Skip to main content

Blog number 1903. ಇವತ್ತಿನ ನನ್ನ ಅತಿಥಿ ಪರಿಸರ ಹೋರಾಟಗಾರ ಲೇಖಕ ಅಖಿಲೇಶ್ ಚಿಪ್ಪಳಿ ದಂಪತಿಗಳು.

#ಇವತ್ತಿನ_ನನ್ನ_ಅತಿಥಿ_ಪರಿಸರ_ಹೋರಾಟಗಾರ_ಲೇಖಕ

#ಅಖಿಲೇಶ್_ಚಿಪ್ಪಳಿ_ದಂಪತಿಗಳು

#ಶಿಕಾರಿಪುರದ_ಗಾಮದಲ್ಲಿ_ಕಾಯ೯ಕ್ರಮದ_ಅತಿಥಿಗಳಾಗಿ_ಹೋಗುವ_ಮಾರ್ಗ_ಮಧ್ಯ

#ನನ್ನ_ಕಛೇರಿಗೆ_ಬಂದಿದ್ದರು.

#ಶರಾವತಿ_ನದಿ_ನೀರು_ಲಿಂಗನಮಕ್ಕಿ_ಡ್ಯಾಂನಿಂದ_ಬೆಂಗಳೂರಿಗೆ_ಹರಿಸುವ_ಯೋಜನೆ_ವಿರೋದಿ_ಹೋರಾಟದ_ಮುಂಚೂಣಿಯಲ್ಲಿದ್ದವರು

#ಆಗಿನ_ಮುಖ್ಯಮಂತ್ರಿ_ಯಡೂರಪ್ಪ_ಜಿಲ್ಲೆಯ_ಜನರ_ವಿರೋದಕ್ಕೆ_ಗೌರವಿಸಿ_ಯೋಜನೆ_ವಾಪಾಸು_ಪಡೆದಿದ್ದರು.

