Skip to main content

Blog number 1618. ಪರಿಸರ ಪ್ರೇಮಿ ಬೆಳ್ಳೂರು ನಾಗರಾಜ್ ಈ ಗೊಜ ಮೊಟ್ಟಿಯ ಕಪ್ಪೆಯ ಮಾಹಿತಿ ನೀಡಿದ್ದಾರೆ ನೋಡಿ.

#ನಿನ್ನೆಯ_ಗೊಜಮೊಟ್ಟೆಯ_ಕಪ್ಪೆಗಳ_ಬಗ್ಗೆ_ಮಾಹಿತಿ_ಕೇಳಿದ್ದೆ

#ಪರಿಸರ_ಕಾಳಜಿಯ_ಬೆಳ್ಳೂರುನಾಗರಾಜ್_ಈ_ಕಪ್ಪೆಗಳ_ಬಗ್ಗೆ_ಮಾಹಿತಿ_ನೀಡಿದ್ದಾರೆ.

#ಈ_ಕಪ್ಪೆಯ_ವೈಜ್ಞಾನಿಕ_ಹೆಸರು_Clinotarsus_curtipes
  
#ದೇಶಿ_ಹೆಸರು_ಮಲಬಾರ್_ಪ್ರಾಗ್_ಬೈ_ಕಲರ್ಡ್_ಪ್ರಾಗ್

#ಪರಿಸರ_ಪ್ರೇಮಿ_ಬೆಳ್ಳೂರು_ನಾಗರಾಜರಿಗೆ_ದನ್ಯವಾದಗಳು.

https://youtu.be/X246K0Y-GHE

#ಬೆಳ್ಳೂರು_ನಾಗರಾಜರು_ನೀಡಿದ_ಮಾಹಿತಿ_ಈ_ಕೆಳಗಿನದ್ದು_ಓದಿ.

  
      ಒಂದೊಂದು ಜಾತಿ ಕಪ್ಪೆಗಳದ್ದು ಒಂದೊಂದು ರೀತಿಯ ಜೀವನ ಶೈಲಿ ಇರುತ್ತದೆ, ಹಲವು ಜಾತಿ ಕಪ್ಪೆಗಳು ಗೊದಮೊಟ್ಟೆಯಿಂದ ಮರಿ ಕಪ್ಪೆಗಳಾಗುತ್ತವೆ, ಕೆಲವು ಜಾತಿಗಳಲ್ಲಿ ಗೊದಮೊಟ್ಟೆಯ ಹಂತವೇ ಇಲ್ಲದೆ ಮೊಟ್ಟೆಗಳಿಂದ ನೇರವಾಗಿ ಮರಿ ಕಪ್ಪೆಗಳಾಗುತ್ತವೆ, ಇನ್ನು ಕೆಲವು ಗೊದಮೊಟ್ಟೆಗಳು 1-2 ತಿಂಗಳಲ್ಲಿ ಮರಿಕಪ್ಪೆಗಳಾಗುತ್ತವೆ.
ವೀಡಿಯೋದಲ್ಲಿರುವ ಕಪ್ಪೆಗಳಿಗೆ     bicolored frog ಅಥವಾ  Malabar frog ಎನ್ನುತ್ತಾರೆ, ಕನ್ನಡದಲ್ಲಿ ದ್ವಿವರ್ಣ ಕಪ್ಪೆ ಎನ್ನಬಹುದು. ಈ ಕಪ್ಪೆಗಳು ಗೊದಮೊಟ್ಟೆ ಹಂತದಲ್ಲೇ 8-10 ತಿಂಗಳು ಕಳೆಯುತ್ತವೆ, ಕೆರೆ ಅಥವಾ ಜಲಾಶಯಗಳಲ್ಲಿ ಕಪ್ಪನೆಯ ದೊಡ್ಡ 
ಗೊದಮೊಟ್ಟೆಯ ಹಿಂಡುಗಳನ್ನು ನೋಡಿರಬಹುದು, ಇವು ಗೊದಮೊಟ್ಟೆ ಹಂತದಲ್ಲಿ 8-10 ತಿಂಗಳು ಕಳೆಯುವುದರಿಂದ ಇವುಗಳು ಬದುಕುಳಿಯಲು ವರ್ಷ ಪೂರ್ತಿ ನೀರಿರುವ ಜಲಮೂಲ ಇರಲೇಬೇಕು. ಮುಂಗಾರು ಶುರುವಾಗುತ್ತಿದ್ದಂತೆ ಗೊದಮೊಟ್ಟೆ ಹಂತ ಮುಗಿಸಿ, ಕಪ್ಪೆಗಳಾಗಿ  ರಾಶಿ ರಾಶಿ  ಕಪ್ಪೆಗಳು ಕಾಡಿನತ್ತ ಸಾಗುತ್ತವೆ.ಪಶ್ಚಿಮಘಟ್ಟಗಳಿಗೆ ಸೀಮಿತವಾದ ಈ ಕಪ್ಪೆಗಳಿಗೆ ವರ್ಷಪೂರ ನೀರಿರುವ ಜಲಮೂಲ ಬೇಕೇ ಬೇಕು, ಇತ್ತೀಚಿಗೆ ಮಲೆನಾಡಿನ ಹಳ್ಳಕೊಳ್ಳಗಳು ಬೇಸಿಗೆಯಲ್ಲಿ ಬತ್ತಿ ಹೋಗುತ್ತಿರುವುದರಿಂದ ಇವುಗಳ  ಸಂತಾನೋತ್ಪತ್ತಿಗೆ ಹಿನ್ನೆಡೆಯಾಗಿತ್ತು,ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಮಳೆಗಾಲ ಚನ್ನಾಗಿ ಆಗಿರುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುವಂತೆ ಕಂಡು ಬಂದರೂ ಬಹಳಷ್ಟು ಕಪ್ಪೆಗಳು ರಸ್ತೆಯಲ್ಲೇ ಜೀವ ಬಿಡುತ್ತಿವೆ, ವೈಜ್ಞಾನಿಕ ಹೆಸರು Clinotarsus curtipes.
  ಈ ಕಪ್ಪೆಗಳ ಗಾತ್ರ ಇದಕ್ಕಿಂತ ಕೊಂಚ ದೊಡ್ಡದಾಗ ಬಹುದು ಮತ್ತು ಕಪ್ಪೆಗಳ ಆಯಸ್ಸು ಗರಿಷ್ಟ 20 ವರ್ಷ.
  ಈ ಅಮೂಲ್ಯ ಮಾಹಿತಿ ನೀಡಿದ ನಮ್ಮ ಜಿಲ್ಲೆಯ ಬೆಳ್ಳೂರು ನಾಗರಾಜ್ ಗೆ ಧನ್ಯವಾದಗಳು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...