Skip to main content

Blog number 1906. ತ.ಮ. ನರಸಿಂಹ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಯ ಪ್ರಾರಂಭದಿಂದ ಕೆಲಸ ಮಾಡಿದವರು, ಈಗ ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷರು, ಇವರ ಸಂಪಾದಕತ್ವದ ವಾರ ಪತ್ರಿಕೆ ಕಮಲ ವಾಣಿ ವಾರಪತ್ರಿಕೆ ಆಗಿತ್ತು.

#ತ_ಮ_ನರಸಿಂಹ

#ಹೊಸನಗರ_ತಾಲೂಕ್_ಸಾಹಿತ್ಯ_ಪರಿಷತ್_ಅಧ್ಯಕ್ಷರು

#ವಿದ್ಯಾರ್ಥಿ_ದೆಸೆಯಿಂದಲೇ_ಜನಸಂಘ_ಬಾಜಪ_ಸಂಘಟನೆಯಲ್ಲಿದ್ದವರು

#ಹೊಸನಗರ_ವಿಧಾನಸಭಾ_ಚುನಾವಣೆಯಲ್ಲಿ_ಮೊದಲ_ಬಿಜೆಪಿ_ಅಭ್ಯರ್ಥಿ_ಆದವರು.

#ಹಣ_ಜಾತಿಬಲದ_ಕೊರತೆಯಿಂದ_ಹಿಂದೆ_ಸರಿದವರು.

#ಆಗ_ಇವರ_ಜೇನಿಯ_ಮರಕೈಗಾರಿಕೆ_ಉದ್ಘಾಟಿಸಿದವರು_ಯಡೂರಪ್ಪ

#ಈಗಿನ_ಹಣ_ಜಾತಿ_ಅಧಿಕಾರದ_ಬಿಜೆಪಿಯಲ್ಲಿ_ಇಂತವರೆಲ್ಲ_ನಗಣ್ಯರು

#ಇವರ_ವಾರಪತ್ರಿಕೆ_ಕಮಲವಾಣಿ_ವಿಶೇಷಾಂಕದಲ್ಲಿ_ಮುಖಪುಟದ_ಲೇಖನ

#ಒ೦ದು_ಮರದ_ಕಥೆ

#ಹೊಸಗುಂದದ_ಕಲ್ಲೇಶ್ವರ_ದೇವಾಲಯಕ್ಕೆ_ಅಂಟಿಕೊಂಡು_ಬೆಳೆದಿದ್ದ_ಬೃಹತ್_ನೀರಟ್ಟಿ

#ಮರ_ತೆಗೆಸಿದ_ನಮ್ಮ_ಸಾಹಸದ_ಕಥೆ.
 ಮೊನ್ನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ತ. ಮ. ನರಸಿಂಹ ಅವರಿಗೆ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಸನ್ಮಾನಿಸಿದ ಪೋಟೋ ವರದಿ ನೋಡಿದಾಗ ಆ ದಿನಗಳು ನೆನಪಾಯಿತು ...
   ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತರಾಗಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಕಲೆ ಸಾಹಿತ್ಯದಲ್ಲಿ ವಿಶೇಷ ವ್ಯಕ್ತಿಯಾಗಿ ಅಂತರ್ ಕಾಲೇಜು ಚಚಾ೯ ಸ್ಪರ್ದೆ ಬಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಾರಿತೋಷಕ ತರುತ್ತಿದ್ದ ತ.ಮ. ನರಸಿಂಹ ಆಗಿನ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ನಾಯಕ ಆಯನೂರು ಮಂಜುನಾಥರ ಗಳಸ್ಯ ಕಂಠಸ್ಯ ಗೆಳೆಯ.
   ವಿದ್ಯಾರ್ಥಿ ಜೀವನದಲ್ಲೇ ಜನಸಂಘ - ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯವಾಗಿ ಯಡೂರಪ್ಪ, ಈಶ್ವರಪ್ಪ ಮತ್ತು ಶಂಕರ ಮೂರ್ತಿ ಜೊತೆ ಶಿವಮೊಗ್ಗ ಪಟ್ಟಣದಲ್ಲಿ ಸಂಘಟನೆ ಕೆಲಸ ಮಾಡಿದವರು.
   ಆಗ ಈಶ್ವರಪ್ಪರ ಜೊತೆ ಟಿವಿಎಸ್ ಮೋಪೆಡ್ ನಲ್ಲಿ ಇವರ ತಿರುಗಾಟ.
