Skip to main content

Blog number 1617. ನಮ್ಮ ಮಲೆನಾಡಿನ ಕೆರೆ ಕಟ್ಟೆಯ ಗೊಜಮೊಟ್ಟೆಯ ಈ ಕಪ್ಪೆಯ ವೈಜ್ಞಾನಿಕ ಹೆಸರೇನು?

#ಮುಂಗಾರು_ಮಳೆ_ಪ್ರಾರಂಭದ_ಈ_ಕಪ್ಪೆ

https://youtu.be/I4_DORW7J9k

https://youtube.com/shorts/Db-F97P9D7Y?feature=share

#ಕೆರೆ_ಕಟ್ಟೆಯಲ್ಲಿ_ಗುಂಪು_ಗುಂಪಾದ_ಗೊಜಮೊಟ್ಟೆಯಿಂದ_ಕಪ್ಪೆ

#ಈ_ಕಪ್ಪೆ_ಜಾಸ್ತಿ_ಆದರೆ_ಮಳೆ_ಜಾಸ್ತಿ_ಅನ್ನುವ_ನಂಬಿಕೆ

#ಕಳೆದ_ವರ್ಷಗಳಲ್ಲಿ_ಮಳೆ_ಜಾಸ್ತಿ_ಆದಾಗ_ಈ_ಕಪ್ಪೆ_ಇಲ್ಲವೇ_ಇಲ್ಲ

#ಈ_ವಷ೯_ಮುಂಗಾರು_ವಿಳಂಬದಲ್ಲಿ_ಈ_ಕಪ್ಪೆ_ಜಾಸ್ತಿ_ಇದೆ_ಏಕೆ?


  ಫೆಬ್ರುವರಿ ಕೊನೆಯಿಂದ ಮುಂಗಾರು ಪ್ರಾರಂಭದ ಕಾಲದವರೆಗೆ ನಮ್ಮ ಊರ ಸುತ್ತಮುತ್ತದ ಕೆರೆ ಕಟ್ಟೆಗಳಲ್ಲಿ ಈ  ಕಪ್ಪೆ ಲಾವಾ೯ಗಳು ಕಪ್ಪಾದ ಬಣ್ಣದ ಗುಂಪು ಗುಂಪಾಗಿ ಕಾಣಿಸುತ್ತದೆ ಇದನ್ನು ಸ್ಥಳಿಯರು ಗೊಜ ಮೊಟ್ಟೆ ಅಂತ ಕರೆಯುತ್ತಾರೆ.
  ಮುಂಗಾರು ಭೂಮಿಯ ಸ್ಪರ್ಶ ಮಾಡಿದಾಗ ಈ ಗೊಜ ಮೊಟ್ಟೆ ಎಂಬ ಲಾರ್ವಾಗಳು ಕಪ್ಪೆ ಮರಿಗಳಾಗಿ ನೀರಿನಿಂದ ಗುಂಪು ಗುಂಪಾಗಿ ಹೊರ ಬಂದು ಕೆರೆ ಕಟ್ಟೆಯಿಂದ ನೂರು ಅಥವ ಇನ್ನೂರು ಮೀಟರ್ ಕುಪ್ಪಳಿಸಿ ಮರ ಗಿಡದ ನೆರಳಲ್ಲಿ ಸೇರುತ್ತದೆ.
  ಕಾಲು ಹೊಟ್ಟೆ ಕಪ್ಪಾಗಿರುವ ಈ ಕಪ್ಪೆಗಳ ಬೆನ್ನು ಮಾತ್ರ ಹಳದಿ ಇದು ಗಿಡ ಮರಗಳ ಬುಡದಲ್ಲಿ ಹೆಚ್ಚು ಇರುವುದರಿಂದ ಮರ ಕಪ್ಪೆ ಅಂತಲೂ ಕರೆಯುತ್ತಾರೆ ಆದರೆ ಇದಕ್ಕೆ ವೈಜ್ಞಾನಿಕವಾದ ಹೆಸರು ಗೊತ್ತಿರುವವರು ತಿಳಿಸಬಹುದು.
   ಈ ಕಪ್ಪೆ ಕಳೆದ ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ಆಗಿತ್ತು, ಗೊಜಮೊಟ್ಟೆಗಳೂ ಇರಲೇ ಇಲ್ಲ ಆದರೆ ಮಳೆ ಪ್ರಮಾಣ ಹೆಚ್ಚಾಗಿತ್ತು.
  ಸ್ಥಳಿಯರಲ್ಲಿ ಒಂದು ನಂಬಿಕೆ ಇದೆ ಅದೇನೆಂದರೆ ಈ ಗೊಜಮೊಟ್ಟೆ ಕಪ್ಪೆ ಹೆಚ್ಚಾದರೆ ಮಳೆ ಜಾಸ್ತಿ ಅಂತ ಆದರೆ ಅನೇಕ ವರ್ಷದ ನಂತರ ಮೊದಲ ಬಾರಿಗೆ ಗೊಜಮೊಟ್ಟೆ ಕಪ್ಪೆ ನಮ್ಮ ಕಾಟೇಜಿನ ಗಾರ್ಡನ್ ನಲ್ಲಿ ಇರುವ ವಿಡಿಯೋ ಪೋಟೋ ನನ್ನ ಸಂಸ್ಥೆ ಸಹಯೋಗಿ ಕಣ್ಣೂರಿನ ನಾಗರಾಜ್ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.
  ಜೂನ್ 22 ಆದರೂ ಮುಂಗಾರು ಮಳೆ ನಮ್ಮ ಊರಿಗೆ ಬಂದಿಲ್ಲ ಅಂದರೆ ಪ್ರಕೃತಿಯ ಸಂಪ್ರದಾಯಿಕ ನಂಬಿಕೆಗಳು ಬದಲಾಗಿರುವಂತ ಕಾಲಮಾನದಲ್ಲಿ ನಾವಿದ್ದೇವೆ.
 ಸ್ಥಳಿಯರಾದ ನಮಗೆ ಈ ಕಪ್ಪೆ ಪ್ರಬೇದದ ಮಾಹಿತಿ ಇಲ್ಲ ಇದು ದೊಡ್ಡದಾಗುತ್ತದ ಅಥವ ಇದರ ಆಯಸ್ಸು ಕಡಿಮೆಯಾ ತಿಳಿದುಕೊಳ್ಳುವ ಆಸಕ್ತಿ ಇದೆ ಇದಕ್ಕಿಂತ ದೊಡ್ಡ ಗಾತ್ರ ಆಗಿದ್ದು ಯಾರೂ ನೋಡಿಲ್ಲ ಮತ್ತು ಮುಂಗಾರು ನಂತರ ಇದು ಕಾಣುವುದಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...