Skip to main content

Blog number 1926. ಆಹಾರ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಆಹಾರ ಕಲಬೆರಕೆಯ ಶಿವಮೊಗ್ಗ ಜಿಲ್ಲೆಯ ಹೈ ಪ್ರೊಪೈಲ್ ಕೇಸ್ ಹಳ್ಳ ಹಿಡಿದ ಘಟನೆ

#ಆಹಾರ_ಕಲಬೆರಕೆಯ_ಹೈಪ್ರೊಪೈಲ್_ಕೇಸ್

#ಸ್ವತಃ_ಆಹಾರಮಂತ್ರಿ_ಭಾಗವಹಿಸಿದ್ದ_ಜಿಲ್ಲಾ_ಪಂಚಾಯತ್_ಸಭೆಯಲ್ಲಿ_ಪ್ರಸ್ತಾವನೆ.

#ಕೇಸ್_ದಾಖಲಿಸಲು_ಸೂಚಿಸಿದ_ಆಹಾರ_ಮಂತ್ರಿಗಳು

#ರಾಜ್ಯದ_ಅನೇಕ_ಜಿಲ್ಲೆಯ_ಅಂಗನವಾಡಿಗೆ_ಕಲಬೆರಕೆ_ಎಣ್ಣೆ_ಸರಬರಾಜು

#ಪ್ರಯೋಗಾಲಯದ_ಪರೀಕ್ಷೆಯಲ್ಲಿ_ಸಾಬೀತು.

#ರಾಜಿ_ಪಂಚಾಯಿತಿಗೆ_ಬಂದವರಿಗೆ_ನನ್ನ_ಪ್ರಶ್ನೆ

#ನಿಮ್ಮ_ಮಕ್ಕಳ_ಸರ್ಕಾರದ_ಅಂಗನವಾಡಿಗೆ_ಕಳಿಸುತ್ತೀರಾ

#ನನ್ನ_ಮಕ್ಕಳನ್ನು_ಸರಕಾರಿ_ಅಂಗನವಾಡಿಯಲ್ಲೇ_ಓದಿಸಿದ್ದೆ

#ದಾಖಲಾದ_ಕೇಸ್_ಏನಾಯಿತು?


