Skip to main content

Blog number 1900. ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪನವರು ಸ್ಥಾಪಿಸಿದ್ದ (4 - ಜನವರಿ - 1948) ರೈತ ಸಂಘದ ವಜ್ರ ಮಹೋತ್ಸವ ಆಚರಣೆ 4- ಜನವರಿ - 2024

#ಕಾಗೋಡು_ರೈತ_ಹೋರಾಟದ_ನೇತಾರ_ಹೆಚ್_ಗಣಪತಿಯಪ್ಪ

#ಸ್ಥಾಪಿಸಿದ_ರೈತ_ಸಂಘಕ್ಕೆ_75_ವರ್ಷದ_ವಜ್ರ_ಮಹೋತ್ಸವದ_ಸಂಭ್ರಮ

#ಈ_ರೈತ_ಸಂಘದ_ಸ್ಥಾಪನೆಗೆ_ಕಡಿದಾಳುಮಂಜಪ್ಪ_ದಿನಕರ_ದೇಸಾಯಿ_ಶಾಂತವೇರಿಗೋಪಾಲಗೌಡರು_ಪ್ರೇರಣೆ

#ಈ_ರೈತ_ಸಂಘದ_ಸ್ಥಾಪನೆಯ_ತಯಾರಿ_ಸಭೆಯಲ್ಲಿ_ಭಾಗವಹಿಸಿದವರು

#ನಂತರ_ಸಂಸದರಾದ_ಕಾಗೋಡಿನಕೆ_ಜಿ_ಒಡೆಯರ್

#ನಂತರ_ವಿದ್ಯಾಮಂತ್ರಿ_ಆದ_ಆನಂದಪುರಂನ_ಬದರಿನಾರಾಯಣ_ಅಯ್ಯಂಗಾರ್

#ನಂತರ_ತಾಲ್ಲೂಕ್_ಬೋರ್ಡ್_ಅಧ್ಯಕ್ಷರಾದ_ಶಿರವಂತೆ_ಹೆಚ್_ಎಲ್_ವೀರಭದ್ರಪ್ಪಗೌಡರು

#ನಿನ್ನೆ_4_ಜನವರಿ_2024ರ_ಗುರುವಾರ_ತಾಳಗುಪ್ಪದಲ್ಲಿ_76ನೇ_ಸಂಸ್ಥಾಪನಾ_ದಿನಾಚಾರಣೆ_ನಡೆಯಿತು.