   ಪದವಿ ನಂತರ ಯಡೂರಪ್ಪನವರೇ ಇವರ ಹೊಟ್ಟೆಪಾಡಿಗಾಗಿ ಮರ ಕೈಗಾರಿಕೆ ಸ್ಥಾಪಿಸಲು ಪ್ರೇರೇಪಿಸಿ ಬ್ಯಾಂಕ್ ಸಾಲ ನೀಡಿ ಅವರೇ ಬಂದು ಉದ್ಘಾಟಿಸಿದ್ದರು.
  ಅಷ್ಟೇ ಅಲ್ಲ ಹೊಸನಗರದಿಂದ ವಿಧಾನ ಸಭಾ ಚುನಾವಣೆಗೆ ಯಡೂರಪ್ಪನವರು ಉತ್ಸಾಹಿ ಯುವ ಸಂಘಟಕ ತ. ಮ.ನರಸಿಂಹ ಅವರಿಗೆ ಬಿಜೆಪಿ ಟಿಕೇಟ್ ನೀಡಿದ್ದರು.
  ಆದರೆ ತ.ಮ. ನರಸಿಂಹ ಹಣ - ಜಾತಿ ಬಲದ ಕೊರತೆಯಿಂದ ಸ್ಪರ್ದಿಸಲು ಹಿಂಜರಿದಿದ್ದರು ನಂತರ ಅನೇಕ ವೈಯಕ್ತಿಕ ಸಮಸ್ಯೆಯಿಂದ ಆರ್ಥಿಕ ಸಮಸ್ಯೆಗಳು ಕೌಟುಂಬಿಕ ಸಮಸ್ಯೆಗಳಿಂದ ತ.ಮ. ನರಸಿಂಹ ರಾಜಕಾರಣದಿಂದ ಹಿಂದುಳಿದರು ಮತ್ತು ಹಣ - ಜಾತಿ ಬಲದವರು ಇವರನ್ನು ಹಿಂದಕ್ಕೆ ಹಾಕಿ ಮುಂದೆ ಸಾಗಿದರು.
  ನಂತರದ ದಿನಗಳಲ್ಲಿ ತ.ಮ.ನರಸಿಂಹ ಅವರದ್ದೇ ಪಕ್ಷವಾದ ಬಿಜೆಪಿಯ ಮುಖವಾಣಿಯಾಗಿ  ಚುನಾವಣಾ ಗುರುತಾದ ಕಮಲವನ್ನು ಪ್ರಚಾರ ಮಾಡಲು #ಕಮಲ_ವಾಣಿ ಎಂಬ ಹೆಸರಿನ ವಾರಪತ್ರಿಕೆ ಪ್ರಾರಂಬಿಸಿದರು.
   1994 ರಿಂದ 1999 ರವರೆಗೆ ಈ ಪತ್ರಿಕೆ ಯಶಸ್ವಿ ಆಗಿತ್ತು ಆ ದಿನಗಳಲ್ಲಿ ಕಮಲವಾಣಿ ವಾರ ಪತ್ರಿಕೆ ವರದಿಗಾರರಾಗಿದ್ದ ಸೊರಬದ #ರಾಜೀವ್_ಕುಡಚಿ (ನಂತರ ಪೋಲಿಸರಾಗಿ ಶಾಸಕರಾದರು) ಮತ್ತು ಹರತಾಳಿನ ನಂಜವಳ್ಳಿ ಸಮೀಪದ #ರಾಮಚಂದ್ರ  ಈಗ ಪೋಲಿಸ್ ಅಧಿಕಾರಿ ಆಗಿದ್ದಾರೆ.
  ಇವರ ಕಮಲ ವಾಣಿ ವಾರಪತ್ರಿಕೆ ಬಳಗ ಮತ್ತು ಆನಂದಪುರಂ ಕನ್ನಡಸಂಘದ ಆಶ್ರಯದಲ್ಲಿ ನಾನು ಪತ್ರಕತ೯ರ ತರಬೇತಿ ಶಿಭಿರ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಪ್ರತಿ ವರ್ಷ ನಡೆಸಿದ ನೆನಪು ಈಗ ಈ ಪತ್ರಿಕೆ ನಿಂತಿದೆ.