    ನಮ್ಮ ಜಿಲ್ಲೆಯವರೇ ಆದ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳು ಆಗ ಜಿ.ಬಸವಣ್ಯಪ್ಪನವರು ಅವರ ಸಂಪುಟದಲ್ಲಿ ಆಹಾರ ಸಚಿವರು ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವರು ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ.
   ಆಗೆಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದರು ಅಂತಹ ಒಂದು ಜಿಲ್ಲಾ ಪಂಚಾಯತ್ ಸಭೆ ಅಧ್ಯಕ್ಷರಾಗಿದ್ದ ಶ್ರೀಮತಿ ಬಲ್ಕೀಷ್ ಬಾನು ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು.
   ಜೆ. ಹೆಚ್.ಪಟೇಲರ ಸಂಪುಟ ಸಭೆಯಲ್ಲಿ ಆಹಾರ ಕಲಬೆರಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಯ್ದೆಯಲ್ಲಿ ಕೆಲ ಬದಲಾವಣೆಗೆ ಆಹಾರ ಸಚಿವರು ಸಂಪುಟದ ಅನುಮೋದನೆ ಪಡೆದು ಕೆಲ ದಿನಗಳಾಗಿತ್ತು.
   ನಾನು ಅವತ್ತಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಹಾರ ಕಲಬೆರಕೆ ನಿಯಂತ್ರಣಕ್ಕೆ ಕಲಬೆರಕೆ ಮಾಡುವವರಿಗೆ ಏನು ಕ್ರಮ ಕೈಗೊಳ್ಳುವ ಕಾನೂನು ಜಾರಿಯಲ್ಲಿದೆ ಎಂದುಆಹಾರ ಸಚಿವರಿಗೆ ಪ್ರಶ್ನಿಸಿದೆ ಆಗ ಅವರು ಅಂತಹ ಪ್ರಕರಣಗಳಿದ್ದಲ್ಲಿ ಕರಬರಿಕೆ ಮಾಡುವವರನ್ನು ಜಾಮೀನು ರಹಿತ ಬಂದನಕ್ಕೆ ಒಳ ಪಡಿಸುತ್ತೇವೆ ಎಂಬ ಉತ್ತರ ನೀಡಿದರು.
   ಆಗ ನಾನು ಶಿವಮೊಗ್ಗ ಜಿಲ್ಲೆಯ ಒಂದು ಮಹಿಳಾ ಸಹಕಾರಿ ಸಂಘ ರಾಜ್ಯದ ಕೆಲ ಜಿಲ್ಲೆಗಳಲ್ಲಿನ ಸರ್ಕಾರಿ ಅಂಗನವಾಡಿಗಳಿಗೆ ಖಾದ್ಯ ತೈಲ ಸರಬರಾಜು ಮಾಡುವ ಗುತ್ತಿಗೆ ಹಿಡಿದಿದ್ದು ಸದರಿ ಸಹಕಾರಿ ಸಂಘ  ಕಲಬೆರಕೆ ಖಾದ್ಯ ತೈಲವನ್ನು ಸರಕಾರಿ ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಿದ್ದು ಈ ಬಗ್ಗೆ ಪ್ರಯೋಗಾಲಯದ ವರದಿ ಕೂಡ ಬಂದಿದ್ದು ಸದರಿ ಸಹಕಾರಿ ಸಂಘದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದರಿ ಮಹಿಳಾ ಸಹಕಾರಿ ಸಂಘ ಸರಬರಾಜು ಮಾಡಿದ ಖಾದ್ಯ ತೈಲದ ಪ್ರಯೋಗಾಲಯದ ವರದಿ ಸಭೆಯಲ್ಲಿ ಮಂಡಿಸಿದೆ.
  ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಆಹಾರ ಮಂತ್ರಿಗಳು ಆದ ಸನ್ಮಾನ್ಯ ಬಸವಣ್ಣಪ್ಪನವರು ತಕ್ಷಣ ಸಭೆಯಲ್ಲಿ ಉಪಸ್ಥಿತರಾಗಿದ್ದ ಜಿಲ್ಲಾ ರಕ್ಷಣಾಧಿಕಾರಿಗಳು ಸದರಿ ಸಹಕಾರಿ ಸಂಘದ ಮೇಲೆ ಕ್ರಮ ಕೈಗೊಳ್ಳಬೇಕು ಕೇಸ್ ದಾಖಲಿಸಬೇಕೆಂದು ಆದೇಶಿಸಿದರು ಈ ವಿಷಯ ಜಿಲ್ಲಾ ಪಂಚಾಯತ್ ಸಭೆಯ ಸಭಾ ನಡವಳಿಕೆಯಲ್ಲಿ ದಾಖಲಾಯಿತು.
