Skip to main content

Blog number 1921. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ನಮ್ಮ ಸಾಗರ ತಾಲೂಕಿನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗೋಪಾಲ ನಾಗರಕಟ್ಟೆ,

#ನಾಡಿದ್ದು_ಸೋಮವಾರ_22_ಜನವರಿ_2024ರಂದು

#ಅಯೋಧ್ಯಯಲ್ಲಿ_ಬಾಲರಾಮನ_ಪ್ರತಿಷ್ಟಾಪನೆ.

#ಶಿಲ್ಪಿ_ಮೈಸೂರಿನ_ಅರುಣ್_ಯೋಗಿರಾಜ್

#ಶಿಲ್ಪ_ನಿರ್ಮಾಣದ_ಕೃಷ್ಣ_ಶಿಲೆ_ಮೈಸೂರಿನದ್ದು

#ರಾಮಮಂದಿರ_ನಿರ್ಮಾಣದ_ಉಸ್ತುವಾರಿ_ಗೋಪಾಲ_ನಾಗರಕಟ್ಟೆ_ಸಾಗರದ_ಪಕ್ಕದ_ಸಿದ್ದಾಪುರದವರು.


   ಸೋಮವಾರ 22 ಜನವರಿ 2024 ರಂದು ಆಯೋಧ್ಯಯಲ್ಲಿ ರಾಮ ಮಂದಿರದ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಬಾಲ ರಾಮನ ಪ್ರತಿಷ್ಟಾಪನೆ ನೆರವೇರಲಿದೆ.
 ಕಳೆದ ವರ್ಷ 9 ಫೆಬ್ರುವರಿ 2023 ರಲ್ಲಿ ಆಯೋಧ್ಯ ರಾಮ ಮಂದಿರ ನಿರ್ಮಾಣದ ದೇಣಿಗೆ ಒಂದು ಸಾವಿರ ಕೋಟಿ ದಾಟಿತ್ತು ನಂತರ 3200 ಕೋಟಿ ದೇಣಿಗೆ ಸಂಗ್ರಹವಾದ ನಂತರ ನಿರ್ಮಾಣದ ಕಾಮಗಾರಿ ಭರದಿಂದ ನಡೆದಿದೆ.
  ಅಯೋಧ್ಯಯ ರಾಮ ಮಂದಿರ ನಿರ್ಮಾಣಕ್ಕೂ ನಮ್ಮ ರಾಜ್ಯಕ್ಕೂ ಅನೇಕ ರೀತಿಯ ಸಂಬಂದವಿದೆ.
  ಅಯೋಧ್ಯ ರಾಮ ಮಂದಿರದ ಹಾಲಿ ಉಸ್ತುವಾರಿ ಆಗಿರುವ ಗೋಪಾಲ ನಾಗರ ಕಟ್ಟೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು ಅವರು ವಿಶ್ವ ಹಿಂದು ಪರಿಷತ್ ನ ರಾಷ್ಟ್ರೀಯ ಕೇಂದ್ರಿಯ ಕಾರ್ಯದರ್ಶಿ ಆಗಿದ್ದಾರೆ.
   ಪ್ರತಿಷ್ಟಾಪನೆ ಆಗಲಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಮೈಸೂರಿನಿಂದ ಆಯ್ಕೆ ಮಾಡಿರುವುದು ಮತ್ತು ಶಿಲ್ಪಿ ಕೂಡ ಮೈಸೂರಿನ ಅರುಣ್ ಯೋಗಿರಾಜ್.
   ಕಳೆದ ವರ್ಷ ರಾಮ ಮಂದಿರದ ನಿರ್ಮಾಣದ ದೇಣಿಗೆ ಆಗಿ ನಮ್ಮ ಕುಟುಂಬದಿಂದ 1000, 100 ಮತ್ತು 10 ರೂಪಾಯಿಯ ಕೂಪನ್ ಗಳನ್ನು ಖರೀದಿಸಿದ್ದೆವು.
90 ರ ದಶಕದಲ್ಲಿ ಅಯೋದ್ಯೆಗೆ ಸಾಗರ ತಾಲೂಕಿನಿಂದ ಸಾಗಾಣಿಕೆ ಮಾಡಲಾದ ಇಟ್ಟಿಗೆ ಟ್ರಕ್ ಗೆ ಪೂಜೆ ನೆರವೇರಿಸಿದವರು ಸಾಗರದ ಸಜ್ಜನ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ.  
