Skip to main content

Blog number 1912. ಶಂಭೂರಾಮ ರಾಮ ಫಲ ಗುಳುಂ ಮಾಡಿದನು

#ನನ್ನ_ಪ್ರೀತಿಯ_ಶಂಭೂರಾಮನ_ಇವತ್ತಿನ_ಫಲಾಹಾರ

#ರಾಮ_ಫಲ.

#ರಾಟ್_ವೀಲರ್_ಗಳು_ಮಾಂಸ_ಬಿಟ್ಟು_ಹಣ್ಣು_ತರಕಾರಿ_ತಿನ್ನುವುದಿಲ್ಲ_ಎಂಬುದಕ್ಕೆ_ಅಪವಾದ

#ನಾವು_ಬೆಳೆಯುವ_ಬೆಳೆಸುವ_ಪರಿಸರವೇ_ನಮ್ಮ_ನಡೆ_ನುಡಿ_ಆಹಾರ_ಪದ್ಧತಿಗೆ_ಕಾರಣ

#ಎಲ್ಲಾ_ಹಣ್ಣುಗಳೂ_ತಿನ್ನುವ_ಆದರೆ_ಕೆಲ_ಹಣ್ಣು_ಕೊಡಬಾರದ್ದರಿಂದ_ನೀಡುವುದಿಲ್ಲ.

#ಆಯಾ_ಕಾಲದ_ಹಣ್ಣು_ಸಂಗ್ರಹಿಸಿ_ತಿನ್ನುವ_ನನ್ನ_ಖಯಾಲಿಗೆ

#ಶಂಭೂರಾಮನ_ಸಾಥ್.

