Skip to main content

Blog number 1920. ಸುಸಜ್ಜಿತ ಡೈನಿಂಗ್ ಹಾಲ್ ನಿರ್ಮಿಸಿ ಅರ್ಪಿಸಿದ ಆನಂದಪುರಂ ಪಾರೆಸ್ಟರ್ ರುಕ್ಮಯ್ಯರ ಪುತ್ರ ಪ್ರಕಾಶ್ ಗೆ ಅಭಿನಂದನೆಗಳು

#ನಮ್ಮ_ಊರಿನ_ಕರ್ನಾಟಕ_ಪಬ್ಲಿಕ್_ಸ್ಕೂಲ್

#ಡೈನಿಂಗ್_ಹಾಲ್_ಸಮರ್ಪಿಸಿದ_ಪ್ರಕಾಶ್_ರುಕ್ಮಯ್ಯ.

#ಅವರ_ಸಂಸ್ಥೆ_ರೇ_ಕ್ಯೂ_ಇಂಟರ್_ಕನೆಕ್ಷನ್_ಟೆಕ್ನಾಲಿಜೀಸ್_ಇಂಡಿಯಾ_ಪ್ರೈ_ಲಿ_ಕೊಡುಗೆ

#ಈ_ಪದವಿ_ಪೂರ್ವ_ಕಾಲೇಜು_ವಿದ್ಯಾಮಂತ್ರಿಬದರಿನಾರಾಯಣಅಯ್ಯಂಗಾರ್_ಮತ್ತು_ಅವರ_ಸಹೋದರ_ವೆಂಕಟಚಲಅಯ್ಯಂಗಾರ್_ಕೊಡುಗೆ.

#ಪ್ರಕಾಶ್_ಕೆಳದಿ_ಅರಸರಿಂದ_ನೇಮಕವಾಗಿದ್ದ_ಸುಂಕದ_ಮನೆತನದವರು.


  ಆನಂದಪುರಂನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಸುಸಜ್ಜಿತವಾದ ಡೈನಿಂಗ್ ಹಾಲ್ ದಾನಿಗಳಾದ ಪ್ರಕಾಶ್ ರುಕ್ಮಯ್ಯ ನಿರ್ಮಿಸಿ ಕೊಟ್ಟಿದ್ದಾರೆ ಅದು ಇವತ್ತು 19 ಜನವರಿ 2024ರ ಶುಕ್ರವಾರ ಸಮರ್ಪಣೆ ಮಾಡುವ ಸಮಾರಂಭ ನಡೆಯಲಿದೆ.
   ದುಭಾರಿ ವೆಚ್ಚದಲ್ಲಿ ಡೈನಿಂಗ್ ಹಾಲ್  ನಿರ್ಮಿಸಿ ಕೊಟ್ಟಿರುವ ಪ್ರಕಾಶರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲಾ ಶಾಲೆಗಳಲ್ಲೂ ಡೈನಿಂಗ್ ಹಾಲ್ ನಿರ್ಮಾಣ ಮಾಡಲು ಅವರ ಈ ಕೆಲಸ ಪ್ರೇರಣೆ ಆಗಲಿದೆ.
   ಪ್ರಕಾಶ್ ಆನಂದಪುರಂನ ಕನ್ನಡ ಸಂಘದವರಾದ ಕನ್ನಡ ಪ್ರಭ ಮತ್ತು ಉದಯವಾಣಿ ಪತ್ರಿಕೆ ವರದಿಗಾರ ಪತ್ರಕರ್ತ ಜಗನ್ನಾಥರ ಸಹೋದರ.
   ಒಂದು ವಿಶೇಷ ಎಂದರೆ ಇವರ ಮನೆತನಕ್ಕೊಂದು ಇತಿಹಾಸದ ತಳಕು ಇದೆ ಅದೇನೆಂದರೆ ಸುಮಾರು ನಾಲ್ಕು ನೂರು ವರ್ಷಗಳಹಿಂದೆ ಆನಂದಪುರಂನ ಬನ್ನಿಮಂಟಪದ ಬಳಿಯ ಹತ್ತನೆ ಶತಮಾನದಿಂದ ಇದ್ದಿದ್ದ ಉತ್ತರ ಭಾರತದ ಗೋರಕಪುರದ ಮಹಾಂತರ ಆಳ್ವಿಕೆಗೆ ಒಳಪಟ್ಟ (ಈಗಿನ ಮಹಾಂತರು ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿ)  ಮಹಾಂತರ ಮಠದ ಸಮೀಪ ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಬೆಸ್ತರ ರಾಣಿ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ #ಚಂಪಕ_ಸರಸ್ಸು ನಿತ್ಯ ನಿರ್ವಹಣೆಗಾಗಿ ಸದರಿ ಮಹಾಂತರ ಮಠಕ್ಕೆ ಜಮೀನು ಉಂಬಳಿ ನೀಡಿ ಅಡಿಕೆ - ಅಕ್ಕಿ- ಮೆಣಸು ಸಾಗಾಣಿಕೆಗೆ ಸುಂಕದ ರಿಯಾಯಿತಿ ನೀಡಿದ್ದರೆಂಬ ಮಾಹಿತಿಯ ಶಾಸನಗಳಿದೆ.
   ಈ ಬನ್ನಿಮಂಟಪ, ಮಹಾಂತರ ಮಠ ಮತ್ತು ಚಂಪಕ ಸರಸ್ಸು ಸಮೀಪದಲ್ಲೇ ಬೃಹತ್ ಸಂತೆ ನಡೆಯುತ್ತಿತ್ತಂತೆ ಮತ್ತು ಇಲ್ಲಿಯೇ ಸುಂಕದ ಕಟ್ಟೆ ಇದ್ದಿತ್ತು.
  ಆನಂದಪುರಂ ಕೋಟೆಯಿಂದ ನೇರವಾದ ರಸ್ತೆ ಈಗಿನ ಕನ್ನಡ ಸಂಘದ ಎದುರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಕೆ.ಎಂ.ಎಸ್.ರೈಸ್ ಮಿಲ್ ಮಧ್ಯದಲ್ಲಿ ಸಾಗಿ ಬನ್ನಿಮಂಟಪ, ಮಹಾಂತರ ಮಠ, ಚಂಪಕ ಸರಸ್ಸು ಮತ್ತು ಸುಂಕದ ಕಟ್ಟೆಗೆ ಸಂಪರ್ಕಿಸುತ್ತಿತ್ತು (ಈಗಿನ ದಾಸಕೊಪ್ಪ ಶಿಕಾರಿಪುರ ರಸ್ತೆ ಆಗ ಇರಲಿಲ್ಲ).
