Skip to main content

Blog number 1910. ನಾವಿದ್ದಲ್ಲೇ ಸ್ವರ್ಗ ಮತ್ತು ನರಕ ಸೃಷ್ಟಿಸಿಕೊಳ್ಳ ಬಹುದು.

#ಸ್ವರ್ಗದ_ಬಾಗಿಲು_ಎಲ್ಲಿದೆ?

#ನಾವಿದ್ದಲ್ಲೇ_ಸ್ವರ್ಗ_ಸೃಷ್ಟಿ_ಮಾಡಿಕೊಳ್ಳ_ಬಹುದು

#ಹಾಗೇ_ನರಕ_ಸೃಷ್ಟಿಯೂ_ಕೂಡ

#ನಿತ್ಯ_ಏಳು_ಸಾವಿರ_ಹೆಜ್ಜೆಯ_ವಾಕಿಂಗ್

#ಮೂರು_ವರ್ಷದ_ನಿರಂತರ_ಸ್ವಪ್ರಯೋಗ

#ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು.


  ನನ್ನ ವಾಕಿಂಗ್ ನೋಡಿದ ನಮ್ಮ ಲಾಡ್ಜ್ ಲ್ಲಿ ತಂಗಿದ್ದ  ಸಿನಿಮಾ ನಿರ್ದೇಶಕ ಗೆಳೆಯರು " ನೀವಿದ್ದಲ್ಲೇ ಸ್ಪರ್ಗ ಸೃಷ್ಟಿಸಿಕೊಂಡಿದ್ದೀರಿ" ಅಂದರು ನನಗೆ ಅರ್ಥವಾಗಲಿಲ್ಲ ಅವಾಗ ಅವರೇ ನೆನಪಿಸಿದ್ದು ನನ್ನದೇ ಡೈಲಾಗ್ "ನಾವಿದ್ದಲ್ಲೇ ಸ್ವರ್ಗ ಸೃಷ್ಟಿಸಿ ಕೊಳ್ಳಬೇಕು" ಅವರು ನನ್ನ ನಿತ್ಯದ ಲೇಖನ ಓದುವವರು.
   ಬೆಳಿಗ್ಗೆ ಒಂದು ಗಂಟೆಯ 5000 ಹೆಜ್ಜೆಗಳಿಗೆ ಸಾಥ್ ನೀಡುವವ ನನ್ನ ಪ್ರೀತಿಯ ಶಂಭೂರಾಮ ಎಂಬ ರಾಟ್ ವೀಲರ್ ಸಂಜೆಯ 2500 ರಿಂದ 3000 ಹೆಜ್ಜೆಗೆ ಮಗಳು ಬೀದಿಯಿಂದ ತಂದು ಸಾಕಿ ನಮಗೆ ಬಿಟ್ಟು ಹೋದ ಜಾನ್ಸಿ ಮತ್ತು ಅವಳ ಮಗಳು ಕಾಳು.
  ಅವರು ಹೇಳಿದ್ದು ಸತ್ಯ ನಾನು ನನ್ನ ಜೀವನದ ಪರಿಸ್ಥಿತಿ ಮತ್ತು ಪರಿದಿಯಲ್ಲಿ ಸಂತೃಪ್ತ ಧನಾತ್ಮಕವಾಗಿ ಜೀವನ ಸಾಗಿಸಲು ನನ್ನ ಖಾಸಾಗಿ ಜೀವನದಲ್ಲಿ ಚೌಕಟ್ಟು ಹಾಕಿ ಕೊಂಡಿದ್ದೇನೆ.
