Skip to main content

Blog number 1913. ಸಾಗರದ ಖ್ಯಾತ ಉದ್ಯಮಿ ಕೊಡುಗೈ ದಾನಿ ದಿವಂಗತ ಪುತ್ತೂರಾಯರ ಕುಟುಂಬದ ಹಾಲು ಮಡ್ಡಿ ಬಳಸಿ ತಯಾರಿಸುವ ಬ್ರಾಂಡೆಡ್ ಅಗರಬತ್ತಿಗೆ ಭರಪೂರ ಬೇಡಿಕೆ ಕಳೆದ 15 ವರ್ಷದಿಂದ ನಮ್ಮ ಸಂಸ್ಥೆಗೆ ಇದನ್ನು ಖರೀದಿಸುತ್ತಿದ್ದೇನೆ.

#ಸಾಗರದ_ಪ್ರಸಿದ್ಧ_ಆಗರಬತ್ತಿ_ಸಂಸ್ಥೆಯ_ಉದ್ಯೋಗಿಗಳು

#ನಮ್ಮ_ಕಛೇರಿಯಲ್ಲಿ

#ಹಾಲುಮಡ್ಡಿ_ಮೌಲ್ಯವರ್ಧನೆ_ಮಾಡಿದ_ಮಹಿಳಾ_ಉದ್ಯಮಿಯ_ಸಾಹಸ

#ಈ_ವಿಶೇಷ_ಆಗರಬತ್ತಿ_ಕಿಲೋಗೆ_ರೂ_3200

#ಸಾಗರದ_ಪ್ರಸಿದ್ದ_ಉದ್ಯಮಿ_ಎನ್_ಜಿ_ಪೈ_ಸೊಸೆಯಿಂದ

#ಶ್ರೀಗಜಾನನ_ಪಪ್ಯೂ೯ಮರಿ_ಇಂಡಸ್ಟ್ರೀಸ್

#ಪ್ರಸಿದ್ಧವಾಗಿರುವ_ಸ್ಯಾಂಡಲ್_ಪ್ಲೋರಾ_ಹರಿಲೀಲಾ_ವೈಷ್ಣವಿ_ಪ್ಲೋರಾ.


