Skip to main content

Blog number 1612.ಆರ್ಥಿಕ ತಜ್ಞರು ಸಮೀಕ್ಷೆ ಮಾಡಬೇಕಾದ ಸಾವಿರ ವರ್ಷಗಳ ಇತಿಹಾಸ ಇರುವ ಆಚಾಪುರ.

https://youtu.be/d5juNKmL-RI

#ನಮ್ಮ_ಊರ_ಸಮೀಪದ_ಆಚಾಪುರ.

#ಅವತ್ತು_ಇಡೀ_ಊರಿಗೆ_ಬಡತನ

#ಇವತ್ತು_ಕೋಟ್ಯಾದೀಶರ_ಊರು

#ಈ_ಊರಿನ_ಮೂಲ_ಹೆಸರು_ಮಾಚರಾಜಪುರ 

#ಈ_ಪ್ರದೇಶದಲ್ಲಿ_ಮುಸ್ಲಿಂ_ಮತ್ತು_ಪರಿಶಿಷ್ಟ_ಜಾತಿ_ಚೆಲುವಾದಿ_ಜನಾಂಗದವರು_ಬಹುಸಂಖ್ಯಾತರು.

#ಬುಕೇಟ್_ವ್ಯಾಪಾರಿಗಳು_ಇದ್ದರು.

#ಬುಕೇಟ್_ಎಂಬ_ಹೆಸರು_ಯಾಕೆ_ಬಂತು_ಗೊತ್ತಿಲ್ಲ.

#ಜಿಲ್ಲಾ_ಪಂಚಾಯತ_ಸದಸ್ಯನಾಗಿ_ನಾನು_
ಆಚಾಪುರದ_ರಸ್ತೆ_ಮೊದಲ_ಬಾರಿ_1995ರಲ್ಲಿ_ಡಾ೦ಬರೀಕರಣ_ಮಾಡಿಸಿದ್ದೆ


  ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಆನಂದಪುರಂ ಸಮೀಪದ ಆಚಾಪುರ ಎಂಬ ಊರು ನಮ್ಮ ಊರಿನ ಸಮೀಪದಲ್ಲಿದೆ.
   ಈ ಊರಿನ ತೀರ್ಥದ ದೇವಸ್ಥಾನದಲ್ಲಿ 25- ಡಿಸೆಂಬರ್ -1079ರಲ್ಲಿ ಮಾಚರಾಜನು  ಪ್ರತಿಷ್ಟಾಪಿಸಿದ ಭೂದಾನದ ಶಿಲಾಶಾಸನವಿದೆ ಆಗ ಈ ಊರಿನ ಹೆಸರು ಮಾಚರಾಜಪುರ ಈಗ ಆಚಾಪುರ ಆಗಿದೆ.
  ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಅಚಾಪುರ ಶಾಸನದ ಹೆಚ್ಚಿನ ಮಾಹಿತಿ ಓದಬಹುದು
https://arunprasadhombuja.blogspot.com/2022/01/71-25-1079.html


