Skip to main content

Blog number 1914. ಶಿರಾಳಕೊಪ್ಪದ ಹಜರತ್ ಉಮ್ಮರ್ ಸಾಹೇಬರೆಂಬ ಹತ್ತಿ ಶುಂಠಿ ವ್ಯಾಪಾರಿಗಳು ಮತ್ತು ಅವರ ಜೀವನದ ಅನುಭವಗಳ ವಾಸ್ತವ ಅರಿತ ಅವರಲ್ಲಿರುವ ದಾರ್ಶನಿಕ ವ್ಯಕ್ತಿತ್ವ.

#ಶಿರಾಳಕೊಪ್ಪದ_ಹಜರತ್_ಉಮ್ಮರ್_ಸಾಬ್

#ಮಗಳ_ವಿವಾಹ_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು

#ವ್ಯಾಪಾರಸ್ಥರೊ_ದಾಶ೯ನಿಕರೋ_ಎನ್ನುವಂತವರು.

#ಹತ್ತಿ_ಶುಂಠಿ_ವ್ಯಾಪಾರದಲ್ಲಿ_1980_ರಿಂದ_ನಮ್ಮ_ಭಾಗದಲ್ಲಿ_ಚಿರಪರಿಚಿತರು.

#ಇವರ_ಮಾತಿನಲ್ಲಿ_ಗಾದೆಗಳು_ಕಥೆಗಳು_ಕಂತೆ_ಕಂತೆ

#ವ್ಯಾಪಾರಿ_ಆಗಿರುವ_ಹಜರತ್_ಉಮ್ಮರ್_ಸಾಹೇಬರಿಗಿಂತ

#ವಾಸ್ತವ_ಆರಿತ_ಇವರ_ಅನುಭವಗಳಿಂದ_ದಾರ್ಶನಿಕ_ಹಜರತ್_ಉಮ್ಮರ್_ಸಾಹೇಬರು_ನನಗೆ_ಅಚ್ಚು_ಮೆಚ್ಚು.

#ಈ_ಹಸಿ_ಶುಂಠಿ_ಒಣ_ಶುಂಠಿ_ದಾರಣೆ_ಏನಾಗಬಹುದು?

#ಇಂತಹ_ಅನೇಕ_ವಿಚಾರ_ನಮ್ಮಿಬ್ಬರ_ಮಾತಿನಲ್ಲಿ_ದಾಖಲಾಯಿತು.