   ಮರುದಿನ ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಎಲ್ಲಾ ಪತ್ರಿಕೆಗಳಲ್ಲೂ ಸುದ್ದಿ ಆಯಿತು,ಸದರಿ ಮಹಿಳಾ ಸಹಕಾರಿ ಸಂಘದ ಮೇಲೆ ಕೇಸ್ ದಾಖಲಾಗಿ ಎಫ್ಐಆರ್ ಆಯ್ತು.
  ಎಪ್.ಐ.ಆರ್ ಆದ ಮೇಲೆಯೇ ನಾನು ಪತ್ರಿಕೆಗಳಿಗೆ ಮಾಹಿತಿ ನೀಡಿ ಸದರಿ ಸಹಕಾರಿ ಸಂಘದ ಅಧ್ಯಕ್ಷೆ ಮುಖ್ಯಮಂತ್ರಿಗಳಾದ ಜೆ.ಹೆಚ್.ಪಟೇಲರ ಸಹೋದರಿ ಶ್ರೀಮತಿ ಅನುಸೂಯಮ್ಮ ಎಂದು ತಿಳಿಸಿದೆ ಇದು ಜಿಲ್ಲೆ ಮತ್ತು ರಾಜ್ಯದಲ್ಲಿ ದೊಡ್ಡ ಸುದ್ದಿಯಾಯಿತು.
  ನಂತರ ನಡೆದ ನಡಾವಳಿಗಳು ವಿಶೇಷವಾಗಿ ಬದಲಾಯಿತು,ಸ್ವತಹ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ ನನ್ನನ್ನು ಕರೆದು ವಿನಂತಿಸಲು ಪ್ರಾರಂಭಿಸಲು ಪ್ರಾರಂಭಿಸಿದರು ನಾನು ಅವರ ವಿನಂತಿಗೆ ಒಪ್ಪಲಿಲ್ಲ.
  ಒಂದು ದಿನ ಸದರಿ ಸಹಕಾರಿ ಸಂಘದ ಮಹಿಳಾ ಪದಾಧಿಕಾರಿಗಳನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ರಾಜಿ ಸಂಧಾನದ ಸಭೆಗಾಗಿ ಕರೆಯಲಾಯಿತು ಅಲ್ಲಿ ಅವರೆಲ್ಲರೂ ನನಗೆ ಇದು ತಾವು ಆಗಲಿ ತಮ್ಮ ಸಂಘದ ಅಧ್ಯಕ್ಷರಾಗಲಿ ಮಾಡಿದ ತಪ್ಪು ಆಗಿರುವುದಿಲ್ಲ, ನಾವು ನಮ್ಮ ಸಹಕಾರಿ ಸಂಘಕ್ಕೆ ಸಿಕ್ಕಿದ ಈ ಅಂಗನವಾಡಿ ಖಾದ್ಯ ತೈಲ ಸರಬರಾಜು ಗುತ್ತಿಗೆಯನ್ನು ಮೂರನೇ ವ್ಯಕ್ತಿಗೆ ವಹಿಸಿದ್ದೆವು... ಆತನು ಈ ಎಲ್ಲಾ ವ್ಯವಾರಗಳನ್ನು ನಡೆಸಿಕೊಂಡು ನಮ್ಮ ಸಂಘಕ್ಕೆ ಸ್ವಲ್ಪ ಲಾಭಾಂಶ ನೀಡುವ ಕರಾರಿನ ಮೇಲೆ ಗುತ್ತಿಗೆ ... ಆತ ದುರಾಸೆಯಿಂದ ಅತಿ ಆಸೆಯಿಂದ ಈ ಅಕ್ರಮ ಮಾಡಿರುತ್ತಾನೆ ದಯಮಾಡಿ ತಾವು ಈ ಬಗ್ಗೆ ಮುಂದುವರಿಯಬಾರದಾಗಿ ವಿನಂತಿಸಿದರು.
  ಆಗ ನಾನು ಅವರಿಗೆ ಒಂದು ಪ್ರಶ್ನೆ ಕೇಳಿದೆ... ಇಲ್ಲಿ ನೆರೆದಿರುವ ಸದರಿ ಸಹಕಾರಿ ಸಂಘದ ಪದಾಧಿಕಾರಿಗಳಾದ ತಮ್ಮಲ್ಲಿಎಷ್ಟು ಜನರ ಮಕ್ಕಳು ಸರಕಾರಿ ಅಂಗನವಾಡಿಗೆ ಕಳಿಸುತ್ತಿದ್ದೀರಿ?....ಅವರಾರು ಅವರ ಕುಟುಂಬದವರಾರು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿಗೆ ಕಳಿಸುವವರಾಗಿರಲಿಲ್ಲ, ಅವರೆಲ್ಲ ಪ್ರತಿಷ್ಠಿತ ಶ್ರೀಮಂತರ ಪತ್ನಿಯರು... ಆಗ ನಾನು ಹೇಳಿದೆ ನನ್ನ ಸ್ವಂತ ಮಕ್ಕಳು ಸರ್ಕಾರಿ ಅಂಗನವಾಡಿಯಲ್ಲಿ ಕಲಿಯುತ್ತಿದ್ದಾರೆ ಆದ್ದರಿಂದ ಆ ಮಕ್ಕಳಿಗೆ ಕಲಬೆರಕೆ ಎಣ್ಣೆ ಸರಬರಾಜು ಮಾಡುವವರನ್ನು ನಾನು  ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದೆ.
