Skip to main content

Blog number 1921. ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ನಮ್ಮ ಸಾಗರ ತಾಲೂಕಿನ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಗೋಪಾಲ ನಾಗರಕಟ್ಟೆ,

#ನಾಡಿದ್ದು_ಸೋಮವಾರ_22_ಜನವರಿ_2024ರಂದು

#ಅಯೋಧ್ಯಯಲ್ಲಿ_ಬಾಲರಾಮನ_ಪ್ರತಿಷ್ಟಾಪನೆ.

#ಶಿಲ್ಪಿ_ಮೈಸೂರಿನ_ಅರುಣ್_ಯೋಗಿರಾಜ್

#ಶಿಲ್ಪ_ನಿರ್ಮಾಣದ_ಕೃಷ್ಣ_ಶಿಲೆ_ಮೈಸೂರಿನದ್ದು

#ರಾಮಮಂದಿರ_ನಿರ್ಮಾಣದ_ಉಸ್ತುವಾರಿ_ಗೋಪಾಲ_ನಾಗರಕಟ್ಟೆ_ಸಾಗರದ_ಪಕ್ಕದ_ಸಿದ್ದಾಪುರದವರು.


   ಸೋಮವಾರ 22 ಜನವರಿ 2024 ರಂದು ಆಯೋಧ್ಯಯಲ್ಲಿ ರಾಮ ಮಂದಿರದ ಸಂಕೀರ್ಣದ ನೆಲ ಅಂತಸ್ತಿನಲ್ಲಿ ಬಾಲ ರಾಮನ ಪ್ರತಿಷ್ಟಾಪನೆ ನೆರವೇರಲಿದೆ.
 ಕಳೆದ ವರ್ಷ 9 ಫೆಬ್ರುವರಿ 2023 ರಲ್ಲಿ ಆಯೋಧ್ಯ ರಾಮ ಮಂದಿರ ನಿರ್ಮಾಣದ ದೇಣಿಗೆ ಒಂದು ಸಾವಿರ ಕೋಟಿ ದಾಟಿತ್ತು ನಂತರ 3200 ಕೋಟಿ ದೇಣಿಗೆ ಸಂಗ್ರಹವಾದ ನಂತರ ನಿರ್ಮಾಣದ ಕಾಮಗಾರಿ ಭರದಿಂದ ನಡೆದಿದೆ.
  ಅಯೋಧ್ಯಯ ರಾಮ ಮಂದಿರ ನಿರ್ಮಾಣಕ್ಕೂ ನಮ್ಮ ರಾಜ್ಯಕ್ಕೂ ಅನೇಕ ರೀತಿಯ ಸಂಬಂದವಿದೆ.
  ಅಯೋಧ್ಯ ರಾಮ ಮಂದಿರದ ಹಾಲಿ ಉಸ್ತುವಾರಿ ಆಗಿರುವ ಗೋಪಾಲ ನಾಗರ ಕಟ್ಟೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು ಅವರು ವಿಶ್ವ ಹಿಂದು ಪರಿಷತ್ ನ ರಾಷ್ಟ್ರೀಯ ಕೇಂದ್ರಿಯ ಕಾರ್ಯದರ್ಶಿ ಆಗಿದ್ದಾರೆ.
   ಪ್ರತಿಷ್ಟಾಪನೆ ಆಗಲಿರುವ ಬಾಲರಾಮ ವಿಗ್ರಹದ ಕೃಷ್ಣಶಿಲೆ ಮೈಸೂರಿನಿಂದ ಆಯ್ಕೆ ಮಾಡಿರುವುದು ಮತ್ತು ಶಿಲ್ಪಿ ಕೂಡ ಮೈಸೂರಿನ ಅರುಣ್ ಯೋಗಿರಾಜ್.
   ಕಳೆದ ವರ್ಷ ರಾಮ ಮಂದಿರದ ನಿರ್ಮಾಣದ ದೇಣಿಗೆ ಆಗಿ ನಮ್ಮ ಕುಟುಂಬದಿಂದ 1000, 100 ಮತ್ತು 10 ರೂಪಾಯಿಯ ಕೂಪನ್ ಗಳನ್ನು ಖರೀದಿಸಿದ್ದೆವು.
90 ರ ದಶಕದಲ್ಲಿ ಅಯೋದ್ಯೆಗೆ ಸಾಗರ ತಾಲೂಕಿನಿಂದ ಸಾಗಾಣಿಕೆ ಮಾಡಲಾದ ಇಟ್ಟಿಗೆ ಟ್ರಕ್ ಗೆ ಪೂಜೆ ನೆರವೇರಿಸಿದವರು ಸಾಗರದ ಸಜ್ಜನ ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ.  