    ನಿತ್ಯ ವಾಕಿಂಗ್ ಮಾಡಲು ಟ್ರೆಡ್ ಮಿಲ್ ಖರೀದಿಸುವ ಆಸೆ ಇತ್ತು, ಪಂಜಾಬ್ ನ ಜಲಂದರ್ ಗೆ ಹೋಗಿದ್ದಾಗ ಅಲ್ಲಿನ ಟ್ರೆಡ್ ಮಿಲ್ ಉತ್ಪಾದಕರಿಂದ ಹಿರಿಯ ಗೆಳೆಯರಾದ ಅಬಕಾರಿ ಗುತ್ತಿಗೆದಾರರಾದ ನಾರಾಯಣ ರಾವ್ ಅವರಿಗೆ ಟ್ರೆಡ್ ಮಿಲ್ ಖರೀದಿಸಿದ್ದೆವು.
  ನನ್ನ ಸಣ್ಣಕ್ಕನ ಮನೆಯಲ್ಲಿ ಟ್ರೆಡ್ ಮಿಲ್ ಇದೆ, ಅನೇಕ ಗೆಳೆಯರು ಖರೀದಿಸಿದ್ದಾರೆ ಆದರೆ ಅವರಾರು ಬಳಸುತ್ತಿಲ್ಲ.
  ನನ್ನ ಮೂರು ವರ್ಷದ ಹಿಂದಿನ 140 ಕೇಜಿ ತೂಗುವ ನನ್ನ ದೇಹದ ತೂಕಕ್ಕೆ ಬೇಕಾದ ಟ್ರೆಡ್ ಮಿಲ್ ಬೆಲೆ ಹತ್ತಿರ ಹತ್ತಿರ ಒಂದರಿಂದ ಒಂದೂವರೆ ಲಕ್ಷ ಆದ್ದರಿಂದಲೇ ನಾನು ಈ ಮೊತ್ತದ ಹಣದಲ್ಲಿ ಪೇವರ್ಸ್ ಹಾಕಿಸಿ ನನ್ನದೇ ಖಾಸಾಗಿ ವಾಕಿಂಗ್ ಟ್ರಾಕ್ ನಿರ್ಮಿಸಿಕೊಂಡಿದ್ದೇನೆ.
 ವಾಕಿಂಗ್ ಟ್ರಾಕ್ ಎರಡೂ ಬದಿಯಲ್ಲಿ ಹೂವಿನ ಗಿಡಗಳ ಪಾಟ್ ಇಟ್ಟಿದ್ದೇನೆ ಶಂಭೂರಾಮ, ಜಾನ್ಸಿ , ಕಾಳು ಎಂಬ ನಂಬಿಕೆಯ ಸಾಕು ಪ್ರಾಣಿಗಳ ಜೊತೆ 7000 ಹೆಜ್ಜೆಯ ಗುರಿಯ ವಾಕಿಂಗ್ ಮತ್ತು ಗಾರ್ಡನ್ ಗಿಡಗಳಿಗೆ ನಿತ್ಯ ನೀರುಣಿಸುವ ನಿರಂತರ ಮೂರು ವರ್ಷದ ಸಾಧನೆ ನನಗೆ ನೆಮ್ಮದಿ ಆರೋಗ್ಯದ ಸ್ವರ್ಗ ಸುಖ ನೀಡಿದೆ, ತೂಕ ಸುಮಾರು 35 ಕಿಲೋ ಇಳಿದಿದೆ, ಬಿಪಿ ನಾರ್ಮಲ್ ಆಗಿದೆ, ಡಯಾಬಿಟೀಸ್ ರಿವರ್ಸಲ್ ಹಾದಿಯಲ್ಲಿ ಇದೆ ಇದನ್ನೇ ನಾನು ಹೇಳುವ ನಮಗೆ ನಾವೇ ಸೃಷ್ಟಿ ಮಾಡಿಕೊಳ್ಳುವ #ಸ್ವಗ೯.
