Skip to main content

Blog number 1912. ಶಂಭೂರಾಮ ರಾಮ ಫಲ ಗುಳುಂ ಮಾಡಿದನು

#ನನ್ನ_ಪ್ರೀತಿಯ_ಶಂಭೂರಾಮನ_ಇವತ್ತಿನ_ಫಲಾಹಾರ

#ರಾಮ_ಫಲ.

#ರಾಟ್_ವೀಲರ್_ಗಳು_ಮಾಂಸ_ಬಿಟ್ಟು_ಹಣ್ಣು_ತರಕಾರಿ_ತಿನ್ನುವುದಿಲ್ಲ_ಎಂಬುದಕ್ಕೆ_ಅಪವಾದ

#ನಾವು_ಬೆಳೆಯುವ_ಬೆಳೆಸುವ_ಪರಿಸರವೇ_ನಮ್ಮ_ನಡೆ_ನುಡಿ_ಆಹಾರ_ಪದ್ಧತಿಗೆ_ಕಾರಣ

#ಎಲ್ಲಾ_ಹಣ್ಣುಗಳೂ_ತಿನ್ನುವ_ಆದರೆ_ಕೆಲ_ಹಣ್ಣು_ಕೊಡಬಾರದ್ದರಿಂದ_ನೀಡುವುದಿಲ್ಲ.

#ಆಯಾ_ಕಾಲದ_ಹಣ್ಣು_ಸಂಗ್ರಹಿಸಿ_ತಿನ್ನುವ_ನನ್ನ_ಖಯಾಲಿಗೆ

#ಶಂಭೂರಾಮನ_ಸಾಥ್.