   ತ.ಮ. ನರಸಿಂಹರ #ಕಮಲ_ವಾಣಿ ವಾರಪತ್ರಿಕೆಯ ವಿಶೇಷಾಂಕ ಹೊರ ತಂದಾಗ ಅದರ ಮುಖ ಪುಟ ನನ್ನ ಆ ಕಾಲದ YASHICA ಎಂಬ ಸಣ್ಣ ಕ್ಕಾಮೆರಾದಲ್ಲಿ ಜೀವ ಭಯ ತೊರೆದು ಬಿಸಿ ರಕ್ತದ ಹುಂಬತನದಲ್ಲಿ ತೆಗೆದ ಹೊಸಗುಂದ ದೇವ ಸ್ಥಾನಕ್ಕೆ ಅಂಟಿ ಕೊಂಡಿದ್ದ ಬೃಹತ್ ಮರ ತೆರವು ಮಾಡಿದ್ದ ಪೋಟೋ ಮತ್ತು ಈ ಸಾಹಸದ ಅನುಭವದ ಲೇಖನ ಪ್ರಕಟಿಸಿದ್ದರು.
    ಅದನ್ನು ಈ ಕೆಳಗೆ ಇನ್ನೊಮ್ಮೆ ನೆನಪಿನೊಂದಿಗೆ
(ಹೊಸಗು೦ದದ ಕಲ್ಲೇಶ್ವರ ಈಗಿನ ಉಮಾ ಮಹೇಶ್ವರ ದೇವಸ್ಥಾನದ ಮರದ ಕಥೆ) .....
           ಶಿವಮೊಗ್ಗ ಜಿಲ್ಲೆಯ ಆನಂದಪುರಂ ಹೋಬಳಿಯ ಹೊಸಗುಂದ ಎಂದರೆ ತುಂಬಾ ಪ್ರಸಿದ್ದಿಯ ಹಳ್ಳಿ ಈ ಗ್ರಾಮಕ್ಕೆ ಪ್ರಸಿದ್ದಿಬರಲು ಕಾರಣ ಶರಾವತಿ ನದಿಗೆ ಜೋಗ ಜಲಪಾತದ ಲಿಂಗನಮಕ್ಕಿ ಎಂಬಲ್ಲಿ ಆಣೆಕಟ್ಟು ಕಟ್ಟಿ ಜಲ ವಿದ್ಯುತ್ ಯೋಜನೆ ಪ್ರಾರಂಬಿಸಿದ್ದರಿಂದ ಹೆಡತ್ರಿ ಎಂಬ ಊರು ಕೂಡ ಮುಳುಗಡೆ ಆಯಿತು, ಆ ಊರಿನ ಶ್ರೀಮಂತ ದೊಡ್ಡ ರೈತ ಕುಟು೦ಬವಾದ ಹೆಡತ್ರಿ ದ್ಯಾವಪ್ಪ ಗೌಡರ ಕುಟುಂಬ ಇಲ್ಲಿಗೆ ವಲಸೆ ಬಂತು. ಆ ಕಾಲದಲ್ಲೇ ಜೀಪು, ಟ್ರಾಕ್ಟರ್ ಮತ್ತು ಬುಲೆಟ್ ಬೈಕ್ ಇದ್ದ ಈ ಕುಟು೦ಬಕ್ಕೆ ಸಕಾ೯ರ ನೀಡಿದ ಪರಿಹಾರ ಇಡೀ ಜೀಪಲ್ಲಿ ತುಂಬಿಸಿದರೂ ಮತ್ತೂ ಉಳಿದಿತ್ತು ಅಂತ ಅವರ ಶ್ರೀಮಂತಿಗೆ ವಣ೯ನೆ ಮಾಡುತ್ತಿದ್ದರು ಜನ.
       ದ್ಯಾವಪ್ಪ ಗೌಡರು ದೂರದೃಷ್ಟಿ ಇದ್ದ೦ತಹ ವ್ಯಕ್ತಿ ಆದ್ದರಿಂದ ಹೊಸಗುಂದಕ್ಕೆ ಬಂದವರೆ ಸಾವ೯ಜನಿಕರಿಗಾಗಿ ಕುಡಿಯುವ ನೀರಿನ ಬಾವಿ ಮತ್ತು ಶಾಲೆ ಒಂದನ್ನ ನಿಮಿ೯ಸಿ ಅದರ ಉದ್ಘಾಟನೆಯನ್ನ ಆ ಕಾಲದ ಜನಪ್ರಿಯ ಮುಖ್ಯ ಮಂತ್ರಿ ನಿಜಲಿಂಗಪ್ಪರನ್ನ ಕರೆಸಿ ಮಾಡಿಸಿದ್ದರೆಂದರೆ ಅವರ ಘನತೆ ಅಥ೯ವಾದೀತು.
