Skip to main content

Blog number 1910. ನಾವಿದ್ದಲ್ಲೇ ಸ್ವರ್ಗ ಮತ್ತು ನರಕ ಸೃಷ್ಟಿಸಿಕೊಳ್ಳ ಬಹುದು.

#ಸ್ವರ್ಗದ_ಬಾಗಿಲು_ಎಲ್ಲಿದೆ?

#ನಾವಿದ್ದಲ್ಲೇ_ಸ್ವರ್ಗ_ಸೃಷ್ಟಿ_ಮಾಡಿಕೊಳ್ಳ_ಬಹುದು

#ಹಾಗೇ_ನರಕ_ಸೃಷ್ಟಿಯೂ_ಕೂಡ

#ನಿತ್ಯ_ಏಳು_ಸಾವಿರ_ಹೆಜ್ಜೆಯ_ವಾಕಿಂಗ್

#ಮೂರು_ವರ್ಷದ_ನಿರಂತರ_ಸ್ವಪ್ರಯೋಗ

#ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು.


  ನನ್ನ ವಾಕಿಂಗ್ ನೋಡಿದ ನಮ್ಮ ಲಾಡ್ಜ್ ಲ್ಲಿ ತಂಗಿದ್ದ  ಸಿನಿಮಾ ನಿರ್ದೇಶಕ ಗೆಳೆಯರು " ನೀವಿದ್ದಲ್ಲೇ ಸ್ಪರ್ಗ ಸೃಷ್ಟಿಸಿಕೊಂಡಿದ್ದೀರಿ" ಅಂದರು ನನಗೆ ಅರ್ಥವಾಗಲಿಲ್ಲ ಅವಾಗ ಅವರೇ ನೆನಪಿಸಿದ್ದು ನನ್ನದೇ ಡೈಲಾಗ್ "ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಬೇಕು" ಅವರು ನನ್ನ ನಿತ್ಯದ ಲೇಖನ ಓದುವವರು.
   ಬೆಳಿಗ್ಗೆ ಒಂದು ಗಂಟೆಯ 5000 ಹೆಜ್ಜೆಗಳಿಗೆ ಸಾಥ್ ನೀಡುವವ ನನ್ನ ಪ್ರೀತಿಯ ಶಂಭೂರಾಮ ಎಂಬ ರಾಟ್ ವೀಲರ್ ಸಂಜೆಯ 2500 ರಿಂದ 3000 ಹೆಜ್ಜೆಗೆ ಮಗಳು ಬೀದಿಯಿಂದ ತಂದು ಸಾಕಿ ನಮಗೆ ಬಿಟ್ಟು ಹೋದ ಜಾನ್ಸಿ ಮತ್ತು ಅವಳ ಮಗಳು ಕಾಳು.
  ಅವರು ಹೇಳಿದ್ದು ಸತ್ಯ ನಾನು ನನ್ನ ಜೀವನದ ಪರಿಸ್ಥಿತಿ ಮತ್ತು ಪರಿದಿಯಲ್ಲಿ ಸಂತೃಪ್ತ ಧನಾತ್ಮಕವಾಗಿ ಜೀವನ ಸಾಗಿಸಲು ನನ್ನ ಖಾಸಾಗಿ ಜೀವನದಲ್ಲಿ ಚೌಕಟ್ಟು ಹಾಕಿ ಕೊಂಡಿದ್ದೇನೆ.
    ನಿತ್ಯ ವಾಕಿಂಗ್ ಮಾಡಲು ಟ್ರೆಡ್ ಮಿಲ್ ಖರೀದಿಸುವ ಆಸೆ ಇತ್ತು, ಪಂಜಾಬ್ ನ ಜಲಂದರ್ ಗೆ ಹೋಗಿದ್ದಾಗ ಅಲ್ಲಿನ ಟ್ರೆಡ್ ಮಿಲ್ ಉತ್ಪಾದಕರಿಂದ ಹಿರಿಯ ಗೆಳೆಯರಾದ ಅಬಕಾರಿ ಗುತ್ತಿಗೆದಾರರಾದ ನಾರಾಯಣ ರಾವ್ ಅವರಿಗೆ ಟ್ರೆಡ್ ಮಿಲ್ ಖರೀದಿಸಿದ್ದೆವು.
  ನನ್ನ ಸಣ್ಣಕ್ಕನ ಮನೆಯಲ್ಲಿ ಟ್ರೆಡ್ ಮಿಲ್ ಇದೆ, ಅನೇಕ ಗೆಳೆಯರು ಖರೀದಿಸಿದ್ದಾರೆ ಆದರೆ ಅವರಾರು ಬಳಸುತ್ತಿಲ್ಲ.