  ಕಳೆದ ನವೆಂಬರ್ ಒಂದರಂದು ಸಾಗರದ ಎನ್.ಜಿ. ಪೈ ಸಂಸ್ಥೆಯ ನಿಷ್ಟಾವಂತ ವ್ಯವಸ್ಥಾಪಕರಾದ ಅಶೋಕ್ ನಾಯಕ್ ಬಂದಿದ್ದರು ನಾವೆಲ್ಲ ಪುತ್ತೂ ರಾಯರ ಬೇಟಿಗೆ ಸಾಗರ ಇಕೇರಿ ರಸ್ತೆಯ ಅವರ ಹಳೆಯ ರೈಸ್ ಮಿಲ್ ಕಛೇರಿಗೆ ಹೋದಾಗೆಲ್ಲ ಸಿಗುತ್ತಿದ್ದವರು.
   ಅವರ ಜೊತೆ ಬಂದವರು ಹಿರೇಬಿಲಗುಂಜಿ ಗ್ರಾ.ಪ. ನ ಕೊಪ್ಪದ ಆದರ್ಶ ಗೌಡರು ಮತ್ತು ಸಾಗರದ ಜೋಗ ರಸ್ತೆಯ ಮಾದಣ್ಣರ ಕ್ಯಾಂಟೀನ್ ಪಕ್ಕದ ಪ್ರಾವಿಜನ್ ಸ್ಟೋರ್ ಮಾಲಿಕ ಕಾರ್ತಿಕ್ ಪೈ .
   ಇವರೆಲ್ಲ ಬಂದಿದ್ದು ಇವರ ಅಗರಬತ್ತಿ ಸಂಸ್ಥೆಯ ಇನ್ನೊಂದು ಹೊಸ ಉತ್ಪನ್ನ ಕಡಿಮೆ ಬೆಲೆಯ ಅಗರಬತ್ತಿ ಮಾರ್ಕೇಟ್ ಮಾಡಲು.
  ಕಿರಣ್ ಪೈ ಇದರ ಏಜೆನ್ಸಿ ಪಡೆದಿದ್ದಾರೆ ಅವರಿಗೆ ಇದರ ಮಾರ್ಕೆಟ್ ಪರಿಚಯಿಸಲು ಅಶೋಕ್ ನಾಯಕರು ಬಂದಿದ್ದರು ಅವರ ಜೊತೆ ಬಂದಿದ್ದ ಕೊಪ್ಪ ಆದರ್ಶ ಗೌಡರು ಉದಬತ್ತಿ ತಯಾರಿಕೆಯಲ್ಲಿ ನುರಿತ ತಂತ್ರಜ್ಞರು.
  ನಮ್ಮ ಸಂಸ್ಥೆಯಲ್ಲಿ  2008ರಿಂದ ಇವರ ಸಂಸ್ಥೆ ತಯಾರಿಸುವ #ಸ್ಯಾಂಡಲ್_ಫ್ಲೊರಾ ಅಗರ ಬತ್ತಿಯ ಖಾಯ೦ ಗಿರಾಕಿ. 
 ಈ ಅಗರ್ ಬತ್ತಿ ನನಗೆ ಪರಿಚಯಿಸಿದವರು ಮತ್ತು ಸಂದರ್ಭ ನನಗೆ ಇವರ ಬೇಟಿಯಿಂದ ಮತ್ತೆ ನೆನಪಾಯಿತು..
   #ಅಂದಾಜು_2008ರಲ್ಲಿ_ಸಾಗರದ ಕೊಡುಗೈ ದಾನಿ, ಪ್ರಖ್ಯಾತ ಉದ್ದಿಮೆದಾರರಾದ ಎನ್.ಜಿ. ಪೈ (ಪುತ್ತೂರಾಯರು) ಮತ್ತು ತೀನಾ ಶ್ರೀನಿವಾಸರು (ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದವರು) ಒಂದು ಸಂಜೆ ನನ್ನ ಬೇಟಿಗಾಗಿ ನಮ್ಮಲ್ಲಿಗೆ ಬಂದಾಗ ಆಗಷ್ಟೆ ಸಂಜೆಯ ಅಗರ್ ಬತ್ತಿ ನಮ್ಮ ಕೆಲಸದವರು ಹಚ್ಚುತ್ತಿದ್ದಾಗ ಪೈ ಅವರು ತಮ್ಮ ಸೊಸೆ ಪ್ರಾರಂಬಿಸಿರುವ ಹೊಸ ಉದ್ಯಮದ ಅಗರ್ ಬತ್ತಿ ಒಮ್ಮೆ ಬಳಸಿ ನೋಡಿ ಅಂದಿದ್ದರು ಮತ್ತು ನಮ್ಮ ಊರ ಪಕ್ಕದ ತಾಲ್ಲೂಕಿನ ಹಾಲುಗುಡ್ಡೆ ಎಂಬಲ್ಲಿ ಅವರದ್ದೆ ಹಾಲು ಮಡ್ಡಿ ತೋಟ ಮಾಡಿದ್ದು ಅದರ ಹಾಲು ಮಡ್ಡಿ ಬಳಸುತ್ತೇವೆ ಅಂದಾಗ ಕುತೂಹಲ ಉಂಟಾಗಿತ್ತು.