        ಅವರ ನಂತರ ಅವರ ಮಗ ಹೆಡತ್ರಿ ನಾಗರಾಜ ಗೌಡರು ಅವರ೦ತೆ ಜನ ಬಳಕೆ, ಸಂಸ್ಕಾರ ಮತ್ತು ಗೌರವಯುತ ಜೀವನ ನಡೆಸಿದರು, ಅವರು ಹೇಳುವಂತೆ ಮುಳುಗಡೆಯಿ೦ದ ಬ೦ದ ಕೆಲ ವಷ೯ ಹೊಸಗುಂದದ ಕಾಡಲ್ಲಿದ್ದ ದೇವಸ್ಥಾನ ಅವರ ಕುಟು೦ಬಕೆ ಗೊತ್ತೆ ಇರಲಿಲ್ಲ, ಆ ದೇವಸ್ಥಾನ ದಟ್ಟ ಅರಣ್ಯದ ನಡುವೆ ಮಾನವ ನಿಮಿ೯ತ ಮಣ್ಣಿನ ದಿಬ್ಬದ ನಡುವೆ ನಿಮಿ೯ಸಿದ ಸುಂದರ ಕಲ್ಲಿನ ದೇವಾಲಯ ಆಗಿತ್ತು.
          ನಂತರ ಈ ಬಗ್ಗೆ ಪ್ರಾಚ್ಯ ವಸ್ತು ಸ೦ಶೋದನ ಇಲಾಖೆಯಲ್ಲಿ ಪಡೆದ ಮಾಹಿತಿಯಿಂದ ಇದು ಕಲ್ಲೇಶ್ವರ ದೇವಸ್ಥಾನ, ಇದಕ್ಕೆ ತಾಗಿ ಬೆಳೆಯುತ್ತಿರುವ ನೀರಟ್ಟಿ ಮರ ತೆಗೆಯದಿದ್ದರೆ ಮುಂದೆ ಇಡಿ ದೇವಸ್ಥಾನ ನಾಶವಾಗುತ್ತೆ ಅಂತ ಆಗಿನ? ಸಂಬಂಧಪಟ್ಟ ಇಲಾಖೆಯ ಸಹಾಯಕ ನಿದೆ೯ಶಕ ನಾಗರಾಜ್ ರಾವ್ ಎಂಬುವವರು ಗೆಜೆಟಿಯರ್ನಲ್ಲಿ ಪ್ರಕಟಿಸಿರುವುದನ್ನ ನೋಡಬಹುದು.
          ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಚೇರಿ ಎದುರಿನಲ್ಲಿ ಸಂಶೋದಕರಾದ ಜಯದೇವಪ್ಪ ಜಿನಕೇರಿ  ಮನೆ ಇದೆ ಅವರು ಮುರುಘಾಮಠದಲ್ಲಿ ಸದಾ ಸೇವೆ ಸಲ್ಲಿಸುತ್ತಾರೆ ಕೆಳದಿ ಇತಿಹಾಸದ ಬಗ್ಗೆ ಸಂಶೋದನ ಗ್ರಂಥ ತರಲು ಅವರು ಕಾರಣಕತ೯ರು, ಅವರು ನಾನು ಜಿಲ್ಲಾ ಪಂಚಾಯತ್ ಕಚೇರಿಗೆ ಹೋದಾಗೆಲ್ಲ ಬಂದು ಹೊಸಗುಂದ ದೇವಸ್ಥಾನ ಉಳಿಸಲು ನೀನು ಪ್ರಯತ್ನ ಮಾಡು ಅಂತ ಹುರಿದುಂಬಿಸುತ್ತಿದ್ದರು ಹಾಗಾಗಿ ನಾನು ಹೆಡ್ ತ್ರಿ ನಾಗರಾಜಗೌಡರೊಂದಿಗೆ ಈ ದೇವಸ್ಥಾನ ನೋಡಲು ಹೋಗಿದ್ದೆ.
         ಈ ಮರ ತೆಗೆಯಲು ಹೋದರೆ ದೇವಸ್ಥಾನ ಉಳಿಯುವ ಸಂಭವ ಶೇಕಡಾ 1 ಸಾಧ್ಯವಿರಲಿಲ್ಲ ಅಂತಹ ರೀತಿಯಲ್ಲಿ ಮರ ಬೃಹದಾಕಾರವಾಗಿ ದೇವಾಲಯದ ಗಭ೯ಗುಡಿಯ ಶಿಲೆಯ ಗೋಡೆಯನ್ನ ಆವರಿಸಿ ಬೆಳೆದು ಅತ್ಯಂತ ಎತ್ತರವಾಗಿದ್ದು ಶೇಕಡಾ 65 ಬಾಗ ದೇವಾಲಯದ ಮೇಲೆ ಬಾಗಿಕೊಂಡಿತ್ತು.