  ಈಗ ಆಚಾಪುರ ಮತ್ತು ಅದರ ಸುತ್ತಲಿನ ಇಸ್ಲಾಂಪುರ - ಹೊಳ್ಳೂರು - ಮುರುಘಾಮಠ - ಕೋಡಿಮಠ ಎಂಬ ಊರಲ್ಲಿ ಅಡಿಕೆ ಬೆಳೆಗಾರರು, ರಬ್ಬರ್ ಬೆಳೆಗಾರರು, ಶುಂಠಿ ಬೆಳೆಗಾರರು, ಜಂಬಿಟ್ಟಿಗೆ ಕಲ್ಲು ಕೋರೆ ಮಾಲಿಕರು, ಲಾರಿ ಮಾಲಿಕರು ಮತ್ತು ಶುಂಠಿ ವ್ಯಾಪಾರಸ್ಥರು ಹೆಚ್ಚು ಇದ್ದಾರೆ, ಶುಂಠಿ ಒಣಗಿಸಿ ಮಾರಾಟ ಮಾಡುವ ಒಣ ಶುಂಠಿ ವ್ಯಾಪಾರಸ್ಥರುಗಳಿಂದ ಪ್ರತಿ ಮನೆಯಲ್ಲಿ ಕಾರು ಬೈಕ್ ಗಳಿದೆ, ಎಲ್ಲಾ ಮನೆಗಳು ಮೌಲ್ಡಿಂಗ್ ಆಗಿದೆ, ಪ್ರತಿಯೊಬ್ಬರ ಮನೆಯಲ್ಲಿ ಎಲ್ಲರೂ ವಿದ್ಯಾವಂತರು ಆಗಿದ್ದಾರೆ.
   25 ವರ್ಷದ ಹಿಂದೆ ಆಚಾಪುರ ಹೇಗಿತ್ತೆಂದರೆ... ಅವತ್ತು ಇಡೀ ಊರು ಬೀಮನಕೋಣೆ ಪಿ.ಎಲ್.ಡಿ. ಬ್ಯಾಂಕ್ ನಲ್ಲಿ ಬ್ಲಾಕ್ ಲಿಸ್ಟ್ ನಲ್ಲಿತ್ತು, 1974 ರಲ್ಲಿ ಭೂಸುದಾರಣೆ ಕಾನೂನು ಬಂದಾಗ ಈ ಊರುಗಳ ಗೇಣಿ ರೈತರಿಗೆಲ್ಲ ಭೂಮಿ ಹಕ್ಕು ಸಿಕ್ಕಿತು, ಆಗ ಭೂಮಿ ಕಳೆದು ಕೊಂಡ ಭೂಮಾಲಿಕರುಗಳಿಗೆ ಎಕರೆವಾರು ಪರಿಹಾರ ನೀಡಲು ಸರ್ಕಾರ ಭೂಮಿ ಹಕ್ಕು ಪಡೆದ ಗೇಣಿದಾರ ರೈತರ ಜಮೀನು ಪಹಣಿ ಅಡಮಾನ ಮಾಡಿ ಎಕರೆಗೆ 750 ರೂಪಾಯಿ ಸಾಲ ಪ್ರಾಥಮಿಕ ಭೂ ಅಭಿವೃದ್ದಿ ಬ್ಯಾಂಕಿನಿಂದ  ಮಂಜೂರು ಮಾಡಿಸಿತ್ತು ಆದರೆ ಈ ಸಾಲ ತೀರಿಸಲಾಗದ ಆಚಾಪುರ ಮತ್ತು  ಸುತ್ತಲಿನ ಈ ಹಳ್ಳಿಗಳಲ್ಲಿ ಎಲ್ಲರೂ ಅವತ್ತು ಸುಸ್ತಿದಾರರಾಗಿದ್ದರಿಂದ ಇವರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಿತ್ತು ಇಡೀ ಊರಲ್ಲಿ ಎಲ್ಲರೂ ಸುಸ್ತಿದಾರರಾದ್ದರಿಂದ ಇಡೀ ಊರನ್ನೆ ಬ್ಲಾಕ್ ಲೀಸ್ಟ್ ಗೆ ಸೇರಿಸಿ ಯಾರಿಗೂ ಸಾಲ ನೀಡುತ್ತಿರಲಿಲ್ಲ
  ಅವತ್ತಿನ ಬಡತನದಲ್ಲಿ ಇಡೀ ಊರಿನಲ್ಲಿ ವಿದ್ಯೆಗೆ ಒತ್ತು ಕೊಡುವ ಕುಟುಂಬ ಇರಲೇ ಇಲ್ಲ, ಸ್ಥಳಿಯ ಆಚಾಪುರದ ಉದು೯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮಾತ್ರ ಇತ್ತು.
