Skip to main content

Blog number 1896. ಚಳಿಗಾಲದಲ್ಲಿ ಚರ್ಮ ಬಿರುಕು ಬಿಡುವುದು ತಡೆಯಲು ಶುದ್ಧ ಜೇನು ಮೇಣದ ವಿಂಟರ್ ಕ್ರೀಂ ನಾನು ಬಳಸುತ್ತೇನೆ.


https://youtu.be/e_3jwxFCOqE?feature=shared

#ಚಳಿಗಾಲದಲ್ಲಿ_ನನ್ನ_ಚರ್ಮ_ಸಂರಕ್ಷಣೆಗಾಗಿ

#ಜೇನಿನ_ಮೇಣದ_ದೇಸಿ_ಕ್ರೀಮ್

#ಇದನ್ನು_ತಯಾರಿಸುವವರು_ನಾಗೇಂದ್ರಸಾಗರ್

#ಪೆಟ್ರೋಲಿಯಂ_ಜೆಲ್_ವ್ಯಾಸಲಿನ್ಗಿಂತ_ಅತ್ಯುತ್ತಮ

#ಜೇನು_ಸಾಗಾಣಿಕೆದಾರರ_ಜೇನು_ಕೃಷಿ_ಮೌಲ್ಯಾದಾರಣೆಗಾಗಿ

#ಜೇನಿನ_ಮೇಣದ_ವಿಂಟರ್_ಕ್ರೀಮ್

#ಆದುನಿಕ_ಜೀವನ_ಶೈಲಿಯಿಂದ_ನಮ್ಮದೇ_ಪಾದ_ನಮ್ಮ_ಕಣ್ಣು_ಕೈಯಿಗೆ_ದೂರ


  ಚಳಿಗಾಲ ಬಂತೆಂದರೆ ದೇಹದ ಮುಖದ ಕೆನ್ನೆ ತುಟಿಗಳು, ಕಾಲ ಹಿಮ್ಮಡಿಗಳು ಒಡೆಯಲು ಪ್ರಾರಂಬಿಸುತ್ತದೆ, ಚರ್ಮ ಬಿರುಕು ಬಿಟ್ಟ ನಂತರ ಅವುಗಳ ಆರೈಕೆ ಮಾಡಿದರೆ ಅದು ಗುಣವಾಗಲು ತಿಂಗಳು ಕಾಲ ಬೇಕು ಮತ್ತು ಈ ಬಾದೆ ಅನುಭವಿಸಿದವರಿಗೆ ಮಾತ್ರ ಗೊತ್ತು.
  ಹೆಚ್ಚಾಗಿ ಒಣ ಚರ್ಮದವರಿಗೆ (Dry Skin) ಈ ಸಮಸ್ಯೆ ಜಾಸ್ತಿ, ಚಳಿಗಾಲನೇ ಶುರುವಾಗಿಲ್ಲ ಎಂದು ಕೆಲವರು ಗೇಲಿ ಮಾಡುತ್ತಾರೆ ಆದರೆ ತೀವ್ರ ಚಳಿಗಾಲ ಶುರುವಾಗದೇ ಇರುವಾಗಲೂ ಒಣ ಹವೆಯಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆ ಆದಾಗ ಒಣ ಚರ್ಮದವರ ಕಾಲಿನ ಹಿಮ್ಮಡಿ ಒಡೆಯಲು ಪ್ರಾರಂಭ ಆಗುತ್ತದೆ.
   ನಾವು ಅತ್ಯಂತ ಕಡಿಮೆ ಕಾಳಜಿ ವಹಿಸುವುದು ನಮ್ಮ ಪಾದಗಳಿಗೇ, ಈ ಪಾದಗಳು ಜೀವನ ಪರ್ಯಂತ ವಹಿಸುವ ಶ್ರಮ ನಗಣ್ಯ ಎಂಬಂತೆ ಜನರ ಭಾವನೆ ಆದ್ದರಿಂದ ಎಲ್ಲರೂ ಮುಖದ ಸೌಂದರ್ಯಕ್ಕೆ ನೀಡುವಷ್ಟು ಕಾಳಜಿಯ ಒಂದಂಶವೂ ಪಾದಗಳಿಗೆ ನೀಡುವುದಿಲ್ಲ.