             ಸುಂದರವಾ ಶಿಲ್ಪಕಲೆಯ ದೇವಾಲಯ ಈಗಿನ ಬನವಾಸಿ ದೇವಾಲಯದಂತೆ ಇತ್ತು, ಅತಿ ದೊಡ್ಡದಾದ ಈಶ್ವರಲಿಂಗವನ್ನ ನಿಧಿ ಶೋಧಕರು ತೆಗೆಯಲು ಪ್ರಯತ್ನಿಸಿ ತೆಗೆಯಲಾಗದೆ ಹೋದ ಕುರುಹುಗಳನ್ನ ಗೌಡರು ತೋರಿಸಿದರು, ಒಂದು ರೀತಿ ಈ ದೇವಸ್ಥಾನ ಕಟ್ಟಿಸಿದವರು ಯಾವುದೋ ಉದ್ದೇಶದಿಂದ ಈ ದೇವಾಲಯ ಜನರಿಗೆ ಕಾಣದಂತೆ ಸುತ್ತಲೂ ಮಣ್ಣಿನ ದಿಬ್ಬ ಹಾಕಿ ಕಾಣದ೦ತೆ ಮಾಡಿದ್ದರು, ಇಲ್ಲಿ ನಿಧಿ ಸಂರಕ್ಷಿಸಲಾಗಿದೆ ಹಾಗಾಗಿ ಇದನ್ನ ಗುಪ್ತವಾಗಿ ಕಾಣದOತೆ ಮಾಡಿದ್ದಾರೆ ಅಂತ ಗೌಡರು ತಿಳಿಸಿದರು.
             ನನಗೆ ಹಿಡಿದ ಕೆಲಸ ಮಾಡಲೇ ಬೇಕೆಂಬ ತವಕ ಹಾಗಾಗಿ ಅದೇ ಸಂದಭ೯ದಲ್ಲಿ ನಮ್ಮ ಭಾಗಕ್ಕೆ ವಗ೯ವಾಗಿ ಬಂದ ಪಾರೆಸ್ಟರ್ ಪುರುಶೊತ್ತಮರಿಗೆ ಈ ಬಗ್ಗೆ ತಿಳಿಸಿ ಆ ಮರ ತೆಗೆಸಲು ಸಾಧ್ಯವೆ? ಪರಿಶೀಲಿಸಿ ಎಂದಿದ್ದೆ ಕಾರಣ ಈ ಪುರುಶೋತ್ತಮ ಅತ್ಯ೦ತ ಸಾಹಸಿ ಮತ್ತು ತೀಕ್ಷಣಮತಿ ಕೂಡ.
          ಅವರು ನೀಡಿದ ಮಾಹಿತಿ ಪ್ರಕಾರ ಕಷ್ಟ ಆದರೆ ಸಾಧ್ಯವಿದೆ ಅಂತಹ ಅನುಭವಿಗಳನ್ನ ಹುಡುಕುತ್ತೇನೆ ಅಂತ ಬರವಸೆ ನೀಡಿದರು, ಈ ಬಗ್ಗೆ ನಾಗರಾಜಗೌಡರಿಗೆ ತಿಳಿಸಿದಾಗ ಅವರಿಗೆ ಅಂತಹ ನ೦ಬಿಕೆ ಬರಲಿಲ್ಲ, ಸ್ವಲ್ಪ ದಿನದಲ್ಲೇ ಪುರುಶೊತ್ತಮಪಾರೆಸ್ಟ್ರು ಸೊರಬದಿಂದ ಹುಸೇನ್ ಸಾಬ್ ತಂಡ ತಂದು ತೋರಿಸಿದರು, ಅವರು ತಾವು ಕೇಳಿದ ವ್ಯವಸ್ಥೆ ಮಾಡಿದರೆ ಯಾವುದೇ ತೊಂದರೆ ಆಗದ೦ತೆ ಮರ ತೆಗೆಯುವುದಾಗಿ ಬರವಸೆ ನೀಡಿದರು.
