Skip to main content

Blog number 1935. ಶಿಕಾರಿಪುರದ ಪಡುವಾರಳ್ಳಿ ಪಾಂಡವರಾಗಿ ಯಡೂರಪ್ಪರ ನೇತೃತ್ವದ ಮಂತ್ರಿ ವೆಂಕಟಪ್ಪರ ವಿರುದ್ದ ಹೋರಾಟದಲ್ಲಿ ಪೋಲಿಸರಿಂದ ದೈಹಿಕ ಹಲ್ಲೆಗೊಳಗಾಗಿ ಬಳ್ಳಾರಿ ಜೈಲು ಸೇರಿದ ಶಿಕಾರಿಪುರದ ರಾಜು ನಾಥಪಂಥದ ಅನುಯಾಯಿ ನನ್ನ ಅತಿಥಿ.

#ಹತ್ತು_ವರ್ಷದ_ನಂತರದ_ಬೇಟಿ

#ಶಿಕಾರಿಪುರದ_ರಾಜು

#ನಾಥ_ಪಂಥದ_ಅನುಯಾಯಿಗಳು

#ಹಲವಾರಿ_ಮಠದ_ಹಿಂದಿನ_ಸ್ವಾಮಿಗಳಾದ_ಪೀರ್_ಸೋಮನಾಥಜೀ_ಶಿಷ್ಯರು

#ಜೀವ_ತ್ಯಾಗ_ಮಾಡಿದ_ಗುರುಗಳು_ಕಣ್ಣು_ತೆರೆದ_ಪವಾಡ

#ಶಿಕಾರಿಪುರದ_ಪಡುವಾರಳ್ಳಿ_ಪಾಂಡವರು_ಇವರು 

  ಹೊಸನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಡೆಂಟ್ ಆಗಿದ್ದ ಶಿಕಾರಿಪುರದ ರಾಜು ಮತ್ತು ಗ್ರಾಮ ಲೆಖ್ಖಗಿರಾಗಿದ್ದ ಮೋಹನ್ ಅವರು ನನಗೆ ಆಪ್ತರಾಗಿದ್ದು ಇವರಿಬ್ಬರು ನಾಥ ಪಂಥದ ಅನುಯಾಯಿಗಳಾದ್ದರಿಂದ,
  ನಾಥ ಪಂಥದ ಬಗ್ಗೆ ಹೆಚ್ಚು ತಿಳಿದಿದ್ದಾರೆ - ಓದಿದ್ದಾರೆ ಮತ್ತು ನಾಥ ಪಂಥದ ಅನೇಕ ಉತ್ತರ ಭಾರತದ ಕ್ಷೇತ್ರಗಳನ್ನು ವರ್ಷಂಪ್ರತಿ ಸಂದರ್ಶಿಸುತ್ತಾರೆ.
   ಕೊಡಚ್ಚಾದ್ರಿ ಸಿದ್ದ ಪೀಠ ಯಡಮೊಗೆಯ ಹಲವಾರಿ ಮಠ ನಾಥ ಪಂಥದ ಉತ್ತರಪ್ರದೇಶದ ಗೋರಕಪುರದ ಮಹಾಂತರಾದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಒಳಪಟ್ಟಿದೆ ಪ್ರತಿ 12 ವರ್ಷಕ್ಕೆ ನಾಸಿಕದಲ್ಲಿ ನಡೆಯುವ ಕುಂಭಮೇಳದ ಮರುದಿನ ಹೊರಡುವ ಬಾರಾಪಂಥ ಯಾತ್ರೆಯಲ್ಲಿ ನೂರಾರು ಸಂತರು ಪಶ್ಚಿಮ ಘಟ್ಟ ಪ್ರದೇಶದ ಮಧ್ಯ ನಡೆದು ಬರುತ್ತಾರೆ ಅಂತಿಮವಾಗಿ ಮಂಗಳೂರಿನ ಕದ್ರಿ ಮಠ ತಲುಪುವ ಬಾರಾಪಂಥ್ ಯಾತ್ರೆ ಈ ಹಲವಾರಿ ಮಠದಲ್ಲಿ ತಂಗುತ್ತದೆ.
   ಈ ಮಠದ ಹಿಂದಿನ ಗುರುಗಳಾದ ಗ್ಯಾಲಿಯರ್ ನ ಫೀರ್ ಸೋಮನಾಥಜೀ ಅವರಿಗೆ ಇವರಿಬ್ಬರೂ ತುಂಬಾ ಆತ್ಮೀಯರಾಗಿದ್ದರು, ಅವರು 2014ರಲ್ಲಿ ದೇಹಾಂತ್ಯಕ್ಕೆ ಮೊದಲು ಅವರ ಸೇವೆ ಮಾಡಿದವರು ಇವರು.
   ಅವತ್ತು ಗುರುಗಳು ತಕ್ಷಣ ಬರಲು ಅವರ ಆಪ್ತರಿಂದ ಪೋನ್ ಮಾಡಿಸಿದ್ದರಿಂದ ರಾಜು ಹೊಸನಗರದಿಂದ ಹೊಸಂಗಡಿ ತಲುಪಿ ಅಲ್ಲಿಂದ ಬಲಕ್ಕೆ ಹೊರಳಿ ಯಡಮೊಗೆಯ ಕೊಡಚ್ಚಾದ್ರಿ ಸಿದ್ದ ಪೀಠ ತಲುಪುವಾಗ ಗುರುಗಳು ಜೀವ ತ್ಯಾಗ ಮಾಡಿ ಆಗಿತ್ತು.
