Skip to main content

Blog number 1911. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಳ್ಳಿ ಶ್ರೀಧರಾಶ್ರಮದ ಸಮೀಪದ ಜಿಗಳೆ ಮನೆ ಗಣಪತಿ ಭಟ್ಟರು ನನ್ನ ಬಗ್ಗೆ ಬರೆದ ಲೇಖನ.

ಇಲ್ಲಿ ಕೆಳಗೆ ಚಿತ್ರದ ರೂಪದಲ್ಲಿ ಹಾಕಿದ ಲೇಖನ ಶ್ರೀ ಅರುಣ ಪ್ರಸಾದ್ ಅವರದ್ದು.

ಅರುಣ ಪ್ರಸಾದ್ ಅವರು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು,ರಾಮಚಂದ್ರಾಪುರ ಮೂಲಮಠಕ್ಕೆ ಹತ್ತಿರ ಇರುವ ಅನಂತಪುರದವರು.ಇವರ ಅರ್ಧಾಂಗಿ ಹವ್ಯಕರು. ಹೊಸ ನೆಂಟಸ್ತಾನ ದೀಕ್ಷಿತರೊಬ್ಬರೊಂದಿಗೆ ಆಗಿದೆ.ಬಾಲ್ಯದಲ್ಲಿಯೇ ಬ್ರಹ್ಮಚರ್ಯ ವೇ ಜೀವನ ವೀರ್ಯ ನಾಶವೇ ಮೃತ್ಯು ಎಂಬಂತಹ ಪುಸ್ತಕಗಳನ್ನು ಓದಿ ಬ್ರಾಹ್ಮಣ್ಯವನ್ನು ತಡಕಾಡಿದವರು.ಬ್ರಾಹ್ಮಣರು ಬ್ರಾಹ್ಮಣ್ಯ ಕಾಪಾಡಿಕೊಳ್ಳ ಬೇಕೆಂದು ಬಯಸುವವರು.ತಾತ್ವಿಕ ವಾದ ಬ್ರಾಹ್ಮಣ್ಯವನ್ನು ಗೌರವಿಸುವವರು.ಬ್ರಾಹ್ಮಣ್ಯ ದ ಆಚರಣೆ ಇಲ್ಲದೆ ಬ್ರಾಹ್ಮಣರ ದೊಡ್ಡಸ್ತಿಕೆ ತೋರಿಸುವುದನ್ನು ವಿರೋಧಿಸಲು ಹಿಂದೆಗೆಯದವರು.ಬ್ರಾಹ್ಮಣ್ಯದ ಆಚರಣೆ ಇಲ್ಲದೆ ಕೇವಲ ಹುಟ್ಟಿನಿಂದ ಬ್ರಾಹ್ಮಣರು ಎಂದುಕೊಂಡು ತಮ್ಮದು ಮೇಲ್ವರ್ಗ ಎಂಬ ಗರ್ವವನ್ನು ಒಪ್ಪದವರು.ಬ್ರಾಹ್ಮಣ್ಯ ಆಚರಿಸಿ ಗೌರವ ಪಡೆಯಿರಿ ಎಂಬುದು ಅವರ ವಾದ.ಯಾವ ಆದರ್ಶವನ್ನು ಪೋಷಿಸಿಕೊಳ್ಳದೆ ಕುಡಿದು ತಿಂದು ಮಾಡುವಂತಹದೆನೆಲ್ಲಾ ಮಾಡಿ ದೊಡ್ಡ ವಿಭೂತಿ, ಮಡಿ ಉಟ್ಟು ಬ್ರಾಹ್ಮಣಿಕೆಯ ದೌಲು ಹಾರಿಸುವುದು ಇವರಿಗೆ ಹಿಡಿಸುವುದಿಲ್ಲ.ಹಣಕ್ಕಿಂತ ಧರ್ಮಕ್ಕೆ ಹೆಚ್ಚು ಒತ್ತು ಕೊಟ್ಟು ಭಾಳ್ವೆ ಮಾಡುವ ಬ್ರಾಹ್ಮಣರ ಬಗ್ಗೆ ಇವರಿಗಿರುವ ಗೌರವವನ್ನು ನಾನಂತೂ ಕಂಡಿದ್ದೇನೆ.
ಮುಂಚೆ ರಾಜಕೀಯ ದಲ್ಲಿ ಇದ್ದು ಕೆಲವು ಚೌಕಟ್ಟು ಗಳಿಗೆ ಬಂಧಿಯಾಗಿದ್ದರು.ಈಗ ಯಾವ ಮುಲಾಜು ಇಲ್ಲದೆ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪಡಕೊಂಡಿದ್ದಾರೆ.ಭಗವಂತ ಕೂಡ ವಿನಾಧೈನ್ಯೇನ ಜೀವನಕ್ಕೆ ಬೇಕಾದ ಅನುಕೂಲ ಕೊಟ್ಟಿದ್ದಾನೆ.ಎಲ್ಲಾ ಜಾತಿಯಲ್ಲೂ, ಎಲ್ಲಾ ಪಕ್ಷಗಳಲ್ಲೂ ಮಿತ್ರರನ್ನು ಹೊಂದಿದ್ದಾರೆ.ಪಾಸಿಟಿವ್ ಚಿಂತಕರು.ಬಹಳಷ್ಟು ಮಟ್ಟಿಗೆ ಒಳ್ಳೆಯದನ್ನು ಗುರುತಿಸಿ ಬ್ಲಾಗ್ ಬರೆಯುತ್ತಾರೆ. ಕೆಲವೊಮ್ಮೆ ತೀರಾ ಅಸಹನೀಯ ಎನ್ನಿಸಿದಾಗ ಮಾತ್ರ ನೆಗೆಟಿವ್ ಲೇಖನಗಳು ಪ್ರಕಟವಾಗುತ್ತದೆ. ಅನೇಕ ಪತ್ರಕರ್ತ ಮಿತ್ರರನ್ನು ಹೊಂದಿದ್ದಾರೆ.
ಸತ್ಯಶೋಧ ದಲ್ಲಿ ಒಬ್ಬರು ತೀರಾ ಅಶ್ಲೀಲ ವಾಗಿ ಬರೆದಾಗ ಸತ್ಯಶೋದಧ ಸಂಬಂಧ ಕಡಿದುಕೊಳ್ಳಲು ಹಿಂದೆಗೆಯಲಿಲ್ಲ.ನಂತರ ಯೋಗಾಯೋಗ ಅದೇ ವ್ಯಕ್ತಿಯನ್ನು ಬೇಟಿಯಾದ ಮೇಲೆ ಅವರ ಅಸಹನೆಯ ಮೂಲವನ್ನು ಗುರುತಿಸಿದರು.ಪಾಸಿಟಿವ್ ಚಿಂತನೆಯೇ ಹೆಚ್ಚಿರುವುದರಿಂದ ನಮ್ಮ ಏಕಪಕ್ಷೀಯ ನೆಗೆಟಿವ್ ಲೇಖನಗಳು ಅವರಿಗೆ ಅಷ್ಟು ಸಮಾಧಾನ ಕೊಡುವುದಿಲ್ಲ.