  ಇದರ ವಿರುದ್ದ ದಿಕ್ಕಿನ ದುರಾಸೆಗೆ, ನಕಾರಾತ್ಮಕ ಚಿಂತನೆಗೆ, ಅಮಲು ಪದಾರ್ಥಗಳ ದಾಸರಾದರೆ, ದ್ವೇಷ ಸಾಧನೆಗೆ, ಪರ ನಿಂದನೆಗೆ, ಹೊಟ್ಟೆಕಿಚ್ಚು, ಹಣದ ದಾಹಕ್ಕೆ ದಾಸರಾದರೆ... ನರಕವೂ ಸೃಷ್ಠಿ ಆಗುತ್ತದೆ.
   ನಿತ್ಯ ವಾಕಿಂಗ್ ಬಗ್ಗೆ ಅನೇಕರ ಅನೇಕ ರೀತಿಯ ಅಭ್ಯಾಸಗಳಿದೆ ಆದರೆ ನನಗೆ ಮನೆಯಿಂದ ಹೊರ ಹೋಗಿ ವಾಕಿಂಗ್ ಮಾಡಲು ಮೊದಲಿಂದಲೂ ಇಷ್ಟ ಇಲ್ಲ.
  ವಾಕಿಂಗ್ ಸಮಯದಲ್ಲಿ ದಾರಿಯಲ್ಲಿ ಎದುರಾಗುವ ಕೆಲವರು ಅವರ ಸಮಸ್ಯೆ ಹೇಳುತ್ತಾ ಇರುತ್ತಾರೆ ಇದರಿಂದ ನಿತ್ಯ ವಾಕಿಂಗ್ ಗೆ ತಡೆ ಆಗುವುದು  ಒ0ದು ಕಾರಣ, ಇನ್ನೊಂದು ಬೆಳಗಿನ ರಸ್ತೆಗಳು ಪಾದಚಾರಿಗಳಿಗೆ ಸುರಕ್ಷಿತವೂ ಅಲ್ಲ.
  ಇದರಿಂದ ಮನೆ ಎದುರಿನ 10 ಹೆಜ್ಜೆ ಹಾಕುವ ಪಾರ್ಕಿಂಗ್ ಜಾಗದಲ್ಲೇ ವಾಕಿಂಗ್ ಮಾಡುತ್ತಿದ್ದೆ,ಈಗ ಮನೆ ಹಿಂಬಾಗದಲ್ಲಿನ ಓಣಿಯಲ್ಲಿ ಪೇವಸ್೯ ಅಳವಡಿಸಿದ್ದರಿಂದ ಅಲ್ಲಿ 25 ಹೆಜ್ಜೆ ಹಾಕುವಷ್ಟು ಆಯಿತು, ಅಲ್ಲಿ ಸಣ್ಣ ಸಣ್ಣ ಪಾಟ್ ಗಳಿಟ್ಟು ಸಣ್ಣ ಗಾರ್ಡನ್ ಮಾಡಿ ಅದರ ಮಧ್ಯ ಬೆಳಿಗ್ಗೆ ಒಂದು ಗಂಟೆ ಅವಧಿ ವಾಕಿಂಗ್ 5000 ಹೆಜ್ಜೆ ಮತ್ತು ಸಂಜೆ ಅರ್ದ ಗಂಟೆ ಅವಧಿ ವಾಕಿಂಗ್ 2500 ಹೆಜ್ಜೆ ಅಂದರೆ ಪ್ರತಿ ನಿತ್ಯ 7 ರಿಂದ 8 ಸಾವಿರ ಹೆಜ್ಜೆ ಪೂರೈಸುತ್ತೇನೆ.
   ಒಟ್ಟು ದಿನಕ್ಕೆ 7000 ಹೆಜ್ಜೆ ಅಂದರೆ 5 ರಿಂದ 6 ಕಿ.ಮಿ. ಆಗುತ್ತದೆ, 3000 ಹೆಜ್ಜೆಗೆ 30 ನಿಮಿಷ ಬೇಕು, 1300 ರಿಂದ 1500 ಹೆಜ್ಜೆಗೆ 1 ಕಿ.ಮಿ. ಆಗುತ್ತೆ ಆದ್ದರಿಂದ ವಾಕಿಂಗ್ ಮಾಡಲು ಉದ್ಯಾನವನ ಅಥವ ಹೆದ್ದಾರಿ ಹುಡುಕಿ ಹೋಗಬೇಕಾಗಿಲ್ಲ.