   ಗುರುಗಳನ್ನು ನಾಥ ಪಂಥದ ಸಂಪ್ರದಾಯದಂತೆ ಕುಳ್ಳಿರಿಸಿ ಕೆಳ ದವಡೆ ಮತ್ತು ಶಿರದ ನೆತ್ತಿಗೆ ಬಟ್ಟೆ ಕಟ್ಟಿದ್ದರು... ಗುರುಗಳು ಬರಲು ಹೇಳಿದ್ದರಿಂದ ವೇಗವಾಗಿ ಬಂದರೂ ಅವರನ್ನು ಜೀವಂತ ಬೇಟಿ ಸಾಧ್ಯವಾಗಲಿಲ್ಲ ಎಂಬ ದುಃಖದಿಂದ ರಾಜು ಸಾಷ್ಟಾಂಗ ನಮಸ್ಕಾರ ಮಾಡಿ ಏಳುತ್ತಿರುವಾಗ ಅಲ್ಲೊಂದು ಪವಾಡ ನಡೆಯುತ್ತದೆ ಅದಕ್ಕೆ ಅಲ್ಲಿದ್ದ ಕೆಲವರು ಸಾಕ್ಷಿ ಆಗುತ್ತಾರೆ ಅದೇನೆಂದರೆ ಜೀವ ತ್ಯಾಗ ಮಾಡಿದ ಫೀರ್ ಸೋಮನಾಥಜೀ ಎರೆಡೂ ಕಣ್ಣು ತೆರೆಯುತ್ತಾರೆ ಕೆಲ ಕ್ಷಣದ ನಂತರ ಕಣ್ಣು ಮುಚ್ಚುತ್ತಾರೆ ಈ ಮೂಲಕ ತನ್ನ ಶಿಷ್ಯನಾದ ರಾಜುಗೆ ಸಾಕ್ಷಾತ್ಕಾರದ ದರ್ಶನ ನೀಡುತ್ತಾರೆ.
   ಕಲಿಯುಗದಲ್ಲಿ ಇದನ್ನು ನಂಬದಿದ್ದರೂ ನಾಥಪಂಥದಲ್ಲಿ ಇದು ಸಹಜವಾಗಿದೆ, ಈ ಮೂಲಕ ರಾಜು ನಿಜಕ್ಕೂ ದನ್ಯರು.
  ಕಳೆದ 10 ವರ್ಷದಲ್ಲಿ ಇವರ ಭೇಟಿ ಆಗಿರಲಿಲ್ಲ ಮೊನ್ನೆ ನನ್ನ ಕಛೇರಿಗೆ ಬಂದಿದ್ದರು ಬಂದ ಅತಿಥಿಗಳಿಗೆ ಕಾಫಿಯೊಂದಿಗೆ ನನ್ನ ಪುಸ್ತಕ ನೀಡಿದೆ.
   ಶಿಕಾರಿಪುರದ ರಾಜು ಮತ್ತು ಗೆಳೆಯರು ಆ ಕಾಲದಲ್ಲಿ ಶಿಕಾರಿಪುರದಲ್ಲಿ ಪಡುವಾರಳ್ಳಿ ಪಾಂಡವರಾಗಿದ್ದವರು ಗುಂಡೂರಾವ್ ಸರ್ಕಾರದಲ್ಲಿ ಆಹಾರ ಮಂತ್ರಿ ಆಗಿದ್ದ ಶಿಕಾರಿಪುರದ ವೆಂಕಟಪ್ಪನವರ ವಿರುದ್ದ ಆಗ ಶಿಕಾರಿಪುರದಲ್ಲಿ ಪುರಸಭಾ ಸದಸ್ಯರಾಗಿದ್ದ ಯಡೂರಪ್ಪನವರು ಜನಾಂದೋಲ ಶುರು ಮಾಡಿದ್ದರು ಅವರಿಗೆ ಬೆಂಬಲವಾಗಿ ಈ ಪಡುವಾರಳ್ಳಿ ಪಾಂಡವರು ಮಂತ್ರಿ ವೆಂಕಟಪ್ಪರ ಮನೆ ಮೇಲೆ ದಾಳಿ ಮಾಡುತ್ತಾರೆ ಇದು ಆ ಕಾಲದ ಪ್ರಬಲ ಮಾಧ್ಯಮವಾದ ರೇಡಿಯೋದಲ್ಲಿ ವೈರಲ್ ಸುದ್ದಿ... ಮರುದಿನ ಪ್ರಜಾವಾಣಿ ಮುಖಪುಟದ ಸುದ್ದಿ ಆಗಿತ್ತು.
  ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/03/blog-number-1345-27-2023-43.html
   ಸರಕಾರಕ್ಕೆ ಅವಮಾನವಾದ ಈ ಘಟನೆಗೆ ಕಾರಣರಾದ ಪಡುವಾರಳ್ಳಿ ಪಾಂಡವರನ್ನು ಸದೆ ಬಡೆದ ಪೋಲಿಸರು ಬಳ್ಳಾರಿ ಜೈಲಿಗೆ ಅಟ್ಟಿದರು ಘಟನೆಗೆ ಪ್ರೇರಕರಾದ ಯಡೂರಪ್ಪನವರು ಇವರನ್ನು ಬಿಡಿಸಲು ಬರಲೇ ಇಲ್ಲ, ಕಾಂಗ್ರೇಸಿನ ನಗರದ ಮಹಾದೇವಪ್ಪ ಜಾಮೀನು ನೀಡಿ ಬಿಡಿಸಿದರು.
   ನಂತರ ಚುನಾವಣೆಯಲ್ಲಿ ಯಡೂರಪ್ಪ ಜನ ಸಂಘದಿಂದ ಶಿಕಾರಿಪುರದ ಶಾಸಕರಾದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