            ನಂತರ ಮರ ತೆಗೆಯಲು ಅನುಮತಿ ಪಡೆಯುವುದು, ಅರಣ್ಯ ಇಲಾಖೆ ಅನುಮತಿ ನೀಡಲು ದೇವಸ್ಥಾನ ಪ್ರಾಚಯ ವಸ್ತು ಇಲಾಖೆ ಅನುಮತಿ ಬೇಕು ಆದರೆ 1940 ರಿಂದಲೂ ಮರ ಸಣ್ಣ ಗಾತ್ರದಲ್ಲಿ ಇದ್ದಾಗಿ೦ದಲೂ ಇದೇ ರೀತಿ ಇಲಾಖಾ ಜಿಜ್ಞಾಸೆಗಳ ಕಾರಣದಿಂದ ಅನುಮತಿ ಸಿಗದೆ ಈ ಮರ ಸುಮಾರು ಅದ೯ ಶತಮಾನದಿಂದ ಬೃಹತ್ ಗಾತ್ರಕ್ಕೆ ಬೆಳೆದು ದೇವಾಲಯದ ಮೇಲೆ ಮೈಚಾಚಿದೆ, ಇನ್ನು ಇಂತಹ ಅನುಮತಿಗೆ ಕಾದರೆ ಕೆಲಸ ಸಾಧ್ಯ ಆಗುವುದಿಲ್ಲ ಅಂದಾಗ ಗೌಡರು, ಪುರುಶೊತ್ತಮ ಪಾರೆಸ್ಟರು ಹೌದೆಂದರು.
  ಆನಂದಪುರಂನ ಟಿಂಬರ್ ಗುತ್ತಿಗೆದಾರರಾದ ಚಂದ್ರಹಾಸ ಶೇಟ್ ಅವರೂ ನಮ್ಮ ಸಾಹಸ ನೋಡಲು ಬ೦ದಿದ್ದರು ಈ ಹುಸೇನ್ ಸಾಬ್ ತಂಡ ಅವರ ಟಿಂಬರ್ ಕೆಲಸವೂ ಮಾಡಿದ್ದರಿಂದ ಅವರಿಗೆ ಪರಿಚಿತರು.
           ಲಿಖಿತ ಅನುಮತಿ ಪಡೆಯದೆ ನಮ್ಮಷ್ಟಕ್ಕೆ ನಾವೇ ಅನುಮತಿ ಪಡೆದಂತೆ ಮರ ತೆಗೆಯಲು ಕೆಲಸ ಪ್ರಾರಂಬಿಸಿದೆವು, ಹುಸೇನ್ ಸಾಬ್ ತಂಡ ಅಟ್ಟಣಿಕೆ ಹಾಕಲು ಪ್ರಾರಂಬಿಸಿದರು ಅವರಿಗೆ ಇಂತಿಷ್ಟು ಹಣ ಮತ್ತು ಊಟ ವಸತಿ ಗೌಡರು ನೋಡಿಕೊಂಡರು, ಒಂದೆರೆಡು ದಿನದ ತಯಾರಿ ನಂತರ ಮರ ಉರುಳಿಸುವ ದಿನ ಹುಸೇನ್ ಸಾಬ್ ನಿಗದಿ ಮಾಡಿದರು, ಆ ದಿನ ಉದ್ದದ ಉಕ್ಕಿನ ರೋಪ್ ನೊಂದಿಗೆ ಸಾಗರದ ವಿದ್ಯುತ್ ಇಲಾಖೆ ನೌಕರರ ತಂಡವನ್ನ ಗೌಡರು ಜೀಪಲ್ಲಿ ತಂದರು, ಪುರುಶೊತ್ತಮರ ಪೂಣ೯ ಸಿಬ್ಬ೦ದಿ ಸಹಾಯಕ್ಕೆ ಕೈ ಜೊಡಿಸಿತು.
             ಎಲ್ಲರಿಗೂ ಒಂದೇ ಭಯ ಏನಾದರೂ ಹೆಚ್ಚು ಕಡಿಮೆ ಆಗಿ ಪುರಾತನ ದೇವಾಲಯದ ಮೇಲೆ ಮರ ಬಿದ್ದು ದುರಂತ ಆದರೆ ಮುಂದೆ ಬರುವ ಗಂಡಾಂತರ, ಕಾನೂನು ಸಮಸ್ಯೆ, ಅಪವಾದ ಹೇಗೆ ಎದುರಿಸುವುದು ಅಂತ, ಆದರೆ ನಮಗೆಲ್ಲ ಒಂದೇ ಭರವಸೆ ಪುರುಶೊತ್ತಮ ಪಾರೆಸ್ಟ್ರು, ಅವರಿಗೆ ಭರವಸೆ ಹುಸೇನ್ ಸಾಬ್ ತಂಡ.ಉಳಿದವರಿಗೆಲ್ಲ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಭರವಸೆ, ಅಷ್ಟರಲ್ಲಿ ಗೌಡರ ಮನೆಯಿಂದ ಅವಲಕ್ಕಿ ಚಹಾ ಬಂತು, ಗೌಡರು ತರಾತುರಿಯಿ೦ದ ವಾಪಾಸು ಹೊರಟಾಗ ನಾವು ಯಾಕೆ ಇರಿ ಅ೦ದೆ ಅದಕ್ಕೆ ಅವರು ಪ್ರಾಚೀನ ದೇವಸ್ಥಾನ ಹೆಚ್ಚು ಕಡಿಮೆ ಈ ಮರ ತೆಗೆಯಲು ಹೋಗಿ ನಾಶವಾದರೆ ನನ್ನ ಕಣ್ಣಲ್ಲಿ ನೋಡಿ ಪಾಪ ಕಟ್ಟಿಕೊಳ್ಳಲಾರೆ ಅಂತ ಪಾಪಪ್ರಜ್ಞಾ ವ್ಯಕ್ತಪಡಿಸಿ ವಾಪಾಸ್ ಹೋದರು.
