Skip to main content

Blog number 1909. ಗಾಡ್ ಫಾದರ್ ಇಲ್ಲದೆ ಸಾದನೆ ಮಾಡಿದ ಕ್ರಿಯಾಶೀಲ ಗೆಳೆಯ ಎಂ. ಸಲೀಂ ನನ್ನ ಕಛೇರಿಯಲ್ಲಿ ಹಿಂದ್ ಸಮಾಚಾರ್ ನ್ಯೂಸ್ ನ ಸಿಸಿಲ್ ಸೋಮನ್ ಜೊತೆ

#ರಾಜ್ಯ_ಕಾಂಗ್ರೇಸ್_ಮುಖಂಡರಾದ_ಎಂ_ಸಲೀಂ

#ಭಾನುವಾರ_ನನ್ನ_ಕಛೇರಿಗೆ_ಬೇಟಿ_ನೀಡಿದ್ದರು

#ಸಾಗರ_ತಾಲ್ಲೂಕಿನ_ತಾಳಗುಪ್ಪದ_ಸಲೀಂ

#ಸಾಗರದ_ಲಾಲ್_ಬಹುದ್ದೂರು_ಪದವಿ_ಕಾಲೇಜು_ವಿದ್ಯಾರ್ಥಿ_ಆಗಿದ್ದವರು

#ಎನ್_ಸಿ_ಸಿ_ಸೈಕಲನಲ್ಲಿ_ದೇಶ_ಪರ್ಯಟನೆ_ಪ್ಯಾರಾ_ಸೈಕಲಿಂಗ್‌_ಪರ್ವತಾರೋಹಣ_ಪೋಟೋಗ್ರಪಿ_ಯೋಗಾಸನ

#ಜನಪರ_ಹೋರಾಟದಲ್ಲಿ_ಮು೦ಚೂಣಿಯಲ್ಲಿದ್ದವರು.

#ಯಾವುದೇ_ಗಾಡ್‌_ಪಾದರ್_ಇಲ್ಲದೆ_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ಏರಿದವರು.

