Skip to main content

Blog number 1572.ಚರಕಾ ಭಾಗಿರಥಿ ಈಗ ಖಾದಿಮನೆ ಭಾಗಿರಥಿ ಇವರಿಂದ ಹಸೆ ಚಿತ್ತಾರದ ಸ್ಪರ್ಶವಾಗುತ್ತದೆ ನಮ್ಮ ಲಾಡ್ಜ್ ಮುಂಬಾಗದಲ್ಲಿ.

https://youtu.be/VFQiwU6DaaQ

#ಬಹುಮುಖ_ಪ್ರತಿಭೆ_ಸೌಜನ್ಯದ_ಕಲಾವಿದೆ_ಭಾಗ_1.

#ಚರಕಾ_ಭಾಗಿರಥಿ_ಖಾದಿಮನೆ_ಭಾಗಿರಥಿ

#ಇವತ್ತು_ನನ್ನ_ಅತಿಥಿ

#ನಮ್ಮ_ಲಾಡ್ಜಗೆ_ಹಸೆ_ಚಿತ್ತಾರದ_ಸ್ಪರ್ಶ_ನೀಡುತ್ತಿದ್ದಾರೆ.

#ಇವರಿಗಾಗಿ_ಒಂದು_ವರ್ಷದಿಂದ_ಕಾಯುತ್ತಿದ್ದೆ.


