿಂದ ಕೆಳಕ್ಕೆ ಹಾರುತ್ತಿರುವುದನ್ನೆ ಇವರೆಲ್ಲ ಮಳೆ ಜೊತೆ ಆಕಾಶದಿಂದ ಕಪ್ಪೆ ಮಳೆ ಅಂತಾರೆ ಅಂದೆ.
   ಅಲ್ಲಿಂದ ಅವನು ಕಳಿಸಿದ ವಿಡಿಯೋ ನೀವು ನೋಡಿ ನನ್ನ ಅಂದಾಜು ತಪ್ಪಾಗಲಿಲ್ಲ.
   ಇದು ಕಪ್ಪೆ ಮಳೆಯ ಸತ್ಯ ಕಥೆ ಹೌದು ಆದರೆ ಅಪರೂಪ ಆಗಿದ್ದ ಮಲಬಾರ್ ಪ್ರಾಗ್ ಮಾಡಿನ ಮೇಲೆ ತಲುಪಿ ದಾರಿ ಕಾಣದೆ ಪುನಃ ಹೆಂಚಿನ ಮೇಲಿಂದ ಜಾರಿ ಮಳೆಯ ಜೊತೆ ನೆಲ ತಲುಪಿದ ಕಥೆ.
  ಇದನ್ನು ಕತ್ತಲ ರಾತ್ರಿಯಲ್ಲಿ... ಬಿರು ಮಳೆಯಲ್ಲಿ ಅಪರಿಚಿತ ಸ್ಥಳದಲ್ಲಿ ನನಗೆ ಅನುಭವ ಆಗಿದ್ದರೆ ಬೇರೆಯವರು ನಂಬದಿದ್ದರೂ ನನಗೆ ಮಾತ್ರ ಕಪ್ಪೆಯ ಮಳೆಯ ಅನುಭವ ಜೀವನ ಪರ್ಯಂತ ನೆನಪಲ್ಲಿ ಉಳಿಯುತ್ತಿತ್ತು ಆದರೆ ಇದು ಹಾಡು ಹಗಲೇ ನಮ್ಮದೇ ಅವರಣದಲ್ಲಿ ರಹಸ್ಯ ಬಯಲಾದ ಕಥೆ.
  ವಾಸ್ತವ ಅರಿವಾದಾಗ ಎಲ್ಲರೂ ಹಗುರಾದರು ಎಲ್ಲರ ಮುಖದಲ್ಲೂ ನಗು ಮೂಡಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...