Skip to main content

Blog number 1919. ಆನಂದಪುರಂನ ರಂಗನಾಥ ದೇವಾಲಯದಲ್ಲಿ ಗರುಡ ಗಂಭದ ಬುಡದಲ್ಲಿ 517 ವರ್ಷಗಳ ಹಿಂದೆ ಹೊಸಗುಂದ ಸೀಮೆಯ ನಾಯಕರು ದೇವರ ಹರಿವಾಣ ಸೇವೆಗೆ ಎರೆಡು ಗ್ರಾಮಗಳನ್ನು ದತ್ತಿ ನೀಡಿದ ಶಿಲಾ ಶಾಸನ.

#ಆನಂದಪುರಂನ_ರಂಗನಾಥ_ಸ್ವಾಮಿ_ದೇವಾಲಯಕ್ಕೆ_ಕ್ರಿ_ಶ_1507ರಲ್ಲಿ_ಹರಿವಾಣ_ಸೇವೆಗೆ

#ಆಗ_ಈ_ದೇವರು_ಕೋಯಿಪುರದ_ತಿರುವೆಂಗಲನಾಥ

#ನಂತರ_ಕೋದಂಡರಾಮ_ಟಿಪ್ಪು_ಸುಲ್ತಾನ್_ಆನಂದಪುರಂ_ಕೋಟೆಗೆ_ಬರುವ_ಹಿಂದಿನ_ದಿನ

#ರಂಗನಾಥನೆಂದು_ಮರು_ನಾಮಕರಣ

#ಎರೆಡು_ಗ್ರಾಮಗಳನ್ನು_ದತ್ತಿ_ಕೊಟ್ಟಿರುವ_ಶಿಲಾಶಾಸನ

#ಶಿಲಾಶಾಸನದಲ್ಲಿ_ದಾಖಲಾಗಿರುವ_ವಿವರ

#ಆನಂದಪುರಂ_ರಂಗನಾಥದೇವಾಲಯದ_ಗರುಡಗಂಭದಲ್ಲಿ_ಉಲ್ಲೇಖ_ಆಗಿರುವುದು.

#ದೇವಾಲಯದ_ನವೀಕರಣದಲ್ಲಿ_ಶಿಲಾಶಾಸನ_ಸ್ಥಳಾಂತರವಾಗಿದೆ

#ಈ_ಶಿಲಾಶಾಸನದ_ಪಕ್ಕದಲ್ಲಿ_ಕಾಲಮಾನ_ಮಹತ್ವ_ಮತ್ತು_ಅದರಲ್ಲಿನ_ಉಲ್ಲೇಖ_ಕನ್ನಡದಲ್ಲಿ_ಮಾಹಿತಿ_ಪಲಕ_ಇಡಬೇಕು.

#ಈ_ಶಿಲಾಶಾಸನದ_ಸಂರಕ್ಷಣೆಗೆ_ಹೆಚ್ಚಿನ_ಒತ್ತು_ನೀಡಬೇಕು.

    ಸ್ಥಳಿಯ ಇತಿಹಾಸ ಆಸಕ್ತರು ನಮ್ಮ #ಆನಂದಪುರಂನ_ರಂಗನಾಥ ದೇವಾಲಯದ ಬಗ್ಗೆ ಮಾಹಿತಿ ಕೇಳಿದ್ದಾರೆ ಅವರಿಗಾಗಿ ಈ ಮಾಹಿತಿ ಮತ್ತು ಇದು ಸದ್ಯದಲ್ಲೇ_ಬಿಡುಗಡೆ_ಆಗಲಿರುವ ನನ್ನ #ಆನಂದಪುರಂ_ಇತಿಹಾಸ ಪುಸ್ತಕದಲ್ಲಿ ದಾಖಲು ಆಗಿದೆ.