  ನಿನ್ನೆ 4 ಜನವರಿ 2024 ರ ಗುರುವಾರ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಕಾಗೋಡು ರೈತ ಹೋರಾಟದ ನೇತಾರ ಹೆಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘದ 76 ನೇ ಸಂಸ್ಥಾಪನ ದಿನಾಚಾರಣೆ ನಡೆಯಿತು.
#ಇದು_ಈ_ರೈತಸಂಘದ_75ನೇ_ವರ್ಷಾಚಾರಣೆಯ_ವಜ್ರ_ಮಹೋತ್ಸವ ಕೂಡ ಆಗಿದೆ ಎನ್ನುವುದು ವಿಶೇಷ ಈ ರೈತ ಸಂಘದ ಸ್ಥಾಪನೆ ಮತ್ತು ಅದಕ್ಕೆ ಪ್ರೇರಣೆ ಕೂಡ ವಿಶೇಷವೇ ಆಗಿದೆ ಮತ್ತು ಈ ರೈತ ಸಂಘದ ಸ್ಥಾಪನೆಯ ಸಭೆಗಳಲ್ಲಿ ಭಾಗವಹಿಸಿದವರೂ ವಿಶೇಷ ವ್ಯಕ್ತಿಗಳೆ ಆಗಿದ್ದರು.
   1940ರ ದಶಕದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಯಕರಾದ #ಕಡಿದಾಳು_ಮಂಜಪ್ಪ_ಗೌಡರ ನೇತೃತ್ವದಲ್ಲಿ ಬಸವಾನಿ ರಾಮ ಶರ್ಮರು, ಹೆದ್ದೂರು ಹೆಚ್. ಹೆಚ್. ಮಂಜಪ್ಪ ಗೌಡರ ರೈತ ಸಂಘ ಕ್ರೀಯಾಶೀಲವಾಗಿತ್ತು.
     ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ ಮುಂತಾದ ಭಾಗಗಳಲ್ಲಿ ಕವಿ, ಸಮಾಜವಾದಿ #ದಿನಕರ_ದೇಸಾಯಿ ನೇತೃತ್ವದಲ್ಲಿನ ರೈತ ಸಂಘಗಳು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿತ್ತು.
   ಬಡ ರೈತರು, ಗೇಣಿದಾರರು ತಮ್ಮ ಅಸ್ತಿತ್ವಕ್ಕಾಗಿ ಸಂಘಟನೆಗೊಂಡು ಸಂಘರ್ಷ ನಡೆಸಲೇ ಬೇಕಾದ ಪರ್ವ ಕಾಲವದು, ಆ ಸಂದರ್ಭದಲ್ಲೇ ತೀರ್ಥಹಳ್ಳಿಯಲ್ಲಿ #ಶಾಂತವೇರಿ_ಗೋಪಾಲಗೌಡರು ರೈತ ಸಮಾವೇಶ ನಡೆಸುತ್ತಾರೆ ಅದರಲ್ಲಿ ರಮಾನಂದ ಮಿಶ್ರ ಮತ್ತು ಕಮಲಾದೇವಿ ಚಟ್ಟೋಪಾಧ್ಯಾಯ ಭಾಗವಹಿಸುತ್ತಾರೆ.     ಇದೆಲ್ಲದರ ಪ್ರೇರಣೆಯಿಂದ ಸಾಗರ ತಾಲ್ಲೂಕಿನಲ್ಲಿ 1- ಜನವರಿ -1948 ರಲ್ಲಿ ಗಣಪತಿಯಪ್ಪನವರು ಸಾಗರ ತಾಲೂಕಿನಲ್ಲಿ ರೈತ ಸಂಘದ ಸ್ಥಾಪನೆಯ ಪೂರ್ವಭಾವಿ ಸಭೆ ನಡೆಸುತ್ತಾರೆ.
    ಈ ಸಭೆಗೆ #ಕೆ_ಜಿ_ಒಡೆಯರ್ (1952 ರಲ್ಲಿ ಶಿವಮೊಗ್ಗ ಲೋಕಸಭಾ ಸಂಸದರು ), ಆನಂದಪುರಂನ #ಬದರಿನಾರಾಯಣ_ಅಯ್ಯಂಗಾರ್ (1972ರಲ್ಲಿ ವಿದ್ಯಾಮಂತ್ರಿ),#ಬರದಳ್ಳಿಚೆನ್ನಬಸಪ್ಪಗೌಡರು, #ಮರೂರುರುದ್ರಪ್ಪಗೌಡರು, #ಶಿರವಂತೆವೀರಭದ್ರಪ್ಪಗೌಡರು (ತಾಲ್ಲೂಕ್ ಬೋರ್ಡ್ ಅಧ್ಯಕ್ಷರಾಗುತ್ತಾರೆ), #ತುಂಬೆಸುಬ್ರಾಯರು, ಸಾಗರದ #ಅಬ್ದುಲ್_ಕರಿಂಸಾಹೇಬರು, #ಹಳದಿರಂಗಪ್ಪನವರು, #ರಿಪ್ಪನಪೇಟೆ_ಆನಂದರಾಯರು, ಕಾಂಗ್ರೆಸ್ ನಾಯಕ #ದೇವಪ್ಪನವರು, #ಸೀತಾರಾಮರಾವ್, ಸಾಗರದ ಖ್ಯಾತ ವಕೀಲ ಸ್ವಾತಂತ್ರ್ಯ ಹೋರಾಟಗಾರ #ಮೃತ್ಯುಂಜಯಬಾಪಟ್ ರವರು, #ವಕೀಲ್_ಬಸವಣ್ಣಪ್ಪನವರು ಮುಂತಾದ ಪ್ರಮುಖ ನಾಯಕರು ಗಣಪತಿಯಪ್ಪರ ಆಹ್ವಾನದ ಮೇರೆಗೆ ಭಾಗವಹಿಸುತ್ತಾರೆ.