#ಈಗಿನ_ಕಾಂಗ್ರೇಸ್_ಸರ್ಕಾರ_ಪುನಃ_ಈ_ಯೋಜನೆ_ಜಾರಿಗೆ_ಮುಂದಾಗಿದೆ
   ಅಖಿಲೇಶ್ ಚಿಪ್ಪಳಿ ಪರಿಸರ ಹೋರಾಟಗಾರರು ಮತ್ತು ಲೇಖಕರಾಗಿ ನಾಡಿನಾದ್ಯಂತ ಪ್ರಖ್ಯಾತರಾಗಿದ್ದಾರೆ. ಇವರು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಬರೆಯುವ ಅಂಕಣಗಳು ಹೆಚ್ಚು ಪ್ರಸಿದ್ಧಿ ಪಡೆದಿದೆ ಮತ್ತು ಇವರಿಗೆ ಅಪಾರ ಪರಿಸರ ಸ್ನೇಹಿ ಅಭಿಮಾನಿ ವರ್ಗ ಸೃಷ್ಟಿ ಆಗಿದೆ.
  ಇವತ್ತು ಅಖಿಲೇಶ್ ಚಿಪ್ಪಳಿಯವರನ್ನು ಶಿಕಾರಿಪುರದ ಗಾಮಾ ಎಂಬ ಊರಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಿದ್ದಾರೆ, ವಿಶೇಷ ಎಂದರೆ ಈ ಕಾರ್ಯಕ್ರಮದ ವೇದಿಕೆಗೆ ಇತ್ತೀಚಿಗೆ ಕಾಡಾನೆ ದಾಳಿಗೆ ಬಲಿಯಾದ ನಾಡಿನ ಪ್ರಖ್ಯಾತ ಅಂಬಾರಿ ಆನೆ #ಅರ್ಜುನ ನ ನಾಮಕರಣ ಮಾಡಿದ್ದಾರೆ ಗಾಮ ಊರಿನ ಪರಿಸರಾಸಕ್ತ ಯುವಕರು.
   ಅಲ್ಲಿ ಅಖಿಲೇಶ್ ಚಿಪ್ಪಳಿ ಅಂಬಾರಿ ಆನೆ ಬಲಿಯಾದ ಕಾರಣ, ಪರಿಸರದ ವೈಪರಿತ್ಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಜೊತೆಯಲ್ಲಿ ಅವರ ಪತ್ನಿ ಕೂಡ ಹೋಗುತ್ತಿದ್ದಾರೆ.
   ಮೊನ್ನೆ ಶಿವಮೊಗ್ಗದಲ್ಲಿನ ಕರ್ನಾಟಕ ಸಂಘದಲ್ಲಿ ನಡೆದ ನಾ.ಡಿಸೋಜರ ಸಮಗ್ರ ಸಾಹಿತ್ಯ ಸಂಪುಟ ಬಿಡುಗಡೆ ಸಮಾರಂಭಕ್ಕೆ ಹೋಗುವಾಗ ನಮ್ಮಲ್ಲಿಗೆ ಬಂದಿದ್ದರಂತೆ ನಾನು ಇರಲಿಲ್ಲ ಆದ್ದರಿಂದ ನಮ್ಮಿಬ್ಬರ ಬೇಟಿ ಸಾಧ್ಯವಾಗಲಿಲ್ಲ ಇವತ್ತು ನನ್ನ ಬೇಟಿ ಮಾಡಿಯೇ ಹೋಗುವ ತೀಮಾ೯ನದಿಂದ ಬಂದೆ ಅಂದರು , ಇವರ ಆಗಮನ ನನಗೆ ತುಂಬಾ ಇಷ್ಟವಾಯಿತು.
   ಸಾಗರದ ಖ್ಯಾತ ಸ್ಪಂದನ ನರ್ಸಿಂಗ್ ಹೋಂನಲ್ಲಿ ಅಖಿಲೇಶ್ ಚಿಪ್ಪಳಿ ಪಿಸಿಯೋ ಥೆರಪಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ, ನನ್ನ ಪತ್ನಿಗೆ ಇವರು ಚಿಕಿತ್ಸೆ ನೀಡಿದವರು.
    ಪರಿಸರದ ಬಗ್ಗೆ, ವನ್ಯಜೀವಿಗಳ ಬಗ್ಗೆ ಅಖಿಲೇಶರದ್ದು ರಾಜಿ ಇಲ್ಲದ ಇವರ ಕಠೋರ ಮಾತುಗಳು ಮತ್ತು ಲೇಖನಗಳಿಂದ ನಷ್ಟ ಪಡುವ ಮಾಫಿಯಾದ ಫಲಾನುಭವಿಗಳಿಗೆ ಅಖಿಲೇಶ್ ಚಿಪ್ಪಳಿ ಅಂದರೆ ಆಗುವುದಿಲ್ಲ ಮತ್ತು ಇವರೆಂದರೆ ಭಯ ಇದೆ.
  ಇವರು ಮಾತಿನಲ್ಲಿ ಬರಹದಲ್ಲಿ ಮಾತ್ರ ಆದರ್ಶವಾದಿ, ಪರಿಸರವಾದಿಯಲ್ಲ ಇವರ ವೈಯಕ್ತಿಕ ಜೀವನ ಕೂಡ, ಇವರ ತಂದೆಯವರು ತಮ್ಮ ದೇಹ ಆಸ್ಪತ್ರೆಗೆ ಸಮರ್ಪಿಸಿ ಕೊಂಡವರು, ಇವರು ಕೆರೆಗಳ ಪುನಶ್ಚೇತನ ಮಾಡಿದ್ದಾರೆ, ಸಾಗರ ತಾಲೂಕಿನಲ್ಲೇ ನೈಸರ್ಗಿಕ ಅರಣ್ಯ ಬೆಳೆಸಿದ್ದಾರೆ, ಸರ್ಕಾರದ ಯೋಜನೆಗಳಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಸಂದರ್ಭದಲ್ಲಿ ಅದರ ಬಗ್ಗೆ ಹೋರಾಟ ರೂಪಿಸಿದವರು, ಶರಾವತಿ ನದಿ ನೀರು ಬೆಂಗಳೂರು ನಗರಕ್ಕೆ ಕುಡಿಯುವ ನೀರಾಗಿ ಬಳಸಲು ಒಯ್ಯುವ ರಾಜ್ಯ ಸರ್ಕಾರದ ಯೋಜನೆ ಪರಿಸರ ನಾಶಕ್ಕೆ ಕಾರಣ ಎಂದು ಅದನ್ನು ರದ್ದು ಮಾಡಲು ಶಿವಮೊಗ್ಗ ಜಿಲ್ಲೆಯ ಬಂದ್ ಆಚರಣೆ ಮತ್ತು ಪ್ರತಿಭಟನೆಗಳಿಗೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮಣಿದು ಶರಾವತಿ ನೀರು ಬೆಂಗಳೂರು ನಗರಕ್ಕೆ ಒಯ್ಯುವ ಯೋಜನೆ ವಾಪಾಸು ಪಡೆದಿದ್ದರು.
   ಏಕಾಂಗಿ ಆಗಿ ಎಸ್.ಆರ್.ಹಿರೇಮಠರ ರೀತಿ ಜನ ಜಾಗೃತಿ ಮೂಲಕ ನ್ಯಾಯಾಂಗದ ಮೂಲಕ ಪರಿಸರ ಹೋರಾಟ ಮಾಡುತ್ತಿರುವ ಅಖಿಲೇಶ್ ಚಿಪ್ಪಳಿ ದಂಪತಿಗಳ ಜೊತೆ ಸಂಜೆಯ ಕಾಫಿ ಜೊತೆ ಅನೇಕ ವಿಚಾರ ಮಾತಾಡಿದೆವು.    
     ಅವರಿಗೆ ನಾನು ಬರೆದ ಕಾದಂಬರಿ #ಬೆಸ್ತರ_ರಾಣಿ_ಚಂಪಕಾ ಮತ್ತು ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಹಾಗೂ ಹೊಸ ವರ್ಷದ ಟೇಬಲ್ ಕ್ಯಾಲೆಂಡರ್ ನೀಡಿ ಬೀಳ್ಕೊಟ್ಟೆ.
  ಕೊನೆಯಲ್ಲಿ ಅವರಾಡಿದ ಮಾತು ಹಸಿದವನ ಮುಂದೆ ಬಂಗಾರ ತುಂಬಿದ ತಟ್ಟೆ ಮತ್ತು ಅನ್ನ ತುಂಬಿದ ತಟ್ಟೆ ಇಟ್ಟರೆ ಅವನು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ?.... ಮುಂದಿನ ದಿನಗಳಲ್ಲಿ ಅಂತ ಪರಿಸ್ಥಿತಿ ಬರುತ್ತದೆ ಎಂಬುದು ಕಿವಿಯಲ್ಲಿ ಗುಂಯ್ ಗುಡುತ್ತಿದೆ...

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