  ಖ್ಯಾತ ಪತ್ರಕರ್ತರಾದ ಲಂಕೇಶರು ಸ್ವತಃ ಈ ವಿವಾದಿತ ಮಂದಿರ ಮಸೀದಿ ಸ್ಥಳ ಸಂದರ್ಶಿಸಿ ಅವರ ಲಂಕೇಶ್ ವಾರಪತ್ರಿಕೆಯಲ್ಲಿ ಮುಖಪುಟದ ಸುದ್ದಿ ಮಾಡಿದ್ದರು.
   1992 ರ ಡಿಸೆಂಬರ್ 6ರಂದು ಸಾಗರದಿಂದ ಕರಸೇವಕರಾಗಿ ಹೋಗಿದ್ದವರಲ್ಲಿ ನನಗೆ ಪರಿಚಯ ಇರುವವರು ಸಾಗರದ ಬಸ್ ಏಜೆಂಟರಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಪ್ರಾಣೇಶ್ ಒಬ್ಬರೆ.
   2019 ರ ನವೆಂಬರ್ 9 ರಂದು ನನ್ನ ಮಗಳ ವಿವಾಹದ ನಾಂದಿ ಪೂಜೆಯ ಸಮಯದಲ್ಲೇ ಅಯೋದ್ಯೆಯ ತೀರ್ಪು ಪ್ರಕಟ ಆಗಿತ್ತು ಮರುದಿನವೇ ಮಗಳ ವಿವಾಹ ಈ ಸಮಯದಲ್ಲೇ ಹುಬ್ಬಳ್ಳಿಯಿಂದ ಬೀಗರ ಮನೆಯ ದಿಬ್ಬಣದ ಬಸ್ಸು ನಮ್ಮ ಊರಿನ ಮಾರ್ಗದಲ್ಲಿತ್ತು.
   ಪುಣ್ಯಕ್ಕೆ ದೇಶದಾದ್ಯಂತ ಯಾವುದೇ ಗಲಭೆ- ರಸ್ತೆ ಬಂದ್-ಇತ್ಯಾದಿ ನಡೆಯಲಿಲ್ಲ ತೀರ್ಪು ಶಾಂತಿಯಿಂದ ಸ್ವೀಕರಿಸಿದ್ದರಿಂದ ಶ್ರೀರಾಮನ ಕೃಪೆಯಿಂದ ನನ್ನ ಮಗಳ ವಿವಾಹ ಸಾಂಗವಾಗಿ ನೆರವೇರಿತು.
   ರಾಮಾಯಣದ ದಾರಾವಾಹಿ ದೂರದರ್ಶನದಲ್ಲಿ ಬರುವಾಗ ನಮ್ಮ ಊರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟೀವಿ ಇತ್ತು, ನಡು ಮನೆಯ ಸಣ್ಣ ಹಾಲ್ ನಲ್ಲಿ ಇಡೀ ಊರವರು ಒಬ್ಬರಿಗೊಬ್ಬರು ಒತ್ತಿಕೊಂಡು ಕುಳಿತು ಪ್ರತಿ ಭಾನುವಾರ ಟೀವಿ ನೋಡುವುದು ಮಾಮೂಲಾಗಿತ್ತು.
   ಗಾಂಧೀಜಿ ಅವರ ರಾಮ ಭಜನೆ, ಕುವೆಂಪು ಅವರ ರಾಮಾಯಣ ದರ್ಶನಂ, ನಾಟಕ, ಸಿನಿಮಾ, ಯಕ್ಷಗಾನಗಳಲ್ಲಿ ಹಾಸುಹೊಕ್ಕಾಗಿರುವ ರಾಮಾಯಣ ಗೊತ್ತಿಲ್ಲದವರು ಯಾರೂ ಇಲ್ಲ.
   ಶ್ರೀರಾಮಚಂದ್ರನ ಆಡಳಿತದಲ್ಲಿ ಲಂಚ -ಭ್ರಷ್ಟಾಚಾರ - ಅತ್ಯಾಚಾರ ಇರಲೇ ಇಲ್ಲ, ಪ್ರಜೆಗಳನ್ನು ಪೀಡಿಸುವ ಸುಂಕ - ಕಂದಾಯ ಇರಲಿಲ್ಲ.
   ಹಿಂದೂ ಪುರಾಣದಲ್ಲಿ ಆದರ್ಶ ಮಹಿಳೆಯರು ಅನೇಕರಿದ್ದಾರೆ ಆದರೆ ಆದರ್ಶ ಪುರುಷ ಶ್ರೀರಾಮಚಂದ್ರರೊಬ್ಬರೆ.
   ಆಯೋಧ್ಯ ರಾಮ ಮಂದಿರವಂತೂ ನಿಮಾ೯ಣವಾಯಿತು ದೇಶದಾದ್ಯಂತ ರಾಮ ರಾಜ್ಯ ಯಾವಾಗ ಬಂದೀತೆಂಬ ನಿರೀಕ್ಷೆ ಹುಸಿಯಾಗದಿರಲಿ.
   ಮುಂದಿನ ದಿನಗಳಲ್ಲಿ ಒಮ್ಮೆ ಅಯೋದ್ಯಗೆ ಹೋಗಿ ರಾಮ ಮಂದಿರ ನೋಡುವ ಸಂಕಲ್ಪವಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...