  ಖ್ಯಾತ ಪತ್ರಕರ್ತರಾದ ಲಂಕೇಶರು ಸ್ವತಃ ಈ ವಿವಾದಿತ ಮಂದಿರ ಮಸೀದಿ ಸ್ಥಳ ಸಂದರ್ಶಿಸಿ ಅವರ ಲಂಕೇಶ್ ವಾರಪತ್ರಿಕೆಯಲ್ಲಿ ಮುಖಪುಟದ ಸುದ್ದಿ ಮಾಡಿದ್ದರು.
   1992 ರ ಡಿಸೆಂಬರ್ 6ರಂದು ಸಾಗರದಿಂದ ಕರಸೇವಕರಾಗಿ ಹೋಗಿದ್ದವರಲ್ಲಿ ನನಗೆ ಪರಿಚಯ ಇರುವವರು ಸಾಗರದ ಬಸ್ ಏಜೆಂಟರಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಪ್ರಾಣೇಶ್ ಒಬ್ಬರೆ.
   2019 ರ ನವೆಂಬರ್ 9 ರಂದು ನನ್ನ ಮಗಳ ವಿವಾಹದ ನಾಂದಿ ಪೂಜೆಯ ಸಮಯದಲ್ಲೇ ಅಯೋದ್ಯೆಯ ತೀರ್ಪು ಪ್ರಕಟ ಆಗಿತ್ತು ಮರುದಿನವೇ ಮಗಳ ವಿವಾಹ ಈ ಸಮಯದಲ್ಲೇ ಹುಬ್ಬಳ್ಳಿಯಿಂದ ಬೀಗರ ಮನೆಯ ದಿಬ್ಬಣದ ಬಸ್ಸು ನಮ್ಮ ಊರಿನ ಮಾರ್ಗದಲ್ಲಿತ್ತು.
   ಪುಣ್ಯಕ್ಕೆ ದೇಶದಾದ್ಯಂತ ಯಾವುದೇ ಗಲಭೆ- ರಸ್ತೆ ಬಂದ್-ಇತ್ಯಾದಿ ನಡೆಯಲಿಲ್ಲ ತೀರ್ಪು ಶಾಂತಿಯಿಂದ ಸ್ವೀಕರಿಸಿದ್ದರಿಂದ ಶ್ರೀರಾಮನ ಕೃಪೆಯಿಂದ ನನ್ನ ಮಗಳ ವಿವಾಹ ಸಾಂಗವಾಗಿ ನೆರವೇರಿತು.
   ರಾಮಾಯಣದ ದಾರಾವಾಹಿ ದೂರದರ್ಶನದಲ್ಲಿ ಬರುವಾಗ ನಮ್ಮ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟೀವಿ ಇತ್ತು, ನಡು ಮನೆಯ ಸಣ್ಣ ಹಾಲ್ ನಲ್ಲಿ ಇಡೀ ಊರವರು ಒಬ್ಬರಿಗೊಬ್ಬರು ಒತ್ತಿಕೊಂಡು ಕುಳಿತು ಪ್ರತಿ ಭಾನುವಾರ ಟೀವಿ ನೋಡುವುದು ಮಾಮೂಲಾಗಿತ್ತು.
   ಗಾಂಧೀಜಿ ಅವರ ರಾಮ ಭಜನೆ, ಕುವೆಂಪು ಅವರ ರಾಮಾಯಣ ದರ್ಶನಂ, ನಾಟಕ, ಸಿನಿಮಾ, ಯಕ್ಷಗಾನಗಳಲ್ಲಿ ಹಾಸುಹೊಕ್ಕಾಗಿರುವ ರಾಮಾಯಣ ಗೊತ್ತಿಲ್ಲದವರು ಯಾರೂ ಇಲ್ಲ.
   ಶ್ರೀರಾಮಚಂದ್ರನ ಆಡಳಿತದಲ್ಲಿ ಲಂಚ -ಭ್ರಷ್ಟಾಚಾರ - ಅತ್ಯಾಚಾರ ಇರಲೇ ಇಲ್ಲ, ಪ್ರಜೆಗಳನ್ನು ಪೀಡಿಸುವ ಸುಂಕ - ಕಂದಾಯ ಇರಲಿಲ್ಲ.
   ಹಿಂದೂ ಪುರಾಣದಲ್ಲಿ ಆದರ್ಶ ಮಹಿಳೆಯರು ಅನೇಕರಿದ್ದಾರೆ ಆದರೆ ಆದರ್ಶ ಪುರುಷ ಶ್ರೀರಾಮಚಂದ್ರರೊಬ್ಬರೆ.
   ಆಯೋಧ್ಯ ರಾಮ ಮಂದಿರವಂತೂ ನಿಮಾ೯ಣವಾಯಿತು ದೇಶದಾದ್ಯಂತ ರಾಮ ರಾಜ್ಯ ಯಾವಾಗ ಬಂದೀತೆಂಬ ನಿರೀಕ್ಷೆ ಹುಸಿಯಾಗದಿರಲಿ.
   ಮುಂದಿನ ದಿನಗಳಲ್ಲಿ ಒಮ್ಮೆ ಅಯೋದ್ಯಗೆ ಹೋಗಿ ರಾಮ ಮಂದಿರ ನೋಡುವ ಸಂಕಲ್ಪವಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