   ಇಲ್ಲಿನ ಸುಂಕದ ಕಟ್ಟೆಯಲ್ಲಿ ಮತ್ತು ಸಂತೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿ ರಾಜರ ಆಸ್ಥಾನಕ್ಕೆ ತಲುಪಿಸುವ ಸುಂಕದವರನ್ನು ರಾಜರು ನೇಮಕ ಮಾಡಿದ್ದರು ಆ ಮನೆತನದ ಮೂಲ ಹೆಸರು ಕೆಸರೆ ಮನೆತನವಾದರೂ ಈ ಸುಂಕದ ಉದ್ಯೋಗದಿಂದ ಸುಂಕದ ಮನೆತನ ಎಂಬ ಹೆಸರು ಶಾಶ್ವತ ಆಯಿತು.
  ಈ ಮನೆತನದ ಚಿರುಡ ಶೆಟ್ಟರು ಸ್ವಾತಂತ್ರ್ಯ ಪೂರ್ವದಲ್ಲಿ 1916 ರಿಂದ 1932ರ ವರೆಗೆ ಯಡೇಹಳ್ಳಿಯ ಬ್ರಿಟೀಶ್ ಬಂಗಲೆಯಲ್ಲಿ (ಈಗಿನ ಪ್ರವಾಸಿ ಮಂದಿರ) ಪ್ರಾರಂಭವಾಗಿದ್ದ ಸಾಗರ ತಾಲ್ಲೂಕಿನ ಪ್ರಥಮ ನ್ಯಾಯಾಲಯದಲ್ಲಿ ಕುದುರೆ ಮೇಲೆ ಸವಾರಿ ಹೋಗಿ ವಾದ ಮಂಡಿಸುವ ಸ್ಥಳಿಯ ಪ್ರಥಮ ವಕೀಲರಾಗಿದ್ದರು ಇವರ ಪುತ್ರ ನಾರಾಯಣ ಶೆಟ್ಟರು ಆನಂದಪುರಂನಲ್ಲಿ ಆಗ ಆಭರಣದ ಅಂಗಡಿ ಮಾಡಿದ್ದರಂತೆ ಅವರ ಮಕ್ಕಳೇ ಲಕ್ಷ್ಮೀಕಾಂತಪ್ಪ, ಶಣ್ಮುಖ ಶೆಟ್ಟರು, ಹೆಲ್ತ್ ಇನ್ಸ್ಪೆಕ್ಟರ್ ನಾಗರಾಜ್ ಮತ್ತು ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಕೃಷ್ಣಮೂರ್ತಿ.
  ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2021/07/51.html
   ಆಗ ಈಗಿನ ಹೊಸನಗರ (ಆಗಿನ ಹೆಸರು ಕಲ್ಲೂರು ಶೆಟ್ಟಿ ಕೊಪ್ಪ) ಸಂಪರ್ಕಿಸುವ ರಾಜಮಾರ್ಗ ಆನಂದಪುರಂ ಕೋಟೆಯಿಂದ ಈಗಿನ ರೈಲ್ವೆ ಸ್ಟೇಷನ್ ಭಾಗದಿಂದ ಬಸವನ ಬೀದಿ ಮಾರ್ಗವಾಗಿರಬೇಕು ಇದಕ್ಕೆ ಬಂಗಾರಪೇಟೆ ಎಂಬ ಹೆಸರು ಇತ್ತು ಇಲ್ಲಿ ಬೆಳ್ಳಿ - ಬಂಗಾರ - ವಜ್ರ-ವೈಡೂರ್ಯಗಳ ಮಾರಾಟ ಮಾಡುತ್ತಿದ್ದರಂತೆ ಇಲ್ಲೇ ಸುಂಕದವರ ಮನೆ ಇತ್ತಂತೆ.
   80 ಜನರ ದೊಡ್ಡ ಕುಟುಂಬ ಪ್ಲೇಗ್ ಕಾಯಿಲೆಯಿಂದ ಹೆಚ್ಚು ಕಡಿಮೆ ನಶಿಸಿ ಹೋಯಿತು ಒಂದೊಂದು ಗುದ್ದಿನಲ್ಲಿ ನಾಲ್ಕು ನಾಲ್ಕು ಶವ ಹಾಕಿ ಸಂಸ್ಕಾರ ಮಾಡಿದರೆಂದು ಆ ಮನೆತನದವರು ನೆನಪು ಮಾಡುತ್ತಾರೆ ಆ ವಂಶದ ಧರ್ಮಯ್ಯ ಶೆಟ್ಟರು ಆ ಮೂಲ ಮನೆಯಲ್ಲೇ ಉಳಿಯುತ್ತಾರೆ ಅವರ ಪುತ್ರ ರುಕ್ಮಯ್ಯ ಅರಣ್ಯ ಇಲಾಖೆ ಪಾರೆಸ್ಟರ್ ಆಗುತ್ತಾರೆ ಅವರ ಮಗ ಪತ್ರಕರ್ತ ಜಗನ್ನಾಥ್ ಅವರ ಸಹೋದರರೇ ಪ್ರಕಾಶ್ ರುಕ್ಮಯ್ಯ.