  ಬಾನುವಾರ (7 ಜನವರಿ 2024) ಸಾಗರದ ಒಂದು ಕಾಲದ ನನ್ನ ಸಂಗಾತಿ ನಿವೃತ್ತ ಸೈನಿಕರಾಗಿದ್ದ ಸೋಮನ್ ಪುತ್ರ ಈಗ ಕಂಟ್ರಾಕ್ಟರ್ ಮತ್ತು ಹಿಂದ್ ಸಮಾಚಾರ್ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ  ಸಿಸಿಲ್ ಸೋಮನ್ ಪೋನ್ ಮಾಡಿ ನನ್ನ ಕಚೇರಿಯಲ್ಲಿ ನಾನು ಇದ್ದರೆ ಬೇಟಿ ಮಾಡುವುದಾಗಿ ಮತ್ತು ಜೊತೆಯಲ್ಲಿ ರಾಜ್ಯ ಕಾಂಗ್ರೇಸ್ ಮುಖಂಡರಾದ ಎಂ. ಸಲೀ೦ ನಿಮ್ಮ ಬೇಟಿಗೆ ಬರಲಿದ್ದಾರೆ ಎಂದರು.
   ನಮ್ಮ ಊರಿನ ಅಕ್ಕಿ ಗಿರಣಿ ಮಾಲೀಕರ ಮಗನ ಮದುವೆಯ ರಿಸಪ್ಷನಲ್ಲಿ ಭಾಗವಹಿಸಿ ನನ್ನ ಆಫೀಸಿಗೆ ಬಂದಿದ್ದರು.
  ರಾಜ್ಯ ಕಾಂಗ್ರೇಸ್ ಮುಖಂಡ ಮಾಜಿ ಸಂಸದ ಉಗ್ರಪ್ಪರೊಂದಿಗೆ ಬೆಂಗಳೂರಿನ ಕೆ. ಪಿ. ಸಿ.ಸಿ. ಕಛೇರಿಯಲ್ಲಿ ಕಾಂಗ್ರೇಸ್  ಪಕ್ಷದ ಪತ್ರಿಕಾಗೋಷ್ಠಿಯ ಪ್ರಾರಂಭದಲ್ಲಿ  ಪರ್ಸೆಂಟೇಜ್ ಕಲೆಕ್ಷನ್ ಗಿರಾಕಿಗಳ ಪೊಲಿಟಿಕ್ಸ್ ಎಂದು ಅವರ ಪಕ್ಷದವರೇ ಆದ ಡಿ.ಕೆ.ಶಿವಕುಮಾರ್ ಬಗ್ಗೆ ಮಾತಾಡಿದ್ದು ದೊಡ್ಡ ವೈರಲ್ ಸುದ್ದಿ ಆಗಿತ್ತು ಇದರಿಂದ ರಾಜ್ಯ ರಾಜಕಾರಣದಿಂದ ಸಲೀಂರನ್ನು ಬದಿಗೆ ಸರಿಸಲಾಯಿತು ಆದರೆ ಉಗ್ರಪ್ಪರನ್ನು ಮುಟ್ಟುವ ದೈರ್ಯ ಯಾರೂ ಮಾಡಲಿಲ್ಲ.
   ಅಷ್ಟಕ್ಕೂ ಬಲಿಪಶು ಆದ ಸಲೀಂ ಮಾಡಿದ ತಪ್ಪಾದರೂ ಏನು? ... ಉಗ್ರಪ್ಪನವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇ ಅಪರಾದವಾ?...ಸಲೀಂ ಹೇಳಿದ್ದು ಸುಳ್ಳಾ?... ಸತ್ಯ ಹೇಳಿದ್ದಕ್ಕೆ ಶಿಕ್ಷೆಯಾ?..... ಇದಕ್ಕೆ ಕಾಲವೇ ಉತ್ತರಿಸಬೇಕು.
   ಸಲೀಂ 60 ವರ್ಷ ವಯಸ್ಸು ದಾಟಿ ಸೀನಿಯರ್ ಸಿಟಿಜನ್ ಆಗಿದ್ದಾರೆ ಆದರೆ ಅವರ ದೈನಂದಿನ ವಾಕಿಂಗ್ ನಿರಂತರ 2 ಗಂಟೆ ಮತ್ತು 14000 ಹೆಜ್ಜೆಗಳು ಅಂದರೆ ಪ್ರತಿ ದಿನ ಕನಿಷ್ಟ 10 ಕಿ.ಮಿ. ನಡೆಯುತ್ತಾರೆ ಅವರ ಸ್ಮಾರ್ಟ್ ವಾಚ್ ದಾಖಲೆಗಳನ್ನು ತೋರಿಸಿದರು.
  ಬಿಪಿ ಶುಗರ್ ಇಲ್ಲದ ಅವರ ಹೆಲ್ತ್ ಕಾರ್ಡ್ ಅವರ ಪಿಟ್ ನೆಸ್ ತೋರಿಸುತ್ತದೆ.
   ವಿದ್ಯಾರ್ಥಿ ಜೀವನದಲ್ಲಿ NCC ಯಲ್ಲಿ ಅಮೋಘ ಸಾದನೆ ಮಾಡಿದ ಇವರು ಸೈಕಲ್ ನಲ್ಲಿ ದೇಶ ಪರ್ಯಟನೆ ಮಾಡಿದ್ದರು, ಕೈನೆಟಿಕ್ ಹೊಂಡಾ ಸ್ಕೂಟರ್ ನಲ್ಲಿ ಹಿಮಾಲಯ ಶ್ರೇಣಿಗೆ ಪ್ರವಾಸ, ವಿದ್ಯಾರ್ಥಿ ಯುವ ಜನರಿಗೆ ಪ್ರೇರೇಪಿಸುವ ಇವರ ಸಾಹಸದ ಕಾಯ೯ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದ್ದರು.
  ನಂತರ ಸಾಗರ ತಾಲೂಕಿನಲ್ಲಿ ಯುವ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಪೋಟೋಗ್ರಪಿಯಲ್ಲಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದರು.
   ಒಂದು ಕಾಲದಲ್ಲಿ ಸಲೀಂ ಸಾಗರ ವಿಧಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ. ಸದಸ್ಯರಾಗಿದ್ದವರು, ಆಗ ಮಂತ್ರಿ ಆಗಿದ್ದ ಕಾಗೋಡು ತಿಮ್ಮಪ್ಪ ಪಕ್ಕದ ಹೊಸನಗರ ತಾಲೂಕಿನಿಂದ ಕೆ.ಪಿ.ಸಿ.ಸಿ. ಸದಸ್ಯರಾಗ ಬೇಕಾಯಿತು.
   ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಉಗ್ರಪ್ಪರ ಜೊತೆಯ ಪ್ರೆಸ್ ಮೀಟ್ ಒಂದು ಇವರ ರಾಜಕೀಯ ಭವಿಷ್ಯಕ್ಕೆ ತಾತ್ಕಾಲಿಕ ತಡೆ ಆಯಿತು ಆದರೂ ಮುಂದಿನ ದಿನಗಳಲ್ಲಿ ನಮ್ಮ ಗೆಳೆಯ ಸಲೀಂಗೆ ಉನ್ನತ ಸ್ಥಾನಗಳು ಸಿಗಲಿದೆ.
  ಇಡೀ ರಾಜ್ಯದಲ್ಲೇ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಎಲ್ಲರೂ ಶಾಸಕರಾದರೆ ನಮ್ಮ ಸಾಗರ ತಾಲೂಕಿನಲ್ಲಿ ಜನರೇ ಹಣ ನೀಡಿ ಬೇಳೂರು ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡಿದ್ದು ವಿಶೇಷ ಎಂದ ಸಲೀಂ ಗೋಪಾಲಕೃಷ್ಣ ಬೇಳೂರು ಪರವಾಗಿ ಪ್ರಚಾರ ಮಾಡಿದ್ದರು.
  ಇವರು ಸಾಗರ ತಾಲ್ಲೂಕಿಗೆ ಬಂದಾಗೆಲ್ಲ ಇವರ ಅಭಿಮಾನಿಗಳು ಇವರನ್ನು ಮುತ್ತಿಕೊಳ್ಳುತ್ತಾರೆ ಅಂತಹ ಅಭಿಮಾನಿ ಬಳಗ ಹೊಂದಿರುವ ಸಲೀಂ ಈ ಸಾರಿ ಬೆಂಗಳೂರಿಗೆ ಬಂದಾಗ ಅವರ ಅತಿಥಿ ಆಗಿ ಅತಿಥ್ಯ ಸ್ವೀಕರಿಸ ಬೇಕೆಂಬ ಆಹ್ವಾನ ನೀಡಿದ್ದಾರೆ.
  ಸಲೀಂ ರಾಜಕಾರಣ ಭವಿಷ್ಯ ಉಜ್ವಲ ಆಗಲಿ ಎಂದು ಶುಭ ಹಾರೈಸಿ ಬೀಳ್ಕೊಟ್ಟೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...