   7000 ಹೆಜ್ಜೆಯ ವಾಕಿಂಗ್ ಅನುಕೂಲದ ಬಗ್ಗೆ ಸಂಶೋದನೆ ಮಾಡಿದ ಯುನಿವರ್ಸಿಟಿ ಆಫ್ ಮೆಸ್ಸಾಚ್ಯೂಟ್ಸ್ ಆಮ್ಸ್ಟೆ ಯ ಸಂಶೋದಕ ಆಮಾಂಡ್ ಪಲೂಚರ ಪ್ರಯೋಗಕ್ಕೆ ವಿಶ್ವದಾದ್ಯಂತ ಪ್ರಶಂಸೆಗಳಿದೆ.
  ನಾನು ಇದನ್ನು ಅಳವಡಿಸಿ ಕೊಂಡು ಹತ್ತಿರ ಹತ್ತಿರ ಮೂರು ವರ್ಷ ಆಯಿತು, ನನಗೆ ಇದರಿಂದ ಅನೇಕ ಅನುಕೂಲ ಆಗಿದೆ, ವಿಶೇಷವಾಗಿ ತೂಕ ಇಳಿದದ್ದು, ಶುಗರ್ ನಾರ್ಮಲ್ ಆಗಿದ್ದು ಜೊತೆಗೆ ಲವಲವಿಕೆ.
   ಒಂದು ಹೊತ್ತು ಅಥವ ಕೆಲವೊಮ್ಮೆ ಒ0ದರೆಡು ದಿನ ವಾಕಿಂಗ್ ಮಾಡಲಾಗದಿದ್ದರೂ ತೊಂದರೆ ಇಲ್ಲ ಆದರೆ ವಾಕಿಂಗ್ ಸಂಪೂರ್ಣ ತ್ಯಜಿಸಬೇಡಿ.
  ಇದು ಸ್ಥೂಲಕಾಯದ ಸ್ತ್ರಿಯರಿಗೂ ವರದಾನ ಆದ್ದರಿಂದ ನಮ್ಮ ಆರೋಗ್ಯಕ್ಕಾಗಿ ಕನಿಷ್ಟ ಇದನ್ನು ಅಳವಡಿಸಿಕೊಳ್ಳಬಹುದು.
   ಹೆಚ್ಚಿನ ಪರಿಚಿತರು "ನಾನು ವಾಕಿಂಗ್ ಮಾಡಬೇಕಂತ ಇದೀನಿ ಮನೆ ಹತ್ತಿರ ಪಾರ್ಕ್ ಇಲ್ಲ, ವಾಕಿಂಗ್ ಪಾತ್ ಇಲ್ಲ, ಮನೆ ಹತ್ತಿರ ಜಾಗ ಇಲ್ಲ, ಟ್ರಾಕ್ ಸ್ಯೂಟ್ ಇಲ್ಲ, ಶೂ ಸರಿ ಇಲ್ಲ" ಎಂಬ ನೆಪ ಹೇಳುತ್ತಾರೆ ಆದರೆ ಮನೆ ಹತ್ತಿರದ 10 ಹೆಜ್ಜೆ ಜಾಗವೇ ಸಾಕು ದಿನಕ್ಕೆ 7000 ಹೆಜ್ಜೆ ಹಾಕಲು,ಇದೇ ನಮ್ಮ ಜೀವನದ ಸಣ್ಣ ಸಣ್ಣ ಸುಖ ಪಡೆಯುವ #ಸ್ವರ್ಗದ_ಬಾಗಿಲು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...