1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.
  ಈ ಗರುಡಗಂಭ 3.5 ಅಡಿ ಎತ್ತರ ಮತ್ತು 2 ಅಡಿ ಅಗಲ ಇದೆ, 18 ಸಾಲಿನಲ್ಲಿ ಅಕ್ಷರಗಳಿದೆ.  
    ಒಂದು ಕಾಲದಲ್ಲಿ ಶ್ರೀ ರಂಗನಾಥ ದೇವಾಲಯದ ಒಳ ಆವರಣದಲ್ಲಿ ದೇವಾಲಯದ ದ್ವಜ ಸ್ಥಂಭದ ಕೆಳಬಾಗದಲ್ಲಿದ್ದ  ಗರುಡಗಂಭದಲ್ಲಿ ಗರುಡನ ಶಿಲ್ಪವು ಆಕರ್ಷವಾಗಿದ್ದು ಒಂದು ಕೈಯಲ್ಲಿ ಸರ್ಪವಿದೆ.
   ಕಾಲ ಕಾಲಕ್ಕೆ ದೇವಾಲಯದ ನವೀಕರಣ ಕಾಲದಲ್ಲಿ ಸ್ಥಳ ಬದಲಾಗಿ ಈಗ ದೇವಸ್ಥಾನದ ಮು೦ಬಾಗದ ಗೋಡೆಯ ಎಡಭಾಗದಲ್ಲಿ ಸುರಕ್ಷಿತವಾಗಿ ರಕ್ಷಿಸಿಡಲಾಗಿದೆ.
   ಕ್ರಿ.ಶ.1507 AD ಕಾಲ ಮಾನದ ಈ ಗರುಡ ಸ್ಥಂಭಕ್ಕೆ ಈಗ 517 ವರ್ಷಗಳಾಗಿದೆ.
  517 ವರ್ಷಗಳ ಹಿಂದಿನ ಅಂದರೆ 5 ಶತಮಾನದ ಈ ಶಿಲಾ ಶಾಸನ ತುಂಬಾ ಮಹತ್ವದ್ದಾಗಿದೆ ಮತ್ತು ಮುಂದಿನ ದಿನದಲ್ಲಿ ಈ ಶಿಲಾ ಶಾಸನ ಅತ್ಯಂತ ಜಾಗೃತಿಯಿಂದ ಮುಂದಿನ ತಲೆಮಾರಿಗಾಗಿ ಸಂರಕ್ಷಿಸಬೇಕಾಗಿದೆ.
  ಈ ಶಿಲಾ ಶಾಸನದ ಮಹತ್ವ, ಕಾಲ ಮಾನ ಮತ್ತು ಇದರಲ್ಲಿ ಉಲ್ಲೇಖಿಸಿರುವ ವಿಷಯ ಕನ್ನಡ ಬಾಷೆಯಲ್ಲಿ ಬರೆದ ಮಾಹಿತಿ ಪಲಕ ಈ ಶಿಲಾ ಶಾಸನದ ಪಕ್ಕದಲ್ಲಿ ಸ್ಥಾಪಿಸಿದರೆ ದೇವಾಲಯಕ್ಕೆ ಬರುವ ಭಕ್ತರಿಗೆ ಶಿಲಾಶಾಸನದ ಮಾಹಿತಿ ದೊರೆಯುತ್ತದೆ.
   ಮುಂದಿನ ತಲೆಮಾರಿಗೆ ಸಂಶೋದನೆಗೂ ಪ್ರೋತ್ಸಾಹಿಸುತ್ತದೆ.
  ಇದರಲ್ಲಿ ಕಾಲಮಾನ ದಾಖಲೆ ಉಲ್ಲೇಖದ ಮತ್ತು ದಾನ ನೀಡುವವರ ಬಗ್ಗೆ ಸ್ಥಳದ ಬಗ್ಗೆಯ ಮಾಹಿತಿಯ ಜೊತೆ ಉಲ್ಲೇಖಿಸಿರುವ ವಿಚಾರ 
" ಬೆಯಕೊಪ್ಪ ಕಲ್ಲಪ್ಪ ನಾಯಕನ ಪುತ್ರ ಚಿಕ್ಕಣ್ಣ ನಾಯಕ ತನ್ನ ಮನೆ ವರ ದೇವರಾದ ಸ್ವಸ್ತಿಶ್ರೀ ಜಯಂತಿಪುರ ವರದಿಶ್ವರ ಶ್ರೀ ಮಹಾಲಕ್ಷ್ಮಿ - ಕುಚಕುಂಕುಮ ಲೋಲಾ .. ಕೋಯಿಪುರದ ತಿರುವೆಂಗಲನಾಥನ ಹರಿವಾಣ ನೈವೇದ್ಯಕ್ಕೆ ತಮ್ಮ ನಾಯಕ ತನಕೆ ಸಲ್ಲುವ ತಮ್ಮ ಹೊಸಗುಂದ ಸೀಮೆಯೊಳಗಿನ ಕೋಟಿ ಶೆಟ್ಟಿ ಕೊಪ್ಪ ..... ನೋಗೂಟಪುರವನ್ನು.. ಕಾಲ ಕಾಲಮ್ ಪ್ರತಿ ಸ್ವಾಮಿಯ ಅಂಗ - ರಂಗ-ಬೋಗಾಂಗ ನೈವೇಧ್ಯಕ್ಕೆ ಸಲಿಸಿ ಸ್ವಾಮಿಯ .... ವನು ಕೊಂಡು ಕೃತಾರ್ಥರ ಆಹುದೆಂದು ಬಿಟ್ಟ ಪುರ"
  ಎಂದಿದೆ.
   ಈ ಎರೆಡು ಗ್ರಾಮಗಳನ್ನು ದಾನವಾಗಿ ಹೊಸಗುಂದ ಸೀಮೆಯನ್ನು ಆಳುತ್ತಿದ್ದ ನಾಯಕರು ನೀಡಿದ ದಾನಪತ್ರವೇ ಈ ಶಿಲಾ ಶಾಸನ.
  ಈ ಶಿಲಾಶಾಸನದಲ್ಲಿ ರಂಗನಾಥ ದೇವರ ಹೆಸರು ಆ ಕಾಲದಲ್ಲಿ ತಿರುವೆಂಗಲನಾಥ ಎಂದು ಈ ದೇವಾಲಯದ ಪ್ರದೇಶದ ಹೆಸರು ಕೊಯಿಪುರ ಅಂತಿದೆ.
  ಹೊಸಗುಂದ ಸೀಮೆಯ ಆಳುತ್ತಿದ್ದ ನಾಯಕರು ದಾನವಾಗಿ ನೀಡಿದ ಕೋಟಿ ಶೆಟ್ಟಿ ಕೊಪ್ಪ ಮತ್ತು ನೋಗೂಟಪುರ ಯಾವುದೆಂಬುದು ಮುಂದಿನ ದಿನದಲ್ಲಿ ಸಂಶೋದಿಸಬೇಕು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