        ನೇತೃತ್ವವಹಿಸಿದ ನಾನು ಪುರುಶೊತ್ತಮ ಮಾತ್ರ ಏನೇ ಆದರೂ ನೋಡಲೇಬೇಕಾಗಿತ್ತು, ಮುಂದಿನ ಪರಿಣಾಮದ ಬಗ್ಗೆ ನಾವು ಯೋಚಿಸಲೇ ಇಲ್ಲ, ನನ್ನ ಸಣ್ಣ ಕ್ಯಾಮೆರಾದಲ್ಲಿ ಅಲ್ಲಿನ ವಾಸ್ತವ ಚಿತ್ರ ತೆಗೆದುಕೊಂಡೆ, ಮರ ಬೀಳುವ ಕ್ಲಮಾಕ್ಸ್ ಚಿತ್ರ ಎಲ್ಲಿ ನಿಂತು ತೆಗೆಯಲಿ ಅಂತ ಯೋಚಿಸಿದಾಗ ಹುಸೇನ್ ಸಾಬ್ ದೇವಾಲಯದ ಹಿಂಬಾಗದಿಂದ ತೆಗೆರಿ ಅಂದಾಗ ನಾನು ಭಯ ಪಟ್ಟಿ ಯಾಕೆ೦ದರೆ ಮರ ದೇವಸ್ಥಾನದ ಮೇಲೆ ಏನಾದರು ನಮ್ಮೆಲ್ಲರ ಲೆಖ್ಯತಪ್ಪಿ ಬಿದ್ದರೆ, ಕಲ್ಲಿನ ದೇವಾಲಯ ಪುಡಿ ಆಗಿ ನಾವು ಜೀವಂತ ಸಾಮಾದಿ ಆಗುತ್ತೇವೆ ಆದರೆ ಹುಚ್ಚು ದೈಯ೯ದಿಂದ ಹಿಂಬಾಗಕ್ಕೆ ಕ್ಯಾಮೆರಾ ಜೊತೆಗೆ ಹೋದೆ, ಗಪೂರ್ ಎಂಬ ಒಬ್ಬ ಗೆಳೆಯರು ಮಾತ್ರ ಜೊತೆಗೆ ಬರುವ ದೈಯ೯ ಮಾಡಿದರು.
      ಸಂಜೆ ಸಮಯ ಗುಡ್ಡದ ಮದ್ಯದಲ್ಲಿ ಬೇಗ ಕತ್ತಲಾಗುತ್ತದೆ, ಆಷ್ಟರಲ್ಲಿ ಹಕ್ಕಿ, ಪಕ್ಷಿಗಳು ಗೂಡು ಸೇರಲು ಪ್ರಾರಂಬಿಸಿದ್ದವು ಅಂತಿಮ ಕ್ಷಣದ ಕೆಲಸಗಳನ್ನ ಅಟ್ಟಣಿಗೆ ಮೇಲೆ ಹುಸೇನ್ ಸಾಹೇಬರು ಮಾಡುತ್ತಿದ್ದರು ಉಳಿದವರೆಲ್ಲ ಮರದ ತುದಿಗೆ ಕಟ್ಟದ ಉಕ್ಕಿನ ರೋಪಿನ ಇನ್ನೂOದು ತುದಿಗೆ ಮರ ದೇವಾಲಯದ ಮೇಲೆ ಬೀಳದಂತೆ ಎಳೆಯುವ ಭಾಗದಲ್ಲಿ ಸೇರಿದ್ದರು, ಒಂದು ರೀತಿಯ ನಿಶ್ಯಬ್ದ ನೀರವತೆ ಅಲ್ಲಿ ಭಯ ಉ೦ಟು ಮಾಡುತ್ತಿತ್ತು, ಮೇಲೆ ಹುಸೇನ್ ಸಾಬ್ ಕೊಡಲಿಯಿ೦ದ ಟಕ್ ಟಕ್ ಅಂತ ಅಂತಿಮ ಪ್ರಹಾರ ನೀಡುತ್ತಿದ್ದ ಶಬ್ದ ಮಾತ್ರ ಕೇಳುತ್ತಿತ್ತು ಆಷ್ಟರಲ್ಲಿ ಗಯಾ ರೇ ..... ಅಂತ ಅವರಲ್ಲೆ ಒಬ್ಬ ಕೂಗಿದ, ನಮಗೋ ಏನಾಯಿತು ಅ೦ತ ಗಾಭರಿ, ಅಷ್ಟರಲ್ಲೇ ಚಟ್... ಚಟ್..... ಟಸಿಲ್ ಅಂತ ಮರ ದೇವಸ್ಥಾನದ ವಿರುದ್ಧ ದಿಕ್ಕನಲ್ಲಿ ಬೀಳುವುದು ನೋಡಿ ಸಂತೋಷವಾಯಿತು ತಕ್ಷಣ ಪೋಟೊ ಕ್ಲಿಕ್ಕಿಸಲು