https://youtu.be/AvGQLclF73Y?feature=shared

    ಬಿಳಿ ಜುಬ್ಬಾ, ಬಿಳಿ ಪೈಜಾಮ್, ಸಾಕ್ಸ್ ಇಲ್ಲದ ಕಪ್ಪು ಬೂಟು, ಬಂಗಾರದ ಬಣ್ಣದ ಕಟ್ಟಿನ ಕನ್ನಡಕ, ಹೆಗಲ ಮೇಲೆ ಟರ್ಕಿ ಟವಲ್ ಹಾಕಿ ಕೊಂಡು ಬುಲೆಟ್ ಬೈಕ್ ಬಂದರೆ ಅದು ಹಜರತ್ ಉಮ್ಮರ್ ಸಾಹೇಬರದ್ದೇ ಅಂತ ನಮ್ಮ ಭಾಗದ ರೈತರಿಗೆ ಗೊತ್ತಾಗುತ್ತಿತ್ತು.
   ಮಳೆ ಕಡಿಮೆ ಆದಾಗ ಬಯಲು ಸೀಮೆಯ ಹತ್ತಿ ಬೆಳೆ ಮಲೆನಾಡನ್ನು ಒತ್ತುತ್ತಾ ಬಂದ ಕಾಲದಲ್ಲಿ ಹತ್ತಿ ಸುಗ್ಗಿಯಲ್ಲಿ ಕಾಟನ್ ಮಿಲ್ ಗೆ ರೈತರಿಂದ ಹತ್ತಿ ಖರೀದಿ ಮಾಡಲು ಹಜರತ್ ಉಮ್ಮರ್ ಸಾಹೇಬರನ್ನೇ ನಮ್ಮ ಭಾಗದ ರೈತರು ಹೆಚ್ಚು ನಂಬುತ್ತಿದ್ದರು.
   ಹಜರತ್ ಉಮ್ಮರ್ ಸಾಹೇಬರು ರೈತರ ಜೊತೆ ಆತ್ಮೀಯವಾಗಿ ಬೆರೆಯುವುದು, ಹೊಂದಿಕೊಂಡು ವ್ಯಾಪಾರ ಖುಲಾಯಿಸುವುದು, ತೂಕದಲ್ಲಿ ರೈತರಲ್ಲಿ ನಂಬಿಕೆ ಉಳಿಸುಕೊಳ್ಳುವುದು ಮತ್ತು  ರೈತರ ಹಣ ರೈತರ ಮನೆ ಬಾಗಿಲಿಗೆ ತಲುಪಿಸುವುದು ಇವರ ವ್ಯಾಪಾರದ ಒಂದು ಮುಖ ಆದರೆ, ಹಜರತ್ ಉಮ್ಮರ್ ಸಾಹೇಬರು ಬಂದರೆ ಇಡೀ ಊರನ್ನೆಲ್ಲಾ ನಕ್ಕು ನಗಿಸುವಂತ ಇವರ ಮಾತುಗಳು, ಮಾತಿನ ಮದ್ಯದ ಸಾಂದರ್ಭಿಕ ಗಾದೆಗಳು,ಉಪ ಕಥೆಗಳು ಇವರ ಜೀವನದ ಅನುಭವಗಳು ಸೇರಿ ವಾಸ್ತವದ ಮಾತುಗಳು ಇವರ ಇನ್ನೊಂದು ಮುಖವೇ ನನಗೆ ಇವರು ಹೆಚ್ಚು ಇಷ್ಟ ಆಗುತ್ತಾರೆ.
   ಜೀವನದ ವಾಸ್ತವ ಅರಿತವನೇ ದಾರ್ಶನಿಕ ಹಾಗಾಗಿ ಹಜರತ್ ಉಮ್ಮರ್ ಸಾಹೇಬರು ವ್ಯಾಪಾರಿ ವೃತ್ತಿಯ ಮಾಡುವ ದಾರ್ಶನಿಕರು ನನಗೆ.
  ಮೊನ್ನೆ ನಾನು ಸಂಜೆಯ ವಾಕಿಂಗ್ ಹೋದಾಗ ಬಂದವರು ನಾನು ವಾಕಿಂಗ್ ಮುಗಿಸಿ ಸ್ನಾನ ಮಾಡಿ ಆಫೀಸಿಗೆ ಬರುವ ತನಕ ಕಾದು ಕುಳಿತಿದ್ದಾರೆ, ಅನೇಕ ವರ್ಷಗಳ ನಂತರ ಇದು ನನ್ನ ಅವರ ಬೇಟಿ, ಇವರ ಮಗಳ ಮದುವೆಯ ಆಹ್ವಾನ ನೀಡಲು ಬಂದಿದ್ದರು.
  1985 ರಿಂದ 2000 ಇಸವಿ ತನಕ ನಮ್ಮ ಅಕ್ಕಿ ಗಿರಣಿಯಲ್ಲಿ ಇವರ ಹತ್ತಿ ತುಂಬುವ ಕಲ್ಲಿಗಳು (ಬೃಹತ್ ಗಾತ್ರದ ಚೀಲದ ರೂಪದ ಹತ್ತಿ ತುಂಬುವ ಬಲೆಯ ಚೀಲ) ಹಾಕುತ್ತಿದ್ದರು ಇವರ ಲೋಡಿಂಗ್ ಕಾಮಿ೯ಕರಿಗೆ ನಮ್ಮ ಅಕ್ಕಿ ಗಿರಣಿಯಲ್ಲೇ ವಾಸ್ತವ್ಯ.
   ಇವರ ಜೊತೆ ತುಂಬಾ ಹೊತ್ತು ಮಾತಾಡಿದೆ, ಈ ವರ್ಷ ಹಸಿ ಶುಂಠಿ ಖರೀದಿ ಬೆಲೆ ಗರಿಷ್ಟ ಎಷ್ಟಾಗಬಹುದು? ಒಣ ಶುಂಠಿ ಕೇಜಿಗೆ 400 ದಾಟಬಹುದಾ?... 1985 ರ ಕಾಲಕ್ಕೂ ಈಗಿನ ಕಾಲಕ್ಕೂ ರೈತನ ಪರಿಸ್ಥಿತಿ, ಹಣದ ಚಲಾವಣೆ ವ್ಯಾಪಾರಿಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಈ ಕೆಳಗಿನ ವಿಡಿಯೋದಲ್ಲಿ ದಾಖಲಾಗಿದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...