ಪರಮಾತ್ಮ ಕೊಟ್ಟ ವಿಮರ್ಶ ಶಕ್ತಿ ಯಿಂದಾಗಿ ಸತ್ಯವನ್ನು ಗುರುತಿಸುವ ಸಾಮರ್ಥ್ಯ ಇದೆ.ಅದೇ ನಮ್ಮ ಕಡೆ ಓಲವನ್ನು ತಂದುಕೊಟ್ಟಿದೆ.ಸಾಧ್ಯವಾದ ಮಟ್ಟಿಗೆ ದಾಖಾಲೆ, ಪ್ರಮಾಣಗಳು ಇದ್ದುಕೊಂಡೆ ಪ್ರಕಟವಾಗುವ ಲೇಖನಗಳನ್ನು ಗುರ್ತಿಸಲು ಶಕ್ತರಿದ್ದಾರೆ.ಅವರ ಪೇಸ್ಬುಕ್ ಲೇಖನಗಳ ಓದುಗರು ಎಷ್ಟು ,ಯಾವ ರೀತಿಯವರು ಎಂಬುದಕ್ಕೆ ಪೇಸ್ಬುಕ್ ನವರೇ ಪ್ರಕಟಿಸಿದ ಒಂದು ಮಾಹಿತಿ ಪತ್ರ ಇದೆ.
ಹವ್ಯಕರೊಂದಿಗೆ ಬಹಳ ಒಡನಾಟ ಇರುವ ಅವರಿಗೆ ಈ ವಿಚಾರವೊಂದರಲ್ಲಿ, ರಾಮಚಂದ್ರಾಪುರ ಮಠದ ವಿಚಾರದಲ್ಲಿ, ಹವ್ಯಕರು ಹೀಗೇಕೆ ವರ್ತಿಸುತ್ತಿದ್ದಾರೆ ಎಂಬ ವಿಸ್ಮಯ ವೂ ಇದೆ.

ತಾಮ್ರಶಾಸನದ ಬಗ್ಗೆ ಒಂದು ಬ್ಲಾಗ್ ನಂತರ ಈಗ ಈ ಕೆಳಗಿನ ಬ್ಲಾಗ್ ಪ್ರಕಟಿಸಿದ್ದಾರೆ.ಅವರ ಒಡನಾಡಿ ಹವ್ಯಕರು ಕಣ್ತೆರೆದು ನೋಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...