Skip to main content

Blog number 1915. ಡಯಾಬಿಟೀಸ್‌ ರಿವರ್ಸಲ್ ಚಿಕಿತ್ಸೆ ಪ್ರಾರಂಭಿಸಿ ಸಾವಿರಾರು ಮದುಮೇಹಿ ರೋಗಿಗಳ ಜೀವನದಲ್ಲಿ ಆಶಾ ಕಿರಣ ಮೂಡಿಸಿರುವ ಶಿವಮೊಗ್ಗದ ಪ್ರಖ್ಯಾತ ವೈದ್ಯ ಡಾಕ್ಟರ್ ಪ್ರೀತಂ ಈ ಬಗ್ಗೆ ಪುಸ್ತಕ ಬರೆದಿದ್ದಾರೆ.

#ಮದುಮೇಹ_ರೋಗ_ಶಾಶ್ವತವಾಗಿ_ಗುಣಪಡಿಸಿ_ಕೊಳ್ಳುವ_ಸಾಧ್ಯತೆ_ಇದೆಯಾ?

#ಅದನ್ನೇ_ಡಯಾಬಿಟೀಸ್_ರಿವರ್ಸಲ್_ಎಂದು_ಕರೆಯುವುದು

#ಜಗತ್ತಿನಾದ್ಯಂತ_52_ಕೋಟಿ_ಮದುಮೇಹಿಗಳಿದ್ದಾರೆ_2021ರ_ಅಂಕಿ_ಅಂಶ

#ಭಾರತದಲ್ಲಿ_10_ಕೋಟಿ_ತಲುಪಿದೆ_2023ರ_ಅಂಕಿ_ಅಂಶದ_ಪ್ರಕಾರ

#ಶಿವಮೊಗ್ಗದ_ಪ್ರಖ್ಯಾತ_ವೈದ್ಯರಾದ_ಡಾಕ್ಟರ್_ಪ್ರೀತಮ್_ಮದುಮೇಹಿಗಳಿಗಾಗಿಯೇ_ಪುಸ್ತಕ_ಬರೆದಿದ್ದಾರೆ.

#ಭಾರತೀಯರು_ತಮ್ಮ_ತೂಕ_10_ಕಿಲೋ_ಇಳಿಸಿದರೆ_ಡಯಾಬಿಟೀಸ್_ಹಿಂದಕ್ಕೆ_ಹೋಗುತ್ತದೆ.

#ಸದ್ಯದಲ್ಲೇ_ಪ್ರಕಟವಾಗಲಿದೆ.

  ಡಾಕ್ಟರ್ ಪ್ರೀತಮ್ ಕಳೆದ 15 ವರ್ಷಗಳ ಅವರ ನಿರಂತರ ವೈದ್ಯಕೀಯ ಸೇವೆಯಿಂದ ಪ್ರಖ್ಯಾತರಾಗಿದ್ದಾರೆ, ಇವರ ತಂದೆ ಸೊರಬ ಮೂಲದ ಡಾ. ಈಶ್ವರಪ್ಪನವರು ಶಿವಮೊಗ್ಗ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸರಕಾರಿ ವೈದ್ಯರಾಗಿ ಹೆಸರುಗಳಿಸಿದವರು.
    ನಿವೃತ್ತಿ ನಂತರವೂ ಜೈಲ್ ರಸ್ತೆಯಲ್ಲಿನ ಅವರ ಕ್ಲೀನಿಕ್ ಬಡವರ ದನ್ವಂತರಿ ಮಂದಿರ ಆಗಿತ್ತು, ಅವರು ಕೊನೆ ಉಸಿರು ಬಿಡುವ ತನಕ ಈ ಕ್ಲೀನಿಕ್ ತೆರೆದಿತ್ತು.
  ಇವರ ಅಣ್ಣ ಡಾಕ್ಟರ್ ಚೇತನ್ ಪ್ರಖ್ಯಾತ ದಂತ ವೈದ್ಯರು, ಅವರ ಸಾನಿಧ್ಯ ಡೆಂಟಲ್ ಕ್ಲೀನಿಕ್ ಶಿವಮೊಗ್ಗದ ದರ್ಗಾ ಕಾಂಪ್ಲೆಕ್ಸ್ ನಲ್ಲಿದೆ ಹಿಂದೆ ಸುಬ್ಬಯ್ಯ ಡೆಂಟಲ್ ಕಾಲೇಜ್ ನಲ್ಲಿ ಪ್ರಾಂಶುಪಾಲರಾಗಿದ್ದವರು, ಅಪಘಾತಗಳಲ್ಲಿ ಮುಖದ ಸೌಂದರ್ಯ ಕಳೆದು ಕೊಂಡವರಿಗೆ ಅದನ್ನು ಪುನರ್ ಮಾರ್ಪಾಡು ಮಾಡುವ ಜಿಲ್ಲೆಯ ಏಕೈಕ ತಜ್ಞರು ಇವರು.
   ಇಂತಹ ಖ್ಯಾತ  ವೈದ್ಯ ಕುಟುಂಬದ ಹಿನ್ನೆಲೆಯ ಡಾಕ್ಟರ್ ಪ್ರೀತಂ ಬೈಕ್ ರೈಡಿಂಗ್, ಕಾರ್ ರೇಸಿಂಗ್ ಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ, ಬ್ಯಾಡ್ಮಿಂಟನ್ ಮತ್ತು ಕ್ರಿಕೆಟ್ ಇವರಿಗೆ ಅತ್ಯಂತ ಇಷ್ಟದ ಕ್ರೀಡೆ ಮತ್ತು ಮೊದಲ ದರ್ಜೆ ಕ್ರಿಕೆಟ್ ಅಂಪೈರಿಂಗ್ ತೆರ್ಗಡೆ ಹೊಂದಿದ ಅಹ೯ತೆ ಪಡೆದ ಅಂಪೈರ್ ಇವರು.
   ಇವರ ಐಲೆಟ್ ಆಸ್ಪತ್ರೆ ಶಿವಮೊಗ್ಗ ಸಾಗರ ರಾಷ್ಟ್ರೀಯ ಹೆದ್ದಾರಿಯ ಆಟೋ ಕಾಂಪ್ಲೆಕ್ಸ್ ಎದರು, ದ್ವಾರಕಾ ಕಲ್ಯಾಣಮಂಟಪದ ಪಕ್ಕದಲ್ಲಿತ್ತು ಅದನ್ನು ಈಗ ಹೊಸ ವರ್ಷದ ಮೊದಲ ದಿನದಿಂದ ದುರ್ಗಿಗುಡಿ ವೃತ್ತದ ಸಿದ್ಧೋಜಿ ರಾವ್ ಸಿಂಗರ್ ಶೋ ರೂಂ ಸಮೀಪದಲ್ಲಿ ಜ್ಯೂವೆಲ್ ರಾಕ್ ಮತ್ತು ಜಿಲ್ಲಾ ಬಿಜೆಪಿ ಕಛೇರಿ ರಸ್ತೆಗೆ ಸಂಪರ್ಕಿಸುವ ಕಿರು ರಸ್ತೆಯ ಬಲಭಾಗದಲ್ಲಿ ಹೊಸದಾಗಿ ಪ್ರಾರಂಬಿಸಿದ್ದಾರೆ.
  ಪ್ರತಿ ಕುಟುಂಬದಲ್ಲೂ ಮದುಮೇಹ ಇರುವವರು ಸಹಜ ಆದರೆ ಅವರಿಗೆ ಇದರ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿರುವುದಿಲ್ಲ ಅಥವ ಮದುಮೇಹಿಗಳು ಸರಿಯಾದ ಮಾಹಿತಿ ಪಡೆದಿರುವುದಿಲ್ಲ.
  ಮದುಮೇಹ ಪರೀಕ್ಷೆ -ಮಾತ್ರೆ - ಇನ್ಸುಲಿನ್ ಇತ್ಯಾದಿಗಳಿಂದ ಹೆಚ್ಚಿನ ಲಾಭ ವೈದ್ಯರಿಗೆ ಇರುವಾಗ ಇದನ್ನು ಬಿಟ್ಟು ಮದುಮೇಹ ರಿವರ್ಸಲ್ ಸಾಧ್ಯವೆಂದು ಸ್ಪತಃ ಅನೇಕ ಪರೀಕ್ಷೆ ಸಂಶೋದನೆಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮದುಮೇಹಿ ರೋಗಿ ಮತ್ತು ಅವರುಗಳ ಕುಟುಂಬದಲ್ಲಿ ಆಶಾಕಿರಣ ಮೂಡಿಸಿದ್ದಾರೆ ಅದಕ್ಕಾಗಿ #ಡಯಾಬಿಟೀಸ್_ರಿವರ್ಸಲ್ ಅಭಿಯಾನ ಪ್ರಾರಂಬಿಸಿ ಯಶಸ್ವಿ ಆಗಿದ್ದಾರೆ ಇದರಿಂದ ವೈದ್ಯರಿಗೆ ನಷ್ಟವೇ ಆದ್ದರಿಂದ ಅನೇಕರು ಡಾಕ್ಟರ್ ಪ್ರೀತಂ ರ ಈ ಸಾಹಸಕ್ಕೆ ಬೆಂಬಲಿಸುವುದಿಲ್ಲ.
   ಆದರೆ ಲೋಕ ಕಲ್ಯಾಣದ ಈ ಕೆಲಸ ಪ್ರಾರಂಬಿಸಿರುವ ಡಾಕ್ಟರ್ ಪ್ರೀತಂ ರಿಗೆ ನನ್ನ ವೈಯಕ್ತಿಕ ಪ್ರಣಾಮಗಳನ್ನು ಅರ್ಪಿಸುತ್ತೇನೆ,ಈಗಾಗಲೇ ಸಾವಿರಾರು ಜನ ಮದುಮೇಹ ರೋಗದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವಿಮುಕ್ತಿ ಪಡೆದಿದ್ದಾರೆ ನನ್ನದೇ ಕುಟುಂಬದಲ್ಲಿ ಇದು ಸಾಧ್ಯವಾಗಿದೆ.
   ಇಂತಹ ಸೇವಾ ಮನೋಭಾವದ ವೈದ್ಯರಾದ ಡಾಕ್ಟರ್ ಪ್ರೀತಂ ಮದುಮೇಹಿ ರೋಗಿಗಳಿಗೆ ಅವರ ಕುಟುಂಬದವರಿಗಾಗಿ ಸದ್ಯದಲ್ಲೇ ಉಪಯುಕ್ತವಾದ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ.
  ಈ ಪುಸ್ತಕ ಡಯಾಬಿಟೀಸ್ ರೋಗದಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂಬ ಉಪಯುಕ್ತ ಮಾಹಿತಿ ರೋಗಿಗಳ ಜೀವನದಲ್ಲಿ ಆಶಾಕಿರಣ ಮೂಡಿಸಲಿದೆ.
   ಈ ಪುಸ್ತಕದ ಕರಡು ಪ್ರತಿ ಡಾಕ್ಟರ್ ಪ್ರೀತಂ ಅವರ 15 ವರ್ಷದ ಹಳೆಯ ಮದುಮೇಹಿ ರೋಗಿ ಆದ ನನಗೆ ಓದಲು ಅವಕಾಶ ನೀಡಿದ್ದರಿಂದ ಈ ಪುಸ್ತಕದ ಮಾಹಿತಿ ಪಡೆದೆ.   
   ಡಾಕ್ಟರ್ ಪ್ರೀತಂ ಬರಹದ ಶೈಲಿ ಮತ್ತು ನಮೂದಿಸಿರುವ ಮಾಹಿತಿ ಸ್ವತಃ ಡಯಾಬಿಟೇಸ್ ರೋಗಿ ಆಗಿ ಈಗ ಅವರ ಡಯಾಬಿಟೀಸ್ ರಿವರ್ಸಲ್ ಪ್ರಯೋಗದ ಫಲಾನುಭವಿ ಆಗಿ ಇಷ್ಟವಾಯಿತು.
   ಪ್ರತಿಯೊಬ್ಬ ಡಯಾಬಿಟೀಸ್ ರೋಗಿ ಮತ್ತು ಅವರ ಕುಟುಂಬದವರು ಈ ಪುಸ್ತಕ  ಓದಬೇಕು ಮತ್ತು ಅವರ ಮನೆಗಳಲ್ಲಿ ಇಟ್ಟುಕೊಳ್ಳಬೇಕು.
  ಡಯಾಬಿಟೀಸ್ ಎಂದರೆ ಭಯ ಪಡುತ್ತಿದ್ದ ಕಾಲ ಬದಲಾಗಲಿದೆ, ಡಾಕ್ಟರ್ ಪ್ರೀತಂ ಡಾಕ್ಟರಾಗಿ, ಕ್ರೀಡಾಪಟುಗಳಾಗಿ ಯಶಸ್ವಿ ಆಗಿದ್ದಂತೆ ಅತ್ಯುತ್ತಮ ವೈದ್ಯ ಲೋಕದ ಬರಹಗಾರರೂ ಆಗಲಿದ್ದಾರೆ.
  ಈ ಪುಸ್ತಕದ ಮುನ್ನುಡಿ ಇವರ ಡಯಾಬಿಟೀಸ್ ರಿವರ್ಸಲ್ ನಿಂದ ಸಂಪೂರ್ಣವಾಗಿ ಮದುಮೇಹ ರೋಗದಿಂದ ಗುಣವಾಗಿರುವ ಬೆಂಗಳೂರಲ್ಲಿ ನೆಲೆಸಿರುವ ಖ್ಯಾತ ಸಾಹಿತಿಗಳು ಬರೆದಿದ್ದಾರೆ.
https://www.facebook.com/share/p/3RQc5wgCYz48JVsc/?mibextid=qi2Omg
   #ಸದ್ಯದಲ್ಲೇ_ಇವರು_ಬರೆದ #ಡಯಾಬಿಟೀಸ್_ರಿವರ್ಸಲ್_ಪುಸ್ತಕ_ಲೋಕಾರ್ಪಣೆ_ಆಗಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