https://youtu.be/w5k4WbPaarA?feature=shared

  ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನ  ಬೆಳಗಿನ ವಾಕಿಂಗ್ ನಂತರ ನಾವಿಬ್ಬರು ಮನೆಗೆ ಬಂದು ಅವತ್ತಿನ ಕೆಲ ಹಣ್ಣುಗಳನ್ನು ಸೇವಿಸುವುದು ಅಭ್ಯಾಸ ಆಗಿದೆ ಇವತ್ತು ರಾಮ ಫಲ ಹಣ್ಣಾಗಿತ್ತು ಅದನ್ನು ಇಡಿಯಾಗಿ ಶಂಭೂರಾಮನಿಗೆ ನೀಡಿ ನಾನು ಒಂದು ಕಿತ್ತಳೆ ಮತ್ತು ಮೂಸುಂಬಿ ಹಣ್ಣು ತಿಂದೆ.
  ತಾಳಗುಪ್ಪ ಸಮೀಪದ #ಬೆಳ್ಳೆಣ್ಣೆ_ಶಂಭೂಲಿಂಗೇಶ್ವರ ನ ಪ್ರೀತ್ಯಾರ್ಥವಾಗಿ ಇವನಿಗೆ ಮಗ ಶ೦ಭೂ ಅಂತ ನಾಮಕರಣ ಮಾಡಿದ್ದ ಮುಂದಿನ ರಾಮ ನಾನು ಸೇರಿಸಿದೆ ಹಾಗಾಗಿ ಇವನು ಶಂಭೂ ರಾಮನಾಗಿದ್ದಾನೆ.
   ಇವನನ್ನು ಜೊತೆಗೆ ಕರೆದು ಕೊಂಡು ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಗಾಣಗಾಪುರ ದತ್ತ ಮುಂದಿರಕ್ಕೆ ದರ್ಶನಕ್ಕೆ ಹೋಗುವ ಯಾತ್ರೆ ಸಂಕಲ್ಪ ಮಾಡಿದ್ದೇವೆ.
   ಭಗವಾನ್ ದತ್ತರು ಶ್ವಾನಗಳು ಯಾವುದೇ ರೀತಿಯ ಆಸೆಗಳಿಲ್ಲದೆ ಯಾವತ್ತೂ ಸಂತೋಷ ಸಂತೃಪ್ತಿಯಿಂದ ಇರುವುದರಿಂದ ಶ್ವಾನಗಳನ್ನು ಗುರುವಾಗಿ ಸ್ವೀಕರಿಸಿ ಪೂಜಿಸಿದ್ದರಿಂದ ಎಲ್ಲಾ ದತ್ತ ಕ್ಷೇತ್ರದಲ್ಲಿ ಶ್ವಾನಗಳಿಗೆ ಪ್ರವೇಶವಿದೆ.
      ಉತ್ತರ ಪ್ರದೇಶದ ಘೋರಕಪುರದ ನಾಥ ಪಂಥದ ಪೀಠದ ಮಹಾಂತರು ಈಗಿನ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು ಅಲ್ಲಿಯೂ ಶ್ವಾನ ಪೂಜಾರ್ಹ ಮತ್ತು 12 ವರ್ಷಕ್ಕೊಮ್ಮೆ ನಾಸಿಕದ ಕುಂಭ ಮೇಳದ ಮರುದಿನ ಪ್ರಾರಂಭವಾಗಿ ಮಂಗಳೂರಿನ ಕದ್ರಿ ದೇವಾಲಯಕ್ಕೆ ನಡೆದು ಬರುವ ನೂರಾರು ಸಾದು ಸಂತರ ಬಾರಾಪಂಥ ಯಾತ್ರೆಯಲ್ಲಿ ಪಾತ್ರ ದೇವತೆ ಹೊತ್ತು ತರುತ್ತಾರೆ ಆರು ತಿಂಗಳ ಈ ಯಾತ್ರೆಯಲ್ಲಿ ಶ್ವಾನವೂ ಯಾತ್ರಾರ್ಥಿಯಾಗಿ ನಡೆದು ಬರುತ್ತದೆ ಅದಕ್ಕೂ ಈ ಯಾತ್ರೆಯಲ್ಲಿ ಸಂಗ್ರಹವಾಗುವ ಹಣದ ಪಾಲು ಮೀಸಲಿಟ್ಟು ನೀಡುವ ಪದ್ಧತಿಗೆ ಸಾವಿರ ವರ್ಷದ ಇತಿಹಾಸ ಇದೆ.
   ಕೇರಳದಲ್ಲಿ ಮುತ್ತಪ್ಪ ಸ್ವಾಮಿ ಎಂದು ಕರೆಯುವ ಶ್ವಾನ ದೇವಸ್ಥಾನ ಪ್ರಸಿದ್ದಿ ಪಡೆದಿದೆ.
   ಕೆಲವರು ನಾನು ಶಂಭೂರಾಮ ಎಂಬ ಹೆಸರು ನಮ್ಮ ರಾಟ್ ವೀಲರ್ ಗೆ ನಾಮಕರಣ ಮಾಡಿದ್ದು ಸರಿ ಅಲ್ಲ ದೇವರ ಹೆಸರು ಇಡಬಾರದೆಂದು ಬರೆದಿದ್ದರಿಂದ ಈ ಸಮರ್ಥನೆ.
  ದೇವರ ಹೆಸರಿಟ್ಟುಕೊಂಡು ಮನುಷ್ಯ ಮಾಡುವ ಅನಾಚಾರಗಳು ಕಣ್ಣೆದುರಿಗೇ ಇದೆ.
   ಅಯೋಧ್ಯಾ ರಾಮನ ಪ್ರತಿಷ್ಟಾಪನೆಯ ಈ ದಿನಗಳಲ್ಲಿ ರಾಮನ ಹೆಸರಿನ ರಾಮ ಫಲ ಶಂಭೂರಾಮ ಗುಳುಂ ಮಾಡಿದ ವಿಡಿಯೋ ಇಲ್ಲದೆ ನೋಡಿ.
  ರಾಮಫಲ, ಸೀತಾಫಲ ಸಸ್ಯ ಪ್ರಪಂಚದ ಒಂದೇ ತಳಿಯದ್ದು ಇದರಲ್ಲಿ ಇರುವ ಪೋಷಕಾಂಶಗಳು ಕೂಡ ಶ್ರೀಮಂತವಾಗಿದೆ.
   100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಲೆಕ್ಕಾಹಾಕಿ ಹೇಳುವುದಾದರೆ, ಶಕ್ತಿ 101 ಕ್ಯಾಲೋರಿಗಳು, ಕಾರ್ಬೋಹೈಡ್ರೇಟುಗಳು - 25 ಗ್ರಾಂ, ಕರಗಬಲ್ಲ ನಾರು - 2.4 ಗ್ರಾಂ, ಕೊಬ್ಬು - 0.6 ಗ್ರಾಂ, ಪ್ರೋಟಿನ್‌ ಬಿ1.7%, ವಿಟಮಿನ್‌ ಬಿ3-3% ವಿಟಮಿನ್‌ ಬಿ5-3%, ಮೆಗ್ನೀಷಿಯಂ-5, ಕಬ್ಬಿನಾಂಶ -5% ಮತ್ತು ಪೋಸಾರಸ್‌-3% ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...