  ಸುಮಾರು 28 ವರ್ಷದ ಹಿಂದೆ ಸಾಗರ ತಾಲ್ಲೂಕಿನಲ್ಲಿ ಯುವಜನರ ಪ್ರೇರೇಪಿಸುವ ಯಾವುದೇ ಜನಜಾಗೃತಿ ಕೆಲಸಗಳಲ್ಲಿ ಹೆಗ್ಗೋಡಿನ ಈ ಭಾಗಿರಥಿ, ಗೌರಮ್ಮ, ಪಣಿಯಮ್ಮ, ಭಾನುಮತಿ ಮತ್ತು ಸೈಯದ್ ಮಾಸ್ಟರ್ (ಹಾಡುಗಾರ್ತಿ ಸುಹಾನ ತಂದೆ) ನಮಗೆಲ್ಲ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವ ಸ್ವಯಂ ಸೇವಕರಾಗಿದ್ದರು.
  ಇವರೆಲ್ಲ ಹೆಗ್ಗೋಡಿನ ನೀನಾಸಂನ ಕೆ.ವಿ.ಸುಬ್ಬಣ್ಣರ ಗರಡಿಯಲ್ಲಿ ತಯಾರಾದ ಸಂಪನ್ನರು, ಇವರಿಗೆ ನಾವು ಒಂದು ರೂಪಾಯಿ ಕೂಡ ನಾವು ಕೊಡುತ್ತಿರಲಿಲ್ಲ (ಕೊಡಲು ನಮ್ಮ ಹತ್ತಿರ ಇರಲಿಲ್ಲ) ಆದರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದರು.
  ಇವರೆಲ್ಲರ ಸಹಕಾರದಿಂದಲೇ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ 1995-2000ದ ಅವದಿಯಲ್ಲಿ  ಆನಂದಪುರಂನಲ್ಲಿ ಕನ್ನಡ ಸಂಘದ ಆಗಿನ ಅಧ್ಯಕ್ಷ ಹಾ.ಮೋ.ಬಾಷಾ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ, ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆ, ಜಿಲ್ಲಾ ಮಟ್ಟದ ಪತ್ರಕರ್ತರ ತರಬೇತಿ ಶಿಭಿರ,ಸಾಹಿತ್ಯ ತರಬೇತಿ ಶಿಭಿರ, ಡಾಕ್ಟರ್ ಎಂ.ಸಿ. ಮೋದಿ ನೇತ್ರ ಚಿಕಿತ್ಸಾ ಶಿಬಿರ ಮುಂತಾದ ಹಲವಾರು ಕಾರ್ಯಕ್ರಮ ನಡೆಸಿದ್ದೆವು.
  ನಮ್ಮ ಹೊಸ ಲಾಡ್ಜ್ 2019 ರಿಂದ ಪ್ರಾರಂಭ ಮಾಡುವಾಗಲೇ ಲಾಡ್ಜ್ ಎದುರು ಹಸೆ ಚಿತ್ತಾರದ ಕಲೆ ಮೂಡಿಸುವ ಕನಸಿತ್ತು ಆದರೆ ಅದು 2023ರ ಇವತ್ತಿನವರೆಗೆ ನನಸಾಗಿರಲಿಲ್ಲ.
  ಕಾಗೋಡು ಹೋರಾಟದ ನೇತಾರ ಹೆಚ್.ಗಣಪತಿಯಪ್ಪರ ಪುತ್ರ ಕೃಷ್ಣ ಮಾತ್ರ ಚರಕಾದ ಭಾಗಿರಥಿ ಅವರಿಂದಲೇ ಹಸೆ ಚಿತ್ತಾರ ಬಿಡಿಸಲು ಒತ್ತಾಯಿಸುತ್ತಿದ್ದರು.
  ನಂತರ ಚರಕಾ ಸಂಸ್ಥೆಯ ತೊರೆದ ಚರಕಾ ಭಾಗಿರಥಿ ಅವರು ಸಾಗರದ ಜೋಗ ರಸ್ತೆಯ ವರದಳ್ಳಿ ವೃತ್ತದಲ್ಲಿ ಸೌಪರ್ಣಿಕಾ ಲಾಡ್ಜ್ ಎದರು ಖಾದಿ ಮನೆ ಎಂಬ ಖಾದಿ ವಸ್ತ್ರ, ದೇಸಿ ಆಹಾರಗಳ ಮಾರಾಟ ಮಳಿಗೆ ತೆರೆದು ಖಾದಿ ಮನೆ ಭಾಗಿರಥಿ ಅಂತಲೇ ಪ್ರಸಿದ್ಧರಾಗಿದ್ದಾರೆ.
  ಬಹು ಮುಖ ಪ್ರತಿಭೆಯ ಸಣ್ಣ ದೇಹಾಕೃತಿಯ ಭಾಗಿರಥಿ ಸಾಧನೆ ಮಾತ್ರ ಸಣ್ಣದಲ್ಲ ಇವರ ಬದುಕಿನ ಪಯಣ ನೀನಾಸಂ ಹೆಗ್ಗೋಡು, ಚರಕ, ರಂಗಕಲಾವಿದೆ, ವಯಸ್ಕರ ಶಿಕ್ಷಣ, ಹಸೆ ಚಿತ್ತಾರ, ಜಾನಪದ ಕಲೆ, ಕೈಮಗ್ಗ,ಖಾದಿ, ನೈಸರ್ಗಿಕ ಬಟ್ಟೆ ಬಣ್ಣ, ಇದೆಲ್ಲದರ ತರಬೇತಿ, ಶಿವಮೊಗ್ಗ ಜಿಲ್ಲೆ ಮಾತ್ರ ಅಲ್ಲ ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನೂರಾರು ಮಹಿಳಾ ನೇಕಾರರ ಕೈ ಮಗ್ಗಗಳ ಸಂಘಟನೆ ಮಾಡಿ ಅವರು ಈ ಉದ್ಯಮದಲ್ಲಿ ಯಶಸ್ಸು ಸಾದಿಸಲು ಕಾರಣಕರ್ತರಾಗಿದ್ದಾರೆ. 
   ಆದ್ದರಿಂದಲೇ ಒಂದು ವಷ೯ದಿಂದ ಇವರಿಗೆ ಕಾದಿದ್ದೆ ಇವತ್ತು ಭಾಗಿರಥಿ ಮತ್ತು ಮಡಸೂರು ಲಿಂಗದಳ್ಳಿಯ ನಿವೃತ್ತ ಅಂಗನವಾಡಿ ಶಿಕ್ಷಕಿ ಸುಶೀಲಮ್ಮ ಬಂದು ನಮ್ಮ ಲಾಡ್ಜ್ ಎದುರಿನ ಗೋಡೆಗೆ ಸುಂದರ ಕುಸೂತಿ ಹೆಣೆದ ಹಾಗೆ ಹಸೆ ಚಿತ್ತಾರ ಮೂಡಿಸುವ ಕೆಲಸ ಪ್ರಾರಂಬಿಸಿದ್ದಾರೆ.
  ಇದರ ಜೊತೆಗೆ ಇವತ್ತಿನಿಂದ ಖಾದಿ ಮನೆ ಭಾಗಿರಥಿ ಅವರ ಜೊತೆ ಅನೇಕ ವಿಚಾರಗಳನ್ನು ವಿಡಿಯೋದಲ್ಲಿ ದಾಖಲಿಸಿದ್ದು ಅದನ್ನು ಮುಂದಿನ ದಿನಗಳಲ್ಲಿ FB ಯಲ್ಲಿ ಪ್ರಕಟಿಸಲಿದ್ದೇನೆ.
  ಇವರ ಸಂಪರ್ಕ ಸಂಖ್ಯೆ 94822 77566

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