  ಆಗ ಎಸ್.ಎಸ್.ಎಲ್.ಸಿ. ಪಾಸು ಆದವರು ಒಬ್ಬರೋ ಇಬ್ಬರು ಮಾತ್ರ, ಈ ಭಾಗದಲ್ಲಿ ಬುಕೇಟ್ ವ್ಯಾಪಾರಿ ಕುಟುಂಬಗಳು ಇತ್ತು, ಬುಕೇಟ್ ವ್ಯಾಪಾರ ಅಂದರೆ ಪೂಜಾ ಸಾಮಗ್ರಿಗಳಾದ ಉದಬತ್ತಿ, ಕುಂಕುಮ, ಅರಿಶಿಣ, ಕಣ್ಣಿಗೆ ಕಪ್ಪು ಕಾಡಿಗೆ, ಗಿಡಮೂಲಿಕೆ, ಎತ್ತಿನ ಕೋಡಿನ ಬಣ್ಣ ಇತ್ಯಾದಿ ವ್ಯಾಪಾರ ಇದಕ್ಕೆ ಬುಕೆಟ್ ವ್ಯಾಪಾರ ಎನ್ನುವ ಹೆಸರು ಯಾಕೆ ಬಂತು ಅಂತ ಯಾರಿಗೂ ತಿಳಿದಿಲ್ಲ.
  ನಂತರ ಈ ಭಾಗದಲ್ಲಿ ಸುಗ್ಗಿ ನಂತರ ಒಣ ಹುಲ್ಲು ಸಂಗ್ರಹಿಸಿ ಸಾಗರ - ಹೆಗ್ಗೋಡು ಭಾಗದಲ್ಲಿ ಭಟ್ಟರುಗಳಿಗೆ ಒಣ ಹುಲ್ಲು ಮಾರಾಟ ಮಾಡುವವರು ಇದ್ದರು.
   ಅತ್ಯಂತ ಬಡತನದಿಂದ ಈ ಭಾಗದ ಕುಟುಂಬಗಳು ಹೊತ್ತು ಹೊತ್ತಿನ ಊಟಕ್ಕೂ ಪರದಾಡುವ ಕಾಲ ಇತ್ತು ಆದರೆ ಕಾಲ ಬದಲಾಯಿತು, ಶುಂಠಿ ರಬ್ಬರ್ ಅಡಿಕೆಯಂತ ವಾಣಿಜ್ಯ ಬೆಳೆ ಮತ್ತು ಅದರ ವ್ಯಾಪಾರದ ಜೊತೆಗೆ ಒಣ ಶುಂಠಿ ವ್ಯಾಪಾರ ಈಗಿನ ತಲೆಮಾರಿನ ಯುವಕರಿಗೆ ಕೈ ಹಿಡಿದಿದೆ ಇದರಿಂದ ಒಂದು ಕಾಲದಲ್ಲಿ ಬೀಮನಕೋಣೆಯ ಪಿಎಲ್ ಡಿ ಬ್ಯಾಂಕಿನ ಬ್ಲಾಕ್ ಲಿಸ್ಟ್ ಪಟ್ಟಿಯ ಊರು ಇದಾ ಅಂತ ಯೋಚಿಸಲೂ ಸಾಧ್ಯವಿಲ್ಲದಂತೆ ಈ ಊರುಗಳು ಬದಲಾಗಿದೆ ಸ್ವಂತ ಶ್ರಮದಿಂದ ಈ ಊರಿನಲ್ಲಿ ಅತಿ ಹೆಚ್ಚು ಕೋಟ್ಯಾದೀಶರು ಆಗಿದ್ದಾರೆ ಇದು ಪರಿವರ್ತನೆ ಜಗದ ನಿಯಮ ಎಂಬಂತೆ ಸ೦ತೋಷದ ವಿಷಯ ಕೂಡ.
  ನಿನ್ನೆ ನನ್ನ ಆಫೀಸಿಗೆ ಬಂದ ತನ್ವೀರ್ ಸಾಹೇಬರು ಇದೇ ಆಚಾಪುರದವರು ಇವರು ಕೃಷಿ ಜೊತೆಗೆ ಬೆಳ್ಳುಳ್ಳಿ ವ್ಯಾಪಾರಿ ಕೂಡ, ಆ ಕಾಲದಲ್ಲಿ SSLC ಪಾಸು ಮಾಡಿ PUC ಓದಿದ ಅಪರೂಪದ ವಿದ್ಯಾರ್ಥಿ ಆಗಿದ್ದವರು ಅವರ ಜೊತೆ ಆ ಕಾಲದ ಬಡತನ ಹಾಸಿ ಹೊದ್ದಿದ್ದ ಆಚಾಪುರ ಈ ಕಾಲದಲ್ಲಿ ಬದಲಾದ ಆಚಾಪುರದವರೆಗಿನ ಸುಮಾರು ವಿಚಾರ ಮಾತಾಡಿದೆವು.
  ಒಂದು ಸಾವಿರ ವರ್ಷದ ಇತಿಹಾಸ ಇರುವ ಅಪರೂಪದ ಊರು ಆಚಾಪುರ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