   ಇವರು ಬೆಂಗಳೂರಿನ ರೇ - ಕ್ಯೂ - ಇಂಟರ್ - ಕನೆಕ್ಷನ್ - ಟೆಕ್ನಾಲಜೀಸ್ - ಪ್ರೈವೇಟ್ - ಲಿ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದಾರೆ.
   ಈ ಪದವಿ ಪೂರ್ವ ಕಾಲೇಜು ನಿರ್ಮಾಣದ ಕನಸು ಆನಂದಪುರಂನ ಕೊಡುಗೈ ದಾನಿ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರರ ಪುತ್ರರಾದ ವೆಂಕಟಾಚಲಯ್ಯಂಗಾರ್ ಮತ್ತು ವಿದ್ಯಾಮಂತ್ರಿಗಳು ಸಂಸದರೂ ಆಗಿದ್ದ ಬದರಿನಾರಾಯಣಯ್ಯಂಗಾರರದ್ದು ಅವರೇ ತಮ್ಮ ಸ್ವಂತ ಜಮೀನು ದಾನ ನೀಡಿ ಅವರ ಹಣದಲ್ಲೇ ಪ್ರೌಢ ಶಾಲೆ ನಿರ್ಮಾಣ ಮಾಡಿದ್ದರು ನಂತರ ಪದವಿ ಪೂರ್ವ ಕಾಲೇಜು ತಂದರು.
   ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಜೋಗ್ ಜಲಪಾತ ನೋಡುವುದಕ್ಕೆ ಈ ಮಾರ್ಗದಲ್ಲಿ ಸಾಗುವಾಗ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸದ ಕಾಗೋಡು ಕೆ.ಜಿ. ಒಡೆಯರ್ ಜೊತೆ ಈ ಶಾಲಾ ಮುಂಬಾಗದಲ್ಲಿ ನೆನಪಿಗಾಗಿ ಸಸಿ ನೆಡುತ್ತಾರೆ ಅವರ ಜೊತೆ ಇಂದಿರಾ ಗಾಂಧಿ ಇರುತ್ತಾರೆ.
    ಇದೇ ಶಾಲಾವರಣದಲ್ಲಿ ಆಚಾರ್ಯ ವಿನೋಭಾ ಭಾವೆ ಭೂದಾನ ಚಳವಳಿಯ ಸಭೆ ನಡೆಸುತ್ತಾರೆ, ಭೂದಾನ ಚಳವಳಿಯನ್ನ ಮೈಸೂರು ರಾಜ್ಯದಲ್ಲಿ ನಡೆಸಿಕೊಟ್ಟ ವಿನೋಬಾ ಭಾವೆ ಅವರ ಶಿಷ್ಯ ಸ್ವಾತಂತ್ರ್ಯ ಹೋರಾಟಗಾರರು, ದಾನಿಗಳು ಆದ ಎಣ್ಣೆಕೊಪ್ಪದ ಸರ್ದಾರ್ ಮಲ್ಲಿಕಾರ್ಜುನ ಗೌಡರು ಆನಂದಪುರಂಗೆ ಅವರ ಒಂಟೆತ್ತಿನ ಗಾಡಿಯಲ್ಲಿ ಬಂದಾಗೆಲ್ಲ ಈ ಶಾಲೆಯಲ್ಲೇ ವಸತಿ ಮಾಡುತ್ತಿದ್ದರು.
    ಆಧುನಿಕ ಆನಂದಪುರಂನ ಉನ್ನತೀಕರಣಕ್ಕೆ ಕಾರಣರಾದ ಶಿಸ್ತಿನ ಸಿಪಾಯಿ ಸೇವಾದಳದ ಎಸ್.ಆರ್.ಕೃಷ್ಣಪ್ಪನವರೂ ಇದೇ ಶಾಲೆಯಲ್ಲಿ ದೈಹಿಕ ಶಿಕ್ಷರಾಗಿದ್ದರು.
  ಇಂತಹ ಇತಿಹಾಸ ಉಳ್ಳ ಆನಂದಪುರಂನ ಈಗಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಕೆಳದಿ ಅರಸರ ಕಾಲದ ಸುಂಕದ ಮನೆತನದ ಪ್ರಕಾಶ್ ರುಕ್ಮಯ್ಯ ಸುಸಜ್ಜಿತವಾದ ಡೈನಿಂಗ್ ಹಾಲ್ ನಿರ್ಮಿಸಿ ಅರ್ಪಿಸುವ ಸಂದಭ೯ದಲ್ಲಿ ಈ ನೆನಪಿನ ಬರಹದ ಮೂಲಕ ಅವರಿಗೆ ಅಭಿನಂದಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