   ನಂತರ ಇನ್ನೊಮ್ಮೆ ಸಾಗರದ ಮಾರ್ಕೆಟ್ ರಸ್ತೆಯಲ್ಲಿರುವ ಅವರ ಕಛೇರಿಗೆ (ಹಳೇ ರೈಸ್ ಮಿಲ್) ಪೈರನ್ನು ಬೇಟಿ ಮಾಡಲು ಹೋದಾಗ ಇವರ ಸ್ಯಾಂಡಲ್ ಪ್ಲೋರಾ ಮತ್ತು ವೈಷ್ಣವಿ ಪ್ಲೋರಾ ಅಗರಬತ್ತಿ ಖರೀದಿಸಿ ತಂದಿದ್ದೆ.
   ಇದರಲ್ಲಿ ನನಗೆ ಇವತ್ತಿನವರೆಗೆ ಅತ್ಯಂತ ಇಷ್ಟ ಆಗಿರುವುದು #ಸ್ಯಾಂಡಲ್_ಪ್ಲೋರಾ ಮಾತ್ರ ಈಗ ಹರಿಲೀಲಾ ಎಂಬ ಹೊಸ ಬ್ರಾಂಡ್ ಕೂಡ ಪ್ರಾರಂಬಿಸಿದ್ದಾರೆ.
  ಹಾಲು ಮಡ್ಡಿ ಇದರ ವೈಜ್ಞಾನಿಕ ಹೆಸರು AILANTHUS MALABARICA ಇದು ಹೆಚ್ಚು ಮಳೆ ಪ್ರದೇಶದ  ನೂರು ಅಡಿ  ಎತ್ತರದ ತನಕ ಬೆಳೆಯುವ ಸುಮಾರು 50 ರಿಂದ 75 ವರ್ಷ ಆಯಸ್ಸು ಹೊಂದಿದ ಮರದ ಅಂಟು ಇದು ಅರಣ್ಯ ಬೆಳೆ ಮಲೆನಾಡಿನ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿದೆ.
  ಈ ಮರದ ಅಂಟು ತೆಗೆದು ಬಳಸಲು ಅರಣ್ಯ ಇಲಾಖೆ 1990 ರ ತನಕ ಅರಣ್ಯ ಉತ್ಪನ್ನ ಸಂಗ್ರಹಕಾರರಿಗೆ ಅನುಮತಿ ನೀಡಿತ್ತು ಆದರೆ ಅವೈಜ್ಞಾನಿಕ ಮಾದರಿಯಲ್ಲಿ ಅಂಟು ತೆಗೆಯುವ ದುರಾಸೆಯ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರ ಹಣದಾಸೆಯಿಂದ ಹಾಲು ಮಡ್ಡಿ ಮರಗಳು ನಾಶವಾಗುತ್ತಿರುವ ಕಾರಣದಿಂದ ಈಗ ಅರಣ್ಯದಲ್ಲಿ ಹಾಲು ಮಡ್ಡಿ ಸಂಗ್ರಹ ನಿಷೇದ ಮಾಡಿದೆ.
  ಹಾಲು ಮಡ್ಡಿ ಸ್ವಂತ ಕೃಷಿ ಮಾಡಲು ಅನುಮತಿ ಇದೆ ಆದ್ದರಿಂದಲೇ ಅರಣ್ಯ ಉತ್ಪನ್ನಗಳ ಗುತ್ತಿಗೆದಾರರಾಗಿದ್ದ ಎನ್.ಜಿ. ಪೈ ತಮ್ಮ ಸ್ವಂತ ಹಾಲು ಮಡ್ಡಿ ಪ್ಲಾಂಟೇಶನ್ ಮಾಡಿದ್ದರು ಅವರಿಗೂ ಗೊತ್ತಿರಲಿಲ್ಲ ಈ ಹಾಲು ಮಡ್ಡಿ ಇವರ ಸ್ವಂತ ಕೈಗಾರಿಕೆಗೆ ಮೂಲ ವಸ್ತು ಆಗುತ್ತೆ ಅಂತ.
  ಇವರ ಸೊಸೆ ಇದರ ಮೌಲ್ಯವರ್ದನೆ ಮಾಡಿ ಈಗ ದೇಶ ವಿದೇಶದಲ್ಲಿ ಪ್ರಸಿದ್ದಿಗೊಳಿಸಿದ್ದಾರೆ.
  ಪ್ರತಿ ತಿಂಗಳೂ ಒಂದು ಕಿಲೋ ಅಗರಬತ್ತಿ ನನ್ನ ಸಂಸ್ಥೆಗೆ ಖರೀದಿಸುತ್ತೇನೆ ಈಗಿನ ಬೆಲೆ ಕಿಲೋಗೆ 3200 , ಇದರ ಸುವಾಸನೆಯೇ ವಿಶಿಷ್ಟ ಆದ್ದರಿಂದ ನಮ್ಮ ಗ್ರಾಹಕರು ಇದು ಎಲ್ಲಿ ಸಿಗುತ್ತದೆ? ಇದ್ಯಾವ ಅಗರಬತ್ತಿ ಅಂತೆಲ್ಲ ವಿಚಾರಿಸುತ್ತಾರೆ, ಕೆಲವರಿಗೆ ಉಡುಗೊರೆಯಾಗಿಯೂ ಕೊಡುತ್ತೇನೆ.
  ಪ್ರತಿ ಗೌರಿ ಗಣೇಶ ಹಬ್ಬದಲ್ಲಿ ಮುಂಬೈ ಶಹರದ ಈ ಅಗರಬತ್ತಿ ಗ್ರಾಹಕರ ಬೇಡಿಕೆ ಪೂರೈಸಲು ಆಗುವುದಿಲ್ಲ ಅಂತ ಮುಂಬೈ ಶಹರದ ಗೆಳೆಯರೋರ್ವರು ತಿಳಿಸಿದ್ದರು, ಆನ್ ಲೈನ್ ನಲ್ಲೂ ಸಿಗುತ್ತಿದೆ, ಪ್ರಸಿದ್ಧ ಕಾಮತ್ ಹೋಟೆಲ್ ಸರಪಳಿಯಲ್ಲಿ ದೇಶದಾದ್ಯಂತ ಈ ಅಗರಬತ್ತಿ ಮಾರಾಟಕ್ಕೆ ಇಟ್ಟಿದ್ದಾರೆ.
  ಹಾಲು ಮಡ್ಡಿ ಮೌಲ್ಯವರ್ಧನೆ ಮಾಡಿ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಶ್ರೀ ಗಜಾನನ ಪಪ್ಯೂ೯ಮರಿ ಇಂಡಸ್ಟ್ರಿ ನಮ್ಮ ತಾಲ್ಲೂಕಿನ ಮಹಿಳಾ ಉದ್ಯಮಿ ಒಬ್ಬರದ್ದು ಅದು ನಮ್ಮೆಲ್ಲರ ಪ್ರೀತಿ ವಿಶ್ವಾಸದ ದಿವಂಗತ ಎನ್.ಜಿ. ಪೈ (ಪುತ್ತೂರಾಯರ) ಅವರ ಸೊಸೆಯದ್ದು ಎಂಬುದು ಒಂದು ಹೆಮ್ಮೆಯ ವಿಷಯ.
  ಒಮ್ಮೆ ಬಳಸಿ ನೋಡಿ ನಂತರ ನೀವೇ ಅದಕ್ಕೆ ಪಿಧಾ ಅಗುತ್ತೀರ ಅಂತಹ ಉತ್ಕೃಷ್ಟ ಅಗರಬತ್ತಿ ಇದು.
  50 ಗ್ರಾಂ ಪ್ಯಾಕೆಟ್ ನಲ್ಲೂ ದೊರೆಯುತ್ತದೆ ಬೆಲೆ ರೂ 170.

ಖರೀದಿ ಸಂಪರ್ಕಕ್ಕಾಗಿ https://g.co/kgs/Gr37TC

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