https://youtu.be/w5k4WbPaarA?feature=shared

  ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನ  ಬೆಳಗಿನ ವಾಕಿಂಗ್ ನಂತರ ನಾವಿಬ್ಬರು ಮನೆಗೆ ಬಂದು ಅವತ್ತಿನ ಕೆಲ ಹಣ್ಣುಗಳನ್ನು ಸೇವಿಸುವುದು ಅಭ್ಯಾಸ ಆಗಿದೆ ಇವತ್ತು ರಾಮ ಫಲ ಹಣ್ಣಾಗಿತ್ತು ಅದನ್ನು ಇಡಿಯಾಗಿ ಶಂಭೂರಾಮನಿಗೆ ನೀಡಿ ನಾನು ಒಂದು ಕಿತ್ತಳೆ ಮತ್ತು ಮೂಸುಂಬಿ ಹಣ್ಣು ತಿಂದೆ.
  ತಾಳಗುಪ್ಪ ಸಮೀಪದ #ಬೆಳ್ಳೆಣ್ಣೆ_ಶಂಭೂಲಿಂಗೇಶ್ವರ ನ ಪ್ರೀತ್ಯಾರ್ಥವಾಗಿ ಇವನಿಗೆ ಮಗ ಶ೦ಭೂ ಅಂತ ನಾಮಕರಣ ಮಾಡಿದ್ದ ಮುಂದಿನ ರಾಮ ನಾನು ಸೇರಿಸಿದೆ ಹಾಗಾಗಿ ಇವನು ಶಂಭೂ ರಾಮನಾಗಿದ್ದಾನೆ.
   ಇವನನ್ನು ಜೊತೆಗೆ ಕರೆದು ಕೊಂಡು ಕಲ್ಬುರ್ಗಿ ಜಿಲ್ಲೆಯ ಅಪ್ಜಲ್ಪುರ ತಾಲ್ಲೂಕಿನ ಗಾಣಗಾಪುರ ದತ್ತ ಮುಂದಿರಕ್ಕೆ ದರ್ಶನಕ್ಕೆ ಹೋಗುವ ಯಾತ್ರೆ ಸಂಕಲ್ಪ ಮಾಡಿದ್ದೇವೆ.
   ಭಗವಾನ್ ದತ್ತರು ಶ್ವಾನಗಳು ಯಾವುದೇ ರೀತಿಯ ಆಸೆಗಳಿಲ್ಲದೆ ಯಾವತ್ತೂ ಸಂತೋಷ ಸಂತೃಪ್ತಿಯಿಂದ ಇರುವುದರಿಂದ ಶ್ವಾನಗಳನ್ನು ಗುರುವಾಗಿ ಸ್ವೀಕರಿಸಿ ಪೂಜಿಸಿದ್ದರಿಂದ ಎಲ್ಲಾ ದತ್ತ ಕ್ಷೇತ್ರದಲ್ಲಿ ಶ್ವಾನಗಳಿಗೆ ಪ್ರವೇಶವಿದೆ.
      ಉತ್ತರ ಪ್ರದೇಶದ ಘೋರಕಪುರದ ನಾಥ ಪಂಥದ ಪೀಠದ ಮಹಾಂತರು ಈಗಿನ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರು ಅಲ್ಲಿಯೂ ಶ್ವಾನ ಪೂಜಾರ್ಹ ಮತ್ತು 12 ವರ್ಷಕ್ಕೊಮ್ಮೆ ನಾಸಿಕದ ಕುಂಭ ಮೇಳದ ಮರುದಿನ ಪ್ರಾರಂಭವಾಗಿ ಮಂಗಳೂರಿನ ಕದ್ರಿ ದೇವಾಲಯಕ್ಕೆ ನಡೆದು ಬರುವ ನೂರಾರು ಸಾದು ಸಂತರ ಬಾರಾಪಂಥ ಯಾತ್ರೆಯಲ್ಲಿ ಪಾತ್ರ ದೇವತೆ ಹೊತ್ತು ತರುತ್ತಾರೆ ಆರು ತಿಂಗಳ ಈ ಯಾತ್ರೆಯಲ್ಲಿ ಶ್ವಾನವೂ ಯಾತ್ರಾರ್ಥಿಯಾಗಿ ನಡೆದು ಬರುತ್ತದೆ ಅದಕ್ಕೂ ಈ ಯಾತ್ರೆಯಲ್ಲಿ ಸಂಗ್ರಹವಾಗುವ ಹಣದ ಪಾಲು ಮೀಸಲಿಟ್ಟು ನೀಡುವ ಪದ್ಧತಿಗೆ ಸಾವಿರ ವರ್ಷದ ಇತಿಹಾಸ ಇದೆ.
   ಕೇರಳದಲ್ಲಿ ಮುತ್ತಪ್ಪ ಸ್ವಾಮಿ ಎಂದು ಕರೆಯುವ ಶ್ವಾನ ದೇವಸ್ಥಾನ ಪ್ರಸಿದ್ದಿ ಪಡೆದಿದೆ.
   ಕೆಲವರು ನಾನು ಶಂಭೂರಾಮ ಎಂಬ ಹೆಸರು ನಮ್ಮ ರಾಟ್ ವೀಲರ್ ಗೆ ನಾಮಕರಣ ಮಾಡಿದ್ದು ಸರಿ ಅಲ್ಲ ದೇವರ ಹೆಸರು ಇಡಬಾರದೆಂದು ಬರೆದಿದ್ದರಿಂದ ಈ ಸಮರ್ಥನೆ.
  ದೇವರ ಹೆಸರಿಟ್ಟುಕೊಂಡು ಮನುಷ್ಯ ಮಾಡುವ ಅನಾಚಾರಗಳು ಕಣ್ಣೆದುರಿಗೇ ಇದೆ.
   ಅಯೋಧ್ಯಾ ರಾಮನ ಪ್ರತಿಷ್ಟಾಪನೆಯ ಈ ದಿನಗಳಲ್ಲಿ ರಾಮನ ಹೆಸರಿನ ರಾಮ ಫಲ ಶಂಭೂರಾಮ ಗುಳುಂ ಮಾಡಿದ ವಿಡಿಯೋ ಇಲ್ಲದೆ ನೋಡಿ.
  ರಾಮಫಲ, ಸೀತಾಫಲ ಸಸ್ಯ ಪ್ರಪಂಚದ ಒಂದೇ ತಳಿಯದ್ದು ಇದರಲ್ಲಿ ಇರುವ ಪೋಷಕಾಂಶಗಳು ಕೂಡ ಶ್ರೀಮಂತವಾಗಿದೆ.
   100 ಗ್ರಾಂ ಹಣ್ಣಿನಲ್ಲಿರುವ ಪೋಷಕಾಂಶಗಳನ್ನು ಲೆಕ್ಕಾಹಾಕಿ ಹೇಳುವುದಾದರೆ, ಶಕ್ತಿ 101 ಕ್ಯಾಲೋರಿಗಳು, ಕಾರ್ಬೋಹೈಡ್ರೇಟುಗಳು - 25 ಗ್ರಾಂ, ಕರಗಬಲ್ಲ ನಾರು - 2.4 ಗ್ರಾಂ, ಕೊಬ್ಬು - 0.6 ಗ್ರಾಂ, ಪ್ರೋಟಿನ್‌ ಬಿ1.7%, ವಿಟಮಿನ್‌ ಬಿ3-3% ವಿಟಮಿನ್‌ ಬಿ5-3%, ಮೆಗ್ನೀಷಿಯಂ-5, ಕಬ್ಬಿನಾಂಶ -5% ಮತ್ತು ಪೋಸಾರಸ್‌-3% ಇಷ್ಟೊಂದು ಪೌಷ್ಟಿಕಾಂಶ ಒಳಗೊಂಡ ಹಣ್ಣು ಮತ್ತೊಂದಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