ಪ್ರಾರಂಬಿಸಿದೆ, ಇದೆಲ್ಲ ಕೆಲ ಸೆಕೆಂಡಿನ ಕಾಲಾವಧಿ ಮಾತ್ರ, ಮರ ನೆಲಕ್ಕೆ ಬಿದ್ದ ರಭಸಕ್ಕೆ ಸುತ್ತ ಮುತ್ತದ ಸಣ್ಣ ಮರ ಗಿಡ ಅಡ್ಡ ಸಿಕ್ಕ ರಂಬೆ ಕೊಂಬೆಗಳು ಮುರಿದು ದೊಡ್ಡ ಶಬ್ದದೊಂದಿಗೆ ನೆಲದ ಮಣ್ಣು ಅವುಗಳ ಬಾರಕ್ಕೆ ದೂಳಾಗಿ ಸುತ್ತ ಮುತ್ತ ಎಲ್ಲಾ ಬಾಂಬು ಬಿದ್ದ೦ತೆ ಸಂಜೆಯ ಕೆಂದೂಳಿನೊಂದಿಗೆ ಪರಿಸರ ಕೆಂಪಾಯಿತು, ಅದರ ಹಿಂದೆಯೇ ದೂರದಿಂದ ಗೆಲುವಿನ ಕೇಕೆ ಕೇಳಿ ಬಂತು ಅದರ ಹಿಂದೆಯೆ ಗೂಡು ಸೇರಿದ್ದ ಹಕ್ಕಿ ಪಕ್ಷಿಗಳು ಗೂಡು ಬಿಟ್ಟು ಪುನಃ ಗಾಬರಿಯಿಂದ ದಿಕ್ಕಾಪಾಲಾಗಿ ಹಾರಿದವು.
   ಈ ನಮ್ಮ ಸಾಹಸದ ಕೆಲಸ ಕೇಳಿ ತಿಳಿದಿದ್ದ ರಿಪ್ಪನ್ ಪೇಟೆಯ ಕಮಲ ವಾಣಿ ವಾರಪತ್ರಿಕೆ ಸ೦ಪಾದಕರು ವಿಶೇಷಾಂಕ ಹೊರ ತಂದಿದ್ದರು.
   ಇದರಲ್ಲಿ ನಾನು ನನ್ನ ಕ್ಯಾಮೆರಾದಲ್ಲಿ ತೆಗೆದ ಪೋಟೋ ಮುಖ ಪುಟದಲ್ಲಿ ಅಚ್ಚಿಸಿದ್ದರು ಮತ್ತು ಅವತ್ತಿನ ಈ ಸಾಹಸದ ಕೆಲಸದ ಲೇಖನ ನನ್ನಿಂದ ಬರೆಸಿ ಪ್ರಕಟಿಸಿದ್ದರು.
   ಈ ದೇವಾಲಯ 1995 ರಲ್ಲಿನ ಅಪರೂಪದ ಚಿತ್ರಗಳನ್ನ ಮೇಲಿನ ಬ್ಲಾಗ್ ಕ್ಲಿಕ್ ಮಾಡಿ ಓದಬಹುದು ಜೊತೆಯಲ್ಲಿ ಅಗಾದವಾಗಿದ್ದ ಮರ ತೆಗೆದ ಸಾಹಸದ ನೆನಪಿನೊಂದಿಗೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

ಶ್ರೀಧರ ಸ್ವಾಮಿ ವರದಳ್ಳಿ ಪವಾಡ ಪುರುಷರು.

   ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ವರದಳ್ಳಿಯ ತಪಸ್ವಿ ಶ್ರೀಧರ ಸ್ವಾಮಿಗಳು.   ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ.     ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.       ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ...