Skip to main content

Blog number 1918. 25 ವರ್ಷದ ಹಿಂದಿನ ಹವಳದ ಉಂಗುರದ ಕಥೆ... ಇವತ್ತಿನ ನವರತ್ನ ಉಂಗುರದ ಕಥೆ ... ಯಾರ ಹೃದಯದ ಬಾರ ಇಳಿಯಿತು? ..

#ಹವಳದ_ಉಂಗುರದ_ನಂತರದ_ನವರತ್ನ_ಉಂಗುರದ_ಕಥೆ_ಇದು.

#ಬಂಗಾರವೇ_ಧರಿಸಬಾರದೆಂಬ_ಶಫಥ_ಮಾಡಿದ_ನನಗೆ_ನವರತ್ನ_ಉಂಗುರದ_ಉಡುಗೊರೆ.

#ಈ_ಉಡುಗೊರೆ_ನೀಡಿ_ಹಗುರಾಗುವ_ವಸಂತ್_ಕುಮಾರ್

#ಇದನ್ನು_ಹೇಳಿ_ಹಗುರಾಗುವ_ನನ್ನ_ಮನಸ್ಸು

#ಯಾವುದು_ಸರಿ?


    ಮೊನ್ನೆ ಗೆಳೆಯ ರೈತ ಹೋರಾಟದ ಮುಖಂಡ ಸಾಗರದ #ವಸಂತಕುಮಾರ್ ಬಂದಿದ್ದರು.ನಾನು ಇವರಿಂದಲೇ ಸಿದ್ದ ಸಮಾಧಿ ಯೋಗದ ಸಂಪರ್ಕ ಪಡೆದು ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಇವರು ಪ್ರಮುಖ ಕಾರಣಕರ್ತರು.
   ನಾನು ಸಂಜೆಯ ವಾಕಿಂಗ್ ಗೆ ಹೋದಾಗ ಬಂದವರು ನನ್ನ ವಾಕಿಂಗ್ ಗೆ ಭಂಗ ಬರಬಾರದೆಂದು ನಾನು ವಾಕಿಂಗ್ - ಸ್ನಾನ ಮುಗಿಸಿ ಬರುವ ತನಕ ನನ್ನ ಕಚೇರಿಯಲ್ಲಿ ಕುಳಿತಿದ್ದರು.
    ಬೇರೆ ಬೇರೆ ಗೆಳೆಯರು ಆ ಸಂದರ್ಭದಲ್ಲಿ ಬಂದಿದ್ದರು, ಎಲ್ಲರೂ ಸೇರಿ ಕಾಫಿ ಚಹಾ ಸೇವನೆ ಮಾಡಿದೆವು ನಂತರ ಅನೇಕ ವಿಚಾರಗಳ ಚರ್ಚೆ ಮುಂದುವರೆಯಿತು, ಗೆಳೆಯರೆಲ್ಲ ರಾತ್ರಿ 10 ಆಗುತ್ತಿದ್ದಂತೆ ಅವರವರ ಮನೆಗೆ ತೆರಳಿದರು ನಾವಿಬ್ಬರೇ ಉಳಿದೆವು, ಆಗಲೇ ಗೆಳೆಯ ವಸಂತ್ ಕುಮಾರ್ ನಿಮಗೊಂದು ಉಡುಗೊರೆ ತಂದಿದ್ದೇನೆ ಸ್ವೀಕರಿಸಬೇಕು ಎಂದರು.... ನನಗೆ ಕುತೂಹಲ ಆದರೆ ಅವರು ತೆಗೆದು ಉಡುಗೊರೆ ನೀಡಿದ ವಸ್ತು ನೋಡಿ ನನಗೆ ದಿಗ್ಭ್ರಮೆ ಆಯಿತು.
  ಅದೊಂದು #ನವರತ್ನದ ಬಂಗಾರದ ಉಂಗುರ ಆಗಿತ್ತು... ತಕ್ಷಣ ನನ್ನ ಮೆದುಳಿನಲ್ಲಿ ಅಲಾರಂ ಬಾರಿಸಿತು "ವಸಂತ್ ಕುಮಾರ್ ಅವರೇ ಇದು ನಾನು ಸುಮಾರು 25 ವರ್ಷಗಳ ಹಿಂದೆ ನೀಡಿದ ಹವಳದ ಉಂಗುರದ ಬದಲಿಗಾಗ ಎಂದೆ?" ಅವರು ತಕ್ಷಣ "ಖಂಡಿತ ಆ ರೀತಿ ಯೋಚಿಸಬೇಡಿ ನಿಮ್ಮ ಉಪಕಾರವನ್ನು,ಉಪಕಾರ ಮಾಡಿದ ಆ ಸಮಯವನ್ನು ನಾನು ಜೀವಮಾನ ಪೂರ್ತಿ ಮರೆಯುವಂತಿಲ್ಲ ಮತ್ತು ಆ ಉಪಕಾರವನ್ನು ನಾನು ತೀರಿಸಲು ಸಾಧ್ಯವಿಲ್ಲ"  ಅಂದರು.
    "ಸಣ್ಣ ಮಗ ದುಬೈನಲ್ಲಿ ದುಡಿಯುತ್ತಿದ್ದಾನೆ, ಮಧ್ಯದವನು ಬೆಂಗಳೂರಿನಲ್ಲಿ ಬೇಕರಿ ಪ್ರಾರಂಭಿಸಿದ್ದಾನೆ, ನಾನು ಸಾಗರದಲ್ಲಿ ನಾಲ್ಕು ಎಕರೆ ಸೈಟುಗಳನ್ನು ರಚಿಸಿ ಅಭಿವೃದ್ಧಿ ಮಾಡುತ್ತಿದ್ದೇನೆ, ಈಗ ನನ್ನಅಡಿಕೆ ತೋಟ ಪಸಲು ಬರುತ್ತಿದೆ... 2019ರ ನವೆಂಬರ್ ನಲ್ಲಿ ನಡೆದ ನಿಮ್ಮ ಮಗಳಾದ ನಿಶಾಳ ವಿವಾಹದಲ್ಲಿ ನಾನು ಇಂತಹ ಒಂದು ಉಡುಗೊರೆ ನೀಡಬೇಕೆಂದು ಬಯಸಿದ್ದೆ ಆದರೆ ಅವತ್ತು ನನಗೆ ಹಣ ಹೊಂದಾಣಿಕೆ ಆಗಲಿಲ್ಲ ಇವತ್ತು ಕೈಯಲ್ಲಿ ಹಣವಿದ್ದರಿಂದ ಇದನ್ನು ನಿಮಗೆ ನೀಡಲೇಬೇಕೆಂಬ ಸಂಕಲ್ಪದಿಂದ ಬಂದಿದ್ದೇನೆ ದಯಮಾಡಿ ನಿರಾಕರಿಸಬೇಡಿ" ಎಂದರು.
  ಅವರ ಜೊತೆ ಮಾತನಾಡುತ್ತಲೇ ನನ್ನ ಆಪ್ತರಿಗೆ ಈ ಪ್ರಶ್ನೆಯನ್ನು ವಾಟ್ಸಪ್ ಮೂಲಕ ಕಳಿಸಿದೆ ...ಈ ಉಂಗುರ ಸ್ವೀಕರಿಸ ಬಹುದಾ? ಅಂತ ಅದಕ್ಕೆ ಉತ್ತರಕ್ಕಾಗಿ ಕಾಯುತ್ತಿದ್ದೆ.. ನಂತರ ಬಂದ ಅವರ ವಾಟ್ಸಪ್ ಉತ್ತರ ಬಂಗಾರದ ಆಭರಣ ಉಡುಗೊರೆಯಾಗಿ ಯಾರೇ ನೀಡಿದರು ತಿರಸ್ಕಾರ ಮಾಡಬಾರದು ಎಂದು ಅವರ ಉತ್ತರವಾಗಿತ್ತು.
 ವಸಂತ ಕುಮಾರ್  "ಉಂಗುರ ನಿಮ್ಮ ಬೆರಳಿಗೆ ಸರಿ ಹೊಂದುತ್ತದಾ? ನೋಡಿ ಸರಿಯಾಗದಿದ್ದರೆ ಮತ್ತೆ ಬದಲಾಯಿಸಿ ತರುತ್ತೇನೆ" ಅಂದಾಗ ವಸಂತಕುಮಾರ್ ಅವರಿಗೆ ವಿನಂತಿ ಮಾಡಿದೆ ನಾನು ಬಂಗಾರ ಬೆಳ್ಳಿ ಧರಿಸುವುದಿಲ್ಲ ಮಗನು ಬಂಗಾರ ಧರಿಸುವುದಿಲ್ಲ ಪತ್ನಿಗೂ ಅದರ ಬಗ್ಗೆ ವ್ಯಾಮೋಹ ಇಲ್ಲ ಏನು ಮಾಡಲಿ ಇದನ್ನು? ..... 
   ಬಂಗಾರ ಆಭರಣ ದರಿಸದ, ಹಣ ಕೈಯಲ್ಲಿ ಮುಟ್ಟದ. ಜೀವಾ ವಿಮೆ ಮಾಡಿಸದ, ಟೀವಿ ಚಾನಲ್ ನೋಡದ, ಪತ್ರಿಕೆ ಓದದ, ಪ್ಯಾಂಟ್ ದರಿಸದ, ಸ್ವಂತ ಕ್ಷೌರ ಮಾಡಿಕೊಳ್ಳುವ, ರಾತ್ರಿ ಊಟ ಮಾಡದ, ಸನ್ಮಾನ -ಸತ್ಕಾರ ಸ್ವೀಕರಿಸದ, ಮತದಾನ ಮಾಡದ, ಸಭೆ ಸಮಾರಂಭದಲ್ಲಿ ಭಾಗವಹಿಸದ, ಹೊಗಳುವವರಿಂದ ಹಾಗೂ ತೆಗಳುವವರಿಂದ ಅಂತರ ಕಾಪಾಡಿಕೊಂಡು, ನನ್ನ ಸಹಾಯದ ಹೆಸರು ಬಹಿರಂಗ ಮಾಡದ ನನ್ನ ಶಫಥಗಳು ನನ್ನ 58 ನೇ ವಯಸ್ಸಿನ ತನಕ ಮುಂದುವರಿದಿದೆ ಇದೆಲ್ಲ ಮುಂದಿನ ನನ್ನ ವಾನಪ್ರಸ್ಥಾಶ್ರಮದ ನನ್ನ ತಯಾರಿಗಳು ....
  ವಸಂತ್ ಕುಮಾರ್ ನೀಡಿದ ನವರತ್ನದ ಉಂಗುರ ನನ್ನ ಬಳಿ ಈಗ ಇದೆ ಅದನ್ನ ನಾವು ಯಾರು ಧರಿಸುತ್ತಿಲ್ಲ ...ಅದು ಮುಂದಿನ ದಿನದಲ್ಲಿ ಯಾವ ರೀತಿ ಬಳಕೆಗೆ ಬರುತ್ತದೊ ಗೊತ್ತಿಲ್ಲ.
   #ಇದು ನವರತ್ನ ಉಂಗುರದ ಕಥೆ.

  ಹಿಂದಿನ #ಹವಳದ ಉಂಗುರದ ಕಥೆ ಈ ಲಿಂಕ್ ಕ್ಲಿಕ್ ಮಾಡಿ ಓದಬಹುದು.
https://arunprasadhombuja.blogspot.com/2022/11/blog-number-1080.html

https://arunprasadhombuja.blogspot.com/2023/11/blog-number-1836.html

 ಭವಿಷ್ಯ ಗೆಳೆಯ ವಸಂತಕುಮಾರ ಅವರಿಗೆ ಹವಳದ ಉಂಗುರದ ಕಥೆ ಇಷ್ಟವಾಗಲಿಲ್ಲವೋ ಅಥವಾ ತನ್ನ ಆರ್ಥಿಕ ಸಂಕಷ್ಟಗಳು ಕಳೆದಿದ್ದರಿಂದ ಈ ನವರತ್ನದ ಉಂಗುರ ನನಗೆ ನೀಡಿ ಹಗುರಾಗಬೇಕೆಂಬ ಭಾವನೆಯೋ ಗೊತ್ತಿಲ್ಲ.
 ರಾತ್ರಿ ತಡವಾದ್ದರಿಂದ ಅವರು ಸಾಗರ ಸೇರಿ ಅವರೇ ಅಡುಗೆ ಮಾಡಿ ಊಟ ಮಾಡುವ ಪ್ರವೃತ್ತಿ ನನಗೆ ಗೊತ್ತಿದ್ದರಿಂದ ನಮ್ಮ ಮಲ್ಲಿಕಾ ವೆಜ್ ನಿಂದ ತಂದೂರಿ ರೋಟಿ ಮತ್ತು ಪನ್ನೀರ್ ಬಟರ್ ಮಸಾಲ ಅವರಿಗೆ ಪಾರ್ಸೆಲ್ ಮಾಡಿಕೊಟ್ಟು ಅವರಿಗೆ ವಿದಾಯ ಹೇಳಿದೆ.
   ಮನಸ್ಸಿನಲ್ಲಿ ಕೊರೆಯುವ ಈ ನವರತ್ನ ಉಂಗುರದ ಉಡುಗೊರೆ ನಿಮ್ಮೊಡನೆ ಹಂಚಿ ಹಗುರಾಗುವ ಬಯಕೆ ನನ್ನದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...