  ಈ ಸಭೆಯ ತೀಮಾ೯ನದಂತೆ ದಿನಾಂಕ 4- ಜನವರಿ -1948 ರಂದು #ತಾಳಗುಪ್ಪದ_ಮರತ್ತೂರಿನಲ್ಲಿ ಇನ್ನೊಂದು ರೈತ ಸಂಘದ ಸಭೆ ಮೃತ್ಯುಂಜಯ ಬಾಪಟ್ ರ ಅಧ್ಯಕ್ಷತೆಯಲ್ಲಿ ನಡೆದು ಅವರ ಆದೇಶದಂತೆ #ಡಿ_ಮೂಕಪ್ಪನವರು (1957 ರಲ್ಲಿ ಸಾಗರದ ವಿಧಾನಸಭಾ ಸದಸ್ಯರಾಗುತ್ತಾರೆ) ಅಧ್ಯಕ್ಷರಾಗಿ, #ಗಣಪತಿಯಪ್ಪ ಕಾರ್ಯದರ್ಶಿ ಆಗುತ್ತಾರೆ ನಂತರ ನಡೆಯುವುದೇ #ಐತಿಹಾಸಿಕ_ಕಾಗೋಡು_ರೈತ_ಚಳವಳಿ.
    ಇದೇ ರೈತ ಸಂಘ 70 ವರ್ಷದ ನಂತರ ಡಾ. ಹೆಚ್.ಗಣಪತಿಯಪ್ಪ ಸ್ಥಾಪಿತ 1948 #ತಾಲ್ಲೂಕ್_ರೈತ_ಸಂಘ_ಸಾಗರ ಅಂತ ಪುನರ್ ಸ್ಥಾಪನೆ ಆಗಿ ತಾಲ್ಲೂಕಿನಾದ್ಯಂತ ಹೊಸ ಯುವಕರ ಪಡೆ ಸಕ್ರಿಯವಾಗಿದೆ.
   ನ್ಯಾಯಕ್ಕಾಗಿ ಗಾಂಧೀ ಮಾರ್ಗದಲ್ಲಿ ವಿನೂತನ ಹೋರಾಟಗಳು ಜನರ ಗಮನ ಸೆಳೆಯುತ್ತಿದೆ ಈ ಸಂಘಟನೆಯ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳರ ನೇತೃತ್ವದಲ್ಲಿ ಸಕ್ರಿಯವಾಗಿದೆ ತಾಲ್ಲೂಕಿನ ಹೊಸ ತಲೆಮಾರಿನ ಯುವ ಪಡೆ ದಿನದಿಂದ ದಿನಕ್ಕೆ ಈ ಸಂಘಟನೆಯಲ್ಲಿ ಹೆಚ್ಚು ಹೆಚ್ಚು ಸೇರುತ್ತಿದ್ದಾರೆ
    ಇವರ ಆಶಯಗಳು ಮತ್ತು ಗುರಿಗಳು ನಿಜಕ್ಕೂ ಗಣಪತಿಯಪ್ಪರ ಆದರ್ಶಗಳ ಕಾಪಾಡುವ ನಿಟ್ಟಿನಲ್ಲಿ ಇದೆ.
   ಇತ್ತೀಚಿಗೆ ಬಡವರ ಪರ ಹೋರಾಟ ಮಾಡುವ ಯುವಕರೇ ಇಲ್ಲವಾಗಿದ್ದಾರೆ,ರಾಜಕೀಯ ಪಕ್ಷದ ಕಾರ್ಯಕರ್ತರಾಗಿದ್ದಾರೆ, ಅನ್ಯಾಯದ ವಿರುದ್ದ ಪ್ರತಿಭಟನೆ ಮಾಡಿದರೆ ಪಕ್ಷ - ನಾಯಕರ ವಿರೋದ ಕಟ್ಟಿಕೊಂಡು ನಷ್ಟ ಅನುಭವಿಸಬೇಕೆಂಬ ಭಯದಿಂದ ಅವರೆಲ್ಲ ಸೇಪರ್ ಜೋನ್ ಆದ ರಾಜಕೀಯ ವೇದಿಕೆಗಳಲ್ಲಿ ಕರಗಿ ಹೋಗಿದ್ದರಿಂದ ತಾಲ್ಲೂಕಿನಲ್ಲಿ ನ್ಯಾಯದ ಪರವಾದ ಕೂಗು ಕ್ಷೀಣವಾಗಿತ್ತು ಈ ಸಂದಭ೯ದಲ್ಲಿ ನನ್ನ ಗುರು ಗಣಪತಿಯಪ್ಪರ ತತ್ವ ಸಿದ್ಧಾಂತದ ರೈತ ಸಂಘ ಪುನಃ ಸಂಘಟಿಸಿ 75 ನೇ ವರ್ಷಾಚಾರಣೆ ಮಾಡಿ ನ್ಯಾಯದ ಪರ ಹೋರಾಟಕ್ಕೆ ತೊಡಗಿರುವ ದಿನೇಶ್ ಶಿರವಾಳ, ಕೆಳದಿ ರಮೇಶ್, ಗಣಪತಿಯಪ್ಪರ ಪುತ್ರ ಹೊಯ್ಸಳ ಮತ್ತು ಇವರ ಜೊತೆ ಕೈ ಜೋಡಿಸಿದ ಎಲ್ಲಾ ಜನಪರ ಕಾಳಜಿಯ ಹೋರಾಟಗಾರ ಯುವಕರಿಗೆ ಅಭಿನಂದಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