  ನನ್ನ ಮೂರು ವರ್ಷದ ಹಿಂದಿನ 140 ಕೇಜಿ ತೂಗುವ ನನ್ನ ದೇಹದ ತೂಕಕ್ಕೆ ಬೇಕಾದ ಟ್ರೆಡ್ ಮಿಲ್ ಬೆಲೆ ಹತ್ತಿರ ಹತ್ತಿರ ಒಂದರಿಂದ ಒಂದೂವರೆ ಲಕ್ಷ ಆದ್ದರಿಂದಲೇ ನಾನು ಈ ಮೊತ್ತದ ಹಣದಲ್ಲಿ ಪೇವರ್ಸ್ ಹಾಕಿಸಿ ನನ್ನದೇ ಖಾಸಾಗಿ ವಾಕಿಂಗ್ ಟ್ರಾಕ್ ನಿರ್ಮಿಸಿಕೊಂಡಿದ್ದೇನೆ.
 ವಾಕಿಂಗ್ ಟ್ರಾಕ್ ಎರಡೂ ಬದಿಯಲ್ಲಿ ಹೂವಿನ ಗಿಡಗಳ ಪಾಟ್ ಇಟ್ಟಿದ್ದೇನೆ ಶಂಭೂರಾಮ, ಜಾನ್ಸಿ , ಕಾಳು ಎಂಬ ನಂಬಿಕೆಯ ಸಾಕು ಪ್ರಾಣಿಗಳ ಜೊತೆ 7000 ಹೆಜ್ಜೆಯ ಗುರಿಯ ವಾಕಿಂಗ್ ಮತ್ತು ಗಾರ್ಡನ್ ಗಿಡಗಳಿಗೆ ನಿತ್ಯ ನೀರುಣಿಸುವ ನಿರಂತರ ಮೂರು ವರ್ಷದ ಸಾಧನೆ ನನಗೆ ನೆಮ್ಮದಿ ಆರೋಗ್ಯದ ಸ್ವರ್ಗ ಸುಖ ನೀಡಿದೆ, ತೂಕ ಸುಮಾರು 35 ಕಿಲೋ ಇಳಿದಿದೆ, ಬಿಪಿ ನಾರ್ಮಲ್ ಆಗಿದೆ, ಡಯಾಬಿಟೀಸ್ ರಿವರ್ಸಲ್ ಹಾದಿಯಲ್ಲಿ ಇದೆ ಇದನ್ನೇ ನಾನು ಹೇಳುವ ನಮಗೆ ನಾವೇ ಸೃಷ್ಟಿ ಮಾಡಿಕೊಳ್ಳುವ #ಸ್ವಗ೯.
  ಇದರ ವಿರುದ್ದ ದಿಕ್ಕಿನ ದುರಾಸೆಗೆ, ನಕಾರಾತ್ಮಕ ಚಿಂತನೆಗೆ, ಅಮಲು ಪದಾರ್ಥಗಳ ದಾಸರಾದರೆ, ದ್ವೇಷ ಸಾಧನೆಗೆ, ಪರ ನಿಂದನೆಗೆ, ಹೊಟ್ಟೆಕಿಚ್ಚು, ಹಣದ ದಾಹಕ್ಕೆ ದಾಸರಾದರೆ... ನರಕವೂ ಸೃಷ್ಠಿ ಆಗುತ್ತದೆ.
   ನಿತ್ಯ ವಾಕಿಂಗ್ ಬಗ್ಗೆ ಅನೇಕರ ಅನೇಕ ರೀತಿಯ ಅಭ್ಯಾಸಗಳಿದೆ ಆದರೆ ನನಗೆ ಮನೆಯಿಂದ ಹೊರ ಹೋಗಿ ವಾಕಿಂಗ್ ಮಾಡಲು ಮೊದಲಿಂದಲೂ ಇಷ್ಟ ಇಲ್ಲ.
  ವಾಕಿಂಗ್ ಸಮಯದಲ್ಲಿ ದಾರಿಯಲ್ಲಿ ಎದುರಾಗುವ ಕೆಲವರು ಅವರ ಸಮಸ್ಯೆ ಹೇಳುತ್ತಾ ಇರುತ್ತಾರೆ ಇದರಿಂದ ನಿತ್ಯ ವಾಕಿಂಗ್ ಗೆ ತಡೆ ಆಗುವುದು  ಒ0ದು ಕಾರಣ, ಇನ್ನೊಂದು ಬೆಳಗಿನ ರಸ್ತೆಗಳು ಪಾದಚಾರಿಗಳಿಗೆ ಸುರಕ್ಷಿತವೂ ಅಲ್ಲ.
  ಇದರಿಂದ ಮನೆ ಎದುರಿನ 10 ಹೆಜ್ಜೆ ಹಾಕುವ ಪಾರ್ಕಿಂಗ್ ಜಾಗದಲ್ಲೇ ವಾಕಿಂಗ್ ಮಾಡುತ್ತಿದ್ದೆ,ಈಗ ಮನೆ ಹಿಂಬಾಗದಲ್ಲಿನ ಓಣಿಯಲ್ಲಿ ಪೇವಸ್೯ ಅಳವಡಿಸಿದ್ದರಿಂದ ಅಲ್ಲಿ 25 ಹೆಜ್ಜೆ ಹಾಕುವಷ್ಟು ಆಯಿತು, ಅಲ್ಲಿ ಸಣ್ಣ ಸಣ್ಣ ಪಾಟ್ ಗಳಿಟ್ಟು ಸಣ್ಣ ಗಾರ್ಡನ್ ಮಾಡಿ ಅದರ ಮಧ್ಯ ಬೆಳಿಗ್ಗೆ ಒಂದು ಗಂಟೆ ಅವಧಿ ವಾಕಿಂಗ್ 5000 ಹೆಜ್ಜೆ ಮತ್ತು ಸಂಜೆ ಅರ್ದ ಗಂಟೆ ಅವಧಿ ವಾಕಿಂಗ್ 2500 ಹೆಜ್ಜೆ ಅಂದರೆ ಪ್ರತಿ ನಿತ್ಯ 7 ರಿಂದ 8 ಸಾವಿರ ಹೆಜ್ಜೆ ಪೂರೈಸುತ್ತೇನೆ.
