Skip to main content

Blog number 1925. ಹದವಾಗಿ ಉಪ್ಪು ಬೆರೆಸಿ ಬೇಯಿಸಿದ ಸಿಹಿ ಗೆಣಸಿನ ಸ್ಟಾದ ಅರಿಯದವರಾರು?

#ಬೆಳಗಿನ_ಚಳಿಯಲ್ಲಿ_ವಾಕಿಂಗ್_ಮುಗಿಸಿ_ಬಂದಾಗ

#ಬಿಸಿ_ಬಿಸಿ_ಬೇಯಿಸಿದ_ಗೆಣಸು

#ಗೆಣಸಿನ_ಸ್ಟಾದ_ಅರೋಮ_ಆರೋಗ್ಯ_ಅರಿಯದವರಿಲ್ಲ.

#ಕೆಂಪು_ಬಿಳಿ_ನಸುಹಳದಿ_ಬಣ್ಣದ_ಸಿಹಿ_ಗೆಣಸುಗಳು

#ಕೇರಳದಿಂದ_ಮಹಾರಾಷ್ಟ್ರದ_ಕರಾವಳಿ_ಪ್ರದೇಶದಲ್ಲಿ_ಹೆಚ್ಚು_ಬೆಳೆಯುತ್ತಾರೆ.

#ಕರಾವಳಿಯ_ಜಾತ್ರೆ_ಯಕ್ಷಗಾನದ_ಸ್ಥಳದಲ್ಲಿ_ಬೇಯಿಸಿದ_ಗೆಣಸು_ಮಾರಾಟದ_ಚಹಾ_ಅಂಗಡಿಗಳು

#ಈಗಿಲ್ಲ_ಬೇಯಿಸಿದ_ಗೆಣಸು_ತಿನ್ನುವುದು_ಅವಮಾನವಾ?

https://youtu.be/jM9fCCQrWfA?feature=shared


   ಇವತ್ತು ಬೆಳಿಗಿನ ಚಳಿಯಲ್ಲಿ ವಾಕಿಂಗ್ ಮುಗಿಸಿ ಮನೆ ತಲುಪಿದ ನನಗೂ ಮತ್ತು ನನ್ನ ಶಂಭೂರಾಮನಿಗೂ ನಮಗಿಷ್ಟವಾದ ಹಬೆಯಾಡುತ್ತಿರುವ ಕೆಂಪು ಸಿಹಿ ಗೆಣಸು ನಮ್ಮನ್ನು ಕಾಯುತ್ತಿತ್ತು.
   ನನಗೆ ಗೆಣಸು ಎಂದರೆ ಪಂಚ ಪ್ರಾಣ, ಹದವಾಗಿ ಉಪ್ಪು ಸೇರಿಸಿ ಬೇಯಿಸಿದ ಸಿಹಿ ಗೆಣಸು ತಿನ್ನುತ್ತಾ ಜೊತೆಗೆ ಎರೆಡೆರುಡು ದೊಡ್ಡ ಲೋಟದ ಚಹ ಅಥವ ಕಾಫಿ ಹೀರುವುದು ಒಂದು ರೀತಿ ಸ್ವರ್ಗ ಲೋಕ ಅನುಭವಿಸಿದಂತೆ.
  ಸಿಪ್ಪೆ ತೆಗೆದು ತೊಳೆದು ಹಾಗೆ ಹಸಿಯಾಗಿ ಗೆಣಸು ತಿನ್ನುವುದೂ ನನಗೆ ತುಂಬಾ ಇಷ್ಟ.
   ಸಿಹಿ ಗೆಣಸಿನಲ್ಲಿ ನೂರಾರು ತಳಿಗಳಿದೆ, ಬಣ್ಣ ಮತ್ತು ಆಕೃತಿ ಅದರ ಗಾತ್ರಗಳೂ ಬಿನ್ನ ವಿಭಿನ್ನವಾಗಿರುತ್ತದೆ.
  ಪಶ್ಚಿಮದ ಕರಾವಳಿಯ ಕೇರಳದಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ವಿವಿಧ ರುಚಿಯ ಸುವಾಸನೆಯ ಬಣ್ಣದ ಗೆಣಸುಗಳನ್ನು ಅಲ್ಲಿನ ಮರಳು ಭೂಮಿಯಲ್ಲಿ ಬೆಳೆಯುತ್ತಾರೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಾಟಕ್ಕೆ ಇಡುತ್ತಾರೆ.
   ಮಣ್ಣಿನ ಭೂಮಿಯಲ್ಲಿ ಬೆಳೆದ ಗೆಣಸಿಗೂ ಮರಳು ಭೂಮಿಯಲ್ಲಿ ಬೆಳೆದ ಗೆಣಸಿಗೂ ರುಚಿಯಲ್ಲಿ ವ್ಯತ್ಯಾಸ ಗಮನಿಸಬಹುದು.
   50 ವರ್ಷಗಳ ಹಿಂದೆ ಕರಾವಳಿಯ ಪ್ರದೇಶದಲ್ಲಿ ಜಾತ್ರೆ - ಯಕ್ಷಗಾನಗಳು ನಡೆಯುವಲ್ಲಿ ಈ ಬೇಯಿಸಿದ ಸಿಹಿ ಗೆಣಸು ಮಾರುವ ಚಹಾದ ಅಂಗಡಿಗಳು ಇರುತ್ತಿದ್ದವಂತೆ ಆದರೆ ಈಗ ಆ ಜಾಗದಲ್ಲಿ ಚಿಪ್ಸ್ ಇತ್ಯಾದಿ ಮಾರಾಟಕ್ಕೆ ಬದಲಾಗಿದೆ ಬಹುಶಃ ನಮ್ಮ ಮಣ್ಣಿನ ಶ್ರೇಷ್ಟ ಅಹಾರವಾದ ಗೆಣಸು ಸೇವಿಸುವುದು ಅಂತಸ್ತುಗಳಿಗೆ ಅಗೌರವ ಎನ್ನುವ ಸಾಮಾಜಿಕ ತಪ್ಪು ಗ್ರಹಿಕೆ ಕಾರಣ ಆಗಿರಬೇಕು.
   ಮೊನ್ನೆ ನಮ್ಮ ಅಣ್ಣ ನನ್ನ ತಾಯಿ ಮನೆದೈವ ಬಸ್ರೂರಿನ ಶ್ರೀ ದೊಟ್ಟಿ ಕಾಲು ಚಿಕ್ಕು ದೇವಸ್ಥಾನದ ಜಾತ್ರೆಗೆ ಹೋದಾಗ ಮರೆಯದೆ ಈ ಗೆಣಸು ತರಲು ತಿಳಿಸಿದ್ದೆ.
   ಈ ಸಿಹಿ ಗೆಣಸು ಹಾಲು ಮತ್ತು ಆಲೆಮನೆಯ ಬೆಲ್ಲದ ಜೊತೆಯೂ ತಿನ್ನಲು ರುಚಿಕರವಾಗಿರುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...