   ಒಣ ಹವೆ, ತೇವಾಂಶ ಕೊರತೆಯಿಂದ, ಮತ್ತು ನಿತ್ಯ ನಡೆದಾಟದಿಂದ ಪಾದಗಳಿಗೆ ಅಂಟುವ ದೂಳುಗಳು ಸೇರಿ ಪಾದದ ಚರ್ಮ ಬಿರುಕು ಬಿಟ್ಟು ಉರಿ ಶುರುವಾದಾಗಲೇ ಪಾದದ ಕಡೆ ನಮ್ಮ ಗಮನ ಹೋಗುತ್ತದೆ ಆ ನಂತರವೇ ಪ್ರತಿ ದಿನ ರಾತ್ರಿ ಹಾಸಿಗೆ ಸೇರುವ ಮೊದಲು ಪಾದಗಳ ಕೊಳೆ ತೊಳೆಯುವ ಮತ್ತು ಬಿರುಕುಗಳಿಗೆ ಪೆಟ್ರೋಲಿಯಂ ಪ್ರಾಡಕ್ಟ್ ಆದ ಸುದಾರಿತ ಗ್ರೀಸ್ (ವ್ಯಾಸಲೀನ್) ಹಚ್ಚಲು ಪ್ರಾರಂಬಿಸುತ್ತೇವೆ ಆದರೆ ಬಿರುಕು ಬಿಟ್ಟ ಚರ್ಮ ತಕ್ಷಣ ಗುಣವಾಗುವುದಿಲ್ಲ.
  ಪ್ರತಿ ನಿತ್ಯ ನಿಮ್ಮ ಪಾದಗಳನ್ನು ಪ್ರೀತಿಸುವ ಅವುಗಳ ಆರೈಕೆ ಯಾವತ್ತೂ ಮಾಡುತ್ತಿದ್ದರೆ ಈ ಸಮಸ್ಯೆ ಇರುವುದಿಲ್ಲ ಇವತ್ತಿನ ಆಧುನಿಕ ಜೀವನ ಶೈಲಿ, ಡೈನಿಂಗ್ ಟೇಬಲ್ ಬಳಕೆಗಳು, ದೇಹದ ಬೊಜ್ಜು ನಮ್ಮ ಕಣ್ಣು ಮತ್ತು ಕೈಯಿಂದ ನಮ್ಮ ಅತ್ಯಂತ ಸಮೀಪದ ಪಾದವೇ ದೂರವಾಗಿರುವುದು ವಾಸ್ತವ.
  ಈಗ ವಿಶ್ವದಾದ್ಯಂತ ಪೆಟ್ರೋಲಿಯಂ ಉಪ ಉತ್ಪನ್ನಗಳಾದ ಜೆಲ್ ವ್ಯಾಸಲೀನ್ ಹೆಚ್ಚು ಬಳಕೆಯಲ್ಲಿದೆ, ಪ್ರಾಚಿನ ಕಾಲದಲ್ಲಿ ಪ್ರಾಣಿಯ ಕೊಬ್ಬು, ಸಸ್ಯದ ಕೊಬ್ಬು, ಎಣ್ಣೆ ಕಾಳುಗಳ ಎಣ್ಣೆ, ಹಾಲಿನ ಕೆನೆ - ಬೆಣ್ಣೆ - ತುಪ್ಪಗಳ ಜೊತೆ ಜೇನಿನ ಮೇಣದ ಬಳಕೆ ಕೂಡ ಇತ್ತು.
  ಈಗ ಜೇನಿನ ಮೇಣದ ಬಳಕೆ ತುಂಬಾ ಕಡಿಮೆ, ಸಾಗರ ತಾಲ್ಲುಕಿನಲ್ಲಿನ ನಾಗೇಂದ್ರ ಸಾಗರ್ ಜೇನು ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಾರೆ ಅವರು ಜೇನು ಮೇಣದಿಂದ ತಯಾರಿಸುವ ವಿಂಟರ್ ಕ್ರೀ೦ ಯಾವುದೇ ಬ್ರಾಂಡೆಡ್ ವಿಂಟರ್ ಕ್ರೀಂಗೆ ಕಡಿಮೆ ಇಲ್ಲ.
  ಪ್ರತಿ ವರ್ಷ ನಾನು ಅವರು ತಯಾರಿಸುವ ಶುದ್ಧ ಜೇನು ಮೇಣದ ವಿಂಟರ್ ಕ್ರಿಂ ಪ್ರತಿ ರಾತ್ರಿ ಬಳಸುತ್ತೇನೆ ಈ ವರ್ಷದ ಖರೀದಿ 24 ಬಾಟಲಿ ಜೇನು ಮೇಣದ ವಿಂಟರ್ ಕ್ರೀಂ ಮೊನ್ನೆ ಅವರ ಶಿವಮೊಗ್ಗ ಪ್ರಯಾಣದ ಸಂದರ್ಭದಲ್ಲಿ ನನ್ನ ಕಛೇರಿಗೆ ತಲುಪಿಸಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...