   ಒಟ್ಟು ದಿನಕ್ಕೆ 7000 ಹೆಜ್ಜೆ ಅಂದರೆ 5 ರಿಂದ 6 ಕಿ.ಮಿ. ಆಗುತ್ತದೆ, 3000 ಹೆಜ್ಜೆಗೆ 30 ನಿಮಿಷ ಬೇಕು, 1300 ರಿಂದ 1500 ಹೆಜ್ಜೆಗೆ 1 ಕಿ.ಮಿ. ಆಗುತ್ತೆ ಆದ್ದರಿಂದ ವಾಕಿಂಗ್ ಮಾಡಲು ಉದ್ಯಾನವನ ಅಥವ ಹೆದ್ದಾರಿ ಹುಡುಕಿ ಹೋಗಬೇಕಾಗಿಲ್ಲ.
   7000 ಹೆಜ್ಜೆಯ ವಾಕಿಂಗ್ ಅನುಕೂಲದ ಬಗ್ಗೆ ಸಂಶೋದನೆ ಮಾಡಿದ ಯುನಿವರ್ಸಿಟಿ ಆಫ್ ಮೆಸ್ಸಾಚ್ಯೂಟ್ಸ್ ಆಮ್ಸ್ಟೆ ಯ ಸಂಶೋದಕ ಆಮಾಂಡ್ ಪಲೂಚರ ಪ್ರಯೋಗಕ್ಕೆ ವಿಶ್ವದಾದ್ಯಂತ ಪ್ರಶಂಸೆಗಳಿದೆ.
  ನಾನು ಇದನ್ನು ಅಳವಡಿಸಿ ಕೊಂಡು ಹತ್ತಿರ ಹತ್ತಿರ ಮೂರು ವರ್ಷ ಆಯಿತು, ನನಗೆ ಇದರಿಂದ ಅನೇಕ ಅನುಕೂಲ ಆಗಿದೆ, ವಿಶೇಷವಾಗಿ ತೂಕ ಇಳಿದದ್ದು, ಶುಗರ್ ನಾರ್ಮಲ್ ಆಗಿದ್ದು ಜೊತೆಗೆ ಲವಲವಿಕೆ.
   ಒಂದು ಹೊತ್ತು ಅಥವ ಕೆಲವೊಮ್ಮೆ ಒ0ದರೆಡು ದಿನ ವಾಕಿಂಗ್ ಮಾಡಲಾಗದಿದ್ದರೂ ತೊಂದರೆ ಇಲ್ಲ ಆದರೆ ವಾಕಿಂಗ್ ಸಂಪೂರ್ಣ ತ್ಯಜಿಸಬೇಡಿ.
  ಇದು ಸ್ಥೂಲಕಾಯದ ಸ್ತ್ರಿಯರಿಗೂ ವರದಾನ ಆದ್ದರಿಂದ ನಮ್ಮ ಆರೋಗ್ಯಕ್ಕಾಗಿ ಕನಿಷ್ಟ ಇದನ್ನು ಅಳವಡಿಸಿಕೊಳ್ಳಬಹುದು.
   ಹೆಚ್ಚಿನ ಪರಿಚಿತರು "ನಾನು ವಾಕಿಂಗ್ ಮಾಡಬೇಕಂತ ಇದೀನಿ ಮನೆ ಹತ್ತಿರ ಪಾರ್ಕ್ ಇಲ್ಲ, ವಾಕಿಂಗ್ ಪಾತ್ ಇಲ್ಲ, ಮನೆ ಹತ್ತಿರ ಜಾಗ ಇಲ್ಲ, ಟ್ರಾಕ್ ಸ್ಯೂಟ್ ಇಲ್ಲ, ಶೂ ಸರಿ ಇಲ್ಲ" ಎಂಬ ನೆಪ ಹೇಳುತ್ತಾರೆ ಆದರೆ ಮನೆ ಹತ್ತಿರದ 10 ಹೆಜ್ಜೆ ಜಾಗವೇ ಸಾಕು ದಿನಕ್ಕೆ 7000 ಹೆಜ್ಜೆ ಹಾಕಲು,ಇದೇ ನಮ್ಮ ಜೀವನದ ಸಣ್ಣ ಸಣ್ಣ ಸುಖ ಪಡೆಯುವ #ಸ್ವರ್ಗದ_ಬಾಗಿಲು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