   ಈ ಕಲಬೆರಕೆ ಪ್ರಕರಣ ಹೈ ಪ್ರೊಫೈಲ್ ಕೇಸ್ ಆಯ್ತು ಕಾರಣ ಈ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದವರು ಶ್ರೀಮತಿ ಅನುಸೂಯಮ್ಮ ಇವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜೆ ಹೆಚ್ ಪಟೇಲರ ಖಾಸ ಸಹೋದರಿ.
   ನಂತರ ನಡೆದ ಕಥೆಯೇ ಬೇರೆ...ಸದರಿ ಸಂಘದಿಂದ ಪುನಃ ಖಾದ್ಯ ತೈಲದ ಸ್ಯಾಂಪಲ್ ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿ ಅದು ಪರಿಶುದ್ಧ ಖಾದ್ಯ ತೈಲ,ಎಂಬ ವರದಿ ತರಿಸಿ ದಾಖಲಾಗಿದ್ದ ಎಫ್ಐಆರ್ ಗೆ ಬಿ ರಿಪೋರ್ಟ್ ಸಲ್ಲಿಸಲಾಯಿತು ಅಲ್ಲಿಗೆ ಕಲಬೆರಕೆ ಪ್ರಕರಣ ಮುಕ್ತಾಯಗೊಳಿಸಲಾಯಿತು.
   ನನ್ನ ಅಧಿಕಾರವದಿ ಮುಗಿದ ನಂತರ ಒಮ್ಮೆ ಶಿವಮೊಗ್ಗದ ಬಸವಣ್ಣಪ್ಪನವರ ಮನೆಗೆ ನಾನು ಹಾಗೂ ಸಾಹಿತಿ ಕೋಣಂದೂರು ವೆಂಕಪ್ಪಗೌಡರು, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪನವರ ಜೊತೆಗೆ ಹೋದಾಗ ಅವತ್ತು ಬಸವಣ್ಣಪ್ಪನವರು ನನ್ನ ಬಗ್ಗೆ ಈ ಘಟನೆ ಉಲ್ಲೇಖಿಸಿ "ಆಗೆಲ್ಲ ನನಗೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಭೆಗೆ ಹೋಗಲು ಹೆದರಿಕೆ ಆಗುತಿತ್ತು ಅರುಣ್ ಪ್ರಸಾದ್ ನಮಗೆ ಇಂತಹ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು" ಎಂದು ನಗಾಡಿದರು.
   ಎಲ್ಲಾ ಕಾನೂನು ಶಿಕ್ಷೆಗಳು ಬಡವರಿಗೆ ಮಾತ್ರ ಅದು ಶ್ರೀಮಂತರ ಮತ್ತು ಪ್ರಭಾವಿಗಳಿಗೆ ಅನ್ವಯಿಸುವುದಿಲ್ಲ ಎಂಬುದಕ್ಕೆ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರ ಸಹೋದರಿ ಮೇಲಿನ ಕರಗಿ ಹೋದ ಕಲಬೆರಕೆ ಕೇಸ್ ಒಂದು ಉದಾಹರಣೆ ಅಷ್ಟೆ.
    ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್.ಪಟೇಲರು ನನ್ನ ಮೇಲೆ ಸೇಡು ತೀರಿಸಿಕೊಳ್ಳಬಹುದಾಗಿದ್ದರು ಬೇರೆ ಜನಪರ ಹೋರಾಟದಲ್ಲಿ ನನ್ನ ಜೈಲಿಗೆ ಕಳಿಸಿದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳನ್ನು ಕರೆಸಿಕೊಂಡು ಅವರಿಗೆ ಎಚ್ಚರಿಕೆ ನೀಡಿ ಜಿಲ್ಲೆಯಿಂದ ವರ್ಗಾಯಿಸಿದ ಸಜ್ಜನ ಸಮಾಜವಾದಿ ಅವರು.
   ಅಧಿಕಾರದಲ್ಲಿ ಇರುವವರ ಕುಟುಂಬದವರು ಸ್ವಲ್ಪ ಮೈ ಮರೆತರೂ ದೊಡ್ಡ ಕಂಟಕಕ್ಕೆ ಈಡಾಗ ಬಹುದಾದ ಘಟನೆಗೆ ಈ ಪ್ರಕರಣ ಒಂದು ಸಾಕ್